Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಪಾಪ್‌ಕಾರ್ನ್ ಮಂಕಿ ಟೈಗರ್: ಮನದೊಳಗೆ...

ಪಾಪ್‌ಕಾರ್ನ್ ಮಂಕಿ ಟೈಗರ್: ಮನದೊಳಗೆ ದಾಳಿ ಇಡುವ ದೃಶ್ಯಾವಳಿ

ಶಶಿಕರ ಪಾತೂರುಶಶಿಕರ ಪಾತೂರು23 Feb 2020 12:00 AM IST
share
ಪಾಪ್‌ಕಾರ್ನ್ ಮಂಕಿ ಟೈಗರ್: ಮನದೊಳಗೆ ದಾಳಿ ಇಡುವ ದೃಶ್ಯಾವಳಿ

ಪಾಪ್‌ಕಾರ್ನ್ ಮಂಕಿ ಟೈಗರ್ ಎನ್ನುವ ಹೆಸರೇ ವಿಚಿತ್ರ. ಆದರೆ ಅದು ಎರಡು ಪಾತ್ರದ ಹೆಸರುಗಳು. ಪಾಪ್‌ಕಾರ್ನ್ ಎನ್ನುವುದು ಚಿತ್ರದ ನಾಯಕಿಯರಲ್ಲಿ ಒಬ್ಬಳು. ಈ ಹಿಂದೆ ಆಕೆ ಪಾಪ್‌ಕಾರ್ನ್ ಮಾರುತ್ತಿದ್ದ ಕಾರಣ ಆಕೆಗೆ ಆ ಹೆಸರು ಬಂದಿರುತ್ತದೆ. ಇನ್ನು ಮಂಕಿ ಮತ್ತು ಟೈಗರ್ ಎನ್ನುವುದು ಚಿತ್ರದ ನಾಯಕನಿಗೆ ಇರುವ ಹೆಸರು. ಹೆಸರು, ಘಟನೆಗಳನ್ನು ಬಿಟ್ಟರೆ ಕತೆಯಾಗಿ ಹೇಳುವಂತಹದ್ದೇನೂ ಚಿತ್ರದಲ್ಲಿ ಇಲ್ಲ ಅಥವಾ ಯಾವುದನ್ನು ಕೂಡ ಒಂದು ಕತೆಯಾಗಿ ತೋರಿಸುವ ಪ್ರಯತ್ನವನ್ನು ನಿರ್ದೇಶಕರು ಬೇಕೆಂದೇ ಮಾಡಿಲ್ಲ. ಆತನ ಹೆಸರು ಸೀನ. ಆದರೆ ತನ್ನನ್ನು ಆತ ಟೈಗರ್ ಸೀನ ಎಂದು ಕರೆದುಕೊಳ್ಳುತ್ತಾನೆ. ಕೈ ಬಲವನ್ನು ನಂಬಿಕೊಂಡು ಬದುಕುವಂತಹವನು. ಅದಕ್ಕೇ ಇರಬೇಕು ಆತನಿಗೆ ಇಷ್ಟವಾಗದವರು ಸಿಕ್ಕರೆ ಒಂದೇ ಕೈನಲ್ಲಿ ಮುಖಕ್ಕೆ ಗುದ್ದಿ, ಗುದ್ದಿ ತನಗೆ ಸುಸ್ತಾಗುವ ತನಕ ಹೊಡೆದು ರಕ್ತ ಚಿಮ್ಮಿಸುತ್ತಾನೆ.

ಎಲ್ಲ ಕತೆಗಳಂತೆ ಈ ರೌಡಿಗೂ ಒಬ್ಬ ಪ್ರೇಯಸಿ. ರೌಡಿಸಂ ಬಿಡಲು ಹೇಳುವವಳು. ಆಕೆ ಕೈ ಕೊಟ್ಟ ಬಳಿಕ ಗಿರಿಜಾ ಜತೆಗೆ ಮದುವೆ. ಅವರಿಗೊಂದು ಮಗು. ಇದರ ನಡುವೆ ಮಗು ಕಳೆದುಕೊಂಡಿರುವ ದೇವಿಕಾ ಎನ್ನುವ ಯುವತಿ ಜತೆಗೆ ಸೀನನ ಪ್ರೀತಿ ಮತ್ತು ಕಾಮದ ನೀತಿ. ಆದರೆ ಗಿರಿಜಾಗೆ ತಿಳಿದಾಗ ಹೊಸದೊಂದು ಫಜೀತಿ. ಪರಿಸ್ಥಿತಿ ಹೇಗಿರುತ್ತದೋ ಮನಸ್ಥಿತಿ ಹಾಗಿರುತ್ತದೆ ಎನ್ನುವುದು ಸೀನನ ಪಾಲಿಸಿ. ಕೊನೆಗೆ ಸೀನನ ಸ್ಥಿತಿಗತಿ ಹೇಗಾಗುತ್ತದೆ ಎನ್ನುವುದಕ್ಕಾಗಿ ಚಿತ್ರವನ್ನೊಮ್ಮೆ ನೀವೇ ವೀಕ್ಷಿಸಬೇಕು. ಸಾಮಾನ್ಯವಾಗಿ ನಮ್ಮ ಸಿನೆಮಾಗಳಲ್ಲಿ ಸಂಸಾರ ಅಥವಾ ವೃತ್ತಿ ಬದುಕಿನ ಕತೆ ಇರಿಸಿಕೊಂಡು ದ್ವೇಷ, ಪ್ರೀತಿ, ಹೊಡೆದಾಟ, ಸಂಸಾರ, ಅಸಹನೆ, ಕೊಲೆ ಮತ್ತು ಅತ್ಯಾಚಾರಗಳನ್ನು ತೋರಿಸಲಾಗುತ್ತದೆ. ಆದರೆ ಇಲ್ಲಿ ಅತ್ಯಾಚಾರವೊಂದನ್ನು ಬಿಟ್ಟು ಬೇರೆಲ್ಲ ಅಪರಾಧಗಳನ್ನು ವಿಜೃಂಭಿಸಿ ಅದರ ಹಿನ್ನೆಲೆಯಲ್ಲಿ ಒಬ್ಬ ಯುವಕನ ರೌಡಿಸಂ ಪ್ರವೇಶ ಮತ್ತು ಅದರಲ್ಲಿ ಆತ ಇತಿಹಾಸವಾಗುವುದನ್ನು ತೋರಿಸಲಾಗಿದೆ. ಸೀನನ ತಾಯಿಯ ಮೂಲಕ ಬದುಕು ಹೇಗೆ ಕಷ್ಟದಲ್ಲಿತ್ತು ಎನ್ನುವುದನ್ನು, ಸೀನನ ಅಕ್ಕ ಪದ್ಮಾಳ ಮೂಲಕ ರೌಡಿಸಂ ಅವರ ಬದುಕಿಗೆ ಎಷ್ಟು ಸಹಜವಾಗಿತ್ತು ಎನ್ನುವುದನ್ನು ಮತ್ತು ಅಲ್ಲಿ ಯಾರು ಕೂಡ ನಿಜವಾದ ಬದುಕನ್ನು ಕಾಣಲೇ ಇಲ್ಲ ಎನ್ನುವುದನ್ನು ಸೀನನ ಪಾತ್ರದ ಮೂಲಕ ನಿರ್ದೇಶಕರು ಕಣ್ಣಿಗೆ ಕಟ್ಟುವಂತೆ ಹೇಳಿದ್ದಾರೆ. ಆದರೆ ವಿಪರ್ಯಾಸ ಏನೆಂದರೆ ಜನ ಈ ಸಂದೇಶಕ್ಕಿಂತ ಹೆಚ್ಚಾಗಿ ಬೇರೆ ಕಾರಣಕ್ಕಾಗಿಯೇ ಸಿನೆಮಾ ನೋಡುತ್ತಿದ್ದಾರೆ. ಅವರನ್ನು ಚಿತ್ರ ನೋಡುವಂತೆ ಮಾಡಿರುವುದು ಎರಡು ಮುಖ್ಯ ಅಂಶಗಳು. ಒಂದು ‘ಟಗರು’ ಬಳಿಕ ‘ಡಾಲಿ’, ಧನಂಜಯ ಇಲ್ಲಿ ಹೇಗಿದ್ದಾರೆ ಎನ್ನುವ ಅಭಿಮಾನ. ಎರಡನೆಯದು ಹೊಡೆದಾಟದ ಚಿತ್ರ ಎನ್ನುವ ಕಾರಣ!

ಇಲ್ಲಿ ಹೊಡೆದಾಟಗಳಲ್ಲಿ ರೌಡಿಗಳು ಆಕಾಶದೆತ್ತರ ಹಾರಾಡುವುದಿಲ್ಲ. ಆದರೆ ನೈಜವಾಗಿ ಎನ್ನುವಂತೆ ಏಟು ಮಾಡಿಕೊಳ್ಳುತ್ತಾರೆ. ಪುಟ್ಟಣ್ಣನ ಚಿತ್ರಗಳಂತೆ ಇಲ್ಲಿ ನಾಯಕಿಯರಿಗೆ ಪ್ರಾಧಾನ್ಯತೆ ಇದೆ. ಆದರೆ ಹಲವೆಡೆಗಳಲ್ಲಿ ಅದು ಅವರು ಬೈಯ್ದು ಹೊಡೆದಾಡುವುದಕ್ಕಷ್ಟೇ ಸೀಮಿತವಾಗಿರುವುದು ವಿಪರ್ಯಾಸ. ಈ ಎಲ್ಲ ಕಾರಣಕ್ಕಾಗಿಯೇ ಇದೊಂದು ವಯಸ್ಕರ ಚಿತ್ರವಾಗಿ ಹೊರಗೆ ಬಂದಿದೆ. ಮಂಕಿ, ಟೈಗರ್ ಸೀನನಾಗಿ ಧನಂಜಯ್ ನಟನೆ ಅಪ್ರತಿಮ. ಪಾಪ್ ಕಾರ್ನ್ ಪಾತ್ರದ ಮೂಲಕ ನಿವೇದಿತಾ ಮತ್ತೊಮ್ಮೆ ತಮ್ಮ ಅಭಿನಯದ ಶಕ್ತಿ ತೋರಿಸಿಕೊಟ್ಟಿದ್ದಾರೆ. ಗಿರಿಜಾ ಪಾತ್ರದಲ್ಲಿ ಸಪ್ತಮಿ ಗೌಡ ಅವರಿಂದ ಅದ್ಭುತ ನಟನೆ ತೆಗೆಸಿದ್ದಾರೆ ನಿರ್ದೇಶಕರು. ಅಮೃತಾ ಅಯ್ಯಂಗಾರ್ ಪಾತ್ರ ‘ಲವ್ ಮಾಕ್ಟೇಲ್’ ಚಿತ್ರದ ಛಾಯೆಯಲ್ಲೇ ಮುಂದುವರಿದಂತಿದೆ. ನಾಯಕನ ಅಕ್ಕ ಪದ್ಮಳಾಗಿ ರೇಖಾ ಜೀವಿಸಿದ್ದಾರೆ. ಆಕೆಯ ಪತಿಯಾಗಿ ಸೋಮ್ ಸಿಂಗ್ ಅಭಿನಯಿಸಿದ್ದಾರೆ. ಕಾಕ್ರೋಚ್ ಸುಧೀರ್ ಇಲ್ಲಿ ಕೊತ್ತುಮ್ರಿಯಾಗಿದ್ದಾರೆ. ಉಳಿದಂತೆ ಮೂಗನ ಪಾತ್ರವನ್ನೂ ಸೇರಿಸಿ ಹಿಂದಿನ ಸೂರಿ ಚಿತ್ರಗಳ ಹಾಗೆ ಪ್ರತಿಯೊಂದು ಪಾತ್ರಗಳು ಕಾಡುತ್ತಲೇ ಇರುತ್ತವೆ. ಸಂಭಾಷಣೆಗಳು ಚಿತ್ರದ ಆಕರ್ಷಕ ಅಂಶ.

ಇದನ್ನು ಒಂದು ಸಿನೆಮಾ ಕತೆ ಎನ್ನುವುದಕ್ಕಿಂತ ಸಮಾಜದ ಒಂದು ವರ್ಗದವರ ಪರಿಸ್ಥಿತಿ ಎನ್ನಬಹುದು. ಅದು ನಮ್ಮ ಮನಸ್ಥಿತಿಯೊಳಗೆ ನೇರ ಪರಿಣಾಮ ಬೀರುವಂತೆ ಮಾಡುವ ಚಿತ್ರ. ಎಲ್ಲರೂ ಒಂದು ಕತೆಯನ್ನು ಅರ್ಥಮಾಡಿಸಲು ಪ್ರಯತ್ನ ಪಟ್ಟರೆ ಸೂರಿಯವರು ಎಂದಿನಂತೆ ಸುಲಭದ ಕತೆಯನ್ನು ಎಷ್ಟು ಗೋಜಲು ಮಾಡಿ, ಜನರನ್ನು ಗೊಂದಲ ಮಾಡಬಹುದು ಎಂದು ಪ್ರಯತ್ನಿಸಿದ ಹಾಗಿದೆ. ಆದರೆ ಪ್ರೇಕ್ಷಕ ಗೊಂದಲಗೊಂಡರೂ ಚಿತ್ರವನ್ನು ವಿರೋಧಿಸುವುದಿಲ್ಲ.

ತಾರಾಗಣ: ಧನಂಜಯ್, ನಿವೇದಿತಾ, ಅಮೃತಾ ಅಯ್ಯಂಗಾರ್, ಸಪ್ತಮಿ ಗೌಡ
ನಿರ್ದೇಶನ: ದುನಿಯಾ ಸೂರಿ
ನಿರ್ಮಾಣ: ಸುಧೀರ್ ಕೆ.ಎಂ

share
ಶಶಿಕರ ಪಾತೂರು
ಶಶಿಕರ ಪಾತೂರು
Next Story
X