Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಬೆಂಗಳೂರು
  3. ವಚನ ಚಳುವಳಿ ನಾಶಗೊಳಿಸಿದ ಪುರೋಹಿತರು:...

ವಚನ ಚಳುವಳಿ ನಾಶಗೊಳಿಸಿದ ಪುರೋಹಿತರು: ಮಾಜಿ ಸಚಿವೆ ಲಲಿತಾ ನಾಯ್ಕ

ವಾರ್ತಾಭಾರತಿವಾರ್ತಾಭಾರತಿ23 Feb 2020 8:27 PM IST
share
ವಚನ ಚಳುವಳಿ ನಾಶಗೊಳಿಸಿದ ಪುರೋಹಿತರು: ಮಾಜಿ ಸಚಿವೆ ಲಲಿತಾ ನಾಯ್ಕ

ಬೆಂಗಳೂರು, ಫೆ.23: ಪುರೋಹಿತ ಶಾಹಿ ವರ್ಗದವರು ತುಂಬಾ ಬುದ್ದಿ ಜೀವಿಗಳಾಗಿದ್ದು, ಕೂತಲ್ಲೆ ತಮ್ಮ ಕಾರ್ಯಗಳನ್ನು ಮಾಡುತ್ತಿದ್ದರು. ಆದರೆ, ತನ್ನದೆ ನಿಲುವಿನಲ್ಲಿ ಸಾಗುತ್ತಿದ್ದ ಬೌದ್ದ ಧರ್ಮ, ವಚನ ಚಳುವಳಿಯನ್ನು ನಿರ್ಮೂಲನೆ ಮಾಡಿ ಜನರನ್ನು ಮೌಢ್ಯತೆಯ ಕಡೆಗೆ ಕರೆದೊಯ್ದಿದ್ದಾರೆ ಎಂದು ಚಿಂತಕಿ, ಮಾಜಿ ಸಚಿವ ಲಲಿತಾ ನಾಯ್ಕ ಅಭಿಪ್ರಾಯಪಟ್ಟರು.

ರವಿವಾರ ಇಲ್ಲಿನ ರಾಜಾಜಿನಗರದ ಕೆಎಲ್ಇ ಕಾಲೇಜಿನಲ್ಲಿ ಸಿದ್ಧಮಂಗಳಾ ಸೇವಾ ಕೇಂದ್ರ ಮತ್ತು ಕೆಎಲ್‌ಇ ಸಂಸ್ಥೆಯ ಎಸ್.ನಿಜಲಿಂಗಪ್ಪ ಕಾಲೇಜು ವತಿಯಿಂದ ಆಯೋಜಿಸಿದ್ದ, ಜಗದಗಲ ಮಂಟಪ ಜ್ಞಾನ ದಾಸೋಹದ ಪ್ರಯುಕ್ತ ‘ವಚನಕಾರ್ತಿಯರು ಮತ್ತು ಆಧುನಿಕ ಕವಯತ್ರಿಯರ ಕಾವ್ಯ ಒಂದು ಅನುಸಂಧಾನ’ ವಿಚಾರ ಸಂವಾದ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಇತ್ತಿಚೀನ ದಿನಗಳಲ್ಲಿ ಧರ್ಮ, ಜಾತಿ ಎಂಬ ಪರಿಕಲ್ಪನೆ ಬದಲಾಗಿದೆ. ಧರ್ಮ ಎಂದರೆ ಬರೀ ಮೌಢ್ಯತೆಗೆ ಒಳಗಾಗಿದೆ. ಇದಕ್ಕೆ ಹೆಚ್ಚಾಗಿ ಬಲಿಯಾಗುತ್ತಿರುವುದು ಶೋಷಿತ ವರ್ಗದರೆ ಆಗಿದ್ದಾರೆ. ಇನ್ನು ಪುರೋಹಿತರಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ನುಡಿದರು.

ನಿಜವಾದ ಮಾನವ ಧರ್ಮ ಸಮಾಜದಲ್ಲಿ ಕಾಣಬೇಕಾದರೆ ಶರಣರ ತತ್ವದ ಸಾರವನ್ನು ಅರಿತುಕೊಳ್ಳಬೇಕು.ಯಾವ ವಚನದಲ್ಲಿಯೂ ಮೂಢನಂಬಿಕೆ ಇಲ್ಲ. ವಚನಕಾರರು ತತ್ವ ಸಿದ್ದಾಂತಗಳನ್ನು ಅವಳವಡಿಸಿಕೊಂಡು ಬರೆದಿದ್ದಾರೆ. ನಿಮ್ಮ ಮಕ್ಕಳಿಗೆ ವಾಸ್ತವ ಜಗತ್ತಿನ ಪರಿಚಯ ಮಾಡಿಕೊಡಿ. ದಾರಿ ತಪ್ಪಿಸುವುದು ಬೇಡ. ಇಂದಿನ ಲೇಖಕಿಯರು ಹೆಚ್ಚು ಓದಿ ಆ ಮೂಲಕ ಹೆಚ್ಚು ಮೌಲ್ಯಗಳನ್ನು ಪಡೆದು ಹೊಸ ಹೊಸ ಸಂಶೋಧನೆಗಳನ್ನು ಕೈಗೊಂಡು ಹೊಸ ವಿಚಾರಗಳನ್ನು ಪಸರಿಸಬೇಕು. ಸಂಶೋಧನೆ ವಿದ್ಯಾರ್ಥಿಗಳು ಯಾವುದೇ ವಿಚಾರವನ್ನು ಸಂಶೋಧಿಸಿ ಸತ್ಯಾಸತ್ಯತೆಯನ್ನು ಸಮಾಜಕ್ಕೆ ಕೊಡಬೇಕು ಎಂದರು.

ಸಮಾಜಕ್ಕೆ ಹೊಸ ತತ್ವಗಳನ್ನು ತಿಳಿಸಿದವರು ಬಸವ ಬಳಗದವರು. ಇದನ್ನು ಪ್ರಸ್ತುತ ಸಮಾಜಕ್ಕೆ ಅನುಸರಿಸುವುದು ಅಗತ್ಯವಾಗಿದೆ. 12ನೇ ಶತಮಾನ ಎನ್ನುವುದು ಮಹತ್ವದ ಘಟ್ಟ. ಆಗಿನ ಕಾಲದಲ್ಲೆ ಮಹಿಳೆಗೆ ಶಿಕ್ಷಣ ದೊರತಿದೆ ಎಂಬುದಕ್ಕೆ ಅವರ ರಚಿಸಿದ ವಚನಗಳೆ ಸಾಕ್ಷಿಯಾಗಿವೆ. ಅವರು ಸುಮ್ಮನೆ ವಚನಗಳನ್ನು ಬರೆದಿಲ್ಲ. ಎಲ್ಲವನ್ನು ಅರಿತು ವಚನಗಳನ್ನು ರಚಿಸಿದ್ದಾರೆ ಎಂದು ಲಲಿತಾ ನಾಯ್ಕಾ ಹೇಳಿದರು.

ಈ ಸಂದರ್ಭದಲ್ಲಿ ಕಾಲೇಜಿನ ಸಹ ಪ್ರಾಧ್ಯಾಪಕಿ ಶೀಲಾದೇವಿ ಎಸ್.ಮಳೀಮಠ, ಶಿವನಗೌಡ, ಡಾ.ಲೋಕೇಶ್ವರಪ್ಪ, ಟಿ.ಶಿವಪ್ರಸಾದ್, ಮಹೇಶ್ವರಿ, ಪ್ರತಿಮಾ, ಜಯಶ್ರೀ ಸೇರಿದಂತೆ ಪ್ರಮುಖರಿದ್ದರು.

ಪ್ರತ್ಯೇಕ ಧರ್ಮ

ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ಹೋರಾಟ ನಡೆಯುತ್ತಿದೆ. ಆದರೆ, ಈ ಹೋರಾಟವೂ ನಿಜಾಂಶದಿಂದ ಕೂಡಿದ್ದು, ಯಾರದ್ದೊ ಆಚರಣೆಯನ್ನು ಇವರ್ಯಾಕೆ ಆಚರಣೆ ಮಾಡಬೇಕು. ತತ್ವ ಧರ್ಮದ ತತ್ವ ಸಿದ್ದಾಂತಗಳನ್ನು ಆಚರಿಸಿಕೊಳ್ಳಲು ಹೋರಾಟ ಬೇಕಾಗಿದೆ.

-ಬಿ.ಟಿ.ಲಲಿತಾ ನಾಯ್ಕ, ಮಾಜಿ ಸಚಿವೆ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X