Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಓಶಿಯನ್ ಪರ್ಲ್‌ನಲ್ಲಿ 'ಹೈದರಾಬಾದಿ ಆಹಾರ...

ಓಶಿಯನ್ ಪರ್ಲ್‌ನಲ್ಲಿ 'ಹೈದರಾಬಾದಿ ಆಹಾರ ಉತ್ಸವ' ಆರಂಭ

ಕರಾವಳಿಗರಿಗೆ 15 ದಿನ ಬಗೆಬಗೆಯ ಖಾದ್ಯಗಳ ರಸದೌತಣ

ವಾರ್ತಾಭಾರತಿವಾರ್ತಾಭಾರತಿ27 Feb 2020 2:56 PM IST
share
ಓಶಿಯನ್ ಪರ್ಲ್‌ನಲ್ಲಿ ಹೈದರಾಬಾದಿ ಆಹಾರ ಉತ್ಸವ ಆರಂಭ

ಮಂಗಳೂರು, ಫೆ.27:  ನಗರದ ನವಭಾರತ್ ಸರ್ಕಲ್ ಸಮೀಪದ ಓಶಿಯನ್ ಪರ್ಲ್ ಹೊಟೇಲ್‌ ನ ಕೋರಲ್ ಮಲ್ಟಿ ಕ್ಯೂಸಿನ್ ಫೈನ್ ಡೈನ್ ರೆಸ್ಟೋರೆಂಟ್ ನಲ್ಲಿ  15 ದಿನಗಳ 'ಹೈದರಾಬಾದಿ ಆಹಾರ ಉತ್ಸವ'ವು ಫೆ.25ರಂದು ಪ್ರಾರಂಭವಾಗಿದೆ. ಮಾರ್ಚ್ 10ರವರೆಗೆ ಈ ಉತ್ಸವ ನಡೆಯಲಿದೆ. 

ಈ ಉತ್ಸವದಲ್ಲಿ ನುರಿತ ಶೆಫ್ ಗಳು ತಯಾರಿಸುವ ವಿವಿಧ  ಹೈದರಾಬಾದಿ ಖಾದ್ಯಗಳು  ಆಹಾಯಪ್ರಿಯರಿಗೆ ರಸದೌತಣ ಬಡಿಸಲಿವೆ. ಮಧ್ಯಾಹ್ನ ಹಾಗೂ ರಾತ್ರಿಯ ಭೋಜನ ಸಮಯದಲ್ಲಿ ಈ ಖಾದ್ಯಗಳು ಲಭ್ಯವಿರಲಿವೆ. 

ಆಹಾರ ಉತ್ಸವದಲ್ಲಿ ಸಸ್ಯಾಹಾರಿ ಮತ್ತು ಮಾಂಸಾಹಾರಿ ಪಾಕ ಪದ್ಧತಿಯ ವಿವಿಧ ಬಗೆಯ ಹೈದರಾಬಾದಿ ಖಾದ್ಯಗಳನ್ನು ಸವಿಯಬಹುದು. ಎಲ್ಲ ಮಾಂಸಾಹಾರಗಳು ಹಲಾಲ್ ದೃಢೀಕೃತ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ. 

''ಮಂಗಳೂರು ಸಹಿತ ದ.ಕ. ಜಿಲ್ಲೆಯ ಆಹಾರಪ್ರಿಯರಿಗೆ ಅಂತಾರಾಷ್ಟ್ರೀಯ ಗುಣಮಟ್ಟದ ಆಹಾರ, ಖಾದ್ಯಗಳನ್ನು ಉತ್ಸವಗಳ ಮೂಲಕ ಓಶಿಯನ್ ಪರ್ಲ್ ತರುತ್ತಿದೆ. ಈಗ  ಹೈದರಾಬಾದಿ ಆಹಾರ ಉತ್ಸವ ಆಯೋಜಿಸಲಾಗಿದೆ. ರುಚಿಕರ ಬಿರಿಯಾನಿ, ವಿಶೇಷ ಹೈದರಾಬಾದಿ ಹಲೀಮ್, ಕಬಾಬ್ ಸಹಿತ ವಿವಿಧ ನಮೂನೆಯ ಖಾದ್ಯಗಳು ಆಹಾರಪ್ರಿಯರ ಮನತಣಿಸಲಿವೆ. ಮುಂದಿನ ದಿನಗಳಲ್ಲೂ ವಿವಿಧ ಆಹಾರ ಉತ್ಸವಗಳನ್ನು ಆಯೋಜಿಸಲಿದ್ದೇವೆ. ಆಹಾರಪ್ರಿಯರು ಈ ಉತ್ಸವವನ್ನು ಖಂಡಿತ ಸ್ವಾಗತಿಸಲಿದ್ದಾರೆ'' ಎಂದು ಓಶಿಯನ್ ಪರ್ಲ್ ಗ್ರೂಪ್ ಆಫ್ ಹೊಟೇಲ್ಸ್‌ನ ಉಪಾಧ್ಯಕ್ಷ ಗಿರೀಶ್ ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ. 

‘ಒತ್ತಡದ ಬದುಕಿನ ಜಂಜಾಟದಿಂದ ಸ್ವಲ್ಪ ಸಮಯ ನೆಮ್ಮದಿ ಪಡೆಯಲು ಹಾಗು ಜನರಲ್ಲಿ ಸಕಾರಾತ್ಮಕತೆಯನ್ನು ಉತ್ತೇಜಿಸುವ ಉದ್ದೇಶದಿಂದ ಪ್ರತಿವರ್ಷವೂ ಇಂತಹ ಆಹಾರ ಉತ್ಸವಗಳನ್ನು ಆಯೋಜಿಸುತ್ತಾ ಬರಲಾಗುತ್ತಿದೆ. ಇದರಿಂದ ನಗರದ ಜನರಲ್ಲಿ ಕುಟುಂಬ ಹಾಗು ಮಿತ್ರರ ಜೊತೆ ಖುಷಿಯ ಸಮಯ ಕಳೆಯಲು ಹೊಸ ಅವಕಾಶ ಸಿಗುತ್ತದೆ ’ ಎನ್ನುತ್ತಾರೆ ಗಿರೀಶ್.

‘ಆಹಾರಪ್ರಿಯರಿಗೆ ಉತ್ತಮ ಗುಣಮಟ್ಟದ ಖಾದ್ಯ ನೀಡಲು ಸಂಸ್ಥೆ ಪ್ರಾಮುಖ್ಯತೆ ನೀಡುತ್ತದೆ. ಅತ್ಯುತ್ತಮ ಆಹಾರ ಸವಿಯಲು ಗ್ರಾಹಕರು ಕುಟುಂಬ ಸಮೇತ ಆಗಮಿಸುತ್ತಿರುವುದು ಉತ್ಸವಕ್ಕೆ ಪ್ರೋತ್ಸಾಹದಾಯಕವಾಗಿದೆ’ ಎಂದು ಗಿರೀಶ್ ಸ್ಪಷ್ಟಪಡಿಸಿದರು.

‘ಹೈದರಾಬಾದಿ ಪಾಕಪದ್ಧತಿಯ ಹೆಚ್ಚಿನ ಆಹಾರ ಖಾದ್ಯಗಳು ಸ್ಟ್ರೀಟ್ ಫುಡ್‌ಗಳಾಗಿ ಭಾರೀ ಖ್ಯಾತಿ ಪಡೆದಿವೆ. ಉತ್ಸಾಹಿ ಆಹಾರಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಸ್ಟ್ರೀಟ್ ಫುಡ್‌ಗೆ ಮುಗಿಬೀಳುತ್ತಾರೆ. ಆಹಾರ ಉತ್ಸವದಲ್ಲಿ ದೊರೆಯುವ ಖಾದ್ಯಗಳು ಮಂಗಳೂರು ಸಹಿತ ಸುತ್ತಮುತ್ತಲಿನಲ್ಲಿ ಎಲ್ಲೂ ಕಂಡು ಬರುವುದಿಲ್ಲ. ಕರಾವಳಿಗರಿಗೆ ಇದೊಂದು ಸುವರ್ಣಾವಕಾಶವಾಗಿದೆ. ಆಹಾರ ಉತ್ಸವದಲ್ಲಿ ಪಾಲ್ಗೊಂಡು ಭಾರತದ ಅತ್ಯಂತ ಬೇಡಿಕೆಯ ಈ ಖಾದ್ಯಗಳನ್ನು ಆನಂದಿಸಬಹುದು’ ಎಂದು ಗಿರೀಶ್ ಮಾಹಿತಿ ನೀಡಿದರು.

ಮುಂದೆ ಅಂತಾರಾಷ್ಟ್ರೀಯ ಮಟ್ಟದ ಆಹಾರ ಉತ್ಪನ್ನಗಳಿಗೆ ಆದ್ಯತೆ ನೀಡಲಾಗುತ್ತದೆ. ಗ್ರಾಹಕರೂ ಅಂತಹ ಖಾದ್ಯಗಳನ್ನೇ ಸವಿಯಲು ಇಷ್ಟಪಡುತ್ತಾರೆ. ಮೆಕ್ಸಿಕನ್ ಅಥವಾ ಇಟಾಲಿಯನ್ ಖಾದ್ಯಗಳ ರುಚಿಯನ್ನು ಮುಂದಿನ ದಿನಗಳಲ್ಲಿ ಕರಾವಳಿಗರಿಗೆ ಪರಿಚಯಿಸಲಿದ್ದೇವೆ’ ಎಂದು ಅವರು  ಹೇಳಿದರು.

ಬಗೆಬಗೆಯ ಖಾದ್ಯ: ಹೈದರಾಬಾದಿ  ಹಲೀಂ, ಮುರ್ಗ್ ಮಲಾಯಿ ಕೊರ್ಮ, ಹೈದರಾಬಾದಿ ದಮ್ ಕಾ ಮುರ್ಗ್, ಸಸ್ಯಾಹಾರಿ ಖಾದ್ಯಗಳು, ಸಿಹಿ ತಿನಿಸುಗಳು, ಮುರ್ಗ್ ನಿಝಾಮಿ ಸೀಖ್, ನೂರಾನಿ ಸಬ್ಝ್ ಸೀಖ್, ಗೋಶ್ತ್ ಶಿಕಂಪುರಿ ಕಬಾಬ್, ಕೊಫ್ತಾ, ದಾಲ್ಚಾ ಗೋಶ್ತ್, ವಿವಿಧ ಸೂಪ್ ಗಳು, ಪರಾಟ, ನಾನ್ ಗಳು  ಸಹಿತ ಹಲವು ಬಗೆಯ ಖಾದ್ಯಗಳು ಆಹಾರ ಉತ್ಸವದಲ್ಲಿ ಲಭ್ಯ ಇವೆ.  

share
ವಾರ್ತಾಭಾರತಿ
ವಾರ್ತಾಭಾರತಿ
Next Story
X