Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ದಿಲ್ಲಿ ಹಿಂಸಾಚಾರಕ್ಕೆ ಮೋದಿ ಕಾರ್ಯವೈಖರಿ...

ದಿಲ್ಲಿ ಹಿಂಸಾಚಾರಕ್ಕೆ ಮೋದಿ ಕಾರ್ಯವೈಖರಿ ಕಾರಣ: ‘ದ ಗಾರ್ಡಿಯನ್’

ವಾರ್ತಾಭಾರತಿವಾರ್ತಾಭಾರತಿ27 Feb 2020 8:58 PM IST
share
ದಿಲ್ಲಿ ಹಿಂಸಾಚಾರಕ್ಕೆ ಮೋದಿ ಕಾರ್ಯವೈಖರಿ ಕಾರಣ: ‘ದ ಗಾರ್ಡಿಯನ್’

ಲಂಡನ್, ಫೆ. 27: ದಿಲ್ಲಿಯಲ್ಲಿ ನಡೆಯುತ್ತಿರುವ ಭೀಕರ ಕೋಮು ಹಿಂಸಾಚಾರದ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ‘ಅತ್ಯಂತ ವಿಳಂಬವಾಗಿ’ ನೀಡಿರುವ ‘ಶಾಂತಿ ಮತ್ತು ಸೌಹಾರ್ದತೆ’ಗಾಗಿನ ಕರೆಯು ಅವರ ಸುದೀರ್ಘ ಮೌನವನ್ನು ಕ್ಷಮಿಸುವುದಿಲ್ಲ ಎಂದು ಬ್ರಿಟನ್‌ನ ಪತ್ರಿಕೆ ‘ದ ಗಾರ್ಡಿಯನ್’ ಹೇಳಿದೆ.

 ಅದೂ ಅಲ್ಲದೆ, ಜನರನ್ನು ವಿಭಜಿಸುವ ಮೂಲಕ ಅವರು ನಿರ್ಮಿಸಿಕೊಂಡಿರುವ ರಾಜಕೀಯ ವೃತ್ತಿಜೀವನವನ್ನೇನೂ ಅವರ ಈ ಹೇಳಿಕೆ ಮರೆಮಾಚುವುದಿಲ್ಲ ಎಂದು ಪತ್ರಿಕೆಯು ತನ್ನ ಬುಧವಾರದ ಸಂಪಾದಕೀಯದಲ್ಲಿ ಬರೆದಿದೆ.

‘‘ಪ್ರಧಾನಿ ನರೇಂದ್ರ ಮೋದಿಯವರ ಪಕ್ಷ ಬಿಜೆಪಿಯು ‘ಹಿಂದೂ ರಾಷ್ಟ್ರೀಯತೆ’ ಎಂಬ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ. ದುರ್ಬಲ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಹಿಂಸೆಯನ್ನು ಪ್ರಚೋದಿಸುವ ರಾಜಕೀಯದ ಮೂಲಕ ಅದು ಅಧಿಕಾರಕ್ಕೆ ಏರಿದೆ’’ ಎಂದು ಸಂಪಾದಕೀಯ ಹೇಳಿದೆ.

2002ರ ಗುಜರಾತ್ ಹತ್ಯಾಕಾಂಡಕ್ಕೆ ಸಂಬಂಧಿಸಿ ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿಗೆ ಅಮೆರಿಕ ಪ್ರವೇಶವನ್ನು ನಿಷೇಧಿಸಲಾಗಿತ್ತು. ಆ ಗಲಭೆಯಲ್ಲಿ ಸುಮಾರು 1,000 ಮುಸ್ಲಿಮರು ಮೃತಪಟ್ಟಿದ್ದಾರೆ. ಮುಸ್ಲಿಮರನ್ನು ರಕ್ಷಿಸಲು ಮೋದಿ ಉದ್ದೇಶಪೂರ್ವಕವಾಗಿ ವಿಫಲರಾದರು ಎಂಬ ಆರೋಪದಿಂದ ಸುಪ್ರೀಂ ಕೋರ್ಟ್ ಅವರನ್ನು ಖುಲಾಸೆಗೊಳಿಸಿತಾದರೂ, ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಅವರಿಗೆ ಪುನರ್ವಸತಿ ಸಿಕ್ಕಿದ್ದು ಅವರು 2014ರಲ್ಲಿ ಪ್ರಧಾನಿಯಾಗಿ ಆಯ್ಕೆಯಾದ ಬಳಿಕವೇ ಎಂದು ಸಂಪಾದಕೀಯ ಬರೆದಿದೆ.

ಅಮಿತ್ ಶಾ ರಾಜೀನಾಮೆ ಬೇಡಿಕೆ ಸರಿಯಾಗಿದೆ

‘‘ದಿಲ್ಲಿ ಕೋಮು ಸಂಘರ್ಷವನ್ನು ನಿಭಾಯಿಸುವಲ್ಲಿ ಪೊಲೀಸರ ನಾಚಿಕೆಗೇಡಿನ ನಿರ್ವಹಣೆಯ ಹಿನ್ನೆಲೆಯಲ್ಲಿ, ಮೋದಿಯವರ ಗೃಹ ಸಚಿವ ಅಮಿತ್ ಶಾರ ರಾಜೀನಾಮೆಗೆ ಆಗ್ರಹಿಸುವ ಮೂಲಕ ಪ್ರತಿಪಕ್ಷ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸರಿಯಾದುದನ್ನೇ ಮಾಡಿದ್ದಾರೆ. ಮೋದಿಯ ನಿಕಟವರ್ತಿಯಾಗಿರುವ ಅಮಿತ್ ಶಾ ಅವರೇ ಬಾಂಗ್ಲಾದೇಶದ ಅಕ್ರಮ ವಲಸಿಗರನ್ನು ‘ಗೆದ್ದಲುಗಳು’ ಎಂಬುದಾಗಿ ಬಣ್ಣಿಸಿ ಅವರನ್ನು ಬಂಗಾಳ ಕೊಲ್ಲಿಗೆ ಎಸೆಯಬೇಕು ಎಂದು ಹೇಳಿದ್ದರು’’ ಎಂದು ‘ದ ಗಾರ್ಡಿಯನ್’ ಹೇಳಿದೆ.

ಅನಿರೀಕ್ಷಿತವಲ್ಲ, ನಿಧಾನವಾಗಿ ಉದ್ದೀಪಿಸಿದ ಅಸಹನೆಯ ಫಲ

 ದಿಲ್ಲಿಯಲ್ಲಿ ರಾಜಕಾರಣಿಗಳು ಆಡಿರುವ ದ್ವೇಷದ ಮಾತುಗಳಷ್ಟೇ ಅಲ್ಲಿನ ಹಿಂಸಾಚಾರವು ಆಘಾತಕಾರಿಯಾಗಿದೆ. ಆದರೆ, ರಾಷ್ಟ್ರ ರಾಜಧಾನಿಯಲ್ಲಿ ಸಂಭವಿಸಿರುವ ಈ ಭೀಕರ ಹಿಂಸಾಚಾರವನ್ನು ಅನಿರೀಕ್ಷಿತ ಸ್ಫೋಟ ಎಂಬುದಾಗಿ ಕರೆಯುವಂತಿಲ್ಲ ಅಥವಾ ಶತಮಾನಗಳ ಹಳೆಯ ಅಂತರ್ ಧರ್ಮೀಯ ವೈರದ ಅನಿವಾರ್ಯ ಅಭಿವ್ಯಕ್ತಿ ಎಂಬುದಾಗಿಯೂ ಬಣ್ಣಿಸಲು ಸಾಧ್ಯವಿಲ್ಲ. ಬದಲಿಗೆ, 35 ಸಾವುಗಳು ಮತ್ತು ನೂರಾರು ಗಾಯಗೊಂಡಿರುವ ಪ್ರಕರಣಗಳು, ರಾಜಕೀಯ ನಾಯಕರು ಜನರ ಮನಸ್ಸಿನಲ್ಲಿ ನಿಧಾನವಾಗಿ ಉದ್ದೀಪಿಸಿದ ಅಸಹನೆಯ ಫಲವಾಗಿದೆ ಎಂದು ಪತ್ರಿಕೆ ಹೇಳಿದೆ.

‘‘ಈ ಘಟನೆಗಳು ಸ್ಥಾಪಕ ಮೌಲ್ಯಗಳಾದ ಬಹುತ್ವ ಮತ್ತು ಸಮಾನತೆಯಿಂದ ವಿಮುಖವಾಗಿ ಅಸಹಿಷ್ಣುತೆ ಮತ್ತು ದ್ವೇಷದತ್ತ ಸಾಗುತ್ತಿರುವ ಭಾರತದ ದಾರಿಯಲ್ಲಿನ ಇತ್ತೀಚಿನ ಹೆಜ್ಜೆಗಳಾಗಿವೆ’’ ಎಂದು ‘ದ ಗಾರ್ಡಿಯನ್’ ಅಭಿಪ್ರಾಯಪಟ್ಟಿದೆ.

ತಕ್ಷಣದ ಕಾರಣಗಳು

ನರೇಂದ್ರ ಮೋದಿಯವರ ನ್ಯಾಯಯುತವಲ್ಲದ ಪೌರತ್ವ ತಿದ್ದುಪಡಿ ಕಾಯ್ದೆ, ಈ ತಿಂಗಳು ನಡೆದ ದಿಲ್ಲಿ ವಿಧಾನಸಭೆ ಚುನಾವಣೆಯ ವೇಳೆ ಬಿಜೆಪಿ ನಾಯಕರು ಬಳಸಿದ ಅಪಾಯಕಾರಿ ಪ್ರಚೋದನಕಾರಿ ಮಾತುಗಳು ಹಾಗೂ ಪೌರತ್ವ ಕಾಯ್ದೆಯನ್ನು ವಿರೋಧಿಸಿ ಧರಣಿ ಕುಳಿತಿರುವ ಮುಸ್ಲಿಮರನ್ನು ಬಲವಂತವಾಗಿ ತೆರವುಗೊಳಿಸಲು ಕಪಿಲ್ ಮಿಶ್ರಾ ಮುಂತಾದ ಬಿಜೆಪಿ ನಾಯಕರು ಜನರಿಗೆ ನೀಡಿದ ಪ್ರಚೋದನೆಯು ಸೃಷ್ಟಿಸಿದ ಉದ್ವಿಗ್ನತೆಯು, ಈ ಹಿಂಸಾತ್ಮಕ ಘಟನೆಗಳಿಗೆ ತಕ್ಷಣದ ಕಾರಣಗಳಾಗಿವೆ ಎಂದಿದೆ.

 ‘‘ಹೊಡೆದಾಟಗಳು ಕ್ಷಿಪ್ರವಾಗಿ ವಿಜೃಂಭಿಸಿದವು. ಆದರೆ, ಅಸಹಾಯಕ ಮುಸ್ಲಿಮರು ಈ ಹಿಂಸಾಚಾರದ ಪ್ರಾಥಮಿಕ ಗುರಿಗಳು ಮತ್ತು ಸಂತ್ರಸ್ತರಾಗಿದ್ದಾರೆ ಎನ್ನುವುದು ಸ್ಪಷ್ಟ. ಪೊಲೀಸರು ಸುಮ್ಮನೆ ನಿಂತು ನೋಡುತ್ತಿದ್ದರು ಹಾಗೂ ರಾಷ್ಟ್ರೀಯವಾದಿ ಘೋಷಣೆಗಳನ್ನು ಕೂಗುತ್ತಿದ್ದ ಅಥವಾ ವಿವೇಚನೆಯಿಲ್ಲದೆ ಗುಂಡು ಹಾರಿಸುತ್ತಿದ್ದ ಗುಂಪುಗಳೊಡನೆ ಕೈಜೋಡಿಸುತ್ತಿದ್ದರು ಎಂಬುದಾಗಿ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ‘ದೇಶದ್ರೋಹಿಗಳಿಗೆ ಗುಂಡಿಕ್ಕಿ’ ಎಂದು ಹೇಳುವಂತೆ ಬಿಜೆಪಿ ನಾಯಕರು ಜನರ ಗುಂಪುಗಳನ್ನು ಪ್ರಚೋದಿಸುತ್ತಿರುವುದು ದಾಖಲಾಗಿದೆ. ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರನ್ನು ‘ಅತ್ಯಾಚಾರಿಗಳು ಮತ್ತು ಕೊಲೆಗಡುಕರು’ ಎಂಬುದಾಗಿ ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಇದು ಆಘಾತಕಾರಿಯಾದರೂ, ಯಾರಿಗೂ ಆಶ್ಚರ್ಯವಾಗಿಲ್ಲ’’ ಎಂದು ಸಂಪಾದಕೀಯ ಹೇಳಿದೆ.

ದಿಲ್ಲಿಯಲ್ಲಿ ಹಿಂಸೆ ಉಲ್ಬಣಿಸುತ್ತಿರುವ ಹೊತ್ತಿನಲ್ಲೇ ಭಾರತ ಪ್ರವಾಸಗೈದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ವಾಧಿಕಾರಿ ಪ್ರವೃತ್ತಿಯ ರಾಷ್ಟ್ರೀಯವಾದಿ ನಾಯಕನೊಬ್ಬನನ್ನು ಆಲಿಂಗಿಸಬೇಕಾಗಿ ಬಂದದ್ದು ಆಶ್ಚರ್ಯವೇನಲ್ಲ. ಆದರೆ, ಹಲವಾರು ಜಾಗತಿಕ ನಾಯಕರು ಮೋದಿಯ ಅಪಾಯಕಾರಿ ಬಲಪಂಥೀಯ ಜನಮರುಳು ಧೋರಣೆಗಳನ್ನು ಸ್ವೀಕರಿಸಿದ್ದಾರೆ.

-‘ದ ಗಾರ್ಡಿಯನ್’

ನಾಗರಿಕ ಸಮಾಜದಿಂದ ಪ್ರತಿ ಹೋರಾಟ

 ರಾಜಕೀಯ ಪ್ರತಿಪಕ್ಷವನ್ನು ಮೋದಿ ದುರ್ಬಲಗೊಳಿಸಿದ್ದಾರೆ. ನಾಗರಿಕ ಸಮಾಜವನ್ನು ಹತ್ತಿಕ್ಕುವ ಪ್ರಯತ್ನಗಳನ್ನು ಅವರು ಮುಂದುವರಿಸಿದ್ದಾರೆ. ಆದರೂ, ನಾಗರಿಕ ಸಮಾಜ ಪ್ರತಿ ಹೋರಾಟ ನಡೆಸುತ್ತಿದೆ. ದೇಶ ನಡೆಯುತ್ತಿರುವ ದಾರಿಯ ಬಗ್ಗೆ ಭಾರತೀಯ ನಾಗರಿಕರು ಅಸಹನೆ ವ್ಯಕ್ತಪಡಿಸಿದ್ದಾರೆ.

ಪ್ರಸಕ್ತ ದೇಶ ಸಾಗುತ್ತಿರುವ ದಿಕ್ಕನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಹೇಳಲಾಗದು. ಆದರೆ, ಪ್ರತಿರೋಧ ವ್ಯಕ್ತಪಡಿಸುತ್ತಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳು ಜನರ ಬೆಂಬಲವಿಲ್ಲದೆ ಪ್ರಸಕ್ತ ದಾರಿಯನ್ನು ಬದಲಿಸಲು ಸಾಧ್ಯವಿಲ್ಲ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X