Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಬೆಂಗಳೂರು
  3. ವಚನ-ಕೀರ್ತನೆಗಳನ್ನು ಜೊತೆಯಾಗಿ ಬೋಧನೆ...

ವಚನ-ಕೀರ್ತನೆಗಳನ್ನು ಜೊತೆಯಾಗಿ ಬೋಧನೆ ಮಾಡುವುದು ಮುಕ್ತ ವಿಚಾರಗಳನ್ನು ನಾಶ ಮಾಡಿದಂತೆ

ಹಿರಿಯ ಸಾಹಿತಿ ಡಾ.ಕೆ.ವೈ.ನಾರಾಯಣಸ್ವಾಮಿ

ವಾರ್ತಾಭಾರತಿವಾರ್ತಾಭಾರತಿ28 Feb 2020 8:38 PM IST
share
ವಚನ-ಕೀರ್ತನೆಗಳನ್ನು ಜೊತೆಯಾಗಿ ಬೋಧನೆ ಮಾಡುವುದು ಮುಕ್ತ ವಿಚಾರಗಳನ್ನು ನಾಶ ಮಾಡಿದಂತೆ

ಬೆಂಗಳೂರು, ಫೆ.28: ಪ್ರಾಥಮಿಕ ಪಠ್ಯ ಪುಸ್ತಕಗಳಲ್ಲಿ ವಚನ, ಕೀರ್ತನೆಗಳನ್ನು ಜೊತೆ ಜೊತೆಯಾಗಿ ಬೋಧನೆ ಮಾಡುತ್ತಾರೆ. ಆದರೆ, ಇದು ಅಮೃತ ಮತ್ತು ವಿಷವನ್ನಿಟ್ಟು ಮುಕ್ತ ವಿಚಾರಗಳನ್ನೇ ನಾಶ ಮಾಡಿದಂತೆ ಎಂದು ಹಿರಿಯ ಸಾಹಿತಿ ಡಾ.ಕೆ.ವೈ.ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.

ಶುಕ್ರವಾರ ನಗರದ ಮಿಷಿನ್ ರಸ್ತೆಯ ಎಸ್‌ಸಿಎಂ ಹೌಸ್ ಸಭಾಂಗಣದಲ್ಲಿ ಅನೇಕ ಸಂಸ್ಥೆ ಏರ್ಪಡಿಸಿದ್ದ, ವಚನ ಚಳವಳಿ-ಲಿಂಗತ್ವ ಮತ್ತು ಲೈಂಗಿಕತೆ ವಿಷಯಗಳ ಒಳನೋಟ ಕುರಿತು ಅವರು ಮಾತನಾಡಿದರು. ಪ್ರಾಥಮಿಕ ಶಾಲೆಗಳಲ್ಲಿ ವಚನಗಳನ್ನು ಹೇಳಿಕೊಡಲಾಗುತ್ತದೆ.ಉದಾಹರಣೆಗೆ ಪಠ್ಯ ಪುಸ್ತಕಗಳಲ್ಲಿ ‘ನುಡಿದರೆ ಮುತ್ತಿನ ಹಾರದಂತಿರಬೇಕು’ ಎನ್ನುವುದು ಸರಳ ವಚನ. ಇದರ ಜೊತೆಯಲ್ಲಿಯೇ ಕೀರ್ತನೆ ಕಲಿಸುತ್ತಾರೆ. ಆದರೆ, ವಚನ ಮತ್ತು ಕೀರ್ತನೆಗಳಿಗೆ ಬಹಳ ವ್ಯತ್ಯಾಸ ಇದೆ ಎಂದು ತಿಳಿಸಿದರು.

ಹೀಗೆ, ನೋಡಿದರೆ ದೇವರನ್ನು ಪ್ರಶ್ನಿಸುವ ವಚನವೊಂದರಲ್ಲಿ ಅಲ್ಲಮ ಪ್ರಭು, ‘ಉಳಿ ಮುಟ್ಟಿದ ಲಿಂಗವ ಮನ ಮುಟ್ಟಬಲ್ಲದೆ ಗುಹೇಶ್ವರಾ’ ಎಂದು ಪ್ರಶ್ನಿಸುತ್ತಾರೆ. ಇದರ ಅರ್ಥ, ದೇವರನ್ನು ಒಂದು ಕಲ್ಲಿಗೆ ಇಳಿಸುತ್ತಾರೆ ಎಂಬುದಲ್ಲ. ಬದಲಾಗಿ, ಕಲ್ಲಿಗೂ ಸಹ ದೇವತ್ವದ ಘನತೆ ಇದೆ ಎಂದರ್ಥ.

ಆದರೆ, ಇಲ್ಲಿ(ಕೀರ್ತನೆಗಳಲ್ಲಿ) ಕಾಗಿನೆಲೆ ಆದಿಕೇಶವ ಎಲ್ಲರನ್ನೂ ಸಲಹುತ್ತಾನೆ ಸಂಶಯ ಪಡದಿರು ಎಂದು ಹೇಳಿಕೊಡಲಾಗುತ್ತಿದೆ. ಅಷ್ಟೇ ಅಲ್ಲದೆ, ಕಲ್ಲು, ಕಾಡು ಎಲ್ಲಾದರೂ ಇರು, ಕಲ್ಲಿನೊಳಗಿನ ಕಪ್ಪೆಗೂ ನೀರು ಸುರಿದು ಪೋಷಿಸುತ್ತಾನೆ ಕಾಗಿನೆಲೆ ಆದಿಕೇಶವ, ಇದಕ್ಕೆ ಸಂಶಯ ಬೇಡ ಎನ್ನುತ್ತಾರೆ.

ಕೀರ್ತನೆ ಯಥಾಸ್ಥಿತಿ ಹೇಳುವ ಪಠ್ಯವಾದರೆ, ವಚನ, ಕ್ರಿಯೆ ಅರಿವು, ಆಲೋಚನೆ ಕಲಿಸುವುದಾಗಿದೆ. ಜೊತೆಗೆ ಬದುಕನ್ನು ಚದುರಿಸಬೇಕು, ಮನುಷ್ಯ ಘನತೆಗೆ ಕ್ರಿಯೆ ನೀಡಬೇಕು. ಏಜೆನ್ಸಿ ರೂಪ ನೀಡಿ, ಏನಾದರೂ ಮಾಡು ಎಂದು ಉತ್ತೇಜಿಸುವುದೇ ಇದರ ಮೂಲ ಆಶಯವಾಗಿದೆ. ನೀವು ಏನು ಮಾಡಬೇಕು ಅದನ್ನು ಏಜೆನ್ಸಿ ನಿರ್ದೇಶನ ಮಾಡಲಿದೆ ಎನ್ನುವುದು ಕೀರ್ತನೆ ಪರಂಪರೆಯ ಮುಖ್ಯವಾದ ಲಕ್ಷಣ. ಆದರೆ, ಇವೆರಡನ್ನು ಪಕ್ಕ ಪಕ್ಕದಲ್ಲಿ ಮಕ್ಕಳ ತಲೆಗೆ ತುಂಬುವುದು ಸರಿಯಲ್ಲ ಎಂದು ನಾರಾಯಣಸ್ವಾಮಿ ಪ್ರತಿಪಾದಿಸಿದರು.

ಈ ಸಂದರ್ಭದಲ್ಲಿ ಬರಹಗಾರ ಹುಲಿಕುಂಟೆ ಮೂರ್ತಿ, ಅನೇಕ ಸಂಸ್ಥೆಯ ನಿರ್ದೇಶಕಿ ರೂಮಿ ಹರೀಶ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

‘ಭಾಷೆ ಬದಲಾಗಬೇಕು’

ಪರಸ್ಪರ ನಿಂದನೆ, ಜಗಳ ಮಾಡಿಕೊಳ್ಳುವ ವೇಳೆ, ಉದ್ದೇಶ ಪೂರ್ವಕವಾಗಿ ತೃತೀಯ ಲಿಂಗಿ ಸಮುದಾಯವನ್ನು ಎಳೆತಂದು ಅವಾಚ್ಯ ಶಬ್ದಗಳನ್ನು ಬಳಸುತ್ತಾರೆ. ಇಂತಹ ಭಾಷೆಗೆ ಕಡಿವಾಣ ಹಾಕಬೇಕಾಗಿದೆ.

-ರೂಮಿ ಹರೀಶ್, ನಿರ್ದೇಶಕ ಅನೇಕ ಸಂಸ್ಥೆ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X