Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ಶಾಹೀನ್‌ಬಾಗ್

ಶಾಹೀನ್‌ಬಾಗ್

ಡಾ.ಕೆ.ಷರೀಫಾಡಾ.ಕೆ.ಷರೀಫಾ1 March 2020 1:16 PM IST
share

ಭಾರತ ಮಾತೆಯ ಮಗಳು ಅವಳು

ಆಡಮ್ ಹವ್ವಾ ಅವಳ ಪೂರ್ವಜರು

ಸಾತ್ವಿಕ ಸೀತೆಯ ಸೋದರಿಯವಳು

ದಿಟ್ಟ ದ್ರೌಪದಿಯ ಕ್ಷಾತ್ರ ತೇಜಸ್ಸು ಅವಳು

ಆಕೆಯದಾಖಲೆ ಕೇಳುತ್ತಿರುವಿಯಲ್ಲ

ನಿನ್ನ ದಾಖಲೆ ಎಲ್ಲಿದೆ ತೋರಿಸು?

ಮಂಜಿನ ಚಾದರ ಹೊದ್ದಿರುವ ಬಾಗ್

ಜೀವ ಮರಗಟ್ಟುವ ಜೀರೋ ಡಿಗ್ರಿ ಚಳಿ

ಬಯಲ ತುಂಬಾ ಅಮಾವಾಸ್ಯೆ ಕತ್ತಲು

ಯಾವ ಕಿಟಕಿ ಬಾಗಿಲುಗಳೂ ಇಲ್ಲ.

ಬಟಾ ಬಯಲು ಅಲ್ಲಮನ ನೆಲಮುಗಿಲು

ಧರಣಿ ಕುಳಿತಿರುವ ಹೆಂಗಳೆಯರು

ಏರು ಧ್ವನಿಯಲ್ಲಿ ಕೇಳುತ್ತಿದ್ದಾರೆ

ಎಲ್ಲಿದೆ ತೋರಿಸು ನಿನ್ನ ದಾಖಲೆ?

ನೂರರ ಗಡಿ ದಾಟಿದ ನೂರ್‌ಜಹಾನ್

ಎಂಬತ್ತು ದಾಟಿದ ಸೇವಂತಿಬಾಯಿ

ಧರಣಿ ಕುಳಿತ್ತಿದ್ದಾರೆ ಶಾಹೀನ್‌ಬಾಗ್‌ನಲ್ಲಿ

ಒಕ್ಕೊರಲ ಆಜಾದಿ ಕೂಗುತ್ತಿದ್ದಾರೆ

ಮುಗಿಲು ಮುಟ್ಟಿದೆ ಹೆಂಗಳೆಯರ ಕೂಗು

ಅವರ ಪೂರ್ವಜರ ಮೂಳೆಗಳು

ಇದೇ ಪುಣ್ಯಭೂಮಿಯ ಮಣ್ಣಿನಲ್ಲಿ ಒಂದಾಗಿವೆ

ಅವರದೇ ದಾಖಲೆ ಕೇಳುತ್ತಿರುವೆಯಲ್ಲ

ಈಗ ಅವರು ನಿನ್ನ ದಾಖಲೆ ಕೇಳುತ್ತಿದ್ದಾರೆ

ಎಲ್ಲಿದೆ ತೋರಿಸು ನಿನ್ನ ದಾಖಲೆ.

ಪುಟ್ಟ ಮಕ್ಕಳ ತಾಯಂದಿರು,

ಹಸಿಹಸಿ ಬಾಣಂತಿಯರು,ಯುವಜನ

ವಿದ್ಯಾರ್ಥಿಗಳು ಪಾಠಶಾಲೆ ತೊರೆದಿದ್ದಾರೆ

ಬೆಂಕಿ ಜ್ವಾಲೆಗಳಾಗಿ ಸಿಡಿಯುತ್ತಿದ್ದಾರೆ

ಕೆಂಡದುಂಡೆಗಳ ಮುಂದೆ ನಿನ್ನ

ಬಂದೂಕು, ಗುಂಡುಗಳು ಯಾವ ಲೆಕ್ಕ?

ತೇರಿ ಜಾಗೀರ್ ನಹೀ ಹೈ

ಎ ಹಿಂದೂಸ್ಥಾನ್ ಹಮಾರಾ ಹೈ

ಮುಗಿಲು ಮುಟ್ಟಿದೆ ಹೆಂಗಳೆಯರ ಜಯಕಾರ.

ನಿನಗೆ ಓಟು ಕೊಟ್ಟವರನ್ನೇ ಗುರುತು ಕೇಳುವಿಯಲ್ಲ!

ಎಲ್ಲಿದೆ ತೋರಿಸು ನಿನ್ನ ಗುರುತು?

ರಾಷ್ಟ್ರಧ್ವಜ ಹಾರಿಸುವ ಕೆಂಪುಕೋಟೆ

ವಿದೇಶಿಯರಿಗೆ ದರ್ಶಿಸುವ ತಾಜಮಹಲು

ಇಮಾರತ್ತುಗಳ ಕಟ್ಟಿಸಿದವರು ಇವರು

ಅವರದೇ ದಾಖಲೆ ಕೇಳುತ್ತಿರುವೆಯಲ್ಲ

ಮೊದಲು ತೋರಿಸುನಿನ್ನ ದಾಖಲೆ

ಸೋತದ್ದು, ಗೆದ್ದದ್ದು ಕ್ರೌರ್ಯದ ಬೀಜ

ಉತ್ತಿದ್ದು ಬಿತ್ತಿದ್ದು ದಿಕ್ಕೆಟ್ಟ ಅಲ್ಲಮ ಉಲಿದು

ಭಸ್ಮಾಸುರನ ನೃತ್ಯ ಸಾಕುಮಾಡು.

ಹೋರಾಟಗಾರ್ತಿ ಅಜ್ಜಿಯರ ಕಣ್ಣಲ್ಲಿರುವ

ತೇಜವೆಂತಹದು ನೋಡಿದೆಯಾ?

ಹಗಲು ರಾತ್ರಿ ಮೂರು ತಿಂಗಳಿಂದಲೂ

ಧರಿಣಿ ಕುಳಿತಮಾಗಿದ ಜೀವಗಳು

ಎದೆಹಾಲು ನಂಜಾಗಬಾರದಿತ್ತೆ ಎಂದು ಶಪಿಸುತ್ತ

ತನ್ನದೇ ಪೌರತ್ವ ಕೇಳುವ ಇವನ ಸಂತತಿ

ನಿರ್ನಾಮವಾಗಲೆಂದು ಹಿಡಿ ಶಾಪ ಹಾಕುವ

ಮುದುಕಿಯರು ಮಾತೆಯರು ಕೇಳುತ್ತಿದ್ದಾರೆ

ಮೊದಲು ತೋರಿಸು ನಿನ್ನ ಪೌರತ್ವದ ದಾಖಲೆ.

ದೇಶದೆಲ್ಲೆಡೆ ಈಗಾಗಲೇ ಹುಟ್ಟಿಕೊಂಡಿವೆ

ಸಾವಿರಾರು ಶಾಹೀನ್‌ಬಾಗ್‌ಗಳು

ಬೆಂಗಳೂರಿನಲ್ಲಿಯೂ ಬಿಲಾಲ್‌ಬಾಗ್

ಹುಟ್ಟಿಕೊಳ್ಳುತ್ತವೆ ನೆಲದ ತುಂಬಾ

ಹಲವಾರು ಲಕ್ಷಾಂತರ ಬಾಗ್‌ಗಳು

ಹರಲಿಗಳ ಹೊತ್ತು ನಿಲ್ಲುತ್ತಾರೆ ಅವರು

ಅಜ್ಜಿ,ಮುತ್ತಜ್ಜಿ,ಮತ್ತವರಮಗಳು, ಮೊಮ್ಮಗಳು

ಕೋಟಿ ಕೋಟಿ ಮಹಿಳೆಯರು.

ಬೀದಿ ಬೀದಿಯಲಿ ನಿಂತು ಕೇಳುತ್ತಾರೆ

ಮೊದಲು ತೋರಿಸು ನಿನ್ನ ಪೌರತ್ವ.

share
ಡಾ.ಕೆ.ಷರೀಫಾ
ಡಾ.ಕೆ.ಷರೀಫಾ
Next Story
X