Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...

ಓ ಮೆಣಸೇ...

ಪಿ.ಎ.ರೈಪಿ.ಎ.ರೈ2 March 2020 12:01 AM IST
share
ಓ ಮೆಣಸೇ...

=*ಆಂಗ್ಲ ಭಾಷಾ ವ್ಯಾಮೋಹದಿಂದ ನಮ್ಮ ಸಂಸ್ಕೃತಿ, ಸಂಸ್ಕಾರ, ನಮ್ಮತನ ಮರೆಯಾಗುವ ಅಪಾಯವಿದೆ
- ಶೋಭಾ ಕರಂದ್ಲಾಜೆ, ಸಂಸದೆ.
ವ್ಯಾಮೋಹಕ್ಕಿಂತ ಮೋಹವೇ ಕೆಲವೊಮ್ಮೆ ಹೆಚ್ಚು ಲಾಭದಾಯಕ.

---------------------

 ದೇವಸ್ಥಾನಗಳಲ್ಲಿ ರಾಷ್ಟ್ರ ಮಾತೆಯನ್ನು ಆರಾಧಿಸುವ ಮೂಲಕ ರಾಷ್ಟ್ರ ಜಾಗೃತಿ ಮೂಡಿಸುವ ಕೆಲಸವಾಗಬೇಕು
- ನಳಿನ್ ಕುಮಾರ್ ಕಟೀಲು, ಸಂಸದ.
  ಆದರೆ ದೇವಸ್ಥಾನಗಳ ಒಳಗೆ ದಲಿತ, ಶೂದ್ರರಿಗೆ ಪ್ರವೇಶವಿಲ್ಲವಲ್ಲ?

---------------------

ಯಾವ ಕಾರಣಕ್ಕೂ ಮಾಜಿ ಶಾಸಕ ಕುಮಟಳ್ಳಿಗೆ ಅನ್ಯಾಯವಾಗಲು ಬಿಡುವುದಿಲ್ಲ
- ಬಿ.ಸಿ. ಪಾಟೀಲ್, ಸಚಿವ.
  ರಾಜ್ಯದ ಜನತೆಗೆ ಅನ್ಯಾಯವಾದರೂ ಪರವಾಗಿಲ್ಲ.

---------------------

ಕಾಂಗ್ರೆಸ್‌ಗೆ ಪೂರ್ಣ ಪ್ರಮಾಣದ ಅಧ್ಯಕ್ಷರು ಇಲ್ಲದ ಕಾರಣ ಗೊತ್ತು ಗುರಿ ಇಲ್ಲದೆ ಸಾಗುತ್ತಿದೆ
- ಶಶಿ ತರೂರು, ಸಂಸದ.  
ಗೊತ್ತು ಗುರಿ ಇಲ್ಲದ ಕಾಂಗ್ರೆಸ್‌ನ ಅಧ್ಯಕ್ಷ ಸ್ಥಾನ ವಹಿಸಲು ಎಲ್ಲರಿಗೂ ಭಯ.

---------------------

ಪ್ರಶ್ನೆ ಪತ್ರಿಕೆ ಸೋರಿಕೆಯಾಗಲು ಬಿಡುವುದಿಲ್ಲ

- ಸುರೇಶ್‌ಕುಮಾರ್, ಸಚಿವ.
ಉತ್ತರ ಪತ್ರಿಕೆ ಸೋರಿಕೆಯಾದರೂ ಸಾಕು, ಎನ್ನುವುದು ವಿದ್ಯಾರ್ಥಿಗಳ ಆಶಯ.

---------------------

ಬಹಳಷ್ಟು ಜನ ಮಂತ್ರಿ, ಮಾಜಿ ಮಂತ್ರಿಗಳು ಸಂಭಾವಿತರಂತೆ ನಾಟಕವಾಡುತ್ತಾರೆ

- ಸಿ.ಟಿ. ರವಿ, ಸಚಿವ.
 ಬಹುಶಃ ನಿಮ್ಮಂತೆ.

---------------------
ಗಾಂಧಿಯನ್ನು ಕೊಂದವರಿಗೆ ಗಾಂಧಿ ವಾದವನ್ನು ಕೊಲ್ಲಲು ಸಾಧ್ಯವಿಲ್ಲ

- ರಮೇಶ್ ಕುಮಾರ್, ಮಾಜಿ ಸ್ಪೀಕರ್.
ದಿಲ್ಲಿಯಲ್ಲಿ ನಡೆದದ್ದೇನು?

---------------------

ಪ್ರಧಾನಿ ಮೋದಿ ಚಾಯ್ ವಾಲಾ ಅಲ್ಲ, ಅವರು ಚಾಯ್ ಮಾಡುತ್ತಿರಲಿಲ್ಲ

- ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಂಸದ.
ಚಾಯ್‌ವಾಲಾ ಆಗಿದಿದ್ದರೆ ಚೆನ್ನಾಗಿತ್ತು. ದೇಶ ಮಾರುತ್ತಿರಲಿಲ್ಲ.

---------------------

ಯುದ್ಧದಿಂದ ಬಸವಳಿದಿರುವ ತಾಲಿಬಾನ್ ಈಗ ಶಾಂತಿ ಬಯಸುತ್ತಿದೆ

- ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ.
ಬಹುಶಃ ನಿಮಗೂ ಸುಸ್ತಾದಂತಿದೆ.

---------------------

ಭಾರತದಲ್ಲಿ ಮೋದಿ ಅಧಿಕಾರದಲ್ಲಿರುವವರೆಗೆ ಭಾರತ-ಪಾಕ್ ಸರಣಿ ಸಾಧ್ಯವಿಲ್ಲ

- ಶಾಹಿದ್ ಆಫ್ರಿದಿ, ಪಾಕ್ ಕ್ರಿಕೆಟ್ ತಂಡದ ಮಾಜಿ ನಾಯಕ.
ನಿಮಗೆ ಸರಣಿಯ ಚಿಂತೆ, ಭಾರತಕ್ಕೆ ದೇಶದ ಜಿಡಿಪಿಯ ಚಿಂತೆ.

---------------------

ಯಡಿಯೂರಪ್ಪ ಹೋರಾಟಗಾರರು, ಅವರ ಅಂತ್ಯವೂ ಹೋರಾಟದಲ್ಲೇ

- ವಿ. ಸೋಮಣ್ಣ, ಸಚಿವ.
ಅಂದರೆ ಟಿಪ್ಪುಸುಲ್ತಾನ್‌ನಂತೆ ಹೋರಾಡುತ್ತಲೇ ಅಂತ್ಯವಾಗುತ್ತಾರೆ ಎಂಬ ಭವಿಷ್ಯವೆ?

---------------------

ದೊರೆಸ್ವಾಮಿ ನಕಲಿ ಸ್ವಾತಂತ್ರ ಹೋರಾಟಗಾರ

- ಬಸನಗೌಡ ಪಾಟೀಲ ಯತ್ನಾಳ್, ಶಾಸಕ.
ಬ್ರಿಟಿಷರ ವಾರಸುದಾರರಿಗೆ ಹಾಗೆ ಕಾಣುವುದು ಸಹಜ.

---------------------

ಯಡಿಯೂರಪ್ಪ ಇಲ್ಲದ ಬಿಜೆಪಿಯನ್ನು ಊಹಿಸುವುದೂ ಕಷ್ಟ
- ಕೋಟ ಶ್ರೀನಿವಾಸ ಪೂಜಾರಿ, ಸಚಿವ.
ಅಂತೂ ಅವರಿಲ್ಲದ ಬಿಜೆಪಿಯನ್ನು ಊಹಿಸುವುದಕ್ಕೆ ಆರಂಭಿಸಿದ್ದೀರಿ ಎಂದಾಯಿತು.

---------------------

ಕೇಂದ್ರ ಸಚಿವರಾಗಿದ್ದ ದಿವಂಗತ ಅನಂತಕುಮಾರ್ ಅವರ ಪರಿಶ್ರಮದಿಂದಾಗಿಯೇ ನಾನಿಂದು ಈ ಸ್ಥಾನದಲ್ಲಿದ್ದೇನೆ

- ಯಡಿಯೂರಪ್ಪ, ಮುಖ್ಯಮಂತ್ರಿ.
ಹೌದು, ಅವರು ಮುಖ್ಯಮಂತ್ರಿ ಸ್ಥಾನ ಕಿತ್ತುಕೊಳ್ಳಲು ತುಂಬಾ ಪರಿಶ್ರಮ ಪಟ್ಟು ವಿಫಲವಾಗಿದ್ದರು.

---------------------

ದೇಶವನ್ನು ರಕ್ಷಿಸಲು ಭಾರತೀಯ ಸಶಸ್ತ್ರ ಪಡೆಗಳು ಗಡಿದಾಟಲು ಹಿಂಜರಿಯುವುದಿಲ್ಲ

- ರಾಜನಾಥ್ ಸಿಂಗ್, ಕೇಂದ್ರ ಸಚಿವ.
ಹಾಗಾದರೆ ಚೀನಾದ ಗಡಿಯನ್ನು ದಾಟಿ ಬಿಡಿ.

---------------------

ದಿಲ್ಲಿಯ ಹಿಂಸಾಚಾರವು ಕೇಂದ್ರ ಗುಪ್ತಚರ ದಳದ ವೈಫಲ್ಯವಾಗಿದೆ

- ರಜನಿಕಾಂತ್, ನಟ.
ಗುಪ್ತಚರ ಇಲಾಖೆಯ ಹೆಣ ಚರಂಡಿಯಲ್ಲಿ ಪತ್ತೆಯಾಗಿದೆ.

---------------------

 ರಾಜಕಾರಣಕ್ಕೆ ಮನುಷ್ಯ ಸಂಬಂಧ ಅಡ್ಡ ಬರಬಾರದು
- ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ.
ರಾಜಕಾರಣವೆಂದರೆ ಅಡ್ಡಬಂದ ಮನುಷ್ಯ ಸಂಬಂಧಗಳನ್ನು ಒಡೆಯುವುದು.

---------------------

ಲವ್ ಜಿಹಾದ್ ಹೆಸರಿನಲ್ಲಿ ವಿದೇಶಗಳಿಗೆ ಯುವತಿಯರ ಮಾರಾಟ ನಡೆಯುತ್ತಿದೆ

- ಶೋಭಾ ಕರಂದ್ಲಾಜೆ, ಸಂಸದೆ.
ಕೆಲವೊಮ್ಮೆ ರಾಜಕೀಯದ ಹೆಸರಲ್ಲೂ ಇಂತಹ ಮಾರಾಟಗಳು ನಡೆಯುತ್ತಿರುತ್ತವೆ.

---------------------
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ ಎಂಬ ಮಾತಿನಂತೆ ಈಗ ನಾನು ಮತ್ತು ಯಡಿಯೂರಪ್ಪ ಒಂದೇ ಪಕ್ಷದಲ್ಲಿದ್ದೇವೆ

- ಎಸ್.ಎಂ.ಕೃಷ್ಣ, ಮಾಜಿ ಮುಖ್ಯಮಂತ್ರಿ.
ಒಟ್ಟಿನಲ್ಲಿ ಶತ್ರುದಾಳಿಯಿಂದ ರಕ್ಷಿಸಿಕೊಳ್ಳಲು ಶತ್ರು ಪಾಳಯ ಸೇರುವುದೇ ಪರಿಹಾರ.

---------------------

ಬದ್ಧತೆ, ಪ್ರಾಮಾಣಿಕತೆ ಇದ್ದರೆ ಯಾವ ಎತ್ತರಕ್ಕೂ ಏರಬಹುದು ಎಂಬುದಕ್ಕೆ ಯಡಿಯೂರಪ್ಪ ದೊಡ್ಡ ಉದಾಹರಣೆ

- ಬಿ.ಎಲ್. ಸಂತೋಷ್, ಬಿಜೆಪಿ ರಾ.ಸಂ. ಕಾರ್ಯದರ್ಶಿ.
ಜೊತೆಗೆ ಆರೆಸ್ಸೆಸ್‌ನ್ನು ಎದುರಿಸುವ ಎದೆಗಾರಿಕೆಯೂ ಇರಬೇಕು.

---------------------

ರಾಜಕಾರಣದಲ್ಲಿ ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹೋಗುವುದು ಸಾಮಾನ್ಯ

- ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ.
ನೀವು ಯಾವ ಪಕ್ಷಕ್ಕೆ ಹೋಗಬೇಕೆಂದಿದ್ದೀರಿ?

---------------------

ಬಿಜೆಪಿಯವರಿಗೆ ಪಾಕ್ ವೈರಸ್ ಹರಡಿದೆ, ಇದು ಕೊರೋನ ವೈರಸ್‌ಗಿಂತಲೂ ಹಾನಿಕಾರಕ

- ಯು.ಟಿ. ಖಾದರ್, ಮಾಜಿ ಸಚಿವ.
ದೇಶಕ್ಕೆ ಕಾಡಿರುವ ಆರೆಸ್ಸೆಸ್ ವೈರಸ್‌ನ ಬಗ್ಗೆಯೂ ಒಂದಿಷ್ಟು ಮಾತನಾಡಿ.

---------------------

 ದೇಶದ ಬಹುತೇಕ ಕಲ್ಯಾಣ ಮಂಟಪಗಳೆಲ್ಲ ಭರ್ತಿಯಾಗಿರುವಾಗ ಅರ್ಥವ್ಯವಸ್ಥೆ ಕುಸಿದಿದೆ ಎಂಬ ಹೇಳಿಕೆಯಲ್ಲಿ ಹುರುಳಿಲ್ಲ

- ಸುರೇಶ್ ಅಂಗಡಿ, ಕೇಂದ್ರ ಸಚಿವ.
ಊಟಕ್ಕಿಲ್ಲದವರೆಲ್ಲ ಕಂಡವರ ಮದುವೆಯ ಕಲ್ಯಾಣಮಂಟವನ್ನು ಹುಡುಕುತ್ತಿದ್ದಾರೆ.

---------------------

share
ಪಿ.ಎ.ರೈ
ಪಿ.ಎ.ರೈ
Next Story
X