ಎಲ್ಲ ಭಾರತೀಯರ ಸುರಕ್ಷತೆ ಖಚಿತಪಡಿಸಿ: ದಿಲ್ಲಿ ಹಿಂಸಾಚಾರದ ಹಿನ್ನೆಲೆಯಲ್ಲಿ ಭಾರತಕ್ಕೆ ಇರಾನ್ ಆಗ್ರಹ
ಟೆಹರಾನ್,ಮಾ.3: ಎಲ್ಲ ಭಾರತೀಯರ ಸುರಕ್ಷತೆಯನ್ನು ಖಚಿತಪಡಿಸುವಂತೆ ಮತ್ತು ಅರ್ಥಹೀನ ಹಿಂಸಾಚಾರಕ್ಕೆ ಅವಕಾಶ ನೀಡದಂತೆ ಇರಾನ್ ವಿದೇಶಾಂಗ ಸಚಿವ ಜವಾದ್ ಝಾರಿಫ್ ಅವರು ಭಾರತೀಯ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.
“ಭಾರತೀಯ ಮುಸ್ಲಿಮರ ವಿರುದ್ಧ ಸಂಘಟಿತ ಹಿಂಸೆಯನ್ನು ಇರಾನ್ ಖಂಡಿಸುತ್ತದೆ. ಶತಮಾನಗಳಿಂದಲೂ ಇರಾನ್ ಭಾರತದ ಮಿತ್ರದೇಶವಾಗಿದೆ. ಎಲ್ಲ ಭಾರತೀಯರ ಸುರಕ್ಷತೆಯನ್ನು ಖಚಿತಪಡಿಸುವಂತೆ ಮತ್ತು ಅರ್ಥಹೀನ ಹಿಂಸಾಚಾರಕ್ಕೆ ಅವಕಾಶ ನೀಡದಂತೆ ನಾವು ಭಾರತೀಯ ಅಧಿಕಾರಿಗಳನ್ನು ಆಗ್ರಹಿಸುತ್ತೇವೆ. ಮುಂದಿನ ನಡೆಯು ಶಾಂತಿಯುತ ಮಾತುಕತೆ ಮತ್ತು ಕಾನೂನಿನ ಆಡಳಿತದಲ್ಲಿದೆ” ಎಂದು ಝಾರಿಫ್ ಟ್ವೀಟಿಸಿದ್ದಾರೆ.
Next Story