Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಜಾತಿ-ಧರ್ಮ ಭೇದವಿಲ್ಲದೆ ಹಲವು ಅಪಘಾತ...

ಜಾತಿ-ಧರ್ಮ ಭೇದವಿಲ್ಲದೆ ಹಲವು ಅಪಘಾತ ಗಾಯಾಳುಗಳ ಪ್ರಾಣ ರಕ್ಷಿಸಿದ ಕಣಂತೂರು ಇಸ್ಮಾಯೀಲ್

ಶಾಲಾ ಮಕ್ಕಳಿಗಾಗಿ ತರಕಾರಿ ಬೆಳೆಯುವ ಪರಿಸರಪ್ರೇಮಿ

ಪುಷ್ಪರಾಜ್ ಬಿ.ಎನ್.ಪುಷ್ಪರಾಜ್ ಬಿ.ಎನ್.4 March 2020 8:41 PM IST
share
ಜಾತಿ-ಧರ್ಮ ಭೇದವಿಲ್ಲದೆ ಹಲವು ಅಪಘಾತ ಗಾಯಾಳುಗಳ ಪ್ರಾಣ ರಕ್ಷಿಸಿದ ಕಣಂತೂರು ಇಸ್ಮಾಯೀಲ್

ಮಂಗಳೂರು, ಮಾ.4: ಮುಡಿಪು, ಬಾಳೆಪುಣಿ ಪರಿಸರದಲ್ಲಿ ರಸ್ತೆ ಅಪಘಾತದ ಸುದ್ದಿ ತಿಳಿದ ತಕ್ಷಣ ನೆರವಿಗೆ ಧಾವಿಸುವವರು ಕಣಂತೂರು ಇಸ್ಮಾಯೀಲ್. ಅಪಘಾತವಾದ ತಕ್ಷಣ ಗಾಯಾಳು ಬಿದ್ದು ನರಳುತ್ತಿದ್ದರೆ ಯಾವುದೇ ಅಳುಕಿಲ್ಲದೆ ಅವರನ್ನು ಆಸ್ಪತ್ರೆಗೆ ದಾಖಲಿಸುವುದರಲ್ಲೂ ಇವರು ಮೊದಲಿಗರು. ಈ ಪರಿಸರದಲ್ಲಿ ಅಪಘಾತವಾದ ತಕ್ಷಣ ಜನರಿಗೆ ತಟ್ಟನೆ ನೆನಪಿಗೆ ಬರುವುದು ಕೂಡ ಇವರ ಹೆಸರಾಗಿದೆ. ಹೀಗೆ ತನಗರಿವಿಲ್ಲದಂತೆ ಸಮಾಜಸೇವೆ ಯಲ್ಲಿ ತೊಡಗಿಸಿಕೊಂಡ ಕಣಂತೂರು ಇಸ್ಮಾಯೀಲ್ 17ಕ್ಕೂ ಅಧಿಕ ಮಂದಿಯ ಪ್ರಾಣ ರಕ್ಷಿಸಿದ್ದಾರೆ.

ಮುಡಿಪು ಸಮೀಪದ ಹೂಹಾಕುವಕಲ್ಲು ಪ್ರದೇಶದಲ್ಲಿ ಹಣ್ಣಿನ ವ್ಯಾಪಾರಿಯಾಗಿರುವ ಇಸ್ಮಾಯೀಲ್ ಇತ್ತೀಚೆಗೆ ಹಳೆ ಸಾಮಾಗ್ರಿಗಳನ್ನು ಸಂಗ್ರಹಿಸಿ ಮಾರಾಟ ಮಾಡುವ ಅಂಗಡಿ ತೆರೆದಿದ್ದಾರೆ.

ಈ ಪರಿಸರದ ಎಲ್ಲೇ ರಸ್ತೆ ಅಪಘಾತ ಸಂಭವಿಸಿದ ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸುವ ಇಸ್ಮಾಯೀಲ್ ಜಾತಿ-ಧರ್ಮ ಭೇದವಿಲ್ಲದೆ ಸ್ಥಳೀಯ ಪರಿಚಯದವರ ವಾಹನವನ್ನು ಕಾಡಿಬೇಡಿ ಗಾಯಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗುತ್ತಾರೆ. ಅಗತ್ಯಬಿದ್ದಲ್ಲಿ ರಾತ್ರಿ ಹಗಲೆನ್ನದೆ ಆಸ್ಪತ್ರೆಯಲ್ಲೇ ರೋಗಿಗಳನ್ನು ಉಪಚರಿಸುತ್ತಾರೆ. ಹಾಗಾಗಿ ಈ ಪರಿಸರದಲ್ಲಿ ಅಪಘಾತ ಸಂಭವಿಸಿದ ತಕ್ಷಣ ಇಸ್ಮಾಯೀಲ್‌ರಿಗೆ ಸುದ್ದಿ ಮುಟ್ಟಿಸುತ್ತಾರೆ.

ಶಾಲಾ ಮಕ್ಕಳಿಗೆ ತರಕಾರಿ ತೋಟ:

ಅನಕ್ಷರಸ್ಥರಾಗಿರುವ ಇಸ್ಮಾಯೀಲ್ ತನ್ನ ಮನೆ ಸಮೀಪದ ಹೂಹಾಕುವಕಲ್ಲು ಶಾಲೆಯ ಖಾಲಿ ಜಾಗದಲ್ಲಿ ಒಂದೆರಡು ವರ್ಷದಿಂದ ವಿವಿಧ ತರಕಾರಿಗಳನ್ನು ಬೆಳೆದಿದ್ದಾರೆ. ತಮ್ಮ ಮನೆಯಿಂದಲೇ ಬೂದಿ, ಗೊಬ್ಬರವನ್ನು ಆಟೊದಲ್ಲಿ ಸಾಗಿಸಿ ಅವುಗಳನ್ನು ಪೋಷಿಸುತ್ತಾರೆ. ಬೆಳೆದ ತರಕಾರಿಗಳನ್ನು ಶಾಲೆಯ ಮಕ್ಕಳಿಗೆ ಉಚಿತವಾಗಿ ನೀಡುತ್ತಿದ್ದಾರೆ.

ಮುಡಿಪು ನವಗ್ರಾಮ ಬಡಾವಣೆ ಬಳಿಯ ಬಾಳೆಪುಣಿ ಗ್ರಾಪಂ ಪರಿಸರದ 8 ಸೆಂಟ್ಸ್ ಜಾಗದಲ್ಲಿ ಇಸ್ಮಾಯೀಲ್ ವಾಸವಾಗಿದ್ದು, ಇಸ್ಮಾಯೀಲ್ ಶಿಕ್ಷಣ ಪ್ರೇಮಿಯಾಗಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಇಸ್ಮಾಯೀಲ್ ಪುಸ್ತಕ-ಪೆನ್ನು ಇಲ್ಲ ಎಂದು ಮರುಗುವ ಶಾಲಾ ಮಕ್ಕಳಿಗೆ ಸ್ವತಃ ತಾವೇ ಖರೀದಿಸಿ ಕೊಡುತ್ತಾರೆ. ಇದೀಗ ಅಂತಹ ಮಕ್ಕಳ ಸಂಖ್ಯೆ ಹೆಚ್ಚಾದ ಕಾರಣ ಮುಡಿಪು ಯೂತ್ ಕ್ಲಬ್ ಸಹಯೋಗದಲ್ಲಿ ಪುಸ್ತಕ ಪರಿಕರಗಳನ್ನು ವಿತರಿಸುತ್ತಾರೆ.

ಬಾವಿ ತೋಡಿದರು:

ಬಾಳೆಪುಣಿ ಪರಿಸರದಲ್ಲಿ ಕೆಲವು ವರ್ಷಗಳ ಹಿಂದೆ ಪಂಚಾಯತ್‌ನ ಕೊಳವೆಬಾವಿ ಕೆಟ್ಟು ಹೋಗಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿತ್ತು. ಅಲ್ಲಿದ್ದ ಜನರಿಗೆ ಕೈಪಂಪ್ ಒಂದೇ ಆಧಾರವಾಗಿತ್ತು. ರಾತ್ರಿ 12 ಗಂಟೆಯವರೆಗೂ ಮಹಿಳೆಯರು ನೀರಿಗಾಗಿ ಸಂಕಷ್ಟ ಪಡುತ್ತಿದ್ದರು. ಇದನ್ನು ಮನಗಂಡ ಇಸ್ಮಾಯೀಲ್ ತನ್ನ ಮನೆ ಮುಂದಿನ ಜಾಗದಲ್ಲಿ ತಾನೇ ಬಾವಿ ತೋಡಲಾರಂಭಿಸಿದರು. ಹಾಗೇ ನೀರು ದೊರೆತ ಬಳಿಕ ಇಸ್ಮಾಯೀಲ್ ರಾಟೆ ಹಗ್ಗವನ್ನು ಸ್ವತಃ ತಂದು ಹಾಕಿ ಪರಿಸರದ ಜನರಿಗೆ ಕುಡಿಯುವ ನೀರು ಸಿಗುವಂತೆ ಮಾಡಿದರು. ಈಗಲೂ ಆಸುಪಾಸಿನವರು ಈ ಬಾವಿಯನ್ನೆೀ ಆಶ್ರಯಿಸುತ್ತಿದ್ದಾರೆ.

ವಿವಿಧ ರೀತಿಯಲ್ಲಿ ನೆರವು:

‘ನಾನು ಬಾಳೆಪು ಣಿಯ ಹೂಹಾಕುವಕಲ್ಲಿನಲ್ಲಿ 20 ವರ್ಷಗಳ ಹಿಂದೆ ಹಣ್ಣಿನ ವ್ಯಾಪಾರ ಆರಂಭಿಸಿದೆ. ಅದು ನನ್ನ ಬದುಕಿನ ಒಂದು ತಿರುವು. ನನ್ನ ಅಂಗಡಿ ಜನ ಸಂಪರ್ಕದ ಕೇಂದ್ರವಾಗಿತ್ತು. ವ್ಯಾಪಾರ ಚೆನ್ನಾಗಿಯೇ ನಡೆದುಕೊಂಡು ಬರುತ್ತಿತ್ತು. ಕೆಲವರು ಹಣ್ಣು ತೆಗೆದುಕೊಂಡು ಹಣ ನಾಳೆ ಕೊಡುತ್ತೇನೆ ಬರೆದಿಡು ಎನ್ನುತ್ತಿದ್ದರು. ಈ ಪಟ್ಟಿ ಬೆಳೆಯುತ್ತಾ ಹೋಯಿತೇ ಹೊರತು ಹಣ ವಾಪಸ್ ಬರಲಿಲ್ಲ. ಬಳಿಕ ಗುಜುರಿ ಸಂಗ್ರಹದ ಅಂಗಡಿ ಆರಂಭಿಸಿದೆ. ಹೀಗೆ ಲಾಭ ನಷ್ಟಕ್ಕಿಂತ ಅಂಗಡಿ ಮೂಲಕ ಜನರ ಸಂಪರ್ಕ ಹೆಚ್ಚುಗುತ್ತಾ ಹೋಯಿತು’ ಎನ್ನುತ್ತಾರೆ ಇಸ್ಮಾಯೀಲ್.

ಒಂದು ದಿನ ರಾತ್ರಿ ನಮ್ಮ ಪರಿಚಯದ ಒಬ್ಬರು ಪೋನ್ ಮಾಡಿ ಹೆಂಡತಿಗೆ ಹುಷಾರಿಲ್ಲ. ತುರ್ತಾಗಿ ಆಸ್ಪತ್ರೆಗೆ ಸೇರಿಸಬೇಕು, ವಾಹನದ ವ್ಯವಸ್ಥೆ ಮಾಡಿಕೊಡಿ ಎಂದರು. ಅದರಂತೆ ನಾನು ಮುಂಜಾನೆ 3ರ ವೇಳೆಗೆ ವಾಹನದ ವ್ಯವಸ್ಥೆ ಮಾಡಿಕೊಟ್ಟೆ. 5 ಗಂಟೆಗೆ ಆಕೆ ನಿಧನರಾದ ಸುದ್ದಿ ನನಗೆ ಬಂತು. ಅದನ್ನು ಕೇಳಿ ನಾನು ತುಂಬಾ ವ್ಯಥೆಪಟ್ಟೆ. ಆದರೂ ನಾನು ಮಾಡಿದ ಆ ಸಣ್ಣ ನೆರವನ್ನು ಆ ಮನೆಯವರು ಇಂದೂ ಮರೆತಿಲ್ಲ. ಅವರ ಮನೆಯ ಪೂಜೆಗೆ ನನ್ನನ್ನು ಕರೆದು ಈಗಲೂ ಊಟ ಹಾಕುತ್ತಾರೆ. ಇಂತಹ ಪ್ರಕರಣಗಳು ಮಾನವರೆಲ್ಲಾ ಒಂದೆ ಎನ್ನುವುದನ್ನು ಆ ಘಟನೆ ನನಗೆ ಕಲಿಸಿತು ಎನ್ನುವ ಇಸ್ಮಾಯೀಲ್ ಕೆಲವೊಂದು ಘಟನೆಗಳನ್ನು ಬಿಚ್ಚಿಡುತ್ತಾರೆ.

ಮಾದರಿ ಗ್ರಾಮದ ಕನಸುಗಾರ

ಮುಡಿಪು ಪರಿಸದರಲ್ಲಿ ಜನ ಶಿಕ್ಷಣ ಟ್ರಸ್ಟ್‌ನ ಶೀನ ಶೆಟ್ಟಿ ಹಾಗೂ ಕೃಷ್ಣ ಮೂಲ್ಯ ಎಂಬವರು ನನಗೆ ಧೈರ್ಯ ಕೊಟ್ಟಿದ್ದಾರೆ. ನನ್ನನ್ನು ಪ್ರೋತ್ಸಾಹಿಸಿದ್ದಾರೆ. ನಮ್ಮೂರಿನಲ್ಲಿ ಎಲ್ಲರೂ ಸೇವಾ ನಿರತರಾಗಬೇಕು. ಗ್ರಾಮವು ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ ಗ್ರಾಮವಾಗಬೇಕು. ನನ್ನ ಮನೆಯ ಸುತ್ತ, ಸ್ವಚ್ಛತೆ, ಹಸಿರು ಪರಿಸರ ತೋಟ ಹಾಗೂ ಮನೆಗೆ ಸೋಲಾರ್ ದೀಪ ಅಳವಡಿಸಿದೆ. ನನ್ನ ಸಂಬಂಧಿಕರ ಮನೆಗೂ ಸೋಲಾರ್ ದೀಪ ಅಳವಡಿಸುವ ಪ್ರಯತ್ನ ಮಾಡುತ್ತಿದ್ದೇನೆ. ನಾವೆಲ್ಲಾ ಅಣ್ಣ ತಮ್ಮಂದಿರಂತೆ ಬದುಕಬೇಕು, ಮಾದರಿ ಗ್ರಾಮ ಕಟ್ಟಬೇಕು ಎಂಬ ಕನಸು ಕಂಡಿದ್ದೇನೆ ಎಂದು ಇಸ್ಮಾಯೀಲ್ ಹೇಳುತ್ತಾರೆ.

share
ಪುಷ್ಪರಾಜ್ ಬಿ.ಎನ್.
ಪುಷ್ಪರಾಜ್ ಬಿ.ಎನ್.
Next Story
X