ಕಬಕ : ಅಲ್ ಇಸ್ಲಾಹ್ ಸಾಹಿತ್ಯ ಸಮಾಜದ 20 ನೇ ವಾರ್ಷಿಕೋತ್ಸವ, ದಫ್ ಸ್ಪರ್ಧೆ

ವಿಟ್ಲ : ಕಬಕ - ವಿದ್ಯಾಪುರದ ಅಲ್ ಇಸ್ಲಾಹ್ ಸಾಹಿತ್ಯ ಸಮಾಜದ 20 ನೇ ವಾರ್ಷಿಕೋತ್ಸವದ ಪ್ರಯುಕ್ತ ಧಾರ್ಮಿಕ ಮತ ಪ್ರವಚನ ಹಾಗೂ ಆಹ್ವಾನಿತ ತಂಡಗಳ ದಫ್ ಸ್ಪರ್ದಾ ಕಾರ್ಯಕ್ರಮ ಶುಕ್ರವಾರ ಕಬಕ ಜಂಕ್ಷನ್ ಬಗ್ಗುಮೂಲೆ ಮೈದಾನದ ಮರ್ಹೂಂ ಎಂ.ಎ.ಖಾಸಿಂ ಉಸ್ತಾದ್ ವೇದಿಕೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಪ್ರಧಾನ ಕಾರ್ಯದರ್ಶಿ ಶೈಖುನಾ ಎಂ.ಟಿ.ಉಸ್ತಾದ್ ಮಾತನಾಡಿ ಇತರರ ಕಷ್ಟಗಳಿಗೆ ನೆರವಾಗುವಂತಹ ಕಾರುಣ್ಯ ಕಾರ್ಯಕ್ರಮಗಳು ಅತ್ಯಂತ ಶ್ರೇಷ್ಠ ಕಾರ್ಯವಾಗಿದೆ, ಪ್ರತಿಯೋರ್ವರೂ ನಾಡಿನಲ್ಲಿ ಶಾಂತಿ - ಸೌಹಾರ್ದತೆಯನ್ನು ಕಾಪಾಡಿಕೊಂಡು ಜನ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಅಲ್ ಇಸ್ಲಾಹ್ ಸಾಹಿತ್ಯ ಸಮಾಜದ ಗೌರವಾಧ್ಯಕ್ಷ ಸಯ್ಯದ್ ಅಲ್ ಹಾದಿ ಯಹ್ಯಾ ತಂಙಲ್ ಪೋಳ್ಯ ಅಧ್ಯಕ್ಷತೆ ವಹಿಸಿದ್ದರು. ಕಬಕ ಜುಮಾ ಮಸೀದಿ ಮುದರ್ರಿಸ್ ಹಾಜಿ ಬಿ.ಎನ್.ಮುಹಮ್ಮದ್ ಮುಸ್ಲಿಯಾರ್ ದುಹಾ ನೆರವೇರಿಸಿದರು. ಕಲ್ಲಡ್ಕ ಕೇಂದ್ರ ಜುಮಾ ಮಸೀದಿ ಮುದರ್ರಿಸ್ ಶೇಖ್ ಮುಹಮ್ಮದ್ ಇರ್ಫಾನಿ, ಮೂಸಲ್ ಫೈಝಿ ಪಾಟ್ರಕೋಡಿ, ಬೀಟಿಗೆ ಮಸೀದಿ ಖತೀಬ್ ಮುಹಮ್ಮದ್ ಶರೀಫ್ ಅಲ್ ಹೈತಮಿ, ಬೆಳ್ಳಾರೆ ಮಸೀದಿ ಮುದರ್ರಿಸ್ ತಾಜುದ್ದೀನ್ ರಹ್ಮಾನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಸದಸ್ಯ ರಶೀದ್ ಹಾಜಿ ಪರ್ಲಡ್ಕ, ಮದ್ರಸ ಮ್ಯಾನೇಜ್ ಮೆಂಟ್ ಜಿಲ್ಲಾ ಕಾರ್ಯದರ್ಶಿ ಎಸ್.ಎಂ.ರಫೀಕ್ ಹಾಜಿ ನೇರಳಕಟ್ಟೆ, ಕಲ್ಲೇಗ ಎಸ್.ಕೆ.ಎಸ್.ಎಸ್.ಎಫ್. ಅಧ್ಯಕ್ಷ ಝಾಕಿರ್ ಹನೀಫ್ ಹಾಜಿ ಉದಯ, ಪರ್ತಿಪ್ಪಾಡಿ ಜುಮಾ ಮಸೀದಿ ಅಧ್ಯಕ್ಷ ಹಕೀಂ ಪರ್ತಿಪ್ಪಾಡಿ, ಕೆ.ಪಿ.ಸಿ.ಸಿ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿ ಹನೀಫ್ ಬಗ್ಗುಮೂಲೆ, ಕಬಕ ಯೂತ್ ಫ್ರೆಂಡ್ಸ್ ಅದ್ಯಕ್ಷ ಅಬ್ದುಲ್ ರೆಹಮಾನ್, ಕಬಕ ಗ್ರಾಮ ಪಂಚಾಯತು ಸದಸ್ಯ ಕೆ ಶಾಬ, ಕಬಕ ಮಸೀದಿ ಕಾರ್ಯದರ್ಶಿ ಉಮರ್ ಕರಾವಳಿ, ಉಪಾಧ್ಯಕ್ಷ ಸಿತಾರ್ ಇಬ್ರಾಹಿಂ, ಎಸ್.ಕೆ.ಎಸ್.ಎಸ್.ಎಫ್.ದ.ಕ.ಜಿಲ್ಲಾ ಕೌನ್ಸಿಲರ್ ಅಶ್ರಫ್ ಕಬಕ, ಎಸ್.ಕೆ.ಎಸ್.ಎಸ್.ಎಫ್ ವಿಖಾಯ ಪುತ್ತೂರು ಕಾರ್ಯದರ್ಶಿ ಆಸಿಫ್ ಕಬಕ, ಕೆ.ಹಸೈನಾರ್ ಸಿಟಿ ಬಜಾರ್ ಪುತ್ತೂರು, ಹಾಜಿ ಯು.ಎಚ್. ಅಬೂಬಕ್ಕರ್ ಮಂಗಳ ಬೆಳ್ಳಾರೆ, ಹಮೀದ್ ಹಾಜಿ ಸುಳ್ಯ, ಡಾ. ಇ.ಕೆ.ಎ ಸಿದ್ದೀಕ್ ಅಡ್ಡೂರು, ರಫೀಕ್ ಅಹ್ಮದ್ ಬ್ರೈಟ್ ಪೋಳ್ಯ, ಅಬ್ದುಲ್ ಖಾದರ್ ಸಾಗರ್ ಪೋಳ್ಯ, ಅಬೂಬಕ್ಕರ್ ಮೂಳಾರ್, ಅಬೂಬಕ್ಕರ್ ಸಾರ್ ಕಬಕ, ಮಧುರಾ ಇಬ್ರಾಹಿಂ ಕಬಕ, ಹಸೈನಾರ್ ಹಾಜಿ ಅಲ್ ಮಜ್ಮಾ ಕೊಡಿಪ್ಪಾಡಿ, ಫಲುಲ್ ಮಾಸ್ಟರ್ ವಿದ್ಯಾಪುರ, ಇಸ್ಹಾಕ್ ವಿದ್ಯಪುರ ಕಬಕ, ಕೆ.ಎಸ್.ಅರ್ಶದ್ ಕಬಕ, ರಿಯಾಝ್ ಸೋನಿ ಮೊದಲಾದವರು ಮುಖ್ಯ ಅತಿಥಿಗಳಾಗಿ ಬಾಗವಹಿಸಿದ್ದರು.
ಇದೇ ವೇಳೆ ಸಮಸ್ತ ಕೇಂದ್ರ ಮುಶಾವರ ಸದಸ್ಯ ಅಬ್ದುಲ್ ಖಾದರ್ ಮುಸ್ಲಿಯಾರ್ ಅಲ್ ಖಾಸಿಮಿ ಬಂಬ್ರಾಣ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಕ್ಷರ ಸಂತ ಹರೇಕಳ ಹಾಜಬ್ಬ ಅವರನ್ನು ಸನ್ಮಾನಿಸಲಾಯಿತು. ರಾಜ್ಯ ಸಮಸ್ತ ಹನೀಫೀ ಉಲಮಾ ಒಕ್ಕೂಟ ಅಧ್ಯಕ್ಷ ಕೆ.ಎಂ.ಎ.ಕೊಡುಂಗಾಯಿ ಫಾಝಿಲ್ ಹನೀಫಿ ಸ್ವಾಗತಿಸಿ, ಸಾಲ್ಮರ ಜುಮಾ ಮಸೀದಿ ಖತೀಬ್ ಪಿ.ಎಂ.ಉಮರ್ ದಾರಿಮಿ ಪ್ರಸ್ತಾವನೆಗೈದರು. ಸಯ್ಯಿದ್ ಅಲ್ ಹಾದಿ ಮುಹೀನುದ್ದೀನ್ ತಂಙಲ್ ಸಾಲ್ಮರ ಕಿರಾಅತ್ ಪಠಿಸಿ, ಅಲ್ ಇಸ್ಲಾಹ್ ಸಾಹಿತ್ಯ ಸಮಾಜದ ಅದ್ಯಕ್ಷ ಜಮೀರುದ್ದೀನ್ ವಂದಿಸಿದರು. ದ.ಕ ಮತ್ತು ಉಡುಪಿ ಜಿಲ್ಲಾ ದಫ್ ಎಸೋಸಿಯೇಶನ್ ಅದ್ಯಕ್ಷ ಲತೀಫ್ ನೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು.
ಮಣಿಪುರ ತಂಡಕ್ಕೆ ದಫ್ ಪ್ರಶಸ್ತಿ
ರಾಜ್ಯದ ಆಹ್ವಾನಿತ 12 ತಂಡಗಳು ಭಾಗವಹಿಸಿದ್ದ ದಫ್ ಸ್ಪರ್ಧೆಯಲ್ಲಿ ಕಟಪಾಡಿ - ಮಣಿಪುರದ ಖಲಂದರ್ ಷಾ ದಫ್ ಕಮಿಟಿ ಪ್ರಥಮ, ಬಿ.ಸಿ.ರೋಡ್ ಕೈಕಂಬದ ರಿಫಾಯಿಯಾ ದಫ್ ಕಮಿಟಿ ದ್ವಿತೀಯ, ಹಾಗೂ ಕಾಪು - ಮಜೂರಿನ ಸಿರಾಜುಲ್ ಹುದಾ ದಫ್ ಕಮಿಟಿ ತೃತೀಯ ಸ್ಥಾನವನ್ನು ಪಡೆದುಕೊಂಡಿತು.










