Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಪ್ರತಿಧ್ವನಿಸುವ ಕನ್ನಡದ ದನಿಗಳು

ಪ್ರತಿಧ್ವನಿಸುವ ಕನ್ನಡದ ದನಿಗಳು

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯಾ-ಕಾರುಣ್ಯಾ9 March 2020 12:14 AM IST
share
ಪ್ರತಿಧ್ವನಿಸುವ ಕನ್ನಡದ ದನಿಗಳು

ಕನ್ನಡ ದನಿಗಳನ್ನು ಒಂದೆಡೆ ಸೇರಿಸುವ ಪ್ರಯತ್ನವನ್ನು ಲೇಖಕರಾದ ಡಾ. ಎಸ್. ತುಕಾರಾಮ್ ತಮ್ಮ ‘ಕಾಡುವ ಕನ್ನಡ ದನಿಗಳು’ ಕೃತಿಯಲ್ಲಿ ಮಾಡಿದ್ದಾರೆ. ಸಾಮಾಜಿಕ ವಿಮರ್ಶೆಯ ಲೇಖನಗಳು ಎಂದು ಕೃತಿಯನ್ನು ಸ್ವತಃ ಲೇಖಕರೇ ಕರೆದುಕೊಂಡಿದ್ದಾರೆ. ಸಾಮಾಜಿಕ ವಿಮರ್ಶೆ ಎನ್ನುವುದಕ್ಕಿಂತಲೂ, ಕನ್ನಡದ ವರ್ತಮಾನದ ಬೆಳವಣಿಗೆಗಳಿಗೆ ಸಾಕ್ಷಿಯಾಗಿರುವ ವಿವಿಧ ವ್ಯಕ್ತಿತ್ವಗಳ ಮೂಲಕ ಒಟ್ಟು ಕನ್ನಡ ವೌಲ್ಯಗಳನ್ನು ಒಂದೆಡೆಗೆ ಹಿಡಿದಿಡುವ ಪ್ರಯತ್ನವನ್ನು ಲೇಖಕರು ಮಾಡಿದ್ದಾರೆ. ಇಲ್ಲಿ ಕನ್ನಡವನ್ನು ಅಗಾಧವಾಗಿ ಪ್ರೀತಿಸುವ ವ್ಯಕ್ತಿಗಳಿದ್ದಾರೆ, ಕನ್ನಡ ವೌಲ್ಯಗಳನ್ನು ಎತ್ತಿ ಹಿಡಿಯುವ ಅವರ ವ್ಯಕ್ತಿತ್ವಗಳಿವೆ ಹಾಗೂ ಅವರ ಮೂಲಕ ಹೊಮಿ್ಮರುವ ಕೃತಿಗಳ ಪರಿಚಯವೂ ಇವೆ.

ಕೃತಿಯಲ್ಲಿ ಎರಡು ಅಧ್ಯಾಯಗಳಿವೆ. ಮೊದಲನೇ ಅಧ್ಯಾಯದಲ್ಲಿ, ವ್ಯಕ್ತಿಚಿತ್ರದ ಮೂಲಕವೇ ಕನ್ನಡ ಚಿಂತನೆಗಳನ್ನು ಕಟ್ಟಿಕೊಡುವ ಪ್ರಯತ್ನ ಮಾಡುತ್ತಾರೆ. ವಾಲ್ಮೀಕಿ, ದೇವನೂರು, ಕನಕ-ಅಂಬೇಡ್ಕರ್, ಜೆನ್ನಿ ಬ್ರದರ್ ಮೊದಲಾದ ವ್ಯಕ್ತಿಗಳ ಮೂಲಕ ವರ್ತಮಾನದ ತಲ್ಲಣಗಳನ್ನು ಹೇಳುವ ಪ್ರಯತ್ನ ಮಾಡುತ್ತಾರೆ. ಇಲ್ಲಿರುವ ‘ಕಾಡುವ ಕನ್ನಡ ದನಿಗಳು’ ಒಟ್ಟು ಕೃತಿಯ ಉದ್ದೇಶವನ್ನು ಹೇಳುತ್ತದೆ. ‘ಕನ್ನಡದ ದನಿಯನ್ನು ಜತನದಿಂದ ಕಾಪಾಡಿದ ಮಹತ್ವದ ಕಾಲ ವಚನ ಕಾಲ’ ಎಂದು ಈ ಲೇಖನ ಅಭಿಪ್ರಾಯ ಪಡುತ್ತದೆ. ಇಂಗ್ಲಿಷ್-ಕನ್ನಡದ ನಡುವಿನ ಭಾಷೆಯ ಸಂಘರ್ಷವನ್ನು ಮಾತ್ರವಲ್ಲ, ಬದುಕಿನ ಸಂಘರ್ಷವನ್ನೂ ಇದು ಹೇಳುತ್ತದೆ. ಇನ್ನೊಂದೆಡೆ ‘ಜೀವಿಕ’ ಎನ್ನುವ ಸಂಘಟನೆಯ ಬಗ್ಗೆ ಹೇಳುತ್ತಾ ಕನ್ನಡದ ತಳಸ್ತರ ಬದುಕನ್ನು ಮೇಲೆತ್ತುವುದಕ್ಕೆ ಸಂಘಟಿತರಾುವ ಅಗತ್ಯವನ್ನು ವಿವರಿಸುತ್ತಾರೆ.

ಕೃತಿಯ ಬೆನ್ನುಡಿಯಲ್ಲಿ ಎಚ್. ಎಸ್. ರೇಣುಕಾರಾಧ್ಯ ಹೀಗೆ ಹೇಳುತ್ತಾರೆ ‘‘ಡಾ. ಎಸ್. ತುಕಾರಾಮ್ ಅವರ ‘ಕಾಡುವ ಕನ್ನಡ ಧ್ವನಿಗಳು’ ಕೃತಿಯ ಬರಹಗಳು ಆಳಕ್ಕಿಳಿದು ವಿಶ್ಲೇಷಣೆಗೆ ಒಳಪಡಿಸಿ ಬಿಸಾಡಬಲ್ಲ ಬೌದ್ಧಿಕ ವಿಲಾಸದ ಬರಹಗಳಲ್ಲ. ಒಂದು ವಿಷಯಕ್ಕೆ ಮತ್ತೊಂದು ವಿಷಯವನ್ನು ಜೋಡಿಸುತ್ತಾ ಆಲದ ಬಿಳಲುಗಳಂತೆ ಒಂದರೊಡನೆ ಮತ್ತೊಂದು ಸೇರಿ ಹರಡಿಕೊಂಡು, ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳುತ್ತಾ ಪ್ರತಿಯೊಂದನ್ನು ತಾಯ್ತನದ ನೆಲೆಯಲ್ಲಿ ನೋಡುವ ಒಂದು ಬಗೆಯ ಸಂಯಮದ ಮಾದರಿಯವು’’

 ‘ತನ್ನೆದುರಿನ ಸಮಾಜದಲ್ಲಿ ಕಾಣಿಸಿಕೊಳ್ಳುತ್ತಿರುವ ತಲ್ಲಣಗಳನ್ನು ಲೇಖಕರು ಅತ್ಯಂತ ಆತಂಕಿತ ಸ್ಥಿತಿಯಲ್ಲಿ ನಮ್ಮ ಮನಸ್ಸಿನ ಭಿತ್ತಿಯಲ್ಲಿ ಅಚ್ಚೊತ್ತಿದ್ದಾರೆ’ ಎಂದು ಮುನ್ನುಡಿಯಲ್ಲಿ ಡಾ. ಪ್ರಕಾಶ ಬಡವನಹಳ್ಳಿ ಹೇಳುತ್ತಾರೆ. ರೂಪ ಪ್ರಕಾಶನ ಮೈಸೂರು ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 204. ಮುಖಬೆಲೆ 160 ರೂಪಾಯಿ. ಆಸಕ್ತರು 97313 67262 ದೂರವಾಣಿಯನ್ನು ಸಂಪರ್ಕಿಸಬಹುದು.

share
-ಕಾರುಣ್ಯಾ
-ಕಾರುಣ್ಯಾ
Next Story
X