Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ…!

ಓ ಮೆಣಸೇ…!

ಪಿ. ಎ. ರೈಪಿ. ಎ. ರೈ9 March 2020 12:53 PM IST
share
ಓ ಮೆಣಸೇ…!

ಮುಖ್ಯಮಂತ್ರಿ ಯಡಿಯೂರಪ್ಪರಿಗೆ ವಯಸ್ಸಾಗಿರಬಹುದು, ಆದರೆ ಅವರಿನ್ನೂ ಯುವಕರಂತೆ ಕಾರ್ಯನಿರ್ವಹಿಸುತ್ತಿದ್ದಾರೆ - ಬಿ.ವೈ. ವಿಜಯೇಂದ್ರ, ಬಿಜೆಪಿ ಯುವನಾಯಕ.

► ಅವರಿಗೆ ವಯಸ್ಸಾಗಿದೆ ಎನ್ನುವುದನ್ನು ಪದೇ ಪದೇ ಹೇಳುತ್ತಿರುವುದು ನೋಡಿದರೆ ಯುವಕರಿಗೆ ಅವರ ಹುದ್ದೆಯ ಮೇಲೆ ಕಣ್ಣು ಬಿದ್ದಿದೆ. 

******************

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒಬ್ಬ ನಿರುದ್ಯೋಗಿ ರಾಜಕಾರಣಿ - ಈಶ್ವರ ಖಂಡ್ರೆ, ಕಾಂಗ್ರೆಸ್ ಕಾರ್ಯಾಧ್ಯಕ್ಷ.

► ರಾಜಕಾರಣಿ ಎಂದರೆ ಸಾಕು. ನಿರುದ್ಯೋಗಿ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. 

******************

ಇದೇ ವರ್ಷ ನಡೆಯಲಿರುವ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ 200ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ - ನಿತೀಶ್ ಕುಮಾರ್, ಬಿಹಾರ ಮುಖ್ಯಮಂತ್ರಿ.

 ► ದಿಲ್ಲಿ ಹತ್ಯಾಕಾಂಡದ ಮೇಲೆ ಅಷ್ಟೊಂದು ಭರವಸೆಯೇ?

******************

ಭಾರತದ ಮೊಟೆರಾ ಕ್ರೀಡಾಂಗಣದಲ್ಲಿ ತಮ್ಮ ಭಾಷಣಕ್ಕೆ ಸೇರಿರುವಷ್ಟು ಜನ ಬೇರೆಡೆ ಎಲ್ಲೂ ಸೇರಲಿಕ್ಕಿಲ್ಲ - ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ.

► ಅಮೆರಿಕದ ಜನರು ಭಾರತೀಯರಷ್ಟು ಮೂರ್ಖರಲ್ಲ. 

*******************

ಕಂಬಳದಲ್ಲಿ ಅಪ್ರತಿಮ ಓಟಗಾರರು ಉದಯಿಸುತ್ತಿರುವುದರಿಂದ ಇಡೀ ವಿಶ್ವವೇ ಕಂಬಳದತ್ತ ಬೆರಗು ಗಣ್ಣಿನಿಂದ ನೋಡುವಂತಾಗಿದೆ - ಡಿ.ವಿ. ಸದಾನಂದ ಗೌಡ, ಕೇಂದ್ರ ಸಚಿವ.

 ► ಅಂದರೆ ಭಾರತ ವಿಶ್ವಗುರುವಾಗುವುದಕ್ಕೆ ಕಂಬಳವೊಂದೇ ಕೊನೆಯ ಭರವಸೆಯೇ?

********************

ನನಗೆ 87 ವರ್ಷ ವಯಸ್ಸಾದರೂ ಮತ್ತೆ ರಾಜ್ಯದ ಮೂಲೆ ಮೂಲೆ ಸುತ್ತಿ ಪಕ್ಷ ಕಟ್ಟುತ್ತೇನೆ - ಎಚ್.ಡಿ. ದೇವೇಗೌಡ, ಮಾಜಿ ಪ್ರಧಾನಿ.

► ಪಕ್ಷ ಇನ್ನೂ ಕಟ್ಟುವ ಹಂತದಲ್ಲೇ ಇರುವುದು ವಿಷಾದನೀಯ. 

*********************

ಪಾಲಿಗೆ ಬಂದ ಪಂಚಾಮೃತ(ಸಚಿವ ಸ್ಥಾನ) ಎಂದು ಸ್ವೀಕರಿಸಿ ಒಳ್ಳೆಯ ಕೆಲಸ ಮಾಡಲು ಶ್ರಮಿಸುತ್ತೇನೆ - ವಿ. ಸೋಮಣ್ಣ, ಸಚಿವ.

► ನಿಮಗೆ ಅಮೃತ. ಜನರಿಗೆ ವಿಷ.

********************

ನಾಯಕರನ್ನು ಸೃಷ್ಟಿ ಮಾಡುವ ಜೆಡಿಎಸ್ ಈ ರೀತಿ ನಾಯಕರನ್ನು ಕಳೆದುಕೊಳ್ಳುತ್ತಾ ಹೋದರೆ ಪಕ್ಷ ಉಳಿಯಲ್ಲ - ಮಧು ಬಂಗಾರಪ್ಪ, ಮಾಜಿ ಶಾಸಕ.

► ದೇವೇಗೌಡರ ಮೊಮ್ಮಕ್ಕಳು ಕಾಲಿಟ್ಟಿದ್ದಾರಲ್ಲ ನಾಯಕತ್ವದ ಕೊರತೆಯನ್ನು ತುಂಬಲು?

*********************

ಪಶ್ಚಿಮ ಬಂಗಾಳ ಮತ್ತೊಂದು ದಿಲ್ಲಿಯಾಗಲು ನಾನು ಬಿಡುವುದಿಲ್ಲ - ಮಮತಾ ಬ್ಯಾನರ್ಜಿ, ಪ.ಬಂ. ಮುಖ್ಯಮಂತ್ರಿ.

► ದಿಲ್ಲಿ ಬೇಡವಾದರೆ ಗುಜರಾತ್ ಮಾಡುತ್ತೇವೆ. ಬೇಕಾದದ್ದನ್ನು ಆಯ್ಕೆ ಮಾಡಿಕೊಳ್ಳಿ ಎಂದು ಅಮಿತ್ ಶಾ ಹೇಳುತ್ತಿದ್ದಾರೆ. 

**********************

ಭಾಷೆ ನಶಿಸಿದರೆ ಪರಂಪರೆ ಮತ್ತು ಸಂಸ್ಕೃತಿ ನಾಶವಾದಂತೆ - ಸಿ.ಟಿ. ರವಿ, ಸಚಿವ.

► ಹೌದು, ನಿಮ್ಮ ಭಾಷೆಯೇ ನಾಶವಾದ ಪರಂಪರೆ ಮತ್ತು ಸಂಸ್ಕೃತಿಯನ್ನು ಹೇಳುತ್ತಿದೆ. 

***********************

ನಮ್ಮದು ಅನೈತಿಕ ಸರಕಾರವಲ್ಲ, ನೈತಿಕ ಸರಕಾರ - ಯಡಿಯೂರಪ್ಪ, ಮುಖ್ಯಮಂತ್ರಿ.

► ಅನೈತಿಕತೆಯಿಂದ ಹುಟ್ಟಿದ ನೈತಿಕ ಸರಕಾರ. 

**********************

ಚಾತುರ್ವರ್ಣ ಪದ್ಧತಿಯಲ್ಲಿ ಕನಸು ಕಾಣಲು ಕೂಡಾ ಅವಕಾಶವಿಲ್ಲ - ರಮೇಶ್ ಕುಮಾರ್, ಮಾಜಿ ಸ್ಪೀಕರ್.

► ಇದೀಗ ಕೆಲವು ಶೂದ್ರರು ಮತ್ತೆ ಚಾತುರ್ವರ್ಣ ಪದ್ಧತಿಯ ಕನಸು ಕಾಣುತ್ತಿದ್ದಾರೆ.

*********************

ದೇಶದ ಅಭಿವೃದ್ಧಿಗೆ ಶಾಂತಿ, ಏಕತೆ, ಸೌಹಾರ್ದಗಳು ಅತೀ ಮುಖ್ಯ - ನರೇಂದ್ರ ಮೋದಿ, ಪ್ರಧಾನಿ.

► ಹೌದು. ಮೊದಲು ಅದನ್ನು ಹುಡುಕಿ ಕೊಡಿ.

************************

ಶೂರ, ಧೀರ ಎನಿಸಿಕೊಂಡ ಸಾವರ್ಕರ್ ಹೇಡಿಯಾಗಿದ್ದು ಏಕೆ ಎಂಬುದರ ಬಗ್ಗೆ ಸಂಶೋಧನೆ ನಡೆಯಬೇಕು - ಎಚ್.ಎಸ್. ದೊರೆಸ್ವಾಮಿ, ಸ್ವಾತಂತ್ರ ಹೋರಾಟಗಾರ.

► ಬಜೆಟ್‌ನಲ್ಲಿ ಅದಕ್ಕೆಂದೋ ಕೋಟ್ಯಂತರ ರೂಪಾಯಿ ಮೀಸಲಿಟ್ಟ ಬಗ್ಗೆ ಸುದ್ದಿಯಿದೆ. 

***********************

ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನಾನೂ ಜೈಲಿನಲ್ಲಿದ್ದೆ. ಅಲ್ಲಿ ನನಗೆ ಸ್ವಾತಂತ್ರ ಹೋರಾಟಗಾರ ದೊರೆಸ್ವಾಮಿ ಕಾಣಲಿಲ್ಲ - ಸೊಗಡು ಶಿವಣ್ಣ, ಮಾಜಿ ಸಚಿವ.

► ತುರ್ತುಪರಿಸ್ಥಿತಿಯಲ್ಲಿ ಹೋರಾಡಿ ಜೈಲು ಸೇರಿದವರನ್ನು, ಪಿಕ್‌ಪಾಕೆಟ್ ಮಾಡಿ ಜೈಲು ಸೇರಿದವರನ್ನು ಬೇರೆ ಬೇರೆ ಸೆಲ್‌ಗಳಲ್ಲಿ ಇಡುತ್ತಿದ್ದರಂತೆ. 

***********************

ದಿಲ್ಲಿ ಗಲಭೆಯಿಂದ ಜನರ ಗಮನ ಬೇರೆಡೆ ಸೆಳೆಯಲು ಕೊರೋನ ವೈರಸ್ ಬಗ್ಗೆ ಭಯ ಹುಟ್ಟಿಸಲಾಗುತ್ತಿದೆ - ಮಮತಾ ಬ್ಯಾನರ್ಜಿ, ಪ.ಬಂ. ಮುಖ್ಯಮಂತ್ರಿ.

► ದಿಲ್ಲಿ ಗಲಭೆಯಲ್ಲಿ ಪಾತ್ರವಹಿಸಿದ ವೈರಸ್, ಕೊರೋನಕ್ಕಿಂತ ಭೀಕರ. 

**************************

ಸಂವಿಧಾನವನ್ನು ಜನಸಾಮಾನ್ಯರಿಗೆ ತಲುಪುವಂತೆ ಮಾಡಬೇಕಾದ ಜವಾಬ್ದಾರಿ ನಮ್ಮ ಮೇಲಿದೆ - ಪ್ರತಾಪ ಚಂದ್ರ ಶೆಟ್ಟಿ, ವಿ.ಪ. ಸಭಾಪತಿ.

► ಸಂವಿಧಾನದಲ್ಲಿದ್ದ ಹಕ್ಕುಗಳನ್ನು ತಲುಪಿಸುವ ಅಗತ್ಯವಿಲ್ಲವೆ?

**************************

ಯಡಿಯೂರಪ್ಪ ಸರಕಾರ ರಚಿಸಿದಷ್ಟೇ ಹುಮ್ಮಸ್ಸಿನಲ್ಲಿ ಬಜೆಟ್ ಮಂಡಿಸಿಲ್ಲ - ಡಿ.ಕೆ. ಶಿವಕುಮಾರ್, ಮಾಜಿ ಸಚಿವ.

► ಅವರ ಬಜೆಟ್ ಹಣವೆಲ್ಲ ಸರಕಾರ ರಚಿಸುವಾಗಲೇ ಹಂಚಿ ಮುಗಿದಿದೆ. 

*************************

ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಎಲ್ಲದಕ್ಕೂ ಬಾಯಿ ಮತ್ತು ತಲೆ ಹಾಕಬಾರದು - ಎಚ್. ವಿಶ್ವನಾಥ್, ಮಾಜಿ ಸಚಿವ.

► ಯಾವು ಯಾವುದಕ್ಕೆಲ್ಲ ಹಾಕಬಹುದು ಎನ್ನುವುದರ ಒಂದು ಪಟ್ಟಿ ಕೊಡಿ. 

************************

ಪೊಲೀಸರು ಕಾನೂನು ಜಾರಿಗೊಳಿಸಲು ವಿಫಲವಾದರೆ ಪ್ರಜಾಪ್ರಭುತ್ವ ವಿಫಲವಾಗುತ್ತದೆ - ಅಜಿತ್ ಧೋವಲ್, ರಾಷ್ಟ್ರೀಯ ಭದ್ರತಾ ಸಲಹೆಗಾರ

► ಅಂದರೆ ಪ್ರಜಾಪ್ರಭುತ್ವ ವಿಫಲಗೊಳಿಸಲು ಪೊಲೀಸರು ಕಾನೂನು ಜಾರಿಗೊಳಿಸದಂತೆ ನೋಡಿಕೊಂಡಿರಾ?

**************************

ರಾಮನಗರ ಮತ್ತು ಚೆನ್ನಪಟ್ಟಣ ನನ್ನ ಎರಡು ಕಣ್ಣುಗಳು - ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ.

►  ಕಣ್ಣು ದಾನ ವಾಡುವ ಯೋಜನೆಯೇನಾದರೂ ಇದೆಯೇ?

**************************

share
ಪಿ. ಎ. ರೈ
ಪಿ. ಎ. ರೈ
Next Story
X