ಕರ್ನಾಟಕ ಮುಸ್ಲಿಂ ಜಮಾಅತ್ ಬೈಂದೂರು ತಾಲೂಕು ಸಮಿತಿ ಅಸ್ತಿತ್ವಕ್ಕೆ

ಬೈಂದೂರು, ಮಾ.9: ಕರ್ನಾಟಕ ಮುಸ್ಲಿಂ ಜಮಾಅತ್ ಇದರ ಬೈಂದೂರು ತಾಲೂಕು ಘೋಷಣಾ ಸಮಾವೇಶವು ಕರ್ನಾಟಕ ಮುಸ್ಲಿಂ ಜಮಾಅತ್ ಉಡುಪಿ ಜಿಲ್ಲಾ ಉಪಾಧ್ಯಕ್ಷ ಬಿ.ಎಸ್.ಎಫ್. ರಫೀಕ್ ಅಧ್ಯಕ್ಷತೆಯಲ್ಲಿ ನಾವುಂದ ಬುಸ್ತಾನುಲ್ ಉಲೂಂ ಮದ್ರಸ ಸಭಾಂಗಣದಲ್ಲಿ ಇಂದು ಜರಗಿತು.
ಕಾರ್ಯಕ್ರಮವನ್ನು ಸ್ಥಳೀಯ ಮುದರ್ರಿಸ್ ಅಬ್ದುಲ್ಲತೀಫ್ ಅಲ್-ಫಾಳಿಲಿ ಉದ್ಘಾಟಿಸಿ, ಶುಭ ಹಾರೈಸಿದರು. ಕರ್ನಾಟಕ ಮುಸ್ಲಿಂ ಜಮಾಅತ್ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೈ.ಬಿ.ಸಿ.ಬಶೀರ್ ಅಲಿ ಮೂಳೂರು ವಿಷಯ ಮಂಡಿಸಿದರು. ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಸದಸ್ಯ ಹಾಗೂ ಜಿಲ್ಲಾ ಕಾರ್ಯದರ್ಶಿ ಕೆ.ಎ.ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಜಮಾಅತ್ ಜಿಲ್ಲಾ ಕಾರ್ಯದರ್ಶಿ ಸುಬ್ಹಾನ್ ಅಹ್ಮದ್ ಹೊನ್ನಾಳ ಬೈಂದೂರು ತಾಲೂಕು ಸಮಿತಿಯ ಆಯ್ಕೆ ಪ್ರಕ್ರಿಯೆಯ ನೇತೃತ್ವ ವಹಿಸಿ ನೂತನ ಸಮಿತಿಯನ್ನು ಘೋಷಣೆ ಮಾಡಿದರು. ಗೌರವ ಸಲಹೆಗಾರಾಗಿ ಅಬ್ದುಲ್ಲತೀಫ್ ಅಲ್ಫಾಳಿಲಿ ನಾವುಂದ, ತೌಫೀಕ್ ಅಬ್ದುಲ್ಲಾ ನಾವುಂದ, ಅಬ್ದುಲ್ ಹಮೀದ್ ಹಾಜಿ ಬಡಾಕೆರೆ, ಹಸೈನಾರ್ ಮುಸ್ಲಿಯಾರ್ ಕೋಯನಗರ, ಸಯ್ಯದ್ ಅಜ್ಮಲ್ ಶಿರೂರು, ಅಬ್ದುಲ್ ಗಫೂರು ಶಿರೂರು, ಅಧ್ಯಕ್ಷರಾಗಿ ಮನ್ಸೂರ್ ಇಬ್ರಾಹಿಂ ಮರವಂತೆ, ಪ್ರಧಾನ ಕಾರ್ಯದರ್ಶಿಯಾಗಿ ಫಹೀಮ್ ಶಿರೂರು, ಕೋಶಾಧಿಕಾರಿಯಾಗಿ ಜಾಫರ್ ಸಾಬ್ ಬೈಂದೂರು, ಸಂಘಟನಾ ಕಾರ್ಯದರ್ಶಿಯಾಗಿ ಕೆ.ಎಂ.ಎಚ್. ಝುಹುರಿ ಕೋಯನಗರ, ಉಪಾಧ್ಯಕ್ಷರಾಗಿ ಸಿದ್ದೀಕ್ ಸಾಬ್ ಶಿರೂರು, ಸುಲೈಮಾನ್ ಚಾತನಕೆರೆ, ಹುಸೈನ್ ಬೈಂದೂರು, ಅಹ್ಮದ್ ನಾವುಂದ, ಕಾರ್ಯದರ್ಶಿಗಳಾಗಿ ಇರ್ಷಾದ್ ಕೋಯನಗರ, ಅಬ್ದುಲ್ ಖಾದರ್ ಬಡಾಕರೆ, ಖಾಸಿಂ ಉಪ್ಪುಂದ, ಸುಲ್ತಾನ್ ಬೈಂದೂರು, ಕಾರ್ಯಕಾರಿ ಸದಸ್ಯ ರಾಗಿ ಅಡ್ವಕೇಟ್ ಇಲ್ಯಾಸ್ ನಾವುಂದ, ಎಸ್.ಜೆ.ಬಿ. ಕೋಯ, ರಫೀಕ್ ಮರವಂತೆ, ಅಬ್ದುಸ್ಸಲಾಂ ನಾವುಂದ, ಅಬ್ದುಲ್ ಹಮೀದ್ ಬಡಾಕೆರೆ, ಅಬ್ಬಾಸ್ ಮಾಣಿಕೊಳಲು, ಬಶೀರ್ ಶಿರೂರು, ರಮಳಾನ್ ಆಕಳಬೈಲು, ಸುಲೈಮಾನ್ ಬಡಾಕೆರೆ, ಹಂಝ ಆಕಳಬೈಲು, ಶಾಜಹಾನ್ ಚಾತನಕೆರೆ, ಮೊಯಿದೀನ್ ನಾವುಂದ, ಫೈಝಲ್ ಬೈಂದೂು ಅವರನ್ನು ಆಯ್ಕೆ ಮಾಡಲಾಯಿತು.
ಜಮಾಅತ್ ಜಿಲ್ಲಾ ಉಪಾಧ್ಯಕ್ಷ ಶೇಖ್ ಮುಹಮ್ಮದ್ ನಯೀಮ್ ಕಟಪಾಡಿ, ಜಿಲ್ಲಾ ಕಾರ್ಯದರ್ಶಿ ಕೆ.ಎಸ್.ಎಂ.ಮನ್ಸೂರು ಉಡುಪಿ, ಎಸ್ಸೆಸ್ಸೆಫ್ ದ.ಕ. ಜಿಲ್ಲಾ ಉಪಾಧ್ಯಕ್ಷ ಕೊಂಬಾಳಿ ಝುಹುರಿ, ಎಸ್ಸೆಸ್ಸೆಫ್ ಬೈಂದೂರು ಡಿವಿಷನ್ ಅಧ್ಯಕ್ಷ ಎಸ್.ಎಂ.ಹನೀಫ್ ಸಅದಿ, ಜಿಲ್ಲಾ ಸಂಯುಕ್ತ ಜಮಾಅತ್ ನಾಯಕರಾದ ಎಚ್.ಶಹಬಾನ್ ಹಂಗಳೂರು, ಬೈಂದೂರು ಜಾಮಿಯಾ ಮಸೀದಿ ಅಧ್ಯಕ್ಷ ಸಿ.ಎ.ಸಾಹೇಬ್, ಕಾರವಾರ ಜಿಲ್ಲಾ ವಕ್ಫ್ ಬೋರ್ಡ್ ಸದಸ್ಯ ಫಾರೂಕ್ ಸಾಬ್, ಜಿಲ್ಲಾ ಎಸ್.ವೈ.ಎಸ್. ಕಾರ್ಯದರ್ಶಿ ಇಬ್ರಾಹಿಂ ಮಾಣಿ ಕೊಳಲು ಉಪಸ್ಥಿತರಿದ್ದರು.







