Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ಎಲ್ಲಾ ರೋಗಕ್ಕೂ ಔಷಧ ಇದ್ದಿದ್ದರೆ...

ಎಲ್ಲಾ ರೋಗಕ್ಕೂ ಔಷಧ ಇದ್ದಿದ್ದರೆ ಏನಾಗ್ತಿತ್ತು!

ತಿಳಿ-ವಿಜ್ಞಾನ

ಆರ್.ಬಿ. ಗುರುಬಸವರಾಜಆರ್.ಬಿ. ಗುರುಬಸವರಾಜ15 March 2020 10:16 AM IST
share
ಎಲ್ಲಾ ರೋಗಕ್ಕೂ ಔಷಧ ಇದ್ದಿದ್ದರೆ ಏನಾಗ್ತಿತ್ತು!

ಕಳೆದ ಎರಡು ತಿಂಗಳಿಂದ ಇಡೀ ಜಗತ್ತು ಕೊರೋನ ಜ್ವರದ ಬಗ್ಗೆ ಮಾತನಾಡುತ್ತಿದೆ. ಡಿಸೆಂಬರ್ 2019ರಲ್ಲಿ ಚೀನಾದ ಹುಬೈ, ವುಹಾನ್‌ನಲ್ಲಿ ಮೊದಲಿಗೆ ಪತ್ತೆಯಾದ ಕೊರೋನ ಇಂದು ಜಗತ್ತಿನ ಬಹುಭಾಗದಲ್ಲಿ ಹರಡಿ ತಲ್ಲಣವನ್ನುಂಟು ಮಾಡಿದೆ. 9ನೇ ಮಾರ್ಚ್ 2020ರ ವೇಳೆಗೆ 1,13,000 ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 5,800 ಪ್ರಕರಣಗಳು ಗಂಭೀರವೆಂದು ಪರಿಗಣಿಸಲಾಗಿದೆ. ಚೀನಾದಲ್ಲಿ 3,900 ಜನರು ಹಾಗೂ ಇಟಲಿ, ದಕ್ಷಿಣ ಕೊರಿಯ, ಇರಾನ್ ಸೇರಿದಂತೆ ಇತರ ದೇಶಗಳಲ್ಲಿ 880 ಜನರು ಈ ರೋಗದಿಂದ ಸಾವನ್ನಪ್ಪಿದ್ದಾರೆ. ರೋಗ ಕಾಣಿಸಿಕೊಂಡ ಕೇವಲ ಮೂರು ತಿಂಗಳ ಅವಧಿಯಲ್ಲಿ ಪ್ರಪಂಚದಾದ್ಯಂತ ಅತೀ ಹೆಚ್ಚು ಜನರನ್ನು ಬಲಿ ಪಡೆದ ರೋಗ ಇದಾಗಿದ್ದು ಜನರಲ್ಲಿ ಆತಂಕ ಸೃಷ್ಟಿಸಿದೆ. ಇಂತಹ ರೋಗಗಳು ಈ ಜಗತ್ತಿಗೆ ಹೋಸತೇನಲ್ಲ. ಈ ಹಿಂದೆಯೂ ಇಂತಹ ಮಾರಣಾಂತಿಕ ಕಾಯಿಲೆಗಳು ಬಂದು ಹೋಗಿವೆ. ಪ್ಲೇಗ್‌ನಂತಹ ಮಹಾರೋಗವನ್ನು ನಿಯಂತ್ರಿಸಲಾಯಿತು. ಪೋಲಿಯೊದಂತಹ ಗಂಭೀರ ಕಾಯಿಲೆಗೆ ಔಷಧ ಕಂಡುಹಿಡಿಯಲಾಯಿತು. ಪ್ರತಿದಿನವೂ ಜಗತ್ತಿನ ನಾನಾ ಭಾಗಗಳ ಜನರು ವಿವಿಧ ಕಾಯಿಲೆಗಳಿಗೆ ತುತ್ತಾಗುತ್ತಲೇ ಇದ್ದಾರೆ. ಜಗತ್ತಿನಲ್ಲಿ ಕಾಣಿಸಿಕೊಳ್ಳುವ ಎಲ್ಲಾ ರೋಗಗಳಿಗೂ ಔಷಧ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂಬುದು ಎಲ್ಲರ ಆಶಯ. ಆದರೆ ಎಲ್ಲಾ ರೋಗಗಳಿಗೂ ಇದುವರೆಗೂ ಔಷಧ ಕಂಡುಹಿಡಿಯಲಾಗಿಲ್ಲ ಅಲ್ಲವೇ? ಒಂದು ವೇಳೆ ಎಲ್ಲಾ ರೋಗಗಳಿಗೂ ಔಷಧ ಇದ್ದಿದ್ದರೆ ಏನಾಗ್ತಿತ್ತು! ಎಂಬುದೇ ಈ ಬರಹದ ಕಿರು ಸಾರಾಂಶ.

ಎಲ್ಲಾ ರೋಗಕ್ಕೂ ಔಷಧ ಇದ್ದಿದ್ದರೆ ಏನಾಗ್ತಿತ್ತು! ಎಂದು ಕಲ್ಪಿಸಿಕೊಳ್ಳುವುದು ಸುಲಭ. ಆದರೆ ಅದರ ಆಚರಣೆ ತುಂಬಾ ಕಠಿಣ. ಜಗತ್ತು ಈ ಹಿಂದೆಯೂ ಕೆಲ ಗಂಭೀರ ರೋಗಗಳನ್ನು ಎದುರಿಸಿದೆ. ಕೆಲವು ರೋಗಗಳಿಗೆ ಇಂದಿಗೂ ಔಷಧ ಕಂಡುಹಿಡಿಯಲಾಗಿಲ್ಲ. ಆದರೆ ಅಂತಹ ಕಾಯಿಲೆಗಳು ಹರಡದಂತೆ ನಿಯಂತ್ರಣ ಮಾಡಲು ಹಲವಾರು ಆಯ್ಕೆಗಳಿವೆ. ಉದಾಹರಣೆಗೆ ಕಳೆದ ದಶಕದ ಹಿಂದೆ ಏಡ್ಸ್ ರೋಗ ಇಡೀ ಜಗತ್ತನ್ನು ತಲ್ಲಣಗೊಳಿಸಿತ್ತು. ಇಂದಿಗೂ ಏಡ್ಸ್ ಕಾಯಿಲೆಗೆ ನಿರ್ದಿಷ್ಟವಾದ ಔಷಧ ಇರದಿದ್ದರೂ ಅದರ ನಿಯಂತ್ರಣ ಸಾಧ್ಯವಾಗಿದೆ. ಎಲ್ಲಾ ಕಾಯಿಲೆಗಳಿಗೆ ಔಷಧ ಕಂಡುಹಿಡಿಯಲು ಸಾಧ್ಯವೇ? ಎಂಬ ಪ್ರಶ್ನೆಯೇ ಪ್ರಶ್ನಾತೀತ. ಏಕೆಂದರೆ ಕಾಯಿಲೆಗೆ ಔಷಧ ರೋಗಿಯ ವಯಸ್ಸು, ವಾಸಿಸುವ ಪರಿಸರ ಹಾಗೂ ಅವನ ದೈಹಿಕ ಸಾಮಥರ್ಯ್ಗಳನ್ನು ಅವಲಂಬಿಸಿದೆ. ಕೆಲವು ಕಾಯಿಲೆಗಳು ಔಷಧಕ್ಕಿಂತ ರೋಗಿಯು ಅನುಸರಿಸುವ ನಿಯಂತ್ರಣ ಕ್ರಮಗಳನ್ನು ಅವಲಂಬಿಸಿರುತ್ತದೆ. ಇಂದು ಬಹುತೇಕ ಕಾಯಿಲೆಗಳಿಗೆ ಔಷಧ ಇದ್ದಾಗ್ಯೂ ಸಾವಿರಾರು ಜನರು ಕಾಯಿಲೆಗಳಿಂದ ಸಾಯುತ್ತಲೇ ಇದ್ದಾರೆ. ಅಂದರೆ ರೋಗ ನಿಯಂತ್ರಣ ನಿಯಮಗಳ ಅನುಪಾಲನೆಯಲ್ಲಿ ಬಹುತೇಕರು ಸೋಲುತ್ತಿದ್ದಾರೆ. ಅಧಿಕ ರಕ್ತದೊತ್ತಡ, ಮಧುಮೇಹ, ಪಾರ್ಶ್ವವಾಯು, ಹೃದಯದ ಕಾಯಿಲೆ, ಕ್ಯಾನ್ಸರ್‌ನಂತಹ ರೋಗಗಳಿಗೆ ಔಷಧ ಲಭ್ಯವಿದ್ದರೂ ಸರಿಯಾದ ಚಿಕಿತ್ಸಕ ಕ್ರಮಗಳನ್ನು ಅನುಸರಿಸದೇ ಇರುವುದರಿಂದ ಸಾಕಷ್ಟು ರೋಗಿಗಳು ಸಾವನ್ನಪ್ಪುತ್ತಿದ್ದಾರೆ. ಎಲ್ಲಾ ರೋಗಗಳಿಗೆ ಔಷಧ ದೊರೆತ್ತಿದ್ದರೆ ರೋಗಿಗಳಿಲ್ಲದೇ ಆಸ್ಪತ್ರೆಗಳು ಬಣಗುಡುತ್ತಿದ್ದವು. ವೈದ್ಯರು ಕೆಲಸವಿಲ್ಲದೇ ವ್ಯರ್ಥವಾಗಿ ಕಾಲಹರಣ ಮಾಡಬೇಕಾಗುತ್ತಿತ್ತು. ಕ್ರಮೇಣವಾಗಿ ಆಸ್ಪತ್ರೆಗಳೆಲ್ಲ ಮುಚ್ಚುತ್ತಿದ್ದವು. ವೈದ್ಯರು ಬೇರೆ ವೃತ್ತಿಯನ್ನು ಹುಡುಕಬೇಕಾಗುತ್ತಿತ್ತು. ಆರೋಗ್ಯಕ್ಕಾಗಿ ಹೆಚ್ಚು ಹಣ ವ್ಯಯವಾಗುತ್ತಿರಲಿಲ್ಲ. ರೋಗಗಳಿಗೆ ಔಷಧ ಇದ್ದರೆ ಮಾನವರು ಕಾಯಿಲೆಗಳಿಂದ ನರಳುತ್ತಿರಲಿಲ್ಲ ಹಾಗೂ ಸಾಯುತ್ತಿರಲಿಲ್ಲ. ಮಾನವರ ಜೀವಿತ ಅವಧಿ ಹೆಚ್ಚಾಗುತ್ತಿತ್ತು. ಇದ್ದಕ್ಕಿದ್ದಂತೆ ಎಲ್ಲಾ ಕಾಯಿಲೆಗಳು ಕಣ್ಮರೆಯಾಗಿದ್ದರೆ ಜಗತ್ತಿನ ಜನಸಂಖ್ಯೆ ಖಂಡಿತವಾಗಿ ಹೆಚ್ಚುತ್ತಿತ್ತು. ಆಗ ಎಲ್ಲೆಲ್ಲೂ ಮಾನವರೇ ತುಂಬಿರುತ್ತಿದ್ದರು. ಆಹಾರಕ್ಕಾಗಿ ಪರಸ್ಪರ ಕಚ್ಚಾಡಿಕೊಳ್ಳುತ್ತಿದ್ದರು. ಭೂಮಿಯ ಮೇಲೆ ಆಹಾರದ ಪ್ರಮಾಣ ಕಡಿಮೆಯಾಗುತ್ತಿತ್ತು. ಗಿಡ ಮರಗಳ ಸಂಖ್ಯೆ ತುಂಬಾ ಕಡಿಮೆಯಾಗಿ ಅರಣ್ಯ ಸಂಪೂರ್ಣವಾಗಿ ನಾಶವಾಗುತ್ತಿತ್ತು. ಕಾಂಕ್ರಿಟ್ ಕಾಡು ಹೆಚ್ಚಾಗಿ ಮನೆಗಳ ಸಂಖ್ಯೆ ದುಪ್ಪಟ್ಟಾಗುತ್ತಿತ್ತು. ಪರಿಸರ ಮಾಲಿನ್ಯದ ಪ್ರಮಾಣ ಹೆಚ್ಚಾಗಿ ಹವಾಮಾನ ವೈಪರೀತ್ಯಗಳು ಉಂಟಾಗುತ್ತಿದ್ದವು. ರೋಗಗಳಿಗೆ ಔಷಧ ಇದ್ದಿದ್ದರೆ ಜನರಿಗೆ ಕನಿಷ್ಠ ವಿಶ್ರಾಂತಿಯೂ ಇರುತ್ತಿರಲಿಲ್ಲ. ಆರೋಗ್ಯದ ಬಗ್ಗೆ ಯಾರೂ ಕಾಳಜಿ ವಹಿಸುತ್ತಲೇ ಇರಲಿಲ್ಲ ಅಲ್ಲವೇ?

share
ಆರ್.ಬಿ. ಗುರುಬಸವರಾಜ
ಆರ್.ಬಿ. ಗುರುಬಸವರಾಜ
Next Story
X