Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...

ಓ ಮೆಣಸೇ...

ಪಿ.ಎ.ರೈಪಿ.ಎ.ರೈ15 March 2020 11:46 PM IST
share
ಓ ಮೆಣಸೇ...

ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಯೇ ಸರಕಾರದ ಗುರಿ - ಸ್ಮತಿ ಇರಾನಿ, ಕೇಂದ್ರ ಸಚಿವೆ.

ಎಲ್ಲರೂ ಎಂದರೆ ಅಮೆರಿಕ, ಅನಿಲ್ ಅಂಬಾನಿ, ಅದಾನಿಗಳಿರಬೇಕು.


ಹಲವು ಸೋಂಕುಗಳಿಂದ ತಮ್ಮನ್ನು ಕಾಪಾಡಿಕೊಳ್ಳುವುದು ಹೇಗೆ ಎನ್ನುವುದನ್ನು ಕಲಿಸಲು ಚೀನಾಕ್ಕೆ ತೆರಳಲು ಸಿದ್ಧನಿದ್ದೇನೆ - ಬಾಬಾರಾಮ್‌ದೇವ್, ಯೋಗ ಗುರು.

ದಯವಿಟ್ಟು ಅದನ್ನು ತಕ್ಷಣ ಮಾಡಿ. ಭಾರತದ ವೈದ್ಯಕೀಯ ಕ್ಷೇತ್ರವನ್ನು ಕಾಪಾಡಿ. ಮಾಸ್ಕ್ ಹಾಕದೇ ಹೋದರೆ ಇನ್ನೂ ಉತ್ತಮ.


ಬಿಜೆಪಿ ಅಧಿಕಾರಕ್ಕೆ ಬರಲು ನಾನೂ ಕಾರಣಕರ್ತ. ಅದಕ್ಕೆ ಯಡಿಯೂರಪ್ಪ ಜೂನ್ ನಂತರ ನನಗೆ ಸಚಿವ ಸ್ಥಾನ ನೀಡುವ ಭರವಸೆ ಕೊಟ್ಟಿದ್ದಾರೆ - ಆರ್. ಶಂಕರ್, ಮಾಜಿ ಸಚಿವ.
ಅಧಿಕಾರಕ್ಕೆ ಬರಲು ಮತದಾರರ ಪಾತ್ರವೇ ಇಲ್ಲ ಎಂದಾಯಿತು.


ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್‌ರ ನಡೆ ‘ಮಾಡುವುದೆಲ್ಲ ಅನಾಚಾರ, ಮನೆ ಮುಂದೆ ಬೃಂದಾವನ’ ಎಂಬಂತಿದೆ - ಆರ್. ವಿಶ್ವನಾಥ, ಮಾಜಿ ಸಚಿವ.

ನಿಮ್ಮ ಗ್ರಹಚಾರದ ಮುಂದೆ ಅದೇನೂ ಅಲ್ಲ ಬಿಡಿ.


ಸಂವಿಧಾನ ಇರುವ ತನಕ ಭಾರತವನ್ನು ಹಿಂದೂ ದೇಶ ಮಾಡಲು ಸಾಧ್ಯವಿಲ್ಲ

- ಸ್ವಾಮಿ ಅಗ್ನಿವೇಶ್, ಹರ್ಯಾಣ ಮಾಜಿ ಶಾಸಕ.
ಅದಕ್ಕೇ ಸಂವಿಧಾನವನ್ನು ಇಲ್ಲವಾಗಿಸಲು ಹೊರಟಿರುವುದು.


ಸಂವಿಧಾನಕ್ಕೆ ಟೈಂ ಬಾಂಬ್ ಫಿಕ್ಸ್ ಆಗಿದೆ - ಸಿ.ಟಿ. ರವಿ, ಸಚಿವ.

ಶೃಂಗೇರಿಯಲ್ಲಿ ಪೆಟ್ರೋಲ್ ಬಾಂಬ್ ಬೆದರಿಕೆ ಒಡ್ಡಿದವರ ಕೈವಾಡವಿದೆಯಂತೆ.


ಮಾಜಿ ಪ್ರಧಾನಿ ವಾಜಪೇಯಿ ಕಾಲದ ಬಿಜೆಪಿ ಈಗ ಉಳಿದಿಲ್ಲ - ಸಿ.ಎಂ. ಇಬ್ರಾಹೀಂ, ಕಾಂಗ್ರೆಸ್ ಮುಖಂಡ.

ನೆಹರೂ ಕಾಲದ ಕಾಂಗ್ರೆಸ್ ಈಗ ಉಳಿದಿದೆಯೇ?


ಯಡಿಯೂರಪ್ಪ ಇಲ್ಲದಿದ್ದರೆ ಕರ್ನಾಟಕದಲ್ಲಿ ಬಿಜೆಪಿ ಝೀರೋ - ಎಸ್.ಆರ್. ಪಾಟೀಲ್, ವಿ.ಪ. ವಿರೋಧ ಪಕ್ಷದ ನಾಯಕ.
ಕಾಂಗ್ರೆಸ್ ಝೀರೋ ಆಗಿರುವುದಕ್ಕೆ ಯಾರು ಕಾರಣ ಎನ್ನುವುದನ್ನು ಮೊದಲು ಕಂಡುಕೊಳ್ಳಿ.


ಮಾತಿಗೆ ನಿಲುಕದ ಸಂದರ್ಭಗಳು ನನಗೆ ತುಂಬಾ ಇಷ್ಟ - ಅಮಿತಾಬಚ್ಚನ್, ನಟ.

ಬಹುಶಃ ಮೂಕ ಚಿತ್ರಗಳ ಬಗ್ಗೆ ಮಾತನಾಡುತ್ತಿರಬೇಕು.


ಮಹಾತ್ಮಾ ಗಾಂಧಿ ಚುನಾವಣೆಗೆ ನಿಂತರೂ ಸೋಲುವಂತಹ ಸ್ಥಿತಿಯಲ್ಲಿದ್ದೇವೆ - ಸಿ.ಟಿ. ರವಿ, ಸಚಿವ.

ಕೊಂದವರಿಗೆ ಸೋಲಿಸುವುದು ಕಷ್ಟವೇ?


ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದಾಗ ಟಾಯ್ಲೆಟ್‌ಗೆ ಹೋಗಲೂ ಅಡ್ಡಿಯಾಗುತ್ತದೆ - ಜಗದೀಶ್ ಶೆಟ್ಟರ್, ಸಚಿವ.
ಚುನಾವಣಾ ಭಾಷಣದ ಹೆಸರಿನಲ್ಲಿ ವಿಸರ್ಜಿಸಿದರೆ ಸಾಕಾಗುವುದಿಲ್ಲವೇ?


ಕಾಂಗ್ರೆಸ್‌ನಲ್ಲಿದ್ದು ದೇಶ ಸೇವೆ ಮಾಡಲು ಅಸಾಧ್ಯ - ಜ್ಯೊೀತಿರಾದಿತ್ಯ ಸಿಂಧಿಯಾ, ಮಧ್ಯಪ್ರದೇಶ ಕಾಂಗ್ರೆಸ್‌ನಿಂದ ಹೊರಬಂದ ನಾಯಕ.

ಬಿಜೆಪಿಯಲ್ಲಿದ್ದು ಆರೆಸ್ಸೆಸ್ ಸೇವೆಯೇ ವಾಸಿಯಂತೆ.


ನಮ್ಮಲ್ಲಿ ಬಿಸಿಲು ಹೆಚ್ಚಿರುವುದರಿಂದ ಕೊರೋನ ಸೋಂಕು ಹರಡುವ ಸಾಧ್ಯತೆ ಕಡಿಮೆ - ಶ್ರೀರಾಮುಲು, ಸಚಿವ.

ಆದರೆ ನೀವು ಹರಡುತ್ತಿರುವ ಸೋಂಕನ್ನು ತಡೆಯಲು ಯಾವ ಬಿಸಿಲಿಗೂ ಸಾಧ್ಯವಿಲ್ಲ.


ಮುಂದಿನ ಮೂರು ವರ್ಷ ಯಡಿಯೂರಪ್ಪರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ - ವಿಜಯೇಂದ್ರ, ಬಿಜೆಪಿ ಯುವ ನಾಯಕ.

ಆ ಬಳಿಕ ಆ ಸ್ಥಾನವನ್ನು ತಮಗೆ ವಹಿಸಿಕೊಡುತ್ತಾರೆ ಎಂದು ಹೇಳುತ್ತಿದ್ದೀರಿ.


ದಿಲ್ಲಿ ಗಲಭೆ ಆರೋಪಿಗಳು ಯಾವುದೇ ಪಕ್ಷ, ಜಾತಿ, ಧರ್ಮದವರಾಗಿದ್ದರೂ ತಕ್ಕ ಶಾಸ್ತಿ ಮಾಡಲಾಗುವುದು - ಅಮಿತ್ ಶಾ, ಕೇಂದ್ರ ಸಚಿವ.

ಅಂದರೆ ಯಾವ ಪಕ್ಷದವರು, ಯಾವ ಧರ್ಮದವರು ಎನ್ನುವುದನ್ನೂ ಗುರುತಿಸಿ ಆಗಿರಬೇಕು.

‘ಮಧ್ಯಪ್ರದೇಶದ ವೈರಸ್’ ಮಹಾರಾಷ್ಟ್ರಕ್ಕೆ ಪ್ರವೇಶಿಸುವುದಿಲ್ಲ - ಸಂಜಯ್‌ರಾವತ್, ಶಿವಸೇನೆ ನಾಯಕ.

ದಿಲ್ಲಿಯ ವೈರಸ್ ಆಗಮಿಸದಂತೆ ನೋಡಿಕೊಳ್ಳಿ.


ನಮ್ಮಲ್ಲಿರುವುದು ಒಂದೇ ಗುಂಪು. ಅದು ಸೋನಿಯಾ ಗಾಂಧಿ ನೇತೃತ್ವದ ಗುಂಪು - ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಮುಖಂಡ.

ಬಿಜೆಪಿ ಗುಂಪು, ಆರೆಸ್ಸೆಸ್ ಗುಂಪುಗಳು ಕೂಡ ಇವೆ. ಸರಿಯಾಗಿ ತಪಾಸಣೆ ಮಾಡಿ.


ಡಿಕೆಶಿ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂಬ ವಿಷಯ ತಿಳಿದು ಆಶ್ಚರ್ಯವಾಯಿತು- ಕೆ.ಎಸ್. ಈಶ್ವರಪ್ಪ, ಸಚಿವ.

ನಿಮ್ಮನ್ನು ಮಾಡಬೇಕಾಗಿತ್ತೇ?


ಮಾಜಿ ಸ್ಪೀಕರ್ ರಮೇಶ್ ಕುಮಾರ್ ಎಷ್ಟು ಕೊಲೆ ಮಾಡಿಸಿದ್ದಾರೆ ಎಂಬ ಬಗ್ಗೆ ನನ್ನಲ್ಲಿ ಸಾಕ್ಷಿಗಳಿವೆ - ಎಂ.ಪಿ. ರೇಣುಕಾಚಾರ್ಯ, ಮಾಜಿ ಸಚಿವ.
 ಮತ್ತೇಕೆ ಆ ಸಾಕ್ಷಿಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಬಾರದು.


ನನಗೆ ತಮಿಳುನಾಡು ಮುಖ್ಯಮಂತ್ರಿಯಾಗುವ ಮಹತ್ವಾಕಾಂಕ್ಷೆ ಇಲ್ಲ - ರಜನಿಕಾಂತ್, ನಟ.

ಯಾವುದಾದರೂ ಸಿನೆಮಾದಲ್ಲಿ ಮುಖ್ಯಮಂತ್ರಿಯಾಗಿ ಆಸೆ ತೀರಿಸಿಕೊಂಡರೆ ಆಯಿತು.


ನಾನು ಸಂಡೇ, ಮಂಡೇ ಲಾಯರ್ - ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ.

ಉಳಿದ ಸಮಯದಲ್ಲಿ ಲಯರ್.


ಐತಿಹಾಸಿಕ ಪ್ರಮಾದಗಳನ್ನು ಸರಿಪಡಿಸುವ ಮೂಲಕ ಭಾರತ ಬದಲಾಗುತ್ತಿದೆ - ಜೆ.ಪಿ.ನಡ್ಡಾ, ಬಿಜೆಪಿ ಅಧ್ಯಕ್ಷ.

ಸಂವಿಧಾನವನ್ನು ಮನುಸ್ಮತಿಯಾಗಿ ಬದಲಾಯಿಸುವ ಮೂಲಕ.


ಕೊರೋನ ವೈರಸ್ ಭೀತಿ ಇರುವುದರಿಂದ ರಾಜ್ಯ ಸರಕಾರ ಸದನ ನಡೆಸುವ ಬಗ್ಗೆಯೂ ಯೋಚಿಸಬೇಕು - ಪ್ರಕಾಶ್ ರಾಥೋಡ್, ಶಾಸಕ.

ರಾಜಕಾರಣಿಗಳ ವೈರಸ್‌ಗಳಿಗೆ ಹೆದರಿ ಸದನದೊಳಗೆ ಕಾಲಿಡಲು ಕೊರೋನ ವೈರಸ್ ಹೆದರುತ್ತಿದೆಯಂತೆ 

share
ಪಿ.ಎ.ರೈ
ಪಿ.ಎ.ರೈ
Next Story
X