ದ್ವಿತೀಯ ಪಿಯು ಪರೀಕ್ಷೆ: ಕೇರಳದ ವಿದ್ಯಾರ್ಥಿ-ಉಪನ್ಯಾಸಕರಿಗೆ ದ.ಕ. ಜಿಲ್ಲಾಡಳಿತದಿಂದ ಬಸ್ ವ್ಯವಸ್ಥೆ

ಮಂಗಳೂರು, ಮಾ.22: ದ.ಕ.ಜಿಲ್ಲೆಯಲ್ಲಿ ಮಾ.23ರಂದು ನಡೆಯುವ ದ್ವಿತೀಯ ಪಿಯುಸಿ ಆಂಗ್ಲ ಭಾಷಾ ಪರೀಕ್ಷೆಗೆ ಕೇರಳದಿಂದ ಆಗಮಿಸುವ ವಿದ್ಯಾರ್ಥಿಗಳಿಗೆ ಮತ್ತು ಪರೀಕ್ಷೆಯ ಕರ್ತವ್ಯ ನಿರ್ವಹಿಸುವ ಉಪನ್ಯಾಸಕರು, ನಿಯೋಜಿತ ಸಿಬ್ಬಂದಿಗೆ ಅನುಕೂಲವಾಗುವಂತೆ ದ.ಕ.ಜಿಲ್ಲಾಡಳಿತ ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸಿದೆ.
ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಅಗತ್ಯ ಸಲಕರಣೆ/ಪ್ರವೇಶ ಪತ್ರದೊಂದಿಗೆ ಸೂಚಿಸಿದ ಸ್ಥಳದಲ್ಲಿ ಕಡ್ಡಾಯವಾಗಿ ನಿಗದಿತ ಸಮಯದಲ್ಲಿ ಹಾಜರಾಗಬೇಕು. ಉಪನ್ಯಾಸಕರು ಮತ್ತು ನಿಯೋಜಿತ ಸಿಬ್ಬಂದಿ ಕೂಡ ಕ್ಲಪ್ತ ಸಮಯಕ್ಕೆ ಹಾಜರಾಗಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸ್ಯಾನಿಟೈಸರ್ ಬಳಸಬೇಕು. ಕೇರಳದ ವಿದ್ಯಾರ್ಥಿಗಳಿರುವ ಕಾಲೇಜಿನ ಪ್ರಾಂಶುಪಾಲರು ಓರ್ವ ಸಿಬ್ಬಂದಿಯನ್ನು ನಿಯೋಜಿಸಿ ವಿದ್ಯಾರ್ಥಿಗಳನ್ನು ಗುರುತಿಸಿ ಕೆಎಸ್ಸಾರ್ಟಿಸಿ ಬಸ್ಗಳಲ್ಲಿ ನಿರ್ದಿಷ್ಟ ಪರೀಕ್ಷಾ ಕೇಂದ್ರಗಳಿಗೆ ತಲುಪುವಂತೆ ಮತ್ತು ಪರೀಕ್ಷೆ ಮುಗಿದ ಬಳಿಕ ನಿರ್ದಿಷ್ಟ ಬಸ್ನಲ್ಲಿ ಅವರನ್ನು ಸ್ವಸ್ಥಾನಕ್ಕೆ ತಲುಪಿಸುವ ಜವಾಬ್ದಾರಿ ವಹಿಸಿಕೊಳ್ಳಬೇಕು.ಗಡಿಭಾಗದಲ್ಲಿ ವೈದ್ಯಕೀಯ ತಪಾಸಣೆ ನಡೆಯಲಿದ್ದು, ವಿದ್ಯಾರ್ಥಿಗಳು-ಉಪನ್ಯಾಸಕರು, ಸಿಬ್ಬಂದಿಗಳು ಸಹಕರಿಸಬೇಕಿದೆ. ಅದಕ್ಕಾಗಿ ಎಲ್ಲರೂ ಬೆಳಗ್ಗೆ 7ರಿಂದ 8ರೊಳಗೆ ಕಡ್ಡಾಯವಾಗಿ ನಿರ್ದಿಷ್ಟ ಸ್ಥಳದಲ್ಲಿರಬೇಕು. ಯಾವುದೇ ವಿದ್ಯಾರ್ಥಿಗಳ ಹೆತ್ತವರು/ಪೋಷಕರು ನೇರವಾಗಿ ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳನ್ನು ಸ್ವಂತ ವಾಹನದಲ್ಲಿ ತಲುಪಿಸುವಂತಿಲ್ಲ, ವಾಪಸ್ ಕರೆದುಕೊಂಡು ಹೋಗುವಂತಿಲ್ಲ.
ವಿದ್ಯಾರ್ಥಿ-ಉಪನ್ಯಾಸಕರನ್ನು ಪಿಕ್ ಅಪ್ ಮಾಡಲು ನಿಗದಿಪಡಿಸಿದ ಸ್ಥಳಗಳು
ಮಂಗಳೂರು ಗಡಿಭಾಗ-ತಲಪಾಡಿ ಟೋಲ್ ಗೇಟ್ (15 ಬಸ್ಗಳು)
ಮಂಗಳೂರು ಗಡಿಭಾಗ-ಮುಡಿಪು ಪುಣ್ಯಕೋಟಿ ನಗರ (1 ಬಸ್)
ವಿಟ್ಲ ಗಡಿಭಾಗ- ಬಾಯಾರು (1 ಬಸ್)
ವಿಟ್ಲ ಗಡಿಭಾಗ- ಸಾರಡ್ಕ (1 ಬಸ್)
ವಿಟ್ಲ ಗಡಿಭಾಗ- ಆನೆಕಲ್ಲು (1 ಬಸ್)
ಪುತ್ತೂರು ಗಡಿಭಾಗ- ಕಾಯರ್ಪದವು (1 ಬಸ್)
ಸುಳ್ಯ ಗಡಿಭಾಗ - ಪಂಜಿಕಲ್ಲು (1 ಬಸ್)
ಸುಳ್ಯ ಗಡಿಭಾಗ - ಕರಿಕೆ (1 ಬಸ್)







