ಮಂಗಳೂರು: ಜನತಾ ಕರ್ಪ್ಯೂ ಸಂದರ್ಭ ಆಹಾರ ವಿತರಣೆ

ಮಂಗಳೂರು: ಜನತಾ ಕರ್ಪ್ಯೂನಿಂದ ಹೊಟೇಲ್, ತಿಂಡಿತಿನಿಸುಗಳ ಅಂಗಡಿ ಇತ್ಯಾದಿ ಎಲ್ಲವೂ ಬಂದ್ ಆಗಿ ಅನ್ನವಿಲ್ಲದ ಚಿಂತೆಯಲ್ಲಿದ್ದ ಮಂಗಳೂರು ನಗರದ ಬಹುತೇಕ ಭಿಕ್ಷುಕರಿಗೆ ಕರ್ನಾಟಕ ಮುಸ್ಲಿಂ ಜಮಾಅತ್ನ ಸದಸ್ಯ ಹಾಗೂ ಎಸ್ವೈಎಸ್ ರಾಜ್ಯ ಕಾರ್ಯದರ್ಶಿ ಅಶ್ರಫ್ ಕಿನಾರ ಮತ್ತು ಆಸಿಫ್ ಎ-1 ಕುದ್ರೋಳಿ ಅವರು ಸ್ವತಃ ಮನೆಯಲ್ಲೇ ತಯಾರಿಸಿದ ಅನ್ನವನ್ನು ವಿತರಿಸಿ ಗಮನ ಸೆಳೆದರು.









