Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...

ಓ ಮೆಣಸೇ...

ಪಿ.ಎ.ರೈಪಿ.ಎ.ರೈ22 March 2020 11:49 PM IST
share
ಓ ಮೆಣಸೇ...

ಹಿಂದೂ ಧರ್ಮಕ್ಕಾಗಿಯೇ ನಾನು ನನ್ನ ಜೀವನವನ್ನು ಮುಡಿಪಾಗಿರಿಸಿದ್ದೇನೆ - ಸಾಧ್ವಿ ಪ್ರಜ್ಞಾಸಿಂಗ್‌ಟಾಗೋರ್, ಸಂಸದೆ
ವಿವೇಕಾನಂದರ ಹಿಂದೂ ಧರ್ಮವನ್ನು ನಾಶಗೊಳಿಸುವುದಕ್ಕಾಗಿ ಬದುಕನ್ನು ಮುಡಿಪಾಗಿಟ್ಟಿರಬೇಕು.

---------------------

ನೆಗಡಿ, ಕೆಮ್ಮು, ಜ್ವರ ಬಂದರೆ ಕಡ್ಡಾಯವಾಗಿ ತಪಾಸಣೆ ಮಾಡಿಕೊಳ್ಳಬೇಕು. ನಿರಾಕರಿಸಿದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು - ಶ್ರೀರಾಮುಲು, ಸಚಿವ

ತಪಾಸಣೆಯ ಶುಲ್ಕದ ಕುರಿತಂತೆಯೂ ಕ್ರಮ ತೆಗೆದುಕೊಂಡಿದ್ದರೆ ಚೆನ್ನಾಗಿತ್ತು.

---------------------

ರಾಜ್ಯ ಸರಕಾರಕ್ಕೆ ಸಾಮಾನ್ಯ ಜ್ಞಾನವೂ ಇಲ್ಲ - ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಮುಖಂಡ

ಅಸಾಮಾನ್ಯ ಜ್ಞಾನದ ಪರಿಣಾಮದಿಂದ ರಚನೆಯಾಗಿರುವ ಸರಕಾರವಂತೆ.

---------------------

ನಾನು ಅತೃಪ್ತ ಬಿಜೆಪಿಗರ ಸಭೆ ನಡೆಸಿಲ್ಲ , ನಡೆಸುವುದೂ ಇಲ್ಲ - ಪ್ರಹ್ಲಾದ್‌ಜೋಷಿ, ಕೇಂದ್ರ ಸಚಿವ

ನಿಮ್ಮ ಜೊತೆಗೆ ತೃಪ್ತರಾಗಿರುವ ಬಿಜೆಪಿಗರ ಸಭೆ ನಡೆಸಿದ್ದೀರಿ ಎಂದಾಯಿತು.

---------------------
ಬಿಜೆಪಿಯಲ್ಲಿ ಸಿಎಂ ಆಗಲು 75ವರ್ಷ ವಯಸ್ಸಿನವರೆಗೆ ಅವಕಾಶ ಇದೆ. ಹಾಗಾಗಿ ಒಂದಲ್ಲ ಒಂದು ದಿನ ಸಿಎಂ ಆಗಿಯೇ ಆಗುತ್ತೇನೆ- ಉಮೇಶ್ ಕತ್ತಿ, ಶಾಸಕ

ಕೈಯಲ್ಲಿ ಕತ್ತಿ ಹಿಡಿದು ಕಾಯುತ್ತಿರಿ.

---------------------

ಸೂರ್ಯ ಹುಟ್ಟುವುದು, ಮುಳುಗುವುದು ಎಷ್ಟು ಸತ್ಯವೋ ರಾಜ್ಯದಲ್ಲಿ ಬಿಜೆಪಿ ಸರಕಾರ ಮೂರು ವರ್ಷ ಇರುವುದು ಅಷ್ಟೇ ಸತ್ಯ - ಲಕ್ಷ್ಮಣ ಸವದಿ, ಉಪಮುಖ್ಯಮಂತ್ರಿ
ನಿಮ್ಮ ಪ್ರಕಾರ ಸೂರ್ಯ ಹುಟ್ಟುವುದು, ಮುಳುಗುವುದು ಮೂರು ವರ್ಷ ಮಾತ್ರ ಇರಬೇಕು.

---------------------

ಕೊರೋನ ಸೋಂಕು ತಡೆಗೆ ಪ್ರಕೃತಿ ವಿಕೋಪ ನಿಧಿಯನ್ನು ಬಳಸಿಕೊಳ್ಳಲಾಗುವುದು - ಆರ್.ಅಶೋಕ್, ಸಚಿವ
ಪ್ರಕೃತಿ ವಿಕೋಪಗಳಿಗೆ ಇನ್ನೂ ಪರಿಹಾರ ನೀಡಿಯೇ ಇಲ್ಲವಲ್ಲ?

---------------------

ದೇಶದ ಯಾವುದೇ ಕಾನೂನನ್ನು ವಿರೋಧಿಸುವ ಮತ್ತು ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇದೆ - ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ 

ಆದರೆ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಹಕ್ಕುಗಳಿಗೆ ವಿನಾಯಿತಿ ಇದೆ.

---------------------

ಸಂಸತ್‌ನಲ್ಲಿ ಸ್ವತಂತ್ರವಾಗಿ ಧ್ವನಿ ಎತ್ತುವ ಶಕ್ತಿಯನ್ನು ದೇವರು ನನಗೆ ನೀಡಲಿ - ರಂಜನ್ ಗೊಗೊಯಿ, ಭಾರತದ ಮಾಜಿ ಸಿಜೆಐ

ನ್ಯಾಯಾಧೀಶರಾಗಿ ಸ್ವತಂತ್ರವಾಗಿ ಧ್ವನಿಯೆತ್ತಲಾಗದೇ ಇದ್ದುದಕ್ಕೆ ದೇವರು ಕಾರಣ ಎಂಬ ಸ್ಪಷ್ಟೀಕರಣವಿರಬೇಕು.

---------------------

ಡಿಕೆಶಿ, ಸಿದ್ದು ಒಂದಾದರೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ - ಕೆ.ಬಿ.ಕೋಳಿವಾಡ, ಮಾಜಿ ಸ್ಪೀಕರ್
ಉಳಿದ ಶಾಸಕರು ಬಿಜೆಪಿಗೆ ಮಾರಾಟವಾದರೆ?
---------------------

ಪ್ರಾದೇಶಿಕ ಪಕ್ಷಗಳು ಉಳಿಯಬೇಕಾದರೆ ಕುಟುಂಬ ರಾಜಕಾರಣ ಅನಿವಾರ್ಯ - ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

ಕುಟುಂಬ ರಾಜಕಾರಣ ಉಳಿಸುವುದಕ್ಕಾಗಿ ಪ್ರಾದೇಶಿಕ ಪಕ್ಷಗಳು ಅನಿವಾರ್ಯ.

---------------------

ಬ್ರಾಹ್ಮಣರು ಯಾರ ಶತ್ರುಗಳಲ್ಲ - ಆರ್.ವಿ.ದೇಶಪಾಂಡೆ, ಕಾಂಗ್ರೆಸ್ ಮುಖಂಡ

ಅವರು ಸಮಯಕ್ಕೆ ತಕ್ಕ ಹಾಗೆ ಶತ್ರು, ಮಿತ್ರರನ್ನು ಆರಿಸಿಕೊಳ್ಳುತ್ತಾರೆ.

---------------------

ಹಲ್ಲಿಲ್ಲದ ಹಾವಿನಂತೆ ದುರ್ಬಲವಾಗಿರುವ ಕರ್ನಾಟಕ ಲೋಕಾಯುಕ್ತವನ್ನು ಬಲಪಡಿಸಲು ಸಮಗ್ರ ಕಾಯ್ದೆ ತಿದ್ದುಪಡಿ ಅಗತ್ಯ - ಕೆ.ಆರ್.ರಮೇಶ್‌ಕುಮಾರ್, ಮಾಜಿ ಸ್ಪೀಕರ್
ರಬ್ಬರ್ ಹಾವಿಗೆ ಹಲ್ಲು ಜೋಡಿಸಿದರೆ ಪ್ರಯೋಜನವಿದೆಯೇ?

---------------------

2021ರ ತಮಿಳುನಾಡು ವಿಧಾನ ಸಭೆ ಚುನಾವಣೆಯಲ್ಲಿ ರಾಜಕೀಯ ಸುನಾಮಿ ಉಂಟಾಗಲಿದೆ - ರಜನಿಕಾಂತ್, ನಟ

ಆ ಸುನಾಮಿಯಲ್ಲಿ ನಿಮ್ಮ ವಿಗ್ ಹಾರಿ ಹೋಗದಂತೆ ಕಾಪಾಡಿಕೊಳ್ಳಿ.

---------------------

ಹಾದಿ ಬೀದಿಗಳಲ್ಲಿ ನಿಂತು ಮಾತನಾಡಿದರೆ ಸಂವಿಧಾನ ಬದಲಾವಣೆ ಮಾಡಲು ಆಗುವುದಿಲ್ಲ - ಗೋವಿಂದ ಕಾರಜೋಳ, ಉಪಮುಖ್ಯಮಂತ್ರಿ

ಸಂವಿಧಾನ ಬದಲಾಯಿಸುವವರು ಇದೀಗ ಸಂಸತ್ತಿನಲ್ಲೇ ಮಾತನಾಡುತ್ತಿದ್ದಾರೆ.

---------------------

ಜಗತ್ತನ್ನೇ ಸ್ತಬ್ಧಗೊಳಿಸಿರುವ ಕೊರೋನ ವೈರಸ್ ಚೀನಾದ ವೈರಸ್ ಆಗಿದೆ - ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ

ಚೀನಾದ ಉತ್ಪನ್ನಗಳ ವ್ಯಾಲಿಡಿಟಿ ತೀರಾ ಕಡಿಮೆ ಎನ್ನುವ ಕಾರಣಕ್ಕೇ ಜಗತ್ತು ಇನ್ನೂ ಒಂದಿಷ್ಟು ಆಸೆ ಉಳಿಸಿಕೊಂಡಿದೆ.

---------------------

ಕೇಂದ್ರ ಸರಕಾರ ಮಾಡಿದ್ದು( ಅನುದಾನ ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯ) ಸದುದ್ದೇಶದ ಅನ್ಯಾಯ - ಸಿ.ಟಿ.ರವಿ, ಸಚಿವ

ಮೋದಿಯವರು ಅನ್ಯಾಯ ಮಾಡಿದರೂ ಅದರಲ್ಲಿ ಸದುದ್ದೇಶ ಇರುತ್ತದೆ ಎಂದಾಯಿತು.

---------------------

ಕೊರೋನ ವಿರುದ್ಧದ ಹೋರಾಟ ‘ಟೆಸ್ಟ್’ ಕ್ರಿಕೆಟ್ ಇದ್ದಂತೆ - ಸಚಿನ್ ತೆಂಡುಲ್ಕರ್, ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ

ಸದ್ಯಕ್ಕೆ ಕ್ರಿಕೆಟ್ ತಾರೆಯರೂ ಕೊರೋನ ಟೆಸ್ಟ್ ಮಾಡಿಸಬೇಕಾಗಿದೆ.

---------------------

ಕಾಂಗ್ರೆಸ್‌ನಲ್ಲಿ ಯಾರೂ ಹೆಚ್ಚಲ್ಲ , ಯಾರೂ ಕಡಿಮೆ ಅಲ್ಲ, ಎಲ್ಲರೂ ಸಮಾನರು - ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಅಧ್ಯಕ್ಷ

ಅಧಿಕಾರ ಹಂಚುವಾಗ ಮಾತ್ರ ಕೆಲವು ಹೆಚ್ಚು ಸಮಾನರು.

---------------------

ಕಾಂಗ್ರೆಸ್ ಸರಕಾರ (ಮಧ್ಯಪ್ರದೇಶ) ಪತನವಾಗಿರುವುದಕ್ಕೆ ಅದರ ಆಂತರಿಕ ಕಚ್ಚಾಟವೇ ಕಾರಣ - ಶಿವರಾಜ್‌ಸಿಂಗ್ ಚೌಹಾಣ್, ಮ.ಪ್ರ. ಮಾಜಿ ಮುಖ್ಯಮಂತ್ರಿ ಕೊರೋನ ಕಾರಣ ಎನ್ನಲಿಲ್ಲವಲ್ಲ, ಸದ್ಯಕ್ಕೆ.

---------------------

ಮಹಿಳೆಯ ಗೌರವವನ್ನು ಖಾತರಿಪಡಿಸಿಕೊಳ್ಳುವುದು ಅತ್ಯಂತ ಮಹತ್ವದ ಕೆಲಸ - ನರೇಂದ್ರಮೋದಿ, ಪ್ರಧಾನಿ

ಪತಿಯಿಂದ ಪರಿತ್ಯಜಿಸಲ್ಪಟ್ಟ ಮಹಿಳೆಯೊಬ್ಬರು ಗುಜರಾತ್‌ನಲ್ಲಿ ಆ ಗೌರವದ ಖಾತರಿಯಲ್ಲಿದ್ದಾರೆ.

---------------------

ಯೋಗ, ಧ್ಯಾನದಿಂದ ನಾನು ದೈಹಿಕ ಹಾಗೂ ಮಾನಸಿಕವಾಗಿ ಫಿಟ್ ಇದ್ದೇನೆ - ವಿದ್ಯಾಬಾಲನ್, ನಟಿ
ಗೋಮೂತ್ರವನ್ನು ಯಾಕೆ ಕೈ ಬಿಟ್ಟಿರಿ?

---------------------

ಸದ್ಯದ ಸ್ಥಿತಿಯಲ್ಲಿ ಯಾರೂ ಕೋಳಿ, ಕುರಿ, ಮೀನು, ಮೊಟ್ಟೆ ಸೇರಿದಂತೆ ಮಾಂಸಾಹಾರ ಸಂಪೂರ್ಣ ತ್ಯಜಿಸಬೇಕು - ಕೆ.ಎಸ್. ಈಶ್ವರಪ್ಪ, ಸಚಿವ

ಗೋಮೂತ್ರ ಕುಡಿದು, ಸೆಗಣಿ ತಿಂದು ಬದುಕಬೇಕೇ?

share
ಪಿ.ಎ.ರೈ
ಪಿ.ಎ.ರೈ
Next Story
X