ಶಿವರಾಜ್ ಸಿಂಗ್ ಚೌಹಾಣ್ ಪ್ರಮಾಣವಚನ: ಪ್ರಧಾನಿಯ ಸೂಚನೆಯನ್ನೇ ಮರೆತ ಬಿಜೆಪಿ ಶಾಸಕರು!
ಕೊರೋನ ವೈರಸ್ ಭೀತಿಯ ನಡುವೆ ಬಿಜೆಪಿ ನಾಯಕರ ಅಸಡ್ಡೆ
ಭೋಪಾಲ್: ಕೊರೋನ ವೈರಸ್ ಸೋಂಕು ಹರಡುವಿಕೆಯ ವಿರುದ್ಧ ಎಚ್ಚರಿಕೆಯ ಕ್ರಮವಾಗಿ ಸೋಶಿಯಲ್ ಡಿಸ್ಟೆನ್ಸಿಂಗ್ (ಸಾಮಾಜಿಕ ಅಂತರ) ಕಾಪಾಡಿಕೊಳ್ಳುವಂತೆ ಸೂಚಿಸಲಾಗಿದೆಯಾದರೂ ಮಧ್ಯ ಪ್ರದೇಶದ ಮುಖ್ಯಮಂತ್ರಿಯಾಗಿ ಶಿವರಾಜ್ ಸಿಂಗ್ ಚೌಹಾಣ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಈ ಸೋಶಿಯಲ್ ಡಿಸ್ಟೆನ್ಸಿಂಗ್ ನಿಯಮವನ್ನು ಬಿಜೆಪಿ ನಾಯಕರು ಸುಲಭವಾಗಿ ಗಾಳಿಗೆ ತೂರಿದ್ದಾರೆ.
ಚೌಹಾಣ್ ಪ್ರಮಾಣವಚನ ಸ್ವೀಕರಿಸಿದ ನಂತರ ರಾಜ್ಯಪಾಲರು ಅವರ ಕೈಕುಲುಕಿದ ವೀಡಿಯೋ ಕೂಡ ಹರಿದಾಡುತ್ತಿದ್ದು, ಕೊರೋನ ಮುನ್ನೆಚ್ಚರಿಕೆಯನ್ನು ಮರೆತೇ ಬಿಟ್ಟರೇನೋ ಎಂಬಂತಿದೆ. ಸಮಾರಂಭದಲ್ಲಿ ಎಲ್ಲಾ ಬಿಜೆಪಿ ಶಾಸಕರೂ ಒಬ್ಬರ ಕೈಗಳನ್ನು ಒಬ್ಬರು ಹಿಡಿದು ಕೈ ಮೇಲಕ್ಕೆತ್ತಿದ ಫೋಟೋ ಕೂಡ ವೈರಲ್ ಆಗುತ್ತಿದೆ. ಈ ಎಲ್ಲಾ ಜನಪ್ರತಿನಿಧಿಗಳು ಕೊರೋನಾ ಬಗ್ಗೆ ಆತಂಕವನ್ನೇ ಹೊಂದಿಲ್ಲವೇ ಎಂಬ ಪ್ರಶ್ನೆಯೂ ಮೂಡಿದೆ.
ಇಪ್ಪತ್ತೆರಡು ಮಂದಿ ಮಾಜಿ ಕಾಂಗ್ರೆಸ್ ಶಾಸಕರು ಮಾರ್ಚ್ 21ರಂದು ಬಿಜೆಪಿಗೆ ಸೇರಿದ ಸಂದರ್ಭದ ಫೋಟೋಗಳನ್ನೂ ಬಿಜೆಪಿ ಪೋಸ್ಟ್ ಮಾಡಿದ್ದು ಎಲ್ಲರೂ ಜತೆಯಾಗಿ ನಿಂತ ಫೋಟೋ ಕೂಡ ಇದೆ. ಸೋಶಿಯಲ್ ಡಿಸ್ಟೆನ್ಸಿಂಗ್ ಕಾಪಾಡುವಂತೆ ಪ್ರಧಾನಿ ಮೋದಿ ಮಾಡಿದ ಮನವಿಯನ್ನು ಸ್ವಪಕ್ಷೀಯರೇ ಏಕೆ ಪುರಸ್ಕರಿಸಿಲ್ಲ ಎಂದು ಟ್ವಿಟ್ಟರಿಗರು ಪ್ರಶ್ನಿಸುತ್ತಿದ್ದಾರೆ.
Why so much crowd? What about social distancing??
— सत्यव्रत ओझा (@satyavrat_ojha) March 24, 2020
Keep social distancing
— CA ALKESH KASLIWAL (@CAALKESHKASLIWA) March 24, 2020
Good Massage Given By Our Responsible Personal For Maintaining Social Distance
— Prakash Modi (@prakash_modi) March 24, 2020
Can the celebrations be postponed, such gatherings stopped and photo sessions forgotten, can the Aam Janata & the available medical facilities be looked over in MP.
— kisholay Sharma (@KisholaySharma) March 24, 2020
It looks like Covidiots are unaware of the situation. @JPNadda @PMOIndia
श्री शिवराज सिंह चौहान ने राजभवन में मुख्यमंत्री पद की शपथ ली। pic.twitter.com/gz24XJkUfr
— BJP MadhyaPradesh (@BJP4MP) March 23, 2020