ಛತ್ತೀಸ್ಗಢ: ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿ ಆತ್ಮಹತ್ಯೆಗೆ ಶರಣು
ಧಮ್ತಾರಿ,ಮಾ.31: ತಮಿಳುನಾಡಿನಿಂದ ಇತ್ತೀಚಿಗಷ್ಟೇ ಸ್ವಗ್ರಾಮಕ್ಕೆ ಮರಳಿದ್ದ ಛತ್ತೀಸ್ಗಡದ ಧಮ್ತಾರಿಯ ತಾಗಾಪಾನಿಯ 35ರ ಹರೆಯದ ನಿವಾಸಿಯೋರ್ವ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈತನನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು ಮನೆಯಲ್ಲಿಯೇ ನಿರ್ಬಂಧದಲ್ಲಿರಿಸಿದ್ದರು.
ಮೃತವ್ಯಕ್ತಿಯಲ್ಲಿ ಕೊರೋನ ವೈರಸ್ನ ಲಕ್ಷಣಗಳಿರಲಿಲ್ಲ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ವರ್ಷದ ಹಿಂದೆ ತನ್ನ ಪತ್ನಿ ಮತ್ತು ಮಗುವನ್ನು ಕಳೆದುಕೊಂಡ ಬಳಿಕ ಖಿನ್ನತೆಗೊಳಗಾಗಿದ್ದ. ಈತ ಹಿಂದೆ ಬೆಂಗಳೂರಿನಲ್ಲಿ ಕೆಲಸದಲ್ಲಿದ್ದ ಎಂದು ಎಎಸ್ಪಿ ಮನಿಷಾ ಠಾಕೂರ್ ತಿಳಿಸಿದರು.
Next Story