Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಮದುವೆ ಮುಂದೂಡಿ ಕೊರೋನ ಪೀಡಿತರ...

ಮದುವೆ ಮುಂದೂಡಿ ಕೊರೋನ ಪೀಡಿತರ ಚಿಕಿತ್ಸೆಯಲ್ಲಿ ನಿರತ ಯುವ ವೈದ್ಯೆ ಡಾ. ಶಿಫಾ

ವಾರ್ತಾಭಾರತಿವಾರ್ತಾಭಾರತಿ1 April 2020 4:27 PM IST
share
ಮದುವೆ ಮುಂದೂಡಿ ಕೊರೋನ ಪೀಡಿತರ ಚಿಕಿತ್ಸೆಯಲ್ಲಿ ನಿರತ ಯುವ ವೈದ್ಯೆ  ಡಾ. ಶಿಫಾ

ತಿರುವನಂತಪುರಂ, ಎ 1 : ತನ್ನ ಮದುವೆಯನ್ನು ಮುಂದೂಡಿ ಕೊರೋನ ಪೀಡಿತರಿಗೆ ಚಿಕಿತ್ಸೆ ನೀಡುವುದರಲ್ಲಿ ನಿರತರಾಗಿರುವ ಯುವ ವೈದ್ಯೆಯೊಬ್ಬರನ್ನು ಇಡೀ ಕೇರಳ ಕೊಂಡಾಡುತ್ತಿದೆ. 

ಕಣ್ಣೂರಿನ ಪೆರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯ ಐಸೋಲೇಷನ್ ವಾರ್ಡ್ ನಲ್ಲಿ ಸೇವಾ ನಿರತರಾಗಿರುವ 23 ವರ್ಷದ ಹೌಸ್ ಸರ್ಜನ್ ಡಾ. ಶಿಫಾ ಎಂ ಮೊಹಮ್ಮದ್ ಅವರೇ ಆ ಕಿರಿಯ ವೈದ್ಯೆ. 

ಡಾ. ಶಿಫಾ ಮಾರ್ಚ್ 29ರಂದು ದುಬೈ ಮೂಲದ ಯುವ ಉದ್ಯಮಿಯೊಬ್ಬರನ್ನು ವರಿಸಬೇಕಾಗಿತ್ತು. ಮದುವೆಗೆ ಎಲ್ಲ ತಯಾರಿ ನಡೆದಿತ್ತು. ಆದರೆ ಆ ನಡುವೆ ಕೊರೋನ ಮಾರಿ ರಾಜ್ಯವನ್ನು ಆಕ್ರಮಿಸಿಕೊಂಡು ಬಿಟ್ಟಿದೆ. ಈ ಹೊತ್ತಲ್ಲಿ ಮದುಮಗಳ ಅಲಂಕಾರದಲ್ಲಿ ಮಿಂಚುತ್ತಿರಬೇಕಾಗಿದ್ದ ಡಾ. ಶಿಫಾ ಈಗ ಕೊರೊನ ಚಿಕಿತ್ಸೆ ನೀಡುವ ವೈದ್ಯರು ಹಾಕಿಕೊಳ್ಳುವ ವಿಶೇಷ ಪೆರ್ಸನಲ್ ಪ್ರೊಟೆಕ್ಷನ್ ಇಕ್ವಿಪ್ಮೆಂಟ್ ಧರಿಸಿಕೊಂಡು ಆಸ್ಪತ್ರೆಯಲ್ಲಿ ಬಿಡುವಿಲ್ಲದ ಸೇವೆಯಲ್ಲಿ ನಿರತರಾಗಿದ್ದಾರೆ. 

"ಮದುವೆಯನ್ನು ಮುಂದೂಡಬಹುದು. ಆದರೆ ಕಾಯಿಲೆ ಬಿದ್ದವರ ಚಿಕಿತ್ಸೆಯನ್ನಲ್ಲ. ಹಾಗಾಗಿ ನನ್ನ ಮದುಮಗ ಹಾಗು ಅವರ ಮನೆಯವರಿಗೆ ವಿಷಯ ತಿಳಿಸಿದ ಕೂಡಲೇ ಅವರು ತಕ್ಷಣ ಒಪ್ಪಿಗೆ ನೀಡಿದರು" ಎಂದು ಡಾ. ಶಿಫಾ ಹೇಳಿದ್ದಾರೆ. 

"ಪ್ರತಿ ಯುವತಿಗೆ ಆಕೆಯ ಮದುವೆ ಬಹಳ ಮುಖ್ಯವಾದುದು. ಆದರೆ ನನ್ನ ಮಗಳು ಆಕೆಯ ವೈಯಕ್ತಿಕ ಸುಖಕ್ಕಿಂತ ಸಾಮಾಜಿಕ ಜವಾಬ್ದಾರಿಗೆ ಆದ್ಯತೆ ನೀಡಿದ್ದಾಳೆ. ಆಕೆ ತನ್ನ ಮದುವೆಯನ್ನು ಮುಂದೂಡುವ ಬಗ್ಗೆ ಹೇಳಿದಾಗ ನಾವೆಲ್ಲರೂ ಒಪ್ಪಿಗೆ ಕೊಟ್ಟೆವು" ಎಂದು ಡಾ. ಶಿಫಾ ಅವರ ತಂದೆ ಹಾಗು ಕ್ಯಾಲಿಕಟ್ ಎಲ್ಡಿಎಫ್ ಜಿಲ್ಲಾ ಸಂಚಾಲಕ ಮುಕ್ಕಮ್ ಮೊಹಮ್ಮದ್ ಹೇಳಿದ್ದಾರೆ. 

"ನಮ್ಮ ವರ ಅನಸ್ ಮೊಹಮ್ಮದ್ ಕೂಡ ತಕ್ಷಣ ಒಪ್ಪಿಗೆ ನೀಡಿದ್ದಾರೆ. ನಾನು ಸಮಾಜ ಸೇವಕ. ನನ್ನ ಪತ್ನಿ ಶಿಕ್ಷಕಿ. ಹಾಗಾಗಿ ನನ್ನ ಮಗಳೂ ಸಮಾಜ ಸೇವಾ ಮನೋಭಾವ ತೋರಿಸಿರುವುದು ಸಂತಸ ತಂದಿದೆ" ಎಂದು ಮೊಹಮ್ಮದ್ ಹೇಳಿದ್ದಾರೆ. ಅವರ ದೊಡ್ಡ ಮಗಳೂ ವೈದ್ಯರಾಗಿದ್ದು ಕ್ಯಾಲಿಕಟ್ ಮೆಡಿಕಲ್ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 

ಡಾ. ಶಿಫಾ ಅವರನ್ನು ಮಾಧ್ಯಮಗಳು ಮಾತನಾಡಿಸಿದಾಗ ಮೊದಲು ಈ ಬಗ್ಗೆ ಹೇಳಲು ನಿರಾಕರಿಸಿದ ಆಕೆ ಬಳಿಕ "ನಾನು ಮಾಡುತ್ತಿರುವುದು ತೀರಾ ಅಸಾಮಾನ್ಯವೇನಲ್ಲ. ನಾನು ನನ್ನ ಕರ್ತವ್ಯ ನಿರ್ವಹಿಸಿದ್ದೇನೆ ಅಷ್ಟೇ. ನನ್ನ ಹಾಗೆ ತಮ್ಮ ವೈಯಕ್ತಿಕ ಕೆಲಸಗಳನ್ನು ಮುಂದೂಡಿದವರು ಬಹಳಷ್ಟು ಜನ ಇದ್ದಾರೆ. ನಾನೂ ಅವರ ಪೈಕಿ ಒಬ್ಬಳು ಅಷ್ಟೇ. ನನ್ನ ಮದುವೆ ದಿನ ನಾನು ವಿಶೇಷ ಸುರಕ್ಷತಾ ಉಡುಗೆ ಧರಿಸಿ ಆಸ್ಪತ್ರೆಯಲ್ಲಿದ್ದೆ. ಅದು ನಾನು ಈವರೆಗೆ ಧರಿಸಿದ ಅತ್ಯುತ್ತಮ ಉಡುಗೆ ಎಂದು ನನ್ನ ಮಿತ್ರರು ತಮಾಷೆ ಮಾಡಿದ್ದರು" ಎಂದು ಹೇಳಿದ್ದಾರೆ. 

ಅಂದ ಹಾಗೆ ಶಿಫಾ ಎಂಬ ಉರ್ದು ಪದದ ಅರ್ಥ 'ಗುಣಪಡಿಸುವುದು' ಎಂದು. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X