Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಕೊರೋನ ಹೆಸರಲ್ಲಿ ಮುಸ್ಲಿಮರನ್ನು...

ಕೊರೋನ ಹೆಸರಲ್ಲಿ ಮುಸ್ಲಿಮರನ್ನು ಟಾರ್ಗೆಟ್ ಮಾಡುವ ಷಡ್ಯಂತ್ರ: ಎಸ್‌ವೈಎಸ್ ಆರೋಪ

ವಾರ್ತಾಭಾರತಿವಾರ್ತಾಭಾರತಿ1 April 2020 10:34 PM IST
share

ಮಂಗಳೂರು, ಎ.1: ಜಗತ್ತು ಮಹಾಮಾರಿ ಕೊರೋನ ವಿರುದ್ಧ ಹೋರಾಡುತ್ತಿದ್ದರೆ ತಲೆಯಲ್ಲಿ ವಿಷವನ್ನು ಮಾತ್ರ ತುಂಬಿಕೊಂಡಿರುವ ಮತೀಯ ಕ್ಷುದ್ರ ಜೀವಿಗಳು ವೈರಸನ್ನು ಮತಾಂತರಗೊಳಿಸಿ ವಿಕೃತಿ ಮೆರೆಯುತ್ತಿದೆ. ತಬ್ಲೀಗ್ ಜಮಾಅತ್ ಬಗ್ಗೆ ಸೈದ್ಧಾಂತಿಕ ಭಿನ್ನತೆ ಇದ್ದರೂ ಕೂಡ ಮರ್ಕಝ್ ನಿಝಾಮುದ್ದೀನ್ ಸಂಸ್ಥೆಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವನ್ನು ಗುರಿಯಾಗಿಸಿಕೊಂಡು ಇಡೀ ದೇಶದಲ್ಲಿ ರೋಗ ಹರಡಿದ ಕೇಂದ್ರ ಮರ್ಕಝ್ ಎಂಬಂತೆ ಚಿತ್ರೀಕರಣ ಮಾಡುವ ಮಾಧ್ಯಮ ಮತ್ತು ಇಸ್ಲಾಮ್ ಧರ್ಮದ ವಿರುದ್ಧ ಕೆಟ್ಟ ಮನಸ್ಥಿತಿ ಹೊಂದಿದವರ ಬಗ್ಗೆ ಸಮುದಾಯ ಎಚ್ಚರಿಕೆ ವಹಿಸಬೇಕಾಗುತ್ತದೆ. ಕೊರೋನ ಹೆಸರಲ್ಲಿ ಮುಸ್ಲಿಮರನ್ನು ಟಾರ್ಗೆಟ್ ಮಾಡುವ ಷಡ್ಯಂತ್ರದ ವಿರುದ್ಧ ಹೋರಾಟ ಮಾಡುವ ಅಗತ್ಯವಿದೆ ಎಂದು ಎಸ್‌ವೈಎಸ್ ದ.ಕ.ಜಿಲ್ಲಾಧ್ಯಕ್ಷ ಯುಕೆ ಅಬ್ದುಲ್ ಅಝೀಝ್ ದಾರಿಮಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮರ್ಕಝ್‌ನಲ್ಲಿ ನಡೆಯುವ ಕಾರ್ಯಕ್ರಮಕ್ಕೆ 100 ವರ್ಷಗಳ ಇತಿಹಾಸವಿದೆ. ದೇಶ ವಿದೇಶಗಳಿಂದ ತಬ್ಲೀಗ್ ಕಾರ್ಯಕರ್ತರು ಅಲ್ಲಿ ಸೇರುತ್ತಾರೆ. ಎಲ್ಲವೂ ದೇಶದ ಕಾನೂನಿನ ಚೌಕಟ್ಟನ್ನು ಪಾಲಿಸಿ ನಡೆಸಲಾಗುತ್ತದೆ. ವಿದೇಶಗಳಿಂದ ನುಸುಳುಕೋರರಾಗಿ ಯಾರೂ ಬಂದು ಅಲ್ಲಿ ಸೇರಿದವರಲ್ಲ. ಹಾಗೇ ಅಕ್ರಮ ಚಡುವಟಿಕೆಗಳು ಯಾವುದೂ ಅಲ್ಲಿಂದ ವರದಿಯಾಗಿಲ್ಲ. ಮಾ.13ರಿಂದ 15ರ ತನಕ ಅಲ್ಲಿ ಕಾರ್ಯಕ್ರಮ ನಡೆದಿರುತ್ತದೆ. ದೇಶದಲ್ಲಿ ಕೊರೋನದ ತೊಂದರೆ ಇಲ್ಲಾ ಎಂದು ಮಾ.13ರಂದು ದೇಶದ ಆರೋಗ್ಯ ಇಲಾಖೆಯು ಪ್ರಕಟನೆ ಹೊರಡಿಸುತ್ತದೆ. ಆದರೆ ದೇಶದಲ್ಲಿ ಕರ್ಫ್ಯೂ ಜಾರಿಗೆ ಬರುವುದು ಮಾ.22ರಂದು. ಹಾಗಾಗಿ ವಿದೇಶಿಯರು ಅವರ ದೇಶಕ್ಕೆ ಹೊಗಲು ಸಾಧ್ಯವಾಗದೆ ದೆಹಲಿಯಲ್ಲೇ ಉಳಿಯಬೇಕಾಯಿತು. ಕರ್ಫ್ಯೂ ಘೋಷಣೆ ಆದ ಬಳಿಕ ಮಾ.25ರಂದೇ ಆರೋಗ್ಯ ಇಲಾಖೆಯವರಿಂದ ಸಂಪೂರ್ಣ ತಪಾಸಣೆಗೆ ಅವರೆಲ್ಲರೂ ಒಳಪಡುತ್ತಾರೆ. ಹಲವರು ಕ್ವಾರಂಟೈನ್‌ನಲ್ಲಿ ನಿರ್ಬಂಧಕ್ಕೆ ಒಳಗಾಗಿದ್ದಾರೆ. ಯಾರೂ ತುರ್ತುಸ್ಥಿತಿಯಲ್ಲಿ ಕಾನೂನನ್ನು ಉಲ್ಲಂಘಿಸಲು ಮುಂದಾಗಿಲ್ಲ. ಆದರೂ ಅವರಲ್ಲಿ ಅನೇಕ ಮಂದಿ ವೈರಸಿಗೆ ಬಲಿಯಾಗಿರೋದು ನಿಜ. ಹಾಗಂತ ಅವರನ್ನು ಅಪರಾಧಿಗಳಾಗಿ ಕಾಣುವುದು ಎಷ್ಟು ಸರಿ ಎಂದು ಅಝೀಝ್ ದಾರಿಮಿ ಪ್ರಶ್ನಿಸಿದ್ದಾರೆ.

 ಮಾ.15ರವರೆಗೆ ಸಿದ್ದಿವಿನಾಯಕ ಮಹಾಲಿಂಗೇಶ್ವರ ದೇವಸ್ಥಾನ ತೆರೆದುಕೊಂಡಿತ್ತು. 16ರ ತನಕ ಶಿರಡಿ ಕ್ಷೇತ್ರ ತೆರೆದಿತ್ತು. 17ರ ತನಕ ವೈಷ್ಣೋದೇವಿ ದೇವಸ್ಥಾನವೂ ಭಕ್ತರಿಂದ ತುಂಬಿತ್ತು. 20ರ ತನಕ ಕಾಶಿ ವಿಶ್ವನಾಥ ಕ್ಷೇತ್ರವೂ ತೆರೆದಿತ್ತು. ಜನತಾ ಕರ್ಫ್ಯೂ ಬಳಿಕ ಅಯೋಧ್ಯೆಯಲ್ಲಿ ವಿಶೇಷ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು. ಗೋಮೂತ್ರ ಪಾರ್ಟಿಯೂ ನಡೆದಿತ್ತು. ವಸ್ತುಸ್ಥಿತಿ ಹೀಗಿದ್ದರೂ ಕೂಡಾ ದೆಹಲಿಯಲ್ಲಿ ಮಾ.15ರ ತನಕ ನಡೆದ ಕಾರ್ಯಕ್ರಮ ಅಪರಾಧವಾಗುತ್ತದೆ ಎನ್ನುವುದು ವಿಪರ್ಯಾಸವಾಗಿದೆ. ದೇಶದಲ್ಲಿ ನಡೆಯುವ ಪ್ರತಿಯೊಂದು ಘಟನೆಯನ್ನು ಮತೀಯ ದ್ವೇಷದ ಮಾಪನದಲ್ಲಿ ಅಳತೆ ಮಾಡುವುದು ಮಾಧ್ಯಮ ವರ್ಗದ ಕಸುಬಾಗಿ ಬಿಟ್ಟಿರುವುದು ಖಂಡನೀಯ. ಕೊರೋನವನ್ನು ಇಸ್ಲಾಮೀಕರಣ ಮಾಡಿ ಮುಸ್ಲಿಮರನ್ನು ಟಾರ್ಗೆಟ್ ಮಾಡುವ ಷಡ್ಯಂತ್ರದ ವಿರುದ್ಧ ಹೋರಾಟ ಮಾಡುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X