ಶೆಲ್ಟರ್ ರೂಂಗಳಿಗೆ ತಪಾಸಣಾಧಿಕಾರಿಗಳ ನೇಮಕ: ಉಡುಪಿ ಡಿಸಿ
ಉಡುಪಿ, ಎ. 5: ಕೋವಿಡ್-19 ನಿಯಂತ್ರಣದ ಅಂಗವಾಗಿ ಜಿಲ್ಲೆಯಲ್ಲಿ ರುವ ಕೂಲಿ ಕಾರ್ಮಿಕರಿಗೆ, ವಲಸೆ ಕಾರ್ಮಿಕರಿಗೆ ಹಾಗೂ ವಿವಿಧೆಡೆಯಲ್ಲಿ ನೆಲೆ ಇಲ್ಲದೆ ಜಿಲ್ಲೆಗೆ ಆಗಮಿಸಿರುವ ಕೂಲಿ ಕಾರ್ಮಿಕರು ಹಾಗೂ ವಲಸೆ ಕಾರ್ಮಿಕರಿಗೆ ತಂಗಲು ಹಾಗೂ ಊಟೋಪಚಾರ ಒದಗಿಸುವ ಸಲು ವಾಗಿ ಜಿಲ್ಲಾಡಳಿತ ವತಿಯಿಂದ ಈಗಾಗಲೇ ಬೈಂದೂರು, ಉಡುಪಿ, ಬ್ರಹ್ಮಾವರ, ಕಾಪು, ಕುಂದಾಪುರ, ಕಾರ್ಕಳ ತಾಲೂಕು ಕೇಂದ್ರಗಳಲ್ಲಿ ಶೆಲ್ಟರ್ ರೂಂಗಳನ್ನು ತೆರೆದು ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದೆ.
ಈ ಶೆಲ್ಟರ್ ರೂಂಗಳಲ್ಲಿ ಕೂಲಿ ಕಾರ್ಮಿಕರಿಗೆ ಮತ್ತು ವಲಸೆ ಕಾರ್ಮಿಕರಿಗೆ ಸರಿಯಾದ ರೀತಿಯಲ್ಲಿ ವಸತಿ ಮತ್ತು ಊಟೋಪಚಾರ ವ್ಯವಸ್ಥೆ ಮಾಡಲಾಗಿ ರುವ ಬಗ್ಗೆ ಪರಿಶೀಲಿಸಿ ವರದಿ ನೀಡಲು ತಪಾಸಣಾ ಅಧಿಕಾರಿಗಳನ್ನು ನೇಮಿಸಿ ಜಿಲ್ಲಾಧಿಕಾರಿ ಜಿ.ಜಗದೀಶ್ ಆದೇಶಿಸಿದ್ದಾರೆ.
ಈ ಅಧಿಕಾರಿಗಳು ತಹಶೀಲ್ದಾರ್ಗಳು ಹಾಗೂ ಉಡುಪಿ ನಗರಸಭೆಯ ಆಯುಕ್ತರ ಸಮನ್ವಯದೊಂದಿಗೆ ಶೆಲ್ಟರ್ ರೂಂಗಳನ್ನು ಚೆಕ್ಲಿಸ್ಟ್ ಪ್ರಕಾರ ತಪಾಸಣೆ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ. ಶೆಲ್ಟರ್ ರೂಂ ಪರಿಶೀಲನೆಯ ಜಿಲ್ಲಾಮಟ್ಟದ ನೋಡೆಲ್ ಅಧಿಕಾರಿಯನ್ನಾಗಿ ಚುನಾವಣಾ ತಹಶೀಲ್ದಾರ್ ಆನಂದಪ್ಪ ನಾಯ್ಕಾ(ಮೊ- 9901531594) ಇವರನ್ನು ನೇಮಿಸಲಾಗಿದೆ.





