Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...

ಓ ಮೆಣಸೇ...

ಪಿ.ಎ.ರೈಪಿ.ಎ.ರೈ5 April 2020 11:14 PM IST
share
ಓ ಮೆಣಸೇ...

ಹಸಿವಿನ ಭಯ ಮರಣಕ್ಕಿಂತಲೂ ಭೀಕರವಾದುದು -ರವಿಶಂಕರ್ ಗುರೂಜಿ, ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ
ಹಸಿವಿನಿಂದ ಬದುಕುವ ಕಲೆಯನ್ನು ಕಲಿಸಿ ಕೊಡುವ ಯೋಜನೆ ಇದೆಯೇ?

--------------------------------------

ಲಾಕ್‌ಡೌನ್‌ನಿಂದ ಮದ್ಯಸಿಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ವ್ಯಸನಿಗಳ ಬೇಡಿಕೆಯಂತೆ ಮದ್ಯಪೂರೈಸುವುದು ಕಷ್ಟ -ಕೋಟ ಶ್ರೀನಿವಾಸ ಪೂಜಾರಿ, ಸಚಿವ
ಆಹಾರ ಸಿಗದೇ ಸಾವಿಗೀಡಾಗುತ್ತಿರುವವರ ಗತಿಯೇನು?

--------------------------------------
ಕೊರೋನ ವೈರಸ್‌ಗಿಂತ ಹೆಚ್ಚು ಜನರು ಅದರ ಆತಂಕದಿಂದಲೇ ಸಾಯುತ್ತಿದ್ದಾರೆ -ನ್ಯಾ.ಎಸ್.ಎ.ಬೋಬ್ಡೆ, ಸಿಜೆಇ
ಪ್ರಧಾನಿ ಚಪ್ಪಾಳೆ, ದೀಪ ಇತ್ಯಾದಿಗಳಿಗಷ್ಟೇ ಸೀಮಿತವಾದರೆೆ ಜನರಿಗೆ ಆತಂಕವಾಗುವುದಿಲ್ಲವೇ?

--------------------------------------
(ಕೊರೋನ ಸೋಂಕಿನ ಬಗ್ಗೆ ) ಮುನ್ನೆಚ್ಚರಿಕೆ ನೀಡುವುದನ್ನು ಭಯಪಡಿಸುವುದು ಎಂದು ಭಾವಿಸಬೇಡಿ -ನರೇಂದ್ರ ಮೋದಿ, ಪ್ರಧಾನಿ
ಕೋಟೆ ಸೂರೆ ಹೋದ ಮೇಲೆ ದಿಡ್ಡಿ ಬಾಗಿಲು ಮುಚ್ಚಿದರೇನು?

--------------------------------------

ವಲಸೆ ಕಾರ್ಮಿಕರು ನಿಜವಾದ ಬಡವರಲ್ಲ
 -ಉಮಾಭಾರತಿ, ಬಿಜೆಪಿ ನಾಯಕಿ
ಅಂಬಾನಿ, ಅದಾನಿಯವರನ್ನು ಬಿಪಿಎಲ್ ಕಾರ್ಡ್‌ಗೆ ಸೇರಿಸಿದರೆ ಏನು?

--------------------------------------
ಕರ್ನಾಟಕದ ಜನರು ಶಿಸ್ತು ಮತ್ತು ಕಾನೂನು ಪಾಲನೆಗೆ ಹೆಸರಾದವರು -ಯಡಿಯೂರಪ್ಪ, ಮುಖ್ಯಮಂತ್ರಿ

ಪೊಲೀಸರು ಕಾನೂನು ಮುರಿಯುವುದಕ್ಕೆ ಹೆಸರಾಗಿದ್ದಾರೆ.

--------------------------------------

ರೋಗಕ್ಕೆ ಜಾತಿ, ಧರ್ಮಗಳಿಲ್ಲ -ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

ಭಾರತದಲ್ಲಿ ಅದನ್ನು ಮತಾಂತರಿಸಲಾಗಿದೆ.

--------------------------------------

ನಮ್ಮ ದೇಶದ ಮೇಲೆ ವಿಧಿಸಿರುವ ದಿಗ್ಭಂಧನಗಳನ್ನು ತೆರವುಗೊಳಿಸುವ ಅತ್ಯುತ್ತಮ ಅವಕಾಶ(ಕೊರೋನ ಹಿನ್ನೆಲೆ)ವನ್ನು ಅಮೆರಿಕ ಕಳೆದುಕೊಂಡಿದೆ - ಹಸನ್‌ರೂಹಾನಿ, ಇರಾನ್ ಅಧ್ಯಕ್ಷ

ಅದೀಗ ಸ್ವಯಂ ದಿಗ್ಬಂಧನದಿಂದ ನರಳುತ್ತಿದೆ.

--------------------------------------

ಲಾಕ್‌ಡೌನ್ ಗೊಂದಲಕ್ಕೆ ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದೇ ಕಾರಣ
 -ಭೂಪೇಶ್ ಬೇಲ್, ಛತ್ತೀಸ್‌ಗಡ ಮುಖ್ಯಮಂತ್ರಿ

ವಿಶ್ವಾಸ ಎನ್ನುವ ಪದ ಸದ್ಯದ ರಾಜಕಾರಣದಲ್ಲಿ ಅರ್ಥ ಕಳೆದುಕೊಂಡಿದೆ.

--------------------------------------

ರೈತರ ಬಹುತೇಕ ಸಮಸ್ಯೆ ನಿವಾರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು -ಎಸ್.ಟಿ.ಸೋಮಶೇಖರ್, ಸಚಿವ

ವರೆಗೆ ಮಾಡಿರುವುದು ಅಪ್ರಾಮಾಣಿಕ ಪ್ರಯತ್ನವಿರಬೇಕು.

--------------------------------------

ಚೀನಾದ ಕೊರೋನ ಅಂಕಿ ಸಂಖ್ಯೆ ಸುಳ್ಳು -ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ
ಇರಾಕ್, ಅಫ್ಘಾನಿಸ್ತಾನ, ಸಿರಿಯಾದಲ್ಲಿ ಮೃತರಾದ ನಾಗರಿಕರ ಅಂಕಿಸಂಕಿಗಳ ನಿಜದ ಕತೆಯೇನು?

--------------------------------------

ಕೊರೋನ ಸೋಂಕಿತರನ್ನು ಕಳಂಕಿತರಂತೆ ನೋಡಬಾರದು -ಡಾ.ಹರ್ಷವರ್ಧನ್, ಕೇಂದ್ರ ಸಚಿವ
ಕೊರೋನ ವೈಫಲ್ಯಕ್ಕಾಗಿ ನಿಮ್ಮನ್ನು ಕಳಂಕಿತರನ್ನಾಗಿ ನೋಡಬಹುದೇ?

--------------------------------------

ಪೂರ್ವ ಸಿದ್ಧತೆ ಇಲ್ಲದೆಯೇ ಲಾಕ್‌ಡೌನ್ ಘೋಷಿಸಿದ್ದರಿಂದ ಲಕ್ಷಾಂತರ ಮಂದಿ ನೋವು ಅನುಭವಿಸುವಂತಾಯಿತು -ಸೋನಿಯಾಗಾಂಧಿ, ಕಾಂಗ್ರೆಸ್ ಅಧ್ಯಕ್ಷೆ
ಪೂರ್ವ ಸಿದ್ಧತೆಯೇ ಇಲ್ಲದೆ ನೋಟು ನಿಷೇಧ ಮಾಡಿದಾಗ ಅನುಭವಿಸಿದ್ದೇ ತಾನೇ?

--------------------------------------

 ಕೊರೋನ ಸೋಂಕಿನಿಂದ ದೇಶ ಗೆಲ್ಲಬೇಕು, ಜನತೆ ಉಳಿಯಬೇಕು ಎಂದಾದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲೇಬೇಕು -ಸಿ.ಟಿ.ರವಿ, ಸಚಿವ

ಅಸ್ಪಶ್ಯತೆಯನ್ನು ಸಂವಿಧಾನ ವ್ಯಾಪ್ತಿಗೆ ಸೇರಿಸಿ ಬಿಡೋಣವೇ?

--------------------------------------

ಕೊರೋನ ಉಂಟುಮಾಡಿರುವ ಅಂಧಕಾರದಿಂದ ಹೊರಬರಬೇಕಾದರೆ ನಾವೆಲ್ಲರೂ ಒಗ್ಗಟ್ಟಾಗಿ ದೀಪ ಬೆಳಗಬೇಕು
 - ನರೇಂದ್ರ ಮೋದಿ, ಪ್ರಧಾನಿ
ಅದಕ್ಕೆ ಮೊದಲು ಒಗ್ಗಟ್ಟಿನಿಂದ ಮನೆಯ ದೀಪ ಆರಿಸಬೇಕಲ್ಲ?

--------------------------------------

ಸರಕಾರಿ ಆದೇಶ ಧಿಕ್ಕರಿಸುವವರು ಮಾನವೀಯತೆಯ ಶತ್ರುಗಳು - ಯೋಗಿ ಆದಿತ್ಯನಾಥ್, ಉ.ಪ್ರ.ಮುಖ್ಯಮಂತ್ರಿ
ಸರಕಾರವೇ ಮಾನವೀಯತೆಯ ಶತ್ರುವಾದರೆ?

--------------------------------------

ಪ್ರಧಾನಿ ನರೇಂದ್ರ ಮೋದಿ ಒಬ್ಬ ಶೋ ಮ್ಯಾನ್ - ಶಶಿ ತರೂರ್, ಕಾಂಗ್ರೆಸ್ ಮುಖಂಡ

ಮ್ಯಾನ್ ಎನ್ನುವುದರ ಕುರಿತಂತೆ ಸಣ್ಣ ಅನುಮಾನವಿದೆ.

--------------------------------------

ನಿಝಾಮುದ್ದೀನ್ ಸಭೆಯ ಹಿಂದೆ ಕೊರೋನ ಜಿಹಾದಿಗಳಿದ್ದಾರೆ - ಶೋಭಾ ಕರಂದ್ಲಾಜೆ, ಸಂಸದೆ
ಸಭೆಯಲ್ಲಿ ತಾವೂ ಭಾಗವಹಿಸಿ ಬಂದಂತಿದೆ.

share
ಪಿ.ಎ.ರೈ
ಪಿ.ಎ.ರೈ
Next Story
X