ನಾಲ್ವರು ಐಎಎಸ್ ಅಧಿಕಾರಿಗಳ ವರ್ಗಾವಣೆ
ಬೆಂಗಳೂರು, ಎ. 9: ರಾಜ್ಯ ಸರಕಾರ ಸುಗಮ ಆಡಳಿತದ ದೃಷ್ಟಿಯಿಂದ ನಾಲ್ವರು ಐಎಎಸ್ ಅಧಿಕಾರಿಗಳನ್ನು ತಮ್ಮ ಹೆಸರಿನ ಮುಂದಿನ ಸೂಚಿತ ಸ್ಥಳಕ್ಕೆ ತಕ್ಷಣದಿಂದಲೇ ನಿಯೋಜನೆಗೊಳ್ಳುವಂತೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಡಾ.ವಿಶಾಲ್ ಆರ್.- ಆಯುಕ್ತ- ಗ್ರಾಮೀಣ ಕುಡಿಯುವ ನೀರು ಮತ್ತು ಒಳಚರಂಡಿ ಮಂಡಳಿ, ಅನಿರುದ್ಧ್ ಶ್ರವಣ್- ಆಯುಕ್ತ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಪ್ರದೀಪ್ ಪಿ.-ಆಯುಕ್ತ- ಕೊಲಿಜಿಯೇಟ್ ಎಜುಕೇಷನ್, ಜ್ಯೋತಿ ಕೆ.- ಕುಲಸಚಿವೆ ಬೆಂಗಳೂರು ವಿಶ್ವ ವಿದ್ಯಾಲಯ ಇಲ್ಲಿಗೆ ನಿಯುಕ್ತಿಗೊಳಿಸಲಾಗಿದೆ.
Next Story