Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...

ಓ ಮೆಣಸೇ...

ಪಿ.ಎ.ರೈಪಿ.ಎ.ರೈ12 April 2020 11:02 PM IST
share
ಓ ಮೆಣಸೇ...

ಯಾರೇ ದುರಾಲೋಚನೆ ಮಾಡಿದರೂ (ಕೊರೋನ ಬಗ್ಗೆ) ನಮ್ಮ ರಾಮ, ಈಶ್ವರ ಭಗವಂತ ನಮ್ಮನ್ನು ಕಾಪಾಡುತ್ತಾರೆ - ಸೋಮಶೇಖರರೆಡ್ಡಿ, ಶಾಸಕ
ನಿಮ್ಮಿಂದ ಜನರನ್ನು ಭಗವಂತ ಕಾಪಾಡಬೇಕಾದ ಸ್ಥಿತಿ ಬಂದಿದೆ.

ಲಾಕ್‌ಡೌನ್ ಅವಧಿಯಲ್ಲಿ ಖಾಸಗಿ ಆಸ್ಪತ್ರೆಗಳು ಬಂದ್‌ಮಾಡಿದರೆ ಪರವಾನಿಗೆ ರದ್ದು - ಶ್ರೀರಾಮುಲು , ಸಚಿವ

 ರೋಗಿಗಳು ಆಸ್ಪತ್ರೆಗೆ ಬರದ ಹಾಗೆ ಪೊಲೀಸರು ತಡೆದರೆ?

 ನಿಮ್ಮಂತಹ ಪಾಪದವರಿಗೆ (ಪೌರಕಾರ್ಮಿಕರು) ಕೊರೋನ ಬರುವುದಿಲ್ಲ, ಅದು ಶ್ರೀಮಂತರಿಗೆ ಮಾತ್ರ ಬರುವುದು
 - ಯು.ಟಿ.ಖಾದರ್, ಮಾಜಿ ಸಚಿವ
ಇದೀಗ ಶ್ರೀಮಂತರು ಅದನ್ನು ಪಾಪದವರಿಗೆ ಹಂಚಿ ತಮ್ಮ ಹೃದಯ ವೈಶಾಲ್ಯತೆಯನ್ನು ಮೆರೆಯುತ್ತಿದ್ದಾರೆ.

ದಿಲ್ಲಿ ನಿಝಾಮುದ್ಧೀನ್ ಸಭೆಗೆ ಹೋದವರನ್ನು ದೇಶದ್ರೋಹಿಗಳೆಂದು ಘೋಷಿಸಬೇಕು - ಶೋಭಾಕರಂದ್ಲಾಜೆ, ಸಂಸದೆ

 ಶಾಸಕನ ಹುಟ್ಟುಹಬ್ಬದಲ್ಲಿ ಭಾಗವಹಿಸಿದವರಿಗೆ ಕೊರೋನ ಶೌರ್ಯ ಪ್ರಶಸ್ತಿ ಕೊಡೋಣವೆ?

 ಭಾರತ -ಅಮೆರಿಕ ನಡುವಿನ ಬಾಂಧವ್ಯವನ್ನು ಕೋವಿಡ್-19 ವಿರುದ್ಧದ ಹೋರಾಟಕ್ಕೆ ಬಳಸಲು ನಿರ್ಧರಿಸಲಾಗಿದೆ
 -ನರೇಂದ್ರ ಮೋದಿ, ಪ್ರಧಾನಿ
 ಬಾಂಧವ್ಯ ಎಂದರೆ ಭಾರತ ಕೊಡುವುದು, ಅಮೆರಿಕ ಪಡೆದುಕೊಳ್ಳುವುದೇ?

ಖಾಸಗಿ ಶಾಲೆಗಳಲ್ಲಿ ಡೊನೇಶನ್ ಮತ್ತು ಶುಲ್ಕ ಹಾವಳಿಗಳಿಗೆ ಶೀಘ್ರವೇ ಕಡಿವಾಣ ಹಾಕಲಾಗುವುದು - ಸುರೇಶ್‌ಕುಮಾರ್, ಸಚಿವ

ಈ ಶೀಘ್ರ ಎನ್ನುವ ಪದವನ್ನು ಕಳೆದ ನಲವತ್ತು ವರ್ಷಗಳಿಂದ ಬಳಸಿಕೊಂಡು ಬರಲಾಗಿದೆ.

ಮೋದಿ ಗ್ರೇಟ್, ತುಂಬಾ ಒಳ್ಳೆಯವರು - ಡೊನಾಲ್ಡ್‌ಟ್ರಂಪ್, ಅಮೆರಿಕ ಅಧ್ಯಕ್ಷ
 ಅಮೆರಿಕನ್ನರಿಗೆ ಅನ್ನಿಸಿದರೆ ಸಾಕೆ, ಭಾರತೀಯರಿಗೂ ಗ್ರೇಟ್ ಅನ್ನಿಸಬೇಡವೇ?

 ದೇಶದಲ್ಲಿ ರಸಗೊಬ್ಬರ ಸಂಗ್ರಹ ಸಾಕಷ್ಟಿದೆ- ಡಿ.ವಿ.ಸದಾನಂದಗೌಡ, ಕೇಂದ್ರಸಚಿವ
 ಸದ್ಯಕ್ಕೆ ರೈತರ ಕೊರತೆ ಇದೇ ಅಂತೀರಾ?

ಆಟ ದೇಶಕ್ಕಿಂತ ದೊಡ್ಡದಲ್ಲ - ಕಪಿಲ್‌ದೇವ್, ಮಾಜಿ ಕ್ರಿಕೆಟಿಗ

ಆಟಕ್ಕಿಂತ ಹಣ ದೊಡ್ಡದು ಎಂದವರ ಪಟ್ಟಿಯೇ ಇದೆ.

ಸಾಮಾಜಿಕ ಅಂತರ ಅಸ್ಪಶ್ಯತೆಯಾಗಿ ಕಾಣುತ್ತಿದೆ - ನಾಗತಿಹಳ್ಳಿ ಚಂದ್ರಶೇಖರ್, ಸಿನೆಮಾ ನಿರ್ದೇಶಕ

ಕೊರೋನದ ಬಳಿಕ ಅಸ್ಪಶ್ಯತೆ ದೇಶದ ಹೆಮ್ಮೆ ಎಂದು ಬಿಂಬಿತವಾಗುತ್ತಿದೆ.

ಕೊರೋನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು -ಬಸವರಾಜ ಬೊಮ್ಮಾಯಿ, ಸಚಿವ

 ಸುಳ್ಳು ಸುದ್ದಿಗಳ ಮೂಲಕವೇ ಅಧಿಕಾರಕ್ಕೆ ಬಂದವರಿಂದ ಈ ಮಾತೆ?

 ಕೊರೋನ ಎದುರಿಸಲು ಹೆಚ್ಚು ನಿಂಬೆಹಣ್ಣು ಉಪಯೋಗಿಸಿ- ಬಿ.ಸಿ.ಪಾಟೀಲ್, ಕೃಷಿ ಸಚಿವ

ನಿಂಬೆಹಣ್ಣಿನ ಜೊತೆಗೆ ಮೆಣಸಿನ ಕಾಯಿ ಜೋಡಿಸಿ ಮನೆಯ ಮುಂದೆ ತೂಗು ಹಾಕಲು ಹೇಳುತ್ತಿರಬೇಕು.

ಕ್ವಾರಂಟೈನ್‌ನಲ್ಲಿರದ ಕೊರೋನ ರೋಗಿ 30 ದಿನಗಳಲ್ಲಿ 406 ಮಂದಿಗೆ ಸೋಂಕು ಹರಡಬಲ್ಲ - ಐಸಿಎಂಆರ್ ವರದಿ

 ಕ್ವಾರಂಟೈನ್‌ನಲ್ಲಿರದ ಕೋಮು ರೋಗಿ ಹರಡುವ ಸೋಂಕಿನ ಸಂಖ್ಯೆ ಇನ್ನೂ ಲೆಕ್ಕಕ್ಕೆ ಸಿಕ್ಕಿಲ್ಲವಂತೆ.

ಬೇರೆ ದೇಶವೊಂದರ ಮುಖ್ಯಸ್ಥ (ಟ್ರಂಪ್)ಅಥವಾ ಸರಕಾರ, ಇನ್ನೊಂದು ದೇಶಕ್ಕೆ ಬಹಿರಂಗ ಬೆದರಿಕೆಯೊಡ್ಡುವುದನ್ನು ನಾನೆಂದೂ ಕೇಳಿಲ್ಲ - ಶಶಿ ತರೂರ್, ಮಾಜಿ ಸಚಿವ

ಅದಕ್ಕಾಗಿ ಪ್ರಧಾನಿ ಮೋದಿ ಅವರನ್ನು ನಾವು ಅಭಿನಂದಿಸಬೇಕು.

ಕೊರೋನ ವೈರಸ್ ಸಂಕಷ್ಟ ಕಾಲದಲ್ಲಿ ರಾಜಕಾರಣ ಮಾಡಲು ಬಯಸುವುದಿಲ್ಲ - ಡಿ.ಕೆ.ಶಿವಕುಮಾರ್, ಮಾಜಿ ಸಚಿವ
 ನೀವು ರಾಜಕಾರಣ ಮಾಡಲು ಯಾವ ಕಾಲ ಬರಬೇಕು?

 ಕೊರೋನ ವೈರಸ್ ಹರಡುವವರನ್ನು ಗುಂಡಿಟ್ಟು ಸಾಯಿಸಿ
 - ರೇಣುಕಾಚಾರ್ಯ, ಮಾಜಿ ಸಚಿವ
 ಬಿಜೆಪಿ ಶಾಸಕ ಹುಟ್ಟು ಹಬ್ಬಕ್ಕೆ ಕೋವಿ ಹಿಡಿದುಕೊಂಡು ಹೋಗಬೇಕಾಗಿತ್ತು.

share
ಪಿ.ಎ.ರೈ
ಪಿ.ಎ.ರೈ
Next Story
X