Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಎನ್‌ಐಟಿಕೆಯಿಂದ ಸೋಂಕು ನಾಶಕ ತಂತ್ರಜ್ಞಾನ...

ಎನ್‌ಐಟಿಕೆಯಿಂದ ಸೋಂಕು ನಾಶಕ ತಂತ್ರಜ್ಞಾನ ಅಭಿವೃದ್ಧಿ !

ವಾರ್ತಾಭಾರತಿವಾರ್ತಾಭಾರತಿ15 April 2020 8:52 AM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಎನ್‌ಐಟಿಕೆಯಿಂದ ಸೋಂಕು ನಾಶಕ ತಂತ್ರಜ್ಞಾನ ಅಭಿವೃದ್ಧಿ !

ಮಂಗಳೂರು, ಎ.15: ಕೊರೋನ ವೈರಸ್ ಸೋಂಕು ನಿಯಂತ್ರಣದ ಜತೆಗೆ ನಾಶಕ್ಕೆ ಸಂಬಂಧಿಸಿ ಜಗತ್ತಿನಾದ್ಯಂತ ಸಾಕಷ್ಟು ಸಂಶೋಧನೆಗಳು ನಡೆಯುತ್ತಿವೆ. ಈ ನಡುವೆಯೇ ಸುರತ್ಕಲ್‌ನ ಎನ್‌ಐಟಿಕೆ ಸಂಶೋಧಕರು ‘ಝೀರೋ ಕೊವ್’ ಎಂಬ ಸೋಂಕು ಹರಡುವ ಕ್ರಿಮಿಗಳ ನಾಶಕ ತಂತ್ರಜ್ಞಾನ (ಚೇಂಬರ್) ವನ್ನು ಅಭಿವೃದ್ಧಿ ಪಡಿಸಿದ್ದಾರೆ.

ವೈಯಕ್ತಿಕ ರಕ್ಷಣಾ ಸಾಧನ (ಪಿಪಿಇ) ಕಿಟ್‌ಗಳು, ಶಸ್ತ್ರ ಚಿಕಿತ್ಸೆಯ ಮುಖಗವಸುಗಳು, ತರಕಾರಿಗಳು, ಪ್ಯಾಕ್ ಮಾಡಿದ ಆಹಾರ ಮಾತ್ರವಲ್ಲದೆ ಕರೆನ್ಸಿ ನೋಟುಗಳಲ್ಲಿರುವ ಸೋಂಕು ಹರಡುವ ವೈರಸ್‌ಗಳನ್ನು ಆ ವಸ್ತುಗಳಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ಎನ್‌ಐಟಿಕೆ ಸಂಶೋಧಕರ ಈ ತಂತ್ರಜ್ಞಾನ ನಾಶಪಡಿಸಲಿದೆಯಂತೆ.

ಎನ್‌ಐಟಿಕೆಯ ರಸಾಯನ ಶಾಸ್ತ್ರ ವಿಭಾಗ ಮುಖ್ಯಸ್ಥ ಡಾ. ಅರುಣ್ ಎಂ. ಇಸ್ಲೂರ್ ಮತ್ತು ಸಂಶೋಧನಾ ಸ್ಕಾಲರ್ ಸೈಯದ್ ಇಬ್ರಾಹೀಂರವರು ಬಳೆಯಾದ ಹಳೆ ರಫ್ರಿಜರೇಟರ್ ಬಳಸಿ ಈ ಚೇಂಬರ್ ಸಿದ್ಧಪಡಿಸಿದ್ದಾರೆ. ಕೋವಿಡ್ 19 ವೈರಸ್ ಸಹಿತ ಈ ಚೇಂಬರ್ ವೈರಸ್ ಗಳ ಮಾಲಿನ್ಯವನ್ನು ನಿಯಂತ್ರಿಸಲಿದೆ. ಮಾತ್ರವಲ್ಲದೆ ಸೋಂಕು ಹರದಂತೆ ತಡೆಯುವ ಸರಳ ವಿಧಾನ ಇದಾಗಿದೆ.

ಮಾರುಕಟ್ಟೆಯಿಂದ ಖರೀದಿಸುವ ವಸ್ತುಗಳು, ಬಾಟಲಿ, ತರಕಾರಿ, ಪುಸ್ತಕ, ಸಿದ್ಧ ಆಹಾರ ವಸ್ತುಗಳು ರೋಗಾಣುಗಳನ್ನು ಹೊಂದಿರುತ್ತವೆ. ಝೀರೋ ಕೊವ್ ವೈರಸ್ ನಾಶಕ ಚೇಂಬರ್‌ನಲ್ಲಿ ವಸ್ತುಗಳನ್ನು 15 ನಿಮಿಷಗಳ ಕಾಲ ಇರಿಸುವ ಮೂಲಕ ವೈರಸ್ ಗಳು ನಾಶಾಗುವುದಲ್ಲದೆ, ಶೇ. 99.9ರಷ್ಟು ಅವುಗಳು ನಿಷ್ಕ್ರಿಯವಾಗುವುದನ್ನು ಖಚಿತಪಡಿಸಬಹುದು ಎನ್ನುತ್ತಾರೆ ಈ ಸಂಶೋಧರು. ಯವಿ-ಸಿ ವಿಕಿರಣವನ್ನು ಈ ತಂತ್ರಜ್ಞಾನದಲ್ಲಿ ಬಳಸಲಾಗಿದ್ದು, ಇದು 254 ನ್ಯಾನೋ ಮೀಟರ್ ತರಂಗಾಂತರ ಹೊಂದಿರುತ್ತದೆ. ಇದು ಮೇಲ್ಮೈಗಳಲ್ಲಿ ಕಂಡು ಬರುವ ಯಾವುದೇ ಸೂಕ್ಷ್ಮ ಜೀವಿಗಳ ನ್ಯೂಕ್ಳಿಯಿಕ್ ಆಮ್ಲವನ್ನು ನಾಶಪಡಿಸುತ್ತದೆ. ಮಾನವ ದೇಹದ ಮೇಲೆ ನೇರ ಯುವಿ-ಸಿ ವಿಕರಿಣ ಹಾನಿಕಾರಕ ಪರಿಣಾಮಗಳನ್ನು ಉಂಟು ಮಾಡುವ ಕಾರಣ ಝಿರೋ- ಕೊವ್ ಚೇಂಬರ್ ಆನ್ ಮಾಡುವಾಗ ಸಂಪೂಣವಾರ್ಗಿ ಮುಚ್ಚಿರಬೇಕು. ಚೇಂಬರ್ ಗೆ ಮೂರು ಅಲ್ಟ್ರಾ ವಯಲೆಟ್ ದೀಪಗಳನ್ನು ಬಳಸಲಾಗಿದ್ದು, ಅದು 11 ವ್ಯಾಟ್  ವಿದ್ಯುತ್ ಉಪಯೋಗಿಸುತ್ತದೆ. ಒಂದೇ ಆಲ್ಟ್ರಾ ವಯಲೆಟ್ ದೀಪವನ್ನು ಬಳಸಿ ತಯಾರಿಸಿದ ಸಣ್ಣ ಚೇಂಬರ್ ಗೆ ಸುಮಾರು 500 ರೂ. ವೆಚ್ಚ. ಈ ಚೇಂಬರ್ ನ್ನು ಲೋಹದಿಂದ ಮಾಡಿದ ಯಾವುದೇ ಬಳಕೆಯಾಗದ ವಸ್ತುಗಳಿಂದ ಮಾಡಬಹುದು ಎಂದು ಸಂಶೋಧರು ತಿಳಿಸಿದ್ದಾರೆ.

ಯುಎಸ್‌ಎ ಹಾಗೂ ಯೂರೋಪ್ ರಾಷ್ಟ್ರಗಳಲ್ಲಿ ಆರೋಗ್ಯ ಸೇವಕರು ರಕ್ಷಾ ಕವಚಗಳನ್ನು ಮರು ಬಳಕೆಗಾಗಿ ಸ್ವಚ್ಚಗೊಳಿಸುವ ವರದಿಗಳನ್ನು ಓದಿದ ಎನ್ಐಟಿಕೆಯ ಈ ಸಂಶೋಧರು ಭಾರತದಲ್ಲಿ ಈ ಸಂಕಷ್ಟ ಪರಿಸ್ಥಿತಿಯಲ್ಲಿ ಸರಳವಾಗಿ ಇದನ್ನು ಎದುರಿಸಲು ಸುಲಭೋಪಾಯವನ್ನು ಕಂಡುಹಿಡಿದಿದ್ದಾರೆ. ವಿಶೇಷವೆಂದರೆ ಇದು ಪ್ರತಿ ಮನೆಗಳಲ್ಲೂ ಕೋವಿಡ್ 19 ಹರಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಉಪಯೋಗಿಸಬಹುದಾದ ಸರಳ ವಿಧಾನ ಎಂದು ಸಂಶೋಧರು ತಿಳಿಸಿದ್ದಾರೆ.

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
ವಾರ್ತಾಭಾರತಿ
ವಾರ್ತಾಭಾರತಿ
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X