ಜಿಲ್ಲೆಯಲ್ಲಿ ತಹಶೀಲ್ದಾರ್ ಮೂಲಕ ಪಾಸ್ ವಿತರಣೆ: ಉಡುಪಿ ಜಿಲ್ಲಾಧಿಕಾರಿ

ಉಡುಪಿ, ಎ.15:ನೋವೆಲ್ ಕೊರೋನ ವೈರಸ್ (ಕೋವಿಡ್-19) ಸೋಂಕು ಹರಡುವುದನ್ನು ತಡೆಯಲು ನಿಬರ್ಂಧಾಜ್ಞೆ ಈಗ ಜಿಲ್ಲೆಯಾದ್ಯಂತ ಜಾರಿಯಲ್ಲಿದ್ದು, ಈ ಸಂದರ್ಭದಲ್ಲಿ ಎಲ್ಲಾ ರೀತಿಯ ಓಡಾಟವನ್ನು ನಿಬರ್ಂಧಿಸ ಲಾಗಿದೆ. ಆದರೆ ತುರ್ತು ಹಾಗೂ ಅತಿಅಗತ್ಯ ಸಂದರ್ಭಗಳಲ್ಲಿ ಹೊರರಾಜ್ಯ ಅಥವಾ ಹೊರಜಿಲ್ಲೆಗಳಿಗೆ ಹೋಗಲು ಅನುಮತಿಗಾಗಿ ಸಾರ್ವಜನಿಕರು ಇನ್ನು ಮುಂದೆ ತಾಲೂಕಿನ ತಹಶೀಲ್ದಾರ್ಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಈಗ ಇಂಥ ಅನುಮತಿಗಾಗಿ ಸಾರ್ವಜನಿಕರು ಜಿಲ್ಲಾಧಿಕಾರಿ ಕಚೇರಿಗೆ ಬಂದು ಪಾಸ್ಗಳನ್ನು ಪಡೆಯಬೇಕಾಗಿತ್ತು. ವೈದ್ಯಕೀಯ ನೆಲೆಯಲ್ಲಿ,ಅವಶ್ಯಕ ವಸ್ತುಗಳನ್ನು ಬೇರೆ ಜಿಲ್ಲೆಗೆ ಸರಬರಾಜು ಮಾಡಲು ಹಾಗೂ ಇತರೆ ಕಾರಣಕ್ಕಾಗಿ ಹೊರ ರಾಜ್ಯ/ ಜಿಲ್ಲೆಗಳಿಗೆ ಹೋಗಲು ಅನುಮತಿಗಾಗಿ ಪ್ರತಿದಿನ ಜಿಲ್ಲಾಧಿಕಾರಿ ಕಚೇರಿಗೆ 50ರಿಂದ 60 ಜನರು ಬರುತ್ತಿದ್ದು, ಇದರಿಂದ ಆದೇಶದ ಉಲ್ಲಂಘನೆಯಾಗುತ್ತಿತ್ತು.
ತುರ್ತು ವೈದ್ಯಕೀಯ ಕಾರಣಗಳಿಗೆ ಬೇರೆ ಜಿಲ್ಲೆಗೆ ತೆರಳಿ ಚಿಕಿತ್ಸೆ ಪಡೆಯಲು (ಈ ಮೊದಲು ಚಿಕಿತ್ಸೆ ಪಡೆದಿದ್ದು, ಅದನ್ನು ಮುಂದುವರಿಸಲು), ಅಗತ್ಯ ಸೇವೆಗಳ ಕರ್ತವ್ಯಕ್ಕೆ ಹಾಜರಾಗಲು ಪ್ರಯಾಣ ಬೆಳೆಸುವ ಸಲುವಾಗಿ ಪ್ರಯಾಣಕ್ಕೆ ಅನುಮತಿ ಪಡೆಯಲು ಅರ್ಜಿದಾರರು ಅಗತ್ಯ ಮಾಹಿತಿಗಳೊಂದಿಗೆ ತಹಶೀಲ್ದಾರರಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಇದನ್ನು ತಪ್ಪಿಸಲು ಇಂಥ ಅನುಮತಿಗಾಗಿ ಸಾರ್ವಜನಿಕರು ಅರ್ಜಿಗಳನ್ನು ತಹಶೀಲ್ದಾರರ ಮೂಲಕ ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದೆ. ತುರ್ತು ವೈದ್ಯಕೀಯ ಕಾರಣಗಳಿಗೆ ಬೇರೆ ಜಿಲ್ಲೆಗೆ ತೆರಳಿ ಚಿಕಿತ್ಸೆ ಪಡೆಯಲು (ಈ ಮೊದಲು ಚಿಕಿತ್ಸೆ ಪಡೆದಿದ್ದು, ಅದನ್ನು ಮುಂದುವರಿಸಲು), ಅಗತ್ಯ ಸೇವೆಗಳ ಕರ್ತವ್ಯಕ್ಕೆ ಹಾಜರಾಗಲು ಪ್ರಯಾಣ ಬೆಳೆಸುವ ಸಲುವಾಗಿ ಪ್ರಯಾಣಕ್ಕೆ ಅನುಮತಿ ಪಡೆಯಲು ಅರ್ಜಿದಾರರು ಅಗತ್ಯ ಮಾಹಿತಿಗಳೊಂದಿಗೆ ತಹಶೀಲ್ದಾರರಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ತುರ್ತು ವೈದ್ಯಕೀಯ ಕಾರಣಗಳಿಗಾಗಿ ಬೇರೆ ಜಿಲ್ಲೆಗೆ ತೆರಳಲು ಅನುಮತಿ ಕೋರುವವರು ವೈದ್ಯಕೀಯ ದೃಢಪತ್ರದೊಂದಿಗೆ ಅರ್ಜಿ ಸಲ್ಲಿಸಬೇಕು ಹಾಗೂ ಹಿಂದೆ ಪಡೆದ ಚಿಕಿತ್ಸೆಯ ದಾಖಲೆಗಳನ್ನು ಸಲ್ಲಿಸಬೇಕು. ಅರ್ಜಿಯೊಂದಿಗೆ ಯಾವ ಉದ್ದೇಶಕ್ಕೆ/ಯಾವ ದಿನಾಂಕ/ ಯಾರು ಪ್ರಯಾಣಿಸುತ್ತಾರೆ ಎಂಬ ಬಗ್ಗೆ ಅಗತ್ಯ ಮಾಹಿತಿ, ದಾಖಲೆಗಳೊಂದಿಗೆ ಹಾಗೂ ವಾಹನದ ಮಾಹಿತಿ ಯನ್ನೂ ಸಂಬಂಧಪಟ್ಟ ತಹಶೀಲ್ದಾರರಿಗೆ ನೀಡಬೇಕು.
ಅರ್ಜಿದಾರರು ಸಲ್ಲಿಸಿರುವ ದಾಖಲೆಗಳನ್ನು ತಹಶೀಲ್ದಾರರು ಪರಿಶೀಲನೆ ನಡೆಸಿ ಸರಿಯಾದ ದಾಖಲೆಗಳನ್ನು ಸಲ್ಲಿಸಿರುವುದನ್ನು ಖಾತ್ರಿ ಪಡಿಸಿಕೊಂಡು, ಅನುಮತಿ ನೀಡುವುದು ಅಗತ್ಯವೆಂದು ಕಂಡು ಬಂದಲ್ಲಿ ಆನ್ಲೈನ್ನಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ಪ್ರಸ್ತಾವನೆ ಸಲ್ಲಿಸಿದ್ದಲ್ಲಿ ಈ ಅರ್ಜಿಗಳ ಪರಿಶೀಲನೆ ನಡೆಸಿ ಇ-ಪಾಸ್ ಮೂಲಕ ಅನುಮತಿ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಆದ್ದರಿಂದ ಇನ್ನು ಮುಂದೆ ಸಾರ್ವಜನಿಕರು ಜಿಲ್ಲಾಧಿಕಾರಿ ಕಚೇರಿಗೆ ಬಾರದೆ ನೇರವಾಗಿ ಸಂಬಂಧಪಟ್ಟ ತಹಶೀಲ್ದಾರರ ಕಛೇರಿಯಲ್ಲಿ ಬೆಳಿಗ್ಗೆ 10ರಿಂದ 12 ವರೆಗೆ ಮಾತ್ರ ಅರ್ಜಿಯನ್ನು ಸಲ್ಲಿಸಿ ಅನುಮತಿಯನ್ನು ಇ-ಪಾಸ್ ಮೂಲಕ ಪಡೆಯಬಹುದು ಎಂದು ಅವರು ಹೇಳಿದ್ದಾರೆ.







