ನಡು ರಸ್ತೆಯಲ್ಲಿ ಬಡಿದಾಡಿದ ಆರೋಪ: ಅಬಕಾರಿ ಅಧಿಕಾರಿಗಳು ಅಮಾನತು

ಮಡಿಕೇರಿ ಎ.17: ಅಕ್ರಮ ಮದ್ಯ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರಪೇಟೆ ತಾಲೂಕಿನ ಆಲೂರು ಸಿದ್ದಾಪುರದಲ್ಲಿ ನಡು ರಸ್ತೆಯಲ್ಲಿಯೇ ಬಡಿದಾಡಿಕೊಂಡ ಕೊಡಗು ಜಿಲ್ಲೆಯ ಇಬ್ಬರು ಅಬಕಾರಿ ಅಧಿಕಾರಿಗಳನ್ನು ಅಮಾನತುಗೊಳಿಸಿ ರಾಜ್ಯ ಅಬಕಾರಿ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಮಾತ್ರವಲ್ಲದೇ ಈ ಇಬ್ಬರು ಅಧಿಕಾರಿಗಳ ಮೇಲೆ ಇಲಾಖಾ ತನಿಖೆ ನಡೆಸಲು ಕೂಡ ಸೂಚನೆ ನೀಡಲಾಗಿದೆ. ಅಬಕಾರಿ ಇಲಾಖೆಯ ಉಪ ಅಧೀಕ್ಷಕ ಎಚ್.ಎಸ್. ಶಿವಪ್ಪ ಮತ್ತು ಅಬಕಾರಿ ನಿರೀಕ್ಷಕ ಎಂ. ನಟರಾಜ್ ಎಂಬವರೇ ಅಮಾನತಾದ ಅಧಿಕಾರಿಗಳಾಗಿದ್ದಾರೆ ಎಂದು ಕೊಡಗು ಜಿಲ್ಲಾ ಅಬಕಾರಿ ಆಯುಕ್ತೆ ಬಿಂದುಶ್ರೀ ತಿಳಿಸಿದ್ದಾರೆ.
Next Story





