Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಆಪತ್ಕಾಲೀನ ಸನ್ನಿವೇಶಗಳು ಯಾಕೆ...

ಆಪತ್ಕಾಲೀನ ಸನ್ನಿವೇಶಗಳು ಯಾಕೆ ಬರುತ್ತವೆ?

ಚಿಂತನೆ

ಎ. ರೈಹಾನ್ ಪುತ್ತಿಗೆಎ. ರೈಹಾನ್ ಪುತ್ತಿಗೆ17 April 2020 11:03 PM IST
share

ಇದು ಅನೇಕರನ್ನು ಅನೇಕ ಬಾರಿ ಕಾಡಿರುವ ಪ್ರಶ್ನೆ. ಸಂಕಟದ ಮತ್ತು ಆಪತ್ತಿನ ಸನ್ನಿವೇಶಗಳು ಸುಮ್ಮ ಸುಮ್ಮನೆ ಬರುವುದಿಲ್ಲ.

ಅವು ನಿಜವಾಗಿ, ನಮ್ಮ ತಿಳುವಳಿಕೆ ಹೆಚ್ಚಿಸಲು ಬರುತ್ತವೆ.

ಅವು ನಮ್ಮ ಕಣ್ಣು ತೆರೆಸಲು ಬರುತ್ತವೆ.

ಅವು ನಮ್ಮನ್ನು ನಮಗೆ ಪರಿಚಯಿಸಲು ಬರುತ್ತವೆ.

ನಮ್ಮ ಮಾನವ ಸಮಾಜದಲ್ಲಿ, ಮಾನವರಂತೆ ಕಾಣುವವರ ಪೈಕಿ ನಿಜವಾದ ಮಾನವರು ಯಾರು?

ಮಾನವೀಯ ಸಂವೇದನೆ, ಸಹತಾಪ, ಕಳಕಳಿ ಉಳ್ಳವರು ಯಾರು?

ತಮ್ಮ ಬಳಿ ಇದ್ದುದನ್ನು ಅಕ್ಕಪಕ್ಕದವರ ಜೊತೆ ಹಂಚಿ ತಿನ್ನುವವರು ಯಾರು?

ಹಸಿದಿರುವ, ಸಂಕಷ್ಟದಲ್ಲಿರುವ ಮನುಷ್ಯರನ್ನು ಹುಡುಕಿ ಹೋಗಿ, ನೆರವು ತಲುಪಿಸುವವರು ಯಾರು?

ಇತರರಿಗೆ ನೆರವಾಗಲು ಸ್ವತಃ ತಮ್ಮ ಸುಖವನ್ನು ತ್ಯಜಿಸಿ ಸೇವೆಗಿಳಿಯುವ ಸಜ್ಜನರು ಯಾರು?

ಸಂಕಟದ ಸನ್ನಿವೇಶದಲ್ಲಿ ಸಮಾಜಕ್ಕೆ ಸಹನೆ ಸಂಯಮಗಳನ್ನು ಬೋಧಿಸುವವರು ಯಾರು? ಉಪಕರಿಸಲು ತವಕಿಸುವವರು ಯಾರು?
ಕಣ್ಣೀರು ಅಳಿಸಲು ಲಭ್ಯವಾಗುವವರು ಯಾರು?

ಸಂಕಟದ ಸನ್ನಿವೇಶದಲ್ಲಿ ಜನರ ನಡುವಣ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಿ, ಸಾಮೂಹಿಕ ಸಂಕಷ್ಟವನ್ನು ಎಲ್ಲರೂ ಜೊತೆಯಾಗಿ ಎದುರಿಸೋಣ ಎಂಬ ಸ್ಫೂರ್ತಿಯನ್ನು ಎಲ್ಲರಲ್ಲಿ ಬೆಳೆಸುವವರು ಯಾರು?

ಹಾಗೆಯೇ,

ಸಮಾಜಕ್ಕೆ ಯಾವ ಉಪಕಾರವನ್ನೂ ಮಾಡಲೊಲ್ಲದ ಸ್ವಾರ್ಥಿಗಳು ಯಾರು?

ಕಾಳ ಸಂತೆ, ಬೆಲೆ ಏರಿಕೆಗಳ ಮೂಲಕ ತಮ್ಮ ಕ್ರೂರ ಸ್ವಾರ್ಥ ಮೆರೆಯುವ ಸಂದರ್ಭ ಸಾಧಕರು ಯಾರು?

ಇನ್ನೊಬ್ಬರನ್ನು ಸಂಕಷ್ಟದಲ್ಲಿ ಕಂಡು ಸಂತೋಷ ಪಡುವವರು ಯಾರು?

ಸಂಕಟದಲ್ಲಿರುವವರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಲು ಶ್ರಮಿಸುವವರು ಯಾರು?

ಸಂಕಷ್ಟದ ಸನ್ನಿವೇಶದಲ್ಲಿ ಜನರ ಮಧ್ಯೆ ಸಂಶಯ, ಅನುಮಾನ, ಅಪನಂಬಿಕೆಗಳ ಬೀಜ ಬಿತ್ತಿ, ಸುಳ್ಳು ವದಂತಿಗಳನ್ನು ಹರಡಿ ಸಮಾಜವನ್ನು ಛಿದ್ರಗೊಳಿಸುವವರು ಯಾರು?

ಹತ್ತಾರು ಪೀಳಿಗೆಗಳಿಗೆ ಬೇಕಾದಷ್ಟು ಸಂಪತ್ತಿನ ಬೃಹತ್ ಸಂಗ್ರಹ ತಮ್ಮ ಬಳಿ ಇದ್ದರೂ, ಅಕ್ಕ ಪಕ್ಕದ ಹಸಿದವರಿಗೆ ಒಂದೊತ್ತಿನ ತುತ್ತು ಅನ್ನ ನೀಡಲು ನಿರಾಕರಿಸುವವರು ಯಾರು?

ಅಕ್ಕಪಕ್ಕದವರ ತುರ್ತು ಅಗತ್ಯಗಳನ್ನು ಕಾಣಲೊಲ್ಲದ ಕುರುಡರು ಯಾರು? ಸುತ್ತ ಮುತ್ತಲ ಆಕ್ರಂದನಗಳನ್ನೂ ಆಲಿಸಲೊಲ್ಲದ ಕಿವುಡರು ಯಾರು?

ಹೀಗೆ,

ಸಂಕಟದ ಮತ್ತು ಆಪತ್ತಿನ ಸನ್ನಿವೇಶಗಳು ಸುಮ್ಮ ಸುಮ್ಮನೆ ಬರುವುದಿಲ್ಲ.

ಅವು ಮೇಲಿನ ಎಲ್ಲ ಪ್ರಶ್ನೆಗಳಿಗೆ ಉತ್ತರ ಹೊತ್ತು ಬರುತ್ತವೆ.

ಅವು ಸ್ವತಃ ನಮ್ಮ ಮತ್ತು ನಮ್ಮ ಸುತ್ತ ಮುತ್ತಲಿನ ಹಲವರ ನಿಜರೂಪವನ್ನು ಬಯಲುಗೊಳಿಸಲೆಂದೇ ಬರುತ್ತವೆ.

ಹೊರಗೆ ಕಾಣದ ಒಳರೂಪಗಳನ್ನು ಬಿಚ್ಚಿಡಲು ಬರುತ್ತವೆ.

ನಮ್ಮ ಪಾಲಿಗೆ ನಮ್ಮ ಒಳಸ್ಥಿತಿಯ ಕನ್ನಡಿಯಾಗಿ ಬರುತ್ತವೆೆ.

ನಮಗೆ ನಮ್ಮನ್ನು ಪರಿಚಯಿಸಲು ಬರುತ್ತವೆ. 

share
ಎ. ರೈಹಾನ್ ಪುತ್ತಿಗೆ
ಎ. ರೈಹಾನ್ ಪುತ್ತಿಗೆ
Next Story
X