ಪಿಂಚಣಿ ಕಡಿತಗೊಳಿಸುವ ಪ್ರಸ್ತಾವ ಇಲ್ಲ:ಕೇಂದ್ರ ಸರಕಾರ
ಹೊಸದಿಲ್ಲಿ,ಎ.19: ಪಿಂಚಣಿ ಕಡಿತಗೊಳಿಸುವುದಿಲ್ಲ.ಈ ನಿಟ್ಟಿನಲ್ಲಿ ಚಿಂತನೆ ನಡೆಸುತ್ತಿಲ್ಲ್ಲ ಎಂದು ಕೇಂದ್ರ ಸರಕಾರ ರವಿವಾರ ಸ್ಪಷ್ಟಪಡಿಸಿದೆ.
ಪಿಂಚಣಿ ನಿಲ್ಲಿಸುವ ಅಥವಾ ಕಡಿತಗೊಳಿಸುವ ಕುರಿತಂತೆ ಕೇಂದ್ರ ಸರಕಾರ ಚಿಂತನೆ ನಡೆಸುತ್ತಿದೆ ಎಂಬ ವದಂತಿ ಹಬ್ಬಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಸ್ಪಷ್ಟನೆ ನೀಡಿದೆ.
ವದಂತಿ ವಿಚಾರ ಪಿಂಚಣಿ ಹಾಗೂ ಪಿಂಚಣಿದಾರರ ಇಲಾಖೆಯ ಗಮನಕ್ಕೆ ಬಂದಿದೆ.ಪ್ರಸ್ತುತ ಕೋವಿಡ್-19 ವೈರಸ್ ಹಾಗೂ ಆರ್ಥಿಕ ಸನ್ನಿವೇಶದಲ್ಲಿ ಇಂತಹ ಅನೇಕ ವದಂತಿಗಳು ಹರಡುತ್ತಿವೆ.ಪಿಂಚಣಿ ಕಡಿತ ಅಥವಾ ಸ್ಥಗಿತಗೊಳಿಸಲು ಸರಕಾರ ಚಿಂತಿಸುತ್ತದೆ ಎಂಬ ವದಂತಿಯು ಪಿಂಚಣಿದಾರರ ಚಿಂತೆಗೆ, ಆತಂಕಕ್ಕೆ ಮೂಲವಾಗಿದೆ ಸರಕಾರ ಪಿಂಚಣಿದಾರರ ಕಲ್ಯಾಣಕ್ಕೆ ಬದ್ಧವಾಗಿದೆ ಎಂದು ಸರಕಾರ ತಿಳಿಸಿದೆ.
ಕೇಂದ್ರಸರಕಾರದ 62.26 ಲಕ್ಷ ಪಿಂಚಣಿದಾರರಿದ್ದಾರೆ.
Next Story