Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ‘ಚನ್ನರಾಯಪಟ್ಟಣಕ್ಕೆ ಹೋದವರನ್ನು...

‘ಚನ್ನರಾಯಪಟ್ಟಣಕ್ಕೆ ಹೋದವರನ್ನು ದಿಲ್ಲಿಗೆ ಹೋದವರು’ ಎಂದು ಸುಳ್ಳು ಸುದ್ದಿ ಪ್ರಕಟಿಸಿದ ಕನ್ನಡ ಮಾಧ್ಯಮಗಳು !

ವೈದ್ಯಕೀಯ ವರದಿ ನೆಗೆಟಿವ್ ಆದರೂ ‘ಪಾಸಿಟಿವ್’ ಎಂದ ಚಾನೆಲ್ ಗಳು

ವಾರ್ತಾಭಾರತಿವಾರ್ತಾಭಾರತಿ19 April 2020 7:15 PM IST
share
‘ಚನ್ನರಾಯಪಟ್ಟಣಕ್ಕೆ ಹೋದವರನ್ನು ದಿಲ್ಲಿಗೆ ಹೋದವರು’ ಎಂದು ಸುಳ್ಳು ಸುದ್ದಿ ಪ್ರಕಟಿಸಿದ ಕನ್ನಡ ಮಾಧ್ಯಮಗಳು !

#ತಹಶೀಲ್ದಾರ್ ಹೆಸರಲ್ಲಿ ಸುಳ್ಳು ಸುದ್ದಿ ಪ್ರಕಟ

ಹಾಸನ, ಎ.18: ಕೊರೋನ ಹೆಸರಲ್ಲಿ ಸುಳ್ಳು ಸುದ್ದಿ ಹರಡಿ ಮತ್ತೊಮ್ಮೆ ಕನ್ನಡದ ಮಾಧ್ಯಮಗಳು ಸಿಕ್ಕಿಬಿದ್ದಿವೆ. ಈ ಬಾರಿ ಹಾಸನಕ್ಕೆ ಸಂಬಂಧಿಸಿ ಚಾನೆಲ್ ಗಳು ಮತ್ತು ಒಂದು ಪತ್ರಿಕೆ ಈ ಸುಳ್ಳನ್ನು ಹರಡಿತ್ತು.

‘ಹಾಸನದಿಂದ ದಿಲ್ಲಿಯ ತಬ್ಲೀಗಿ ಧಾರ್ಮಿಕ ಸಭೆಗೆ ಹೋಗಿದ್ದ ಮೂವರನ್ನು ಹೋಂ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ’ ಎಂದು ಕನ್ನಡದ ಕೆಲ ಚಾನೆಲ್ ಗಳು ಮತ್ತು ದಿನ ಪತ್ರಿಕೆಯೊಂದು ವರದಿ ಬಿತ್ತರಿಸಿತ್ತು.

ದಿಲ್ಲಿಯ ತಬ್ಲೀಗಿ ಜಮಾಅತ್ ಸಮಾವೇಶಕ್ಕೆ ಹೋಗಿದ್ದ ಪಟ್ಟಣದ ಮೂವರನ್ನು ಹೋಂ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ, 'ತಪಾಸಣೆ ಒಳಪಡದೆ ತಪ್ಪಿಸಿಕೊಂಡಿದ್ದಾರೆ' ಎಂದು ‘ದಿಗ್ವಿಜಯ’ ಚಾನೆಲ್ ವರದಿ ಪ್ರಕಟಿಸಿದೆ. ಜೊತೆಗೆ,  'ಹಾಸನಕ್ಕೆ ಅಂಟಿದ ದೆಹಲಿ ಜಮಾಅತ್ ನಂಟು', 'ತಪಾಸಣೆ ಮಾಡಿಸದೆ ಓಡಾಡುತ್ತಿದ್ದರು' ಎಂದೆಲ್ಲಾ ಸುಳ್ಳನ್ನು ಪ್ರಕಟಿಸಿತ್ತು.

ಅಲ್ಲದೇ, 'ವಿಜಯವಾಣಿ' ಪತ್ರಿಕೆಯು ದಿಲ್ಲಿ ತಬ್ಲೀಗಿ ಧಾರ್ಮಿಕ ಸಭೆಗೆ ಹೋದವರಿಗೆ ಕ್ವಾರಂಟೈನ್ ಎಂದು ಪ್ರಕಟಿಸಿತ್ತು. ಈ ಮಾಹಿತಿಯನ್ನು ತಹಶೀಲ್ದಾರ್ ಶಿರಿನ್ ತಾಜ್ ನೀಡಿದ್ದಾರೆ ಎಂದು ವರದಿ ಮಾಡಿತ್ತು. ‘ಪಟ್ಟಣದ ಮೂವರು ಫೆಬ್ರವರಿ 10ರಂದು ದಿಲ್ಲಿಗೆ ಹೋಗಿ ಮಾರ್ಚ್ 20ರಂದು ಕುಣಿಗಲ್ ಗೆ ಬಂದು ನಂತರ ಆಲೂರಿಗೆ ವಾಪಸಾಗಿದ್ದಾರೆ. ಅಲ್ಲದೆ, 20 ದಿನಗಳು ಕಳೆದರೂ ವೈದ್ಯಕೀಯ ತಪಾಸಣೆ ಮಾಡಿಸಿಕೊಂಡಿಲ್ಲ’ ಎಂದು ಆರೋಪಿಸಲಾಗಿತ್ತು.  

ಇದೆಲ್ಲದರ ನಡುವೆ, ‘ಸುವರ್ಣ ನ್ಯೂಸ್’ ಚಾನೆಲ್ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ‘ಹಾಸನದ ಮೂಲದ ವ್ಯಕ್ತಿಗೆ ಪಾಸಿಟಿವ್’ ಎಂದು ಸುದ್ದಿ ಬಿತ್ತರಿಸಿತ್ತು. (ಹಾಸನದಲ್ಲಿ ಇದುವರೆಗೆ ಯಾವುದೇ ಕೊರೋನ ಪ್ರಕರಣ ದೃಢಪಟ್ಟಿಲ್ಲ )

ವಾಸ್ತವವೇನು?
ಈ ಮಾಧ್ಯಮಗಳು ಪ್ರಕಟಿಸಿದಂತೆ ಹಾಸನದ ಮೂವರು ವ್ಯಕ್ತಿಗಳು ದಿಲ್ಲಿಗೆ ಹೋಗಿಲ್ಲ. ಹಾಸನದ ಮೂವರು ಚನ್ನರಾಯಪಟ್ಟಣದಲ್ಲಿ ಫೆಬ್ರವರಿ 10ರಂದು ನಡೆದ ಹಾಸನ ಜಿಲ್ಲೆ ಮಟ್ಟದ ತಬ್ಲೀಗಿ ಜಮಾತ್ ಸಮಾವೇಶದಲ್ಲಿ ಭಾಗವಹಿಸಿ ನಂತರ 40 ದಿನಗಳ ಕಾಲ ವಿವಿಧೆಡೆ ಸಂಚರಿಸಿದ್ದರು. ಇವರು ಫೆಬ್ರವರಿ 10ರಿಂದ ಮಾರ್ಚ್ 20ರವರೆಗೆ ಕುಣಿಗಲ್ ಸುತ್ತಮುತ್ತಲ ಪ್ರದೇಶದಲ್ಲಿ ಸಂಚರಿಸಿದ್ದು, ಕಳೆದ ಮಾರ್ಚ್ 20ರಂದು ಊರಿಗೆ ಮರಳಿದ್ದರು. ಅಂದರೆ ಮಾರ್ಚ್ 22ರ ಜನತಾ ಕರ್ಫ್ಯೂ ಮೊದಲೇ ಈ ಮೂವರು ಆಲೂರು ತಲುಪಿದ್ದರು.

ಊರಿಗೆ ತಲುಪಿದ ನಂತರ ಈ ಮೂವರನ್ನು ಎಪ್ರಿಲ್ 16ರಂದು ತಾಲೂಕು ಆಡಳಿತದ ಪ್ರಮುಖ ಅಧಿಕಾರಿಗಳು ಭೇಟಿ ಮಾಡಿ ಆರೋಗ್ಯ ತಪಾಸಣೆ ನಡೆಸಿದ್ದರು. ತಪಾಸಣೆಯಲ್ಲಿ ಈ ಮೂವರ ವರದಿ ನೆಗೆಟಿವ್ ಬಂದಿತ್ತು.

ಸತ್ಯಾಂಶ ಹೀಗಿದ್ದರೂ ‘ದಿಗ್ವಿಜಯ’ ಮತ್ತು 'ಸುವರ್ಣ ನ್ಯೂಸ್' ಚಾನೆಲ್, 'ವಿಜಯವಾಣಿ' ಪತ್ರಿಕೆಯು ಎಪ್ರಿಲ್ 19ರಂದು ‘ದಿಲ್ಲಿಯ ತಬ್ಲೀಗ್ ಜಮಾಅತ್ ಧಾರ್ಮಿಕ ಸಭೆಗೆ ಹೋಗಿದ್ದರು ಮತ್ತು ಅವರನ್ನು ಹೋಂ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ’ ಎಂಬ ಸುಳ್ಳನ್ನು ಪ್ರಕಟಿಸಿದೆ.

ಈ ಮೂವರನ್ನು ‘ವಾರ್ತಾ ಭಾರತಿ’ಯ ಪ್ರತಿನಿಧಿ ಸಂಪರ್ಕಿಸಿ ಮಾತನಾಡಿದ್ದು, "ನಾವು ಕೂಡಾ ಮನುಷ್ಯರೇ. ನಮಗೂ ಸಂಸಾರ, ಸಮಾಜ, ಬಂಧು-ಬಳಗವಿದೆ. ಜವಾಬ್ದಾರಿ ಸಹ ಇದೆ. ನಾವು ದಿಲ್ಲಿಗೆ ಹೋಗಿದ್ದರೆ ಸ್ವಯಂ ತಪಾಸಣೆಗೆ ಒಳಗಾಗುತ್ತಿದ್ದೆವು. ತಾಲೂಕು ಆಡಳಿತ ತಪಾಸಣೆಗೆ ಮಂದಾದಾಗ ಸಂಪೂರ್ಣವಾಗಿ ಸಹಕಾರ ನೀಡಿದ್ದೇವೆ. ತಬ್ಲೀಗ್ ಜಮಾತ್ ಹೆಸರಲ್ಲಿ ಒಂದು ಧರ್ಮವನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಇವರ ವಿರುದ್ಧ ಕಾನೂನು ಹೋರಾಟ ಮಾಡಲಾಗುವುದು” ಎಂದು ಪ್ರತಿಕ್ರಿಯಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿ ತಹಶೀಲ್ದಾರ್ ಶೀರಿನ್ ತಾಜ್ ಪತ್ರಿಕೆಗೆ ಪ್ರತಿಕ್ರಿಯೆ ನೀಡಿದ್ದು, ‘ದಿಗ್ವಿಜಯ’ ಚಾನೆಲ್ ನಲ್ಲಿ ಬಂದಿರುವಂತಹ ಯಾವುದೇ ಹೇಳಿಕೆಯನ್ನು ನಾನು ನೀಡಿಲ್ಲ. ಜಿಲ್ಲಾಧಿಕಾರಿ ಮಾತ್ರವೇ ಈ ಬಗ್ಗೆ ಹೇಳಿಕೆಗಳನ್ನು ಕೊಡುತ್ತಾರೆ. ನಾವು ಯಾವುದೇ ಹೇಳಿಕೆಗಳನ್ನು ಕೊಟ್ಟಿಲ್ಲ. ಟಿವಿಯಲ್ಲಿ ಪ್ರಕಟಗೊಂಡ ಹೇಳಿಕೆ ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X