ಉಳಾಯಿಬೆಟ್ಟು, ಎ.19: ಗುರುಪುರ ಬಂಟರ ಮಾತೃ ಸಂಘದ ಗೌರವ ಸದಸ್ಯ, ಉಳಾಯಿಬೆಟ್ಟು ಮೂಲದ ಮುಂಬೈ ಉದ್ಯಮಿ ಆನಂದ ಶೆಟ್ಟಿ ಸಲ್ಲಾಜೆ ಅಲ್ಪಕಾಲದ ಅನಾರೋಗ್ಯದಿಂದ ರವಿವಾರ ಮುಂಜಾನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಗುರುಪುರ ಬಂಟರ ಮಾತೃ ಸಂಘವು ಸಂತಾಪ ವ್ಯಕ್ತಪಡಿಸಿದೆ.