Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಬೆಂಗಳೂರು
  3. ಶುಭ, ಅಶುಭಕ್ಕೆ ಶೋಭೆ ತರುತ್ತಿದ್ದ...

ಶುಭ, ಅಶುಭಕ್ಕೆ ಶೋಭೆ ತರುತ್ತಿದ್ದ ಬ್ಯಾಂಡ್‍ಸೆಟ್ ತಂಡಗಳಿಗೀಗ ಬದುಕಿನದ್ದೆ ಚಿಂತೆ

-ಪ್ರಕಾಶ್ ಅವರಡ್ಡಿ-ಪ್ರಕಾಶ್ ಅವರಡ್ಡಿ22 April 2020 12:01 AM IST
share
ಶುಭ, ಅಶುಭಕ್ಕೆ ಶೋಭೆ ತರುತ್ತಿದ್ದ ಬ್ಯಾಂಡ್‍ಸೆಟ್ ತಂಡಗಳಿಗೀಗ ಬದುಕಿನದ್ದೆ ಚಿಂತೆ

ಬೆಂಗಳೂರು, ಎ.21: ತಂತ್ರಜ್ಞಾನ ಸಾಕಷ್ಟು ಪ್ರಗತಿಯನ್ನು ಕಂಡರು ಕೂಡ ಈಗಲೂ ಮದುವೆ ಸಮಾರಂಭ, ಕೆಲವು ಸಮುದಾಯಗಳಲ್ಲಿನ ಶುಭ ಕಾರ್ಯಗಳು ಹಾಗೂ ಶುಭ ಕಾರ್ಯವಲ್ಲದ ವ್ಯಕ್ತಿಯ ಅಂತ್ಯ ಸಂಸ್ಕಾರಕ್ಕೂ ಬ್ಯಾಂಡ್‍ಸೆಟ್ ತಂಡವನ್ನು ಕರೆಸಿ ಅವರಿಂದ ಜನಪ್ರಿಯ ಕನ್ನಡ, ಹಿಂದಿ, ತಮಿಳು, ತೆಲುಗು ಚಿತ್ರಗೀತೆಗಳು ಹಾಗೂ ಶೋಕಗೀತೆಗಳನ್ನು ನುಡಿಸುವಂತೆ ಹೇಳುತ್ತಾರೆ.

ಆದರೆ, ಕೊರೋನ ವೈರಸ್ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಮುಂಜಾಗ್ರತ ಕ್ರಮವಾಗಿ ಜಾರಿ ಮಾಡಿರುವ ಲಾಕ್‍ಡೌನ್ ಹಿನ್ನೆಲೆಯಲ್ಲಿ ನಗರದ ಬ್ಯಾಂಡ್‍ಸೆಟ್ ತಂಡದವರಿಗೆ ಕೆಲಸವಿಲ್ಲದಂತಾಗಿದ್ದು, ಮನೆಯಲ್ಲಿನ ದಿನಸಿಯೂ ಖಾಲಿ ಆಗಿ ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ಪರಿಸ್ಥಿತಿ ಉದ್ಭವವಾಗಿದೆ.

ಬ್ಯಾಂಡ್‍ಸೆಟ್ ತಂಡದವರಿಗೆ ತಿಂಗಳಲ್ಲಿ 15 ರಿಂದ 20 ಕಾರ್ಯಕ್ರಮಗಳು ಸಿಕ್ಕೆ ಸಿಗುತ್ತವೆ. ಆದರೆ, ಲಾಕ್‍ಡೌನ್ ಹಿನ್ನೆಲೆಯಲ್ಲಿ ಒಂದೇ ಕಡೆಗೆ ಐದಾರು ಜನರು ಸೇರಬಾರದೆಂಬ ನಿಯಮ ಜಾರಿಯಿಂದಾಗಿ ಯಾವುದೇ ಕಾರ್ಯಕ್ರಮಕ್ಕೆ ನಮ್ಮನ್ನು ಕರೆಯುತ್ತಿಲ್ಲ. ಇದರಿಂದ, ನಮ್ಮ ಬ್ಯಾಂಡ್‍ಸೆಟ್ ಅಂಗಡಿಗಳನ್ನು ಸದ್ಯಕ್ಕೆ ಮುಚ್ಚಲಾಗಿದೆ. ಆದರೆ, ಕೈಯಲ್ಲಿ ಒಂದು ರೂಪಾಯಿ ಕೂಡ ಇಲ್ಲವಾಗಿದ್ದರಿಂದ ಪರಿಚಯದವರ ಬಳಿ ಸಾಲಕ್ಕೆ ಬೇಡಿಕೆಯನ್ನು ಇಟ್ಟಿದ್ದೇವೆ. ಅವರೂ ಲಾಕ್‍ಡೌನ್ ಹಿನ್ನೆಲೆಯಲ್ಲಿ ಹಣ ಕೊಡಲು ಮೀನಾಮೇಷ ಎಣಿಸುತ್ತಿದ್ದಾರೆ. 

ಬ್ಯಾಂಡ್‍ಸೆಟ್ ಅಂಗಡಿಗಳು ಕಲಾಸಿಪಾಳ್ಯ ಹಾಗೂ ಮೈಸೂರು ರಸ್ತೆ(ರಾಯನ್ ಸರ್ಕಲ್ ಬಳಿ) ಸೇರಿ ನಗರದ ನಾನಾ ಭಾಗಗಳಲ್ಲಿ ಬ್ಯಾಂಡ್‍ಸೆಟ್ ಅಂಗಡಿಗಳಿವೆ. ಆದರೆ, ಇವರು ಇಲ್ಲಿಯವರೆಗೆ ಯಾವುದೇ ಒಂದು ಸಂಘವನ್ನು ಕಟ್ಟಿಕೊಂಡಿಲ್ಲ. ಸರಕಾರ ಕೂಡ ಇವರಿಗೆ ಇಲ್ಲಿಯವರೆಗೆ ಯಾವುದೇ ಸಹಾಯಹಸ್ತವನ್ನೂ ಚಾಚಿಲ್ಲ. 

ಲಾಕ್‍ಡೌನ್ ಮೊದಲೇ ಸಾಲ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಬ್ಯಾಂಡ್‍ಸೆಟ್ ತಂಡದ ಸದಸ್ಯರು ಲಾಕ್‍ಡೌನ್ ಜಾರಿಯಾದ ಬಳಿಕ ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಲಾಕ್‍ಡೌನ್ ಮುಗಿಯುವತನಕವಾದರೂ ಬೇರೆ ಕೆಲಸಕ್ಕೆ ಹೋಗೋಣವೆಂದರೆ ಅದಕ್ಕೂ ಸಾಧ್ಯವಿಲ್ಲದಂತಾಗಿದೆ ಇವರ ಪರಿಸ್ಥಿತಿಗಳು.

ಸಾಮಾನ್ಯವಾಗಿ ಮದುವೆ ಕಾರ್ಯಕ್ರಮಕ್ಕೆ 15 ಜನರಿರುವ ಬ್ಯಾಂಡ್‍ಸೆಟ್ ತಂಡವೊಂದು ಹೋಗಿ ಜನಪ್ರಿಯ ಗೀತೆಗಳನ್ನು ನುಡಿಸಿ ಬಂದರೆ 8 ರಿಂದ 10 ಸಾವಿರ ರೂ.ಸಂಭಾವನೆ ಪಡೆಯುತ್ತಾರೆ. ಅದೇ ಸಾವು ಸಂಭವಿಸಿದಾಗ ನಾಲ್ವರು ಇರುವ ಬ್ಯಾಂಡ್‍ಸೆಟ್ ತಂಡ ಹೋಗಿ ಶೋಕಗೀತೆ ನುಡಿಸಿ, 5 ರಿಂದ 6 ಸಾವಿರ ರೂ.ಸಂಭಾವನೆ ಪಡೆಯುತ್ತಾರೆ ಎನ್ನುತ್ತಾರೆ ಕಲಾಸಿಪಾಳ್ಯದ ನ್ಯೂ ನೆಹರು ಬ್ಯಾಂಡ್‍ಸೆಟ್‍ನ ಮಾಲಕ ಅಶೋಕ್ ಅವರು. 

ತಮ್ಮ ತಾತನ ಕಾಲದಿಂದಲೂ ಬ್ಯಾಂಡ್‍ಸೆಟ್ ವೃತ್ತಿ ಕಸುಬಾಗಿ ಬಂದಿದೆ ಎನ್ನುವ ಅಶೋಕ್, ತಮ್ಮ ತಂಡದಲ್ಲಿರುವವರು ಯಾರೂ ಓದಿದವರಲ್ಲ ಅಥವಾ ಯಾವುದೇ ತರಬೇತಿ ಪಡೆದವರಲ್ಲ. ತಂಡದೊಂದಿಗಿದ್ದೆ ಈ ವಿದ್ಯೆ ಕಲಿಯಲಾಗುತ್ತದೆ. ಸಂಘಟನೆ ದೃಷ್ಟಿಯಿಂದ ನಾವು ತುಂಬಾ ಹಿಂದಿದ್ದೇವೆ. ಅಧಿಕೃತವಾಗಿ ಯಾವುದೇ ಸಂಘವಿಲ್ಲ. ಹೀಗಾಗಿ, ನಮ್ಮ ಸಮಸ್ಯೆಗಳ ಕಡೆ ಲಾಕ್‍ಡೌನ್ ಸಂದರ್ಭದಲ್ಲೂ ಸರಕಾರವೂ ಗಮನ ಹರಿಸುತ್ತಿಲ್ಲ ಎಂದು ನೊಂದು ನುಡಿಯುತ್ತಾರೆ. 

ಲಾಕ್‍ಡೌನ್ ಜಾರಿಯಾಗುವ ಮೊದಲು ಬೆಂಗಳೂರು ನಗರವಲ್ಲದೇ ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳ ರಾಜ್ಯಕ್ಕೂ ತೆರಳಿ ಕಾರ್ಯಕ್ರಮ ನೀಡುತ್ತಿದ್ದೆವು. ಸಾಮಾನ್ಯವಾಗಿ ಬ್ಯಾಂಡ್‍ಸೆಟ್‍ನಲ್ಲಿರುವ ಪ್ರತಿ ಸದಸ್ಯನಿಗೆ ಒಂದು ಕಾರ್ಯಕ್ರಮಕ್ಕೆ 600 ರಿಂದ 700 ರೂ.ಸಂಭಾವನೆ ನೀಡಲಾಗುತ್ತಿತ್ತು. ಹಿರಿತನ ಮತ್ತು ಅನುಭವದ ಆಧಾರದ ಮೇಲೂ ಸಂಭಾವನೆ ನೀಡಲಾಗುತ್ತಿತ್ತು. ಬ್ಯಾಂಡ್‍ಸೆಟ್ ತಂಡ ಫ್ಲೂಟು, ಕ್ಲಾರಿನೆಟ್, ಬ್ಯಾಸೂನ್, ಟ್ರಪೆಂಟ್, ಸ್ಯಾಕ್ಸೋಫೋನು, ಡೋಲು, ನಾದಸ್ವರ ಇತರ ಸಂಗೀತದ ಉಪಕರಣಗಳನ್ನು ಬಳಸುತ್ತದೆ.

‘ಜೀವನಾವಶ್ಯಕ ಪದಾರ್ಥಗಳ ಬೆಲೆಗಳು ಗಗನಕ್ಕೆ ಏರುತ್ತಿರುವ ಇಂದಿನ ದಿನಗಳಲ್ಲಿ, ಬೇರೆ ವೃತ್ತಿ ತಿಳಿಯದೆ, ಅಸಂಘಟಿತ ಕಾರ್ಮಿಕರಂತೆ ಇರುವ ಬ್ಯಾಂಡ್‍ಸೆಟ್ ವಾದಕರ ಜೀವನ ಸುಧಾರಣೆಗೆ ಸರಕಾರ ಗಮನಹರಿಸುವುದು ಅನಿವಾರ್ಯ ಹಾಗೂ ಅಗತ್ಯವಾಗಿದೆ. ಕೇಂದ್ರ ಸರಕಾರ ಲಾಕ್‍ಡೌನ್ ಜಾರಿಮಾಡಿದ್ದರಿಂದ ನಾವು ಆರ್ಥಿಕ ಶಕ್ತಿಯನ್ನೆ ಕಳೆದುಕೊಂಡಿದ್ದೇವೆ.’ 
-ಅಶೋಕ್, ಮಾಲಕ, ನ್ಯೂ ನೆಹರು ಬ್ಯಾಂಡ್‍ಸೆಟ್

share
-ಪ್ರಕಾಶ್ ಅವರಡ್ಡಿ
-ಪ್ರಕಾಶ್ ಅವರಡ್ಡಿ
Next Story
X