Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಪಾಲ್ಗರ್ ನಲ್ಲಿ ಸಾಧುಗಳ ಭಯಾನಕ ಗುಂಪು...

ಪಾಲ್ಗರ್ ನಲ್ಲಿ ಸಾಧುಗಳ ಭಯಾನಕ ಗುಂಪು ಹತ್ಯೆಗೆ ಕೋಮು ಬಣ್ಣ ಹಚ್ಚಲು ಯತ್ನ

ಇಲ್ಲದ 'ಶೋಯೆಬ್' ನನ್ನು ಸೃಷ್ಟಿಸಿದ ಬಿಜೆಪಿ , ಸಂಘ ಪರಿವಾರದ ಬೆಂಬಲಿಗರು

ವಾರ್ತಾಭಾರತಿವಾರ್ತಾಭಾರತಿ22 April 2020 9:48 AM IST
share
ಪಾಲ್ಗರ್ ನಲ್ಲಿ ಸಾಧುಗಳ ಭಯಾನಕ ಗುಂಪು ಹತ್ಯೆಗೆ ಕೋಮು ಬಣ್ಣ ಹಚ್ಚಲು ಯತ್ನ

ಘಟನೆಯಲ್ಲಿ ಆರೋಪಿಗಳು, ಬಲಿಪಶುಗಳು ಒಂದೇ ಧರ್ಮದವರು ಎಂದ ಪೊಲೀಸರು 

ಮಹಾರಾಷ್ಟ್ರ, ಎ.22: ಮಹಾರಾಷ್ಟ್ರದ ಪಾಲ್ಗರ್ ಜಿಲ್ಲೆಯ ಕಾಸ ಪೊಲೀಸ್ ಠಾಣೆ ವ್ಯಾಪ್ತಿಯ ಗಢಚಿಂಚಲೆ ಎಂಬ ಗ್ರಾಮದ ಬಳಿ ಎಪ್ರಿಲ್ 16ರಂದು ಸಶಸ್ತ್ರ ಗುಂಪೊಂದು ಮೂರು ಮಂದಿಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ ಕೊಂದು ಹಾಕಿತು. ಮೃತಪಟ್ಟವರಲ್ಲಿ ಇಬ್ಬರು ಸಾಧುಗಳು ಹಾಗು ಮೂರನೇ ವ್ಯಕ್ತಿ ಆ ಸಾಧುಗಳ ಕಾರಿನ ಡ್ರೈವರ್ ನೀಲೇಶ್. ಮೂರು ದಿನಗಳ ಬಳಿಕ ಈ ಭೀಕರ ಹಲ್ಲೆ ಹಾಗು ಕೊಲೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದವು. ಆದರೆ ಹೀಗೆ ವೈರಲ್ ಆಗುವಾಗ ಅದರೊಂದಿಗಿದ್ದ ವಿವರಣೆ ಮಾತ್ರ ಇನ್ನಷ್ಟು ಭಯಾನಕವಾಗಿತ್ತು. ಸಾಧುಗಳನ್ನು ಒಂದು ಸಮುದಾಯದ ಮಂದಿ ಹಲ್ಲೆ ನಡೆಸಿ ಕೋಮು ಹಿಂಸಾಚಾರರಲ್ಲಿ ಕೊಂದಿದ್ದಾರೆ ಎಂದು ಆ ವಿಡಿಯೋವನ್ನು ಬಣ್ಣಿಸಲಾಯಿತು. 

ಇದಕ್ಕಾಗಿ "ಮಾರ್ ಶೋಯೆಬ್ ಮಾರ್ (ಅವರಿಗೆ ಹೊಡಿ ಶೋಯೆಬ್, ಹೊಡಿ)" ಎಂದು ಆ ಗುಂಪು ಹೇಳುತ್ತಿತ್ತು ಎಂದು ಆ ಭಯಾನಕ ವಿಡಿಯೋವನ್ನು ಟ್ವೀಟ್ ಮಾಡಿದ ಹಲವರು ಬರೆದರು. ಚಿತ್ರ ನಿರ್ದೇಶಕ ಹಾಗು ಬಿಜೆಪಿ, ಸಂಘ ಪರಿವಾರದ ಕಟ್ಟಾ ಬೆಂಬಲಿಗ ಅಶೋಕ್ ಪಂಡಿತ್ ಕನಿಷ್ಠ ಎರಡು ಬಾರಿ ಆ ಗುಂಪು ಹತ್ಯೆಯಲ್ಲಿ ಭಾಗವಹಿಸಿದ್ದ ಒಬ್ಬನ ಹೆಸರು ಶೋಯೆಬ್ ಎಂದು ಹೇಳಿದರು. ಶೋಯೆಬ್ ಸಾಮಾನ್ಯವಾಗಿ ಮುಸ್ಲಿಮರು ಬಳಸುವ ಹೆಸರು. 

ಸದಾ ಕೋಮು ದ್ವೇಷದ ಸುದ್ದಿಗಳನ್ನೇ ಬಿತ್ತರಿಸುವ ಸುದರ್ಶನ್ ನ್ಯೂಸ್ ಟಿವಿ ವಾಹಿನಿಯ ಸುರೇಶ್ ಚಾವನ್ಕೆ ಅವರೂ ವಿಡಿಯೋದಲ್ಲಿ ನನಗೆ ಶೋಯೆಬ್ ಹೆಸರು ಕೇಳಿಸುತ್ತಿತ್ತು ಎಂದು ಹೇಳಿದರು. 

ಬಿಜೆಪಿ ದಿಲ್ಲಿ ಘಟಕದ ಮಾಧ್ಯಮ ವಿಭಾಗದ ರಿಚಾ ಪಾಂಡೆ ಮಿಶ್ರಾ ಅವರೂ ಈ ವಿಡಿಯೋವನ್ನು ಟ್ವೀಟ್ ಮಾಡಿ "ಅವರಿಗೆ ಹೊಡಿ ಶೋಯೆಬ್, ಹೊಡಿ" ಎಂದು ಬರೆದರು. ಅದೇ ಧಾಟಿಯಲ್ಲಿ ಟ್ವೀಟ್ ಮಾಡಿದ Yana Mir ಹಾಗು This Posable ಟ್ವೀಟ್ ಗಳು ಒಟ್ಟು 2,700 ಬಾರಿ ರಿಟ್ವೀಟ್ ಆದವು. ಅದೇ ರೀತಿಯ ಕೋಮು ಬಣ್ಣ ಹಚ್ಚಿ Our India ಎಂಬ ಫೇಸ್ ಬುಕ್ ಪೇಜ್ ಮಾಡಿದ ಪೋಸ್ಟ್  2,200 ಕ್ಕೂ ಹೆಚ್ಚು ಶೇರ್ ಆಗಿದೆ.  


ಮೃತ ಸಾಧುಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿ "ಕ್ರಿಸ್ಟಿಯನ್ ಮಿಷನರಿಗಳ ಗೂಂಡಾಗಳು ಮಾಡಿದ ಕೃತ್ಯ" ಎಂಬ ವಿವರಣೆಯನ್ನೂ ನೀಡಲಾಯಿತು.  

ಶೋಯೆಬ್ ಇಲ್ಲ 
ಈ ಘಟನೆಗೆ ಸಂಬಂಧಿಸಿದ ಹಲವು ಕೋನಗಳಿಂದ ತೆಗೆದ ಹಲವು ವಿಡಿಯೋಗಳನ್ನು Alt News ಕೇಳಿದೆ. ಆದರೆ ಅದರಲ್ಲಿ "ಬಸ್ ಒಯೆ ಬಸ್" ಅಂದರೆ ''ಸಾಕು, ಸಾಕು'' ಎಂದು ಹೇಳುವುದು ಮಾತ್ರ ಕೇಳಿದೆ. ಈ ಕೆಳಗಿನ ವಿಡಿಯೋದಲ್ಲೂ ಅದೇ ಕೇಳುತ್ತದೆ. ಹಾಗಾಗಿ ಆ ಘಟನೆಯಲ್ಲಿದ್ದ ಒಬ್ಬ ಆರೋಪಿ ಶೋಯೆಬ್ ಎಂಬ ಆರೋಪ ಸುಳ್ಳು ಎಂದು ಖಚಿತವಾಗುತ್ತದೆ.  

ಕೋಮು ದ್ವೇಷದ ಘಟನೆ ಅಲ್ಲ 

ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶಮುಖ್ ಅವರೂ ಟ್ವೀಟ್ ಮಾಡಿ ಪಾಲ್ಗರ್ ಘಟನೆ ಕೋಮು ದ್ವೇಷದ ಘಟನೆ ಅಲ್ಲ. ಅಲ್ಲಿ ಮೃತಪಟ್ಟವರು ಮತ್ತು ಕೊಲೆ ಆರೋಪಿಗಳು ಬೇರೆ ಬೇರೆ ಧರ್ಮದವರಲ್ಲ ಎಂದು ಸ್ಪಷ್ಟೀಕರಣ ನೀಡಿದರು. ಈ ಘಟನೆ ಕುರಿತು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕೂಡ ಸ್ಪಷ್ಟೀಕರಣ ನೀಡಿ ಅಲ್ಲಿ ಕಳ್ಳರು ತಿರುಗುತ್ತಿದ್ದಾರೆ ಎಂಬ ವದಂತಿ ಹೆಚ್ಚಾಗಿದ್ದರಿಂದ ಘಟನೆ ನಡೆದಿದೆ. ಆದರೆ ಅದರಲ್ಲಿ ಯಾವುದೇ ಕೋಮು ಹಿಂಸೆ ನಡೆದಿಲ್ಲ ಎಂದು ಹೇಳಿದರು. 

ಗಢಚಿಂಚಲೆ  ಗ್ರಾಮದಲ್ಲಿ ರಾತ್ರಿ ಪಾಳಿಯಲ್ಲಿ ಕಾವಲು ಕಾಯಲು ಊರಿನ ಜನರೇ ನೇಮಿಸಿದ್ದ ಸ್ಥಳೀಯ ಬುಡಕಟ್ಟು ಜನರು ಎಪ್ರಿಲ್ 16ರಂದು  ಕಾರೊಂದನ್ನು ತಡೆದು ನಿಲ್ಲಿಸಿದ್ದರು. ಅದರಲ್ಲಿ ಮೂರು ಮಂದಿಯಿದ್ದರು. ಇಬ್ಬರು ಸಾಧುಗಳು ಹಾಗು ಒಬ್ಬರು ಅವರ ಡ್ರೈವರ್. ಅವರು ಮುಂಬೈಯ ಕಾಂದಿವಲಿಯಿಂದ ಸಿಲ್ವಾಸಾಗೆ ಅಂತಿಮ ಸಂಸ್ಕಾರವೊಂದರಲ್ಲಿ ಭಾಗವಹಿಸಲು ಹೋಗುತ್ತಿದ್ದವರು. ಆ ಮೂವರನ್ನು ತಡೆದ ಗುಂಪು ಮೊದಲು ಅವರನ್ನು ಪ್ರಶ್ನಿಸಿತು, ಬಳಿಕ ಅವರ ಮೇಲೆ ಕಲ್ಲು ತೂರಾಟ ನಡೆಸಿತು ಮತ್ತು ಕೊನೆಗೆ ಅವರ ಮೇಲೆ ದೊಣ್ಣೆಗಳಿಂದ ಭೀಕರವಾಗಿ ಹಲ್ಲೆ ನಡೆಸಿತು. ಘಟನೆಗೆ ಸಂಬಂಧಿಸಿ ಪೊಲೀಸರು ನೂರಕ್ಕೂ ಹೆಚ್ಚು ಮಂದಿಯನ್ನು ಹಾಗು ಒಂಬತ್ತು ಅಪ್ರಾಪ್ತ ವಯಸ್ಕರನ್ನು ಬಂಧಿಸಿದ್ದಾರೆ.  

ಈ ಬಗ್ಗೆ  Alt News ಪಾಲ್ಗರ್ ಪೊಲೀಸರನ್ನು ಸಂಪರ್ಕಿಸಿದಾಗ ಅವರೂ ಈ ಘಟನೆಯಲ್ಲಿ ಯಾವುದೇ ಕೋಮು ಹಿಂಸೆ ನಡೆದಿಲ್ಲ. ಅಲ್ಲಿ ಆರೋಪಿಗಳು ಹಾಗು ಬಲಿಪಶುಗಳು ಒಂದೇ ಧರ್ಮದವರು ಎಂದು ಹೇಳಿದ್ದಾರೆ. ಊರಿನಲ್ಲಿ ವಲಸಿಗರು ಬಂದು ಕಳ್ಳತನ ನಡೆಸುತ್ತಾರೆ ಎಂಬ ವದಂತಿ ಜೋರಾಗಿತ್ತು. ಈ ವದಂತಿಕೋರರನ್ನು ಈಗ ಹುಡುಕಲಾಗುತ್ತಿದೆ ಎಂದು ಪಾಲ್ಗರ್ ಎಸ್ಪಿ ಗೌರವ್ ಸಿಂಗ್ 'ಇಂಡಿಯನ್ ಎಕ್ಸ್ ಪ್ರೆಸ್'ಗೆ ಹೇಳಿದ್ದಾರೆ. 

ಈ ಗುಂಪು ಹತ್ಯೆ ನಡೆಯುವ ಕೆಲವೇ ದಿನಗಳ ಮೊದಲು ಸಾರಣಿ ಎಂಬ ಗ್ರಾಮದಲ್ಲಿ ಡಾ.ವಿಶ್ವಾಸ್ ವಲವಿ ಎಂಬವರು ಆಹಾರ ಪೊಟ್ಟಣಗಳನ್ನು ವಿತರಿಸಿ ಸ್ಥಳೀಯ ಬುಡಕಟ್ಟು ಜನರಿಗೆ ಥರ್ಮಲ್ ಸ್ಕ್ರೀನಿಂಗ್ ಪರೀಕ್ಷೆ ನಡೆಸಿ ಮರಳುವಾಗ ಅವರ ಮೇಲೆ ದಾಳಿ ನಡೆದಿತ್ತು. ಆ ಘಟನೆಯಲ್ಲಿ ನಾಲ್ವರು ಪೊಲೀಸರೂ ಗಾಯಗೊಂಡಿದ್ದರು. 

ಪಾಲ್ಗರ್ ಗುಂಪು ಹತ್ಯೆಗೆ ಕೋಮು ಬಣ್ಣ ಹಚ್ಚಲು ವಿಫಲ ಯತ್ನ ನಡೆಸಿದ ಬಲಪಂಥೀಯ ಟ್ರೋಲ್ ಗಳು ಹಾಗು ಕೆಲವು ಪ್ರಮುಖ ವ್ಯಕ್ತಿಗಳು ಘಟನೆಯಲ್ಲಿ ಯಾವುದೇ ಕೋಮು ವಿಷಯವೇ ಇಲ್ಲ ಎಂದು ಸ್ಪಷ್ಟವಾದ ಮೇಲೆ ಮೌನವಾಗಿದ್ದಾರೆ. ಇವರು ಯಾರೂ ತಮ್ಮ ಸುಳ್ಳು ಟ್ವೀಟ್ ಗಳಿಗಾಗಿ ಕ್ಷಮೆ ಯಾಚಿಸಿದ ವರದಿ ಈವರೆಗೆ ಬಂದಿಲ್ಲ.   

ಮಾಹಿತಿ : ಜಿಗ್ನೇಶ್ ಪಟೇಲ್,  Alt News.

After watching this video it looks like Maharashtra people's are missing Balasaheb Thackeray badly. @CMOMaharashtra pls take some adequate actions agst the culprits nd stop portraying urself as the best CM. #Palghar #palgharlynching #PalgharMobLynching pic.twitter.com/Rnne4wInVz

— Suraj Singh Karakoti (@sskarakoti1996) April 19, 2020

#PalgharLynching को #Communal बताने वालों को Cm @OfficeofUT की #Hindi में #Warning

Full Video - https://t.co/Ahv2d6Rzcg@CMOMaharashtra . #PalgharMobLynching #Palghar #MaharashtraLynching pic.twitter.com/jVFrx5s2Sq

— Mumbai Tak (@mumbaitak) April 20, 2020
share
ವಾರ್ತಾಭಾರತಿ
ವಾರ್ತಾಭಾರತಿ
Next Story
X