ಬಸ್ರೂರಿನ ಯುವಕ ಅಬುಧಾಬಿಯಲ್ಲಿ ಮೃತ್ಯು

ಕುಂದಾಪುರ, ಎ.25: ಬಸ್ರೂರು ಮಾರ್ಗೋಳಿ ನಿವಾಸಿ ವೈ.ಮೊಯ್ದಿನ್ ಸಾಹೇಬ್ ಎಂಬವರ ಮಗ ಇಮ್ತಿಯಾಝ್(37) ಎಂಬವರು ಅಬುಧಾಬಿ ಯಲ್ಲಿ ಇಂದು ನಿಧನರಾದರು.
ಕಳೆದ 13 ವರ್ಷಗಳಿಂದ ದುಬೈಯಲ್ಲಿ ಇಂಜಿನಿಯರ್ ಆಗಿ ದುಡಿಯುತ್ತಿದ್ದ ಇವರು, ಅನಾರೋಗ್ಯಕ್ಕೆ ಒಳಗಾಗಿ ಕಳೆದ ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆನ್ನಲಾಗಿದೆ. ಗಂಭೀರ ಸ್ಥಿತಿಯಲ್ಲಿದ್ದ ಇವರು ಚಿಕಿತ್ಸೆ ಫಲ ಕಾರಿಯಾಗದೆ ಇಂದು ಬೆಳಗಿನ ಜಾವ ಮೃತ ಪಟ್ಟರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮೊಯ್ದಿನ್ ಸಾಹೇಬರ ಆರು(ಐವರು ಪುತ್ರರು ಹಾಗೂ ಓರ್ವ ಪುತ್ರಿ) ಮಕ್ಕಳಲ್ಲಿ ಇಮ್ತಿಯಾಝ್ ಎರಡನೆಯವರು. ತನ್ನ ಪತ್ನಿ, ಇಬ್ಬರು ಪುತ್ರಿಯ ರೊಂದಿಗೆ ಅಬುಧಾಬಿಯಲ್ಲಿ ವಾಸವಾಗಿದ್ದ ಇವರು, ಆರು ತಿಂಗಳ ಹಿಂದೆ ಊರಿಗೆ ಬಂದು ಅಬುಧಾಬಿಗೆ ಮರಳಿದ್ದರು.
ಮೃತರ ಸಹೋದರರು ಕೂಡ ದುಬೈಯಲ್ಲಿಯೇ ಇದ್ದು, ಮೃತದೇಹವನ್ನು ಅವರ ಕುಟುಂಬದವರಿಗೆ ಹಸ್ತಾಂತರಿಲಾಗಿದೆ ಎಂದು ಮೂಲಗಳು ತಿಳಿಸಿವೆ. ಇಮ್ತಿಯಾಝ್ ನ್ಯೂಮೋನಿಯ ಕಾಯಿಲೆಯಿಂದ ಮೃತಪಟ್ಟಿದ್ದು, ಆಸ್ಪತ್ರೆಯ ವರು ನಡೆಸಿದ ಕೊರೋನ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿದೆ. ಲಾಕ್ ಡೌನ್ನಿಂದಾಗಿ ಮೃತದೇಹವನ್ನು ಭಾರತಕ್ಕೆ ತರಲು ಅವಕಾಶ ಇಲ್ಲದಿರುವುದ ರಿಂದ ಅಲ್ಲೇ ಧಪನ ಮಾಡಲಾಗುವುದು ಎಂದು ಕುಟುಂಬಸ್ಥರು ಪತ್ರಿಕೆಗೆ ತಿಳಿಸಿದ್ದಾರೆ





