Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಗಲ್ಫ್
  4. ದುಬೈ: ವಂಚಕರಿಂದ ಭಾರತೀಯ ರಫ್ತುದಾರರಿಗೆ...

ದುಬೈ: ವಂಚಕರಿಂದ ಭಾರತೀಯ ರಫ್ತುದಾರರಿಗೆ 8.17 ಕೋಟಿ ರೂ. ವಂಚನೆ

ವಾರ್ತಾಭಾರತಿವಾರ್ತಾಭಾರತಿ30 April 2020 10:49 PM IST
share

ದುಬೈ, ಎ. 30: ದುಬೈಯಲ್ಲಿ ನಡೆದ ಭಾರಿ ವಂಚನಾ ಹಗರಣವೊಂದರಲ್ಲಿ, ಬಾಳೆಹಣ್ಣು, ಟೊಮ್ಯಾಟೋ, ದ್ರಾಕ್ಷಿ, ದಾಳಿಂಬೆ, ತೆಂಗಿನಕಾಯಿ ಮತ್ತು ಮೆಣಸನ್ನು ಭಾರೀ ಪ್ರಮಾಣದಲ್ಲಿ ಖರೀದಿಸಿರುವ ಕಂಪೆನಿಯೊಂದು, ಬಳಿಕ 4 ಮಿಲಿಯ ದಿರ್ಹಮ್ (ಸುಮಾರು 8.17 ಕೋಟಿ ರೂಪಾಯಿ)ಗೂ ಅಧಿಕ ಹಣವನ್ನು ರಫ್ತುದಾರರಿಗೆ ಪಾವತಿಸದೆ ವಂಚಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಹಲವಾರು ಭಾರತೀಯ ರಫ್ತುದಾರರು ವಂಚನೆಯ ಸುಳಿಗೆ ಸಿಲುಕಿದ್ದಾರೆ.

ಈ ಹಿಂದೆಯೂ ನಡೆದಿರುವ ಇಂಥದೇ ವಂಚನೆಯ ಮಾದರಿಯಲ್ಲೇ, ವಂಚಕರು ದುಬೈಯಲ್ಲಿ ಕಚೇರಿಯೊಂದನ್ನು ತೆರೆದು ರಫ್ತುದಾರ ಕಂಪೆನಿಗಳಿಂದ ವಸ್ತುಗಳ ಸಗಟು ಖರೀದಿಗೆ ಬೇಡಿಕೆ ಸಲ್ಲಿಸಿದ್ದರು. ಅವರು ತಮ್ಮ ಕಂಪೆನಿಯ ಹೆಸರನ್ನು ಡೈರಾದ ವಿಳಾಸ ಹೊಂದಿರುವ ಒಪಿಸಿ ಫೂಡ್‌ಸ್ಟಫ್ ಟ್ರೇಡಿಂಗ್ ಎಂಬುದಾಗಿ ನೀಡಿದ್ದರು.

ಮುಂಗಡವಾಗಿ ರಫ್ತುದಾರರಿಗೆ 25-30 ಶೇಕಡ ಹಣವನ್ನು ಟೆಲೆಕ್ಸ್ ಟ್ರಾನ್ಸ್ ಫರ್ ಮೂಲಕ ಪಾವತಿಸಲಾಯಿತು. ಬಾಕಿ ಹಣವನ್ನು ಸರಕು ತಲುಪಿದ ಒಂದರಿಂದ ಮೂರು ವಾರಗಳಲ್ಲಿ ಪಾವತಿಸಲಾಗುವುದು ಎಂದು ಹೇಳಲಾಗಿತ್ತು. ಆದರೆ, ಆ ಹಣ ರಫ್ತುದಾರರನ್ನು ತಲುಪಲೇ ಇಲ್ಲ. ಬದಲಿಗೆ, ಕಳೆದ ತಿಂಗಳು ಒಪಿಸಿ ಫೂಡ್‌ಸ್ಟಫ್ ಒಮ್ಮೆಲೆ ಬಾಗಿಲು ಹಾಕಿತು ಹಾಗೂ ಅದರ ಪಾಕಿಸ್ತಾನಿ ಮಾಲೀಕ ಸೇರಿದಂತೆ ಕಂಪೆನಿಯ ಎಲ್ಲ ಸಿಬ್ಬಂದಿ ಮರೆಯಾದರು ಎಂದು ವಂಚನೆಗೊಳಗಾದವರು ಹೇಳುತ್ತಾರೆ. ಅವರ ಫೋನ್‌ಗಳು ಸ್ವಿಚ್ಡ್ ಆಫ್ ಆಗಿವೆ.

ಭಾರತದ ಹಲವಾರು ರಫ್ತು ಕಂಪೆನಿಗಳು ಈ ಹಗರಣದಲ್ಲಿ ವಂಚನೆಗೊಳಗಾಗಿವೆ. ಅವುಗಳ ಪೈಕಿ ಹೆಚ್ಚಿ ನವುಗಳು ಹೊಸದಾಗಿ ಸ್ಥಾಪನೆಯಾಗಿರುವ ರಫ್ತು ಸಂಸ್ಥೆಗಳು.

ಒಟ್ಟು 288 ಟನ್ ಬಾಳೆಹಣ್ಣು, 147 ಟನ್ ದ್ರಾಕ್ಷಿ ಮತ್ತು ದಾಳಿಂಬೆ, 129 ಟನ್ ತೆಂಗಿನಕಾಯಿ, 90 ಟನ್ ಹಸಿಮೆಣಸು, 32 ಟನ್ ಟೊಮ್ಯಾಟೊ, 31 ಟನ್ ಶುಂಠಿ ಮತ್ತು ಸುಮಾರು 7 ಟನ್ ನಿಂಬೆಹಣ್ಣುಗಳನ್ನು ವಂಚಕ ಕಂಪೆನಿಯು ರಫ್ತು ರೂಪದಲ್ಲಿ ಪಡೆದಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X