ದೂರವಾಣಿ ಕರೆ ಮಾಡಿ ಬೆದರಿಕೆ ಆರೋಪ : ದೂರು
ಮಂಗಳೂರು, ಮೇ 1: ಕಾವೂರು ಗಾಂಧಿನಗರದ ತಿರುಮಲ ಗ್ಯಾಸ್ ಗೋದಾಮು ಬಳಿ ಹೊಸತಾಗಿ ಮೀನಿನ ವ್ಯಾಪಾರ ಆರಂಭಿಸಿದ ಗಾಂಧಿನಗರ ನಿವಾಸಿ ಸಾಕ್ಷಾತ್ ಶೆಟ್ಟಿ ಅವರಿಗೆ ಎ. 26 ರಂದು ಅಪರಿಚಿತರು ದೂರವಾಣಿ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ನಾನು ಮೀನಿನ ವ್ಯಾಪಾರ ಆರಂಭಿಸಿದ್ದನ್ನು ಸಹಿಸದ ಕೆಲವರು ಕರೆ ಮಾಡಿ, ಮೀನಿನ ವ್ಯಾಪಾರ ಮಾಡಲು ಬಿಡುವುದಿಲ್ಲ’ ಎಂಬುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಶಾಕ್ಷಾತ್ ಶೆಟ್ಟಿ ಪೊಲೀಸ್ ಠಾಣೆಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ.
Next Story





