Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಕೊರೋನ ವೈರಸ್: ಗುಜರಾತ್ ನ ಅಹ್ಮದಾಬಾದ್...

ಕೊರೋನ ವೈರಸ್: ಗುಜರಾತ್ ನ ಅಹ್ಮದಾಬಾದ್ ಸ್ಥಿತಿ ಶೋಚನೀಯ

ಹೆಚ್ಚುತ್ತಿರುವ ಸಾವಿನ ಪ್ರಮಾಣ

ವಾರ್ತಾಭಾರತಿವಾರ್ತಾಭಾರತಿ2 May 2020 10:18 PM IST
share
ಕೊರೋನ ವೈರಸ್: ಗುಜರಾತ್ ನ ಅಹ್ಮದಾಬಾದ್ ಸ್ಥಿತಿ ಶೋಚನೀಯ

ಹೊಸದಿಲ್ಲಿ,ಮೇ 2: ದೇಶಾದ್ಯಂತ ದಾಖಲಾಗಿರುವ ಒಟ್ಟು ಕೊರೋನ ವೈರಸ್ ಸೋಂಕು ಪ್ರಕರಣಗಳಲ್ಲಿ ಮುಂಬೈ ಮಹಾನಗರದ ಪಾಲು ಶೇ.20ಕ್ಕೂ ಅಧಿಕವಾಗಿದೆ. ಮಹಾರಾಷ್ಟ್ರದಲ್ಲಿಯ ಒಟ್ಟು ಪ್ರಕರಣಗಳ ಪೈಕಿ ಶೇ.71.13ರಷ್ಟು ಮುಂಬೈನಲ್ಲಿಯೇ ದಾಖಲಾಗಿವೆ. ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ದರವು ಅತ್ಯಂತ ಕಳವಳಕಾರಿಯಾಗಿದ್ದು,ಎ.18ರಿಂದ ಎ.30ರವರೆಗಿನ ಕೇವಲ 12 ದಿನಗಳ ಅವಧಿಯಲ್ಲಿ ಇಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ 3.39 ಪಟ್ಟು ಏರಿಕೆಯಾಗಿದೆ.

ಅತ್ತ ಗುಜರಾತಿನ ಅತ್ಯಂತ ದೊಡ್ಡ ನಗರವಾಗಿರುವ ಅಹ್ಮದಾಬಾದ್‌ನಲ್ಲಿ ಸ್ಥಿತಿ ಅತ್ಯಂತ ಶೋಚನೀಯವಾಗಿದೆ. ರಾಜ್ಯದಲ್ಲಿಯ ಒಟ್ಟು ಸಾವುಗಳ ಪೈಕಿ ಶೇ.75ರಷ್ಟು ಅಹ್ಮದಾಬಾದ್‌ನಲ್ಲಿಯೇ ಸಂಭವಿಸಿವೆ. ಕಳೆದ 12 ದಿನಗಳಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ 5.13 ಪಟ್ಟು ಏರಿಕೆಯಾಗುವುದರೊಂದಿಗೆ ಈ ನಗರದಲ್ಲಿ ದೇಶದಲ್ಲಿಯೇ ಅತ್ಯಂತ ವೇಗವಾಗಿ ಸೋಂಕು ಹರಡುತ್ತಿದೆ. ಇಲ್ಲಿ ಸಾವಿನ ದರವು ಶೇ.4.92ರಷ್ಟಿದ್ದು ರಾಷ್ಟ್ರೀಯ ಸರಾಸರಿಯಾದ ಶೇ.3.2ಕ್ಕೆ ಹೋಲಿಸಿದರೆ ತುಂಬ ಅಧಿಕವಾಗಿದೆ.

 ಮಧ್ಯಪ್ರದೇಶದಲ್ಲಿಯ ಕೊರೋನ ಸಾವುಗಳ ಅರ್ಧಕ್ಕೂ ಹೆಚ್ಚು,ಅಂದರೆ 68 ಸಾವುಗಳು ಇಂದೋರ್ ನಗರದಲ್ಲಿ ಸಂಭವಿಸಿದೆಯಾದರೂ ಇತರ ಅತ್ಯಂತ ಪೀಡಿತ ನಗರಗಳಿಗೆ ಹೋಲಿಸಿದರೆ ಪ್ರಕರಣಗಳ ವೃದ್ಧಿ ದರ ನಿಧಾನವಾಗಿದೆ. ಚೆನ್ನೈ ಮತ್ತು ಸೂರತ್‌ಗಳಲ್ಲಿ ಕಳೆದ 12 ದಿನಗಳಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ನಾಲ್ಕು ಪಟ್ಟು ಏರಿಕೆಯಾಗಿದೆ. ಹಾಟ್‌ಸ್ಪಾಟ್ ಕುಖ್ಯಾತಿಗೆ ಒಳಗಾಗಿರುವ ಮಹಾನಗರಗಳು ಕೊರೋನ ವೈರಸ್ ಪಿಡುಗನ್ನು ನಿಯಂತ್ರಿಸಲು ಹೆಣಗಾಡುತ್ತಿರುವ ದೇಶಕ್ಕೆ ಬೃಹತ್ ಸವಾಲುಗಳನ್ನು ಒಡ್ಡಿವೆ. ಮುಂಬೈ ಮತ್ತು ಅಹ್ಮದಾಬಾದ್‌ಗಳಲ್ಲಿ ದೇಶದಲ್ಲಿಯ ಶೇ.41ರಷ್ಟು ಸಾವುಗಳು ಸಂಭವಿಸಿವೆ.

ಉತ್ತರ ಪ್ರದೇಶದಲ್ಲಿ ಗರಿಷ್ಠ(19) ಕೊರೋನ ವೈರಸ್ ಹಾಟ್‌ಸ್ಪಾಟ್ ಜಿಲ್ಲೆಗಳಿದ್ದು,ನಂತರದ ಸ್ಥಾನಗಳಲ್ಲಿ ಮಹಾರಾಷ್ಟ್ರ(14), ತಮಿಳುನಾಡು(12), ದಿಲ್ಲಿ(11) ಮತ್ತು ಪಶ್ಚಿಮ ಬಂಗಾಳ(10)ಗಳಿವೆ. ಅಸ್ಸಾಂ, ಗೋವಾ ಮತ್ತು ಹಿಮಾಚಲ ಪ್ರದೇಶ ಸೇರಿದಂತೆ 15 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಯಾವುದೇ ಹಾಟ್‌ಸ್ಪಾಟ್ ಜಿಲ್ಲೆಗಳಿಲ್ಲ.

ಎ.30ಕ್ಕೆ ಇದ್ದಂತೆ ದೇಶದಲ್ಲಿಯ ಒಟ್ಟು 33,610 ಪ್ರಕರಣಗಳಲ್ಲಿ ಅತ್ಯಂತ ಪೀಡಿತ ಹಾಟ್‌ಸ್ಪಾಟ್ ಜಿಲ್ಲೆಗಳಲ್ಲಿ 18,005 (ಶೇ.53.57) ಪ್ರಕರಣಗಳಿದ್ದವು. ದೇಶದ ಒಟ್ಟು ಸಾವುಗಳ ಪೈಕಿ ಶೇ.71ರಷ್ಟು ಈ ಜಿಲ್ಲೆಗಳಲ್ಲಿಯೇ ಸಂಭವಿಸಿವೆ. ಈ ಪೈಕಿ ಹೆಚ್ಚಿನ ಜಿಲ್ಲೆಗಳು ಬೃಹತ್ ಆರ್ಥಿಕ ಚಟುವಟಿಕೆಗಳ ಶಕ್ತಿಕೇಂದ್ರಗಳಾಗಿರುವುದು ಸಮಸ್ಯೆಯನ್ನು ಇನ್ನಷ್ಟು ಸಂಕೀರ್ಣಗೊಳಿಸಿದೆ. ಇವುಗಳಲ್ಲಿ ಐದು ರಾಜ್ಯ ರಾಜಧಾನಿಗಳಾಗಿದ್ದರೆ ಎರಡು ತಮ್ಮ ರಾಜ್ಯಗಳಲ್ಲಿ ಅತ್ಯಂತ ದೊಡ್ಡ ನಗರಗಳಾಗಿವೆ. ದಿಲ್ಲಿಯ ಎಲ್ಲ 11 ಜಿಲ್ಲೆಗಳನ್ನು ರೆಡ್ ಝೋನ್‌ಗಳೆಂದು ಘೋಷಿಸಲಾಗಿದೆ.

 ಕೇಂದ್ರ ಆರೋಗ್ಯ ಸಚಿವಾಲಯವು ಒಟ್ಟು 130 ಹಾಟ್‌ ಸ್ಪಾಟ್‌ ಗಳು ಅಥವಾ ರೆಡ್ ಝೋನ್‌ಗಳನ್ನು ಗುರುತಿಸಿದೆ. 284 ಜಿಲ್ಲೆಗಳನ್ನು ಆರೆಂಜ್ ಮತ್ತು 319 ಜಿಲ್ಲೆಗಳನ್ನು ಗ್ರೀನ್ ವಲಯಗಳೆಂದು ಘೋಷಿಸಲಾಗಿದೆ. ಲಭ್ಯ ಅಂಕಿಅಂಶಗಳಂತೆ ಕೋವಿಡ್-19 ಪೀಡಿತ ಜಿಲ್ಲೆಗಳ ಸಂಖ್ಯೆ 406ರಿಂದ 475ಕ್ಕೆ ಏರಿಕೆಯಾಗಿದ್ದರೆ,ಏ.18ರಂದು 170ರಷ್ಟಿದ್ದ ಹಾಟ್‌ಸ್ಪಾಟ್‌ಗಳ ಸಂಖ್ಯೆ ಮೇ 1ಕ್ಕೆ 130ಕ್ಕೆ ಇಳಿದಿದೆ. ಆದರೆ 15 ದಿನಗಳ ಅವಧಿಯಲ್ಲಿ ಒಟ್ಟು ಗ್ರೀನ್ ಝೋನ್‌ಗಳ ಸಂಖ್ಯೆ 353ರಿಂದ 319ಕ್ಕೆ ಕುಸಿದಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X