ಮೂಡಿಗೆರೆ: ಈಜಲು ತೆರಳಿದ್ದ ಯುವಕ ನೀರಿನಲ್ಲಿ ಮುಳುಗಿ ಮೃತ್ಯು
ಸಾಂದರ್ಭಿಕ ಚಿತ್ರ
ಚಿಕ್ಕಮಗಳೂರು, ಮೇ 5: ನದಿಯಲ್ಲಿ ಈಜಲು ತೆರಳಿದ್ದ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಮೂಡಿಗೆರೆ ತಾಲೂಕಿನ ಹಾಲೂರು-ಕೂಡಿಗೆ ಗ್ರಾಮದಲ್ಲಿ ಸೋಮವಾರ ಸಂಜೆ ವರದಿಯಾಗಿದೆ.
ಹಂಡಗುಳಿ ಗ್ರಾಮದ ನಿವಾಸಿ ಗವಿರಾಜ್(27) ಮೃತ ಯುವಕ ಎಂದು ತಿಳಿದು ಬಂದಿದೆ. ಸೋಮವಾರ ಸಂಜೆ ವೇಳೆ ಸ್ನೇಹಿತರೊಂದಿಗೆ ಹೇಮಾವತಿ ನದಿ ತೀರಕ್ಕೆ ತೆರಳಿದ್ದ ಗವಿರಾಜ್ ಸ್ನೇಹಿತರೊಂದಿಗೆ ಈಜಲು ನದಿಗಿಳಿದಿದ್ದಾನೆ. ಈಜಾಡುತ್ತಲೇ ನದಿಯಲ್ಲಿದ್ದ ಆಳದ ಗುಂಡಿಯೊಂದರ ಬಳಿ ಹೋಗಿದ್ದ ಈತ ನದಿಯ ಆಳದ ಅರಿವಿಲ್ಲದೇ ಮುಳುಗಿದ್ದು, ಮೇಲೆ ಬರಲಾಗದೇ ಮುಳುಗಿ ಮೃತಪಟ್ಟಿದ್ದಾನೆಂದು ತಿಳಿದು ಬಂದಿದೆ.
ಸ್ಥಳೀಯರು ಹಾಗೂ ಗೋಣಿಬೀಡು ಠಾಣೆಯ ಪೊಲೀಸರು, ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಗವಿರಾಜ್ನ ಮೃತದೇಹವನ್ನು ನದಿಯಿಂದ ಹೊರ ತೆಗೆದಿದ್ದಾರೆಂದು ತಿಳಿದುಬಂದಿದ್ದು, ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
Next Story