Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಕೇಂದ್ರ ಸರಕಾರದ ಮನವಿ: ಸಂಸದ ತೇಜಸ್ವಿ...

ಕೇಂದ್ರ ಸರಕಾರದ ಮನವಿ: ಸಂಸದ ತೇಜಸ್ವಿ ಸೂರ್ಯರ ಪ್ರಚೋದನಕಾರಿ ಟ್ವೀಟ್‌ ಬ್ಲಾಕ್ ಮಾಡಿದ ಟ್ವಿಟರ್

ವಾರ್ತಾಭಾರತಿವಾರ್ತಾಭಾರತಿ8 May 2020 6:43 PM IST
share
ಕೇಂದ್ರ ಸರಕಾರದ ಮನವಿ: ಸಂಸದ ತೇಜಸ್ವಿ ಸೂರ್ಯರ ಪ್ರಚೋದನಕಾರಿ ಟ್ವೀಟ್‌ ಬ್ಲಾಕ್ ಮಾಡಿದ ಟ್ವಿಟರ್

ಹೊಸದಿಲ್ಲಿ, ಮೇ 8: ಸಂಸದ ತೇಜಸ್ವಿ ಸೂರ್ಯ ಆಡಳಿತ ಬಿಜೆಪಿ ಪಕ್ಷದಲ್ಲಿ ಯುವ ನಾಯಕನಾಗಿರಬಹುದು. ಆದರೆ ಸಂಸದನಾಗುವ ಮೊದಲಿನ ಅವರ ಪ್ರಖರ ಧರ್ಮಾಂಧತೆ ಭಾರತ ಸರಕಾರಕ್ಕೆ ರಾಜತಾಂತ್ರಿಕ ಮುಜುಗರವನ್ನು ಮಾಡಿರುವಂತಿದೆ. ಸರಕಾರವು ಕಳೆದ ತಿಂಗಳು ಮಾಡಿಕೊಂಡಿದ್ದ ಮನವಿಯ ಮೇರೆಗೆ 2015ರಿಂದೀಚಿನ ತೇಜಸ್ವಿಯವರ ಟ್ವೀಟ್‌ಗಳ ಪೈಕಿ ಇಸ್ಲಾಮಿಗೂ ಭಯೋತ್ಪಾದಕರಿಗೂ ತಳುಕು ಹಾಕಿದ್ದ ಟ್ವೀಟ್‌ನ್ನು ಟ್ವಿಟರ್ ತೆಗೆದುಹಾಕಿದೆ.

“ಹೌದು, ಭಯೋತ್ಪಾದನೆಗೆ ಧರ್ಮವಿಲ್ಲ ನಿಜ. ಆದರೆ ಭಯೋತ್ಪಾದಕನಿಗೆ ಖಂಡಿತವಾಗಿಯೂ ಧರ್ಮವಿದೆ ಮತ್ತು ಅದು ಹೆಚ್ಚಿನ ಪ್ರಕರಣಗಳಲ್ಲಿ ಇಸ್ಲಾಂ ಆಗಿದೆ” ಎಂದು ತೇಜಸ್ವಿ ತನ್ನ ಈ ಟ್ವೀಟ್‌ನಲ್ಲಿ ಹೇಳಿದ್ದರು.

ಭಾರತ ಸರಕಾರದ ಮನವಿಯ ಮೇರೆಗೆ ಭಾರತದಲ್ಲಿ ವೀಕ್ಷಣೆಗೆ ಅಲಭ್ಯವಾಗಿಸಿರುವ ನೂರಾರು ಟ್ವೀಟ್‌ಗಳಲ್ಲಿ ತೇಜಸ್ವಿಯವರ ಟ್ವೀಟ್ ಕೂಡ ಒಂದಾಗಿದೆ ಎನ್ನುವುದನ್ನು ಲುಮೆನ್ ಡಾಟಾಬೇಸ್‌ನ ಪ್ರಕಟಣೆಯು ತೋರಿಸಿದೆ. ಹಾರ್ವರ್ಡ್ ವಿವಿಯ ಬರ್ಕಮನ್ ಕ್ಲೀನ್ ಸೆಂಟರ್ ಆರಂಭಿಸಿರುವ ಈ ಡಾಟಾಬೇಸ್ ಕಂಟೆಂಟ್‌ಗಳನ್ನು ತೆಗೆದುಹಾಕುವವಂತೆ ಟ್ವಿಟರ್ ಸ್ವೀಕರಿಸುವ ಇಂತಹ ಮನವಿಗಳನ್ನು ಸಂಕಲಿಸಿ ಪ್ರಕಟಿಸುತ್ತದೆ.

ಭಾರತದ ಮನವಿಯ ಮೇರೆಗೆ ತೆಗೆಯಲಾಗಿರುವ ಇಂತಹ ಟ್ವೀಟ್‌ಗಳಲ್ಲಿ ಹೆಚ್ಚಿನವು ಕೋಮುಬಣ್ಣವನ್ನು ಹೊಂದಿದ್ದವು ಅಥವಾ ಧಾರ್ಮಿಕ ಗುಂಪುಗಳ ನಡುವೆ ಘರ್ಷಣೆಗೆ ಕಾರಣವಾಗುವ ಸಾಧ್ಯತೆಯನ್ನು ಹೊಂದಿದ್ದವು.

ಟ್ವಿಟರ್ ತಡೆಹಿಡಿದಿರುವ ಟ್ವೀಟ್‌ಗಳಲ್ಲಿ ಕೆಲವು ಭಾರೀ ಸಂಖ್ಯೆಯಲ್ಲಿ ಫಾಲೋವರ್‌ಗಳನ್ನು ಹೊಂದಿರುವ ಬಲಪಂಥೀಯ ಖಾತೆಗಳಿಗೆ ಸೇರಿದ್ದಾಗಿವೆ. ಬೆಂಗಳೂರು (ದಕ್ಷಿಣ) ಕ್ಷೇತ್ರದ ಲೋಕಸಭಾ ಸದಸ್ಯರಾಗಿರುವ ತೇಜಸ್ವಿ ಐದು ಲಕ್ಷಕ್ಕೂ ಅಧಿಕ ಫಾಲೋವರ್‌ಗಳನ್ನು ಹೊಂದಿದ್ದಾರೆ.

ತೇಜಸ್ವಿಯವರ ಟ್ವೀಟ್‌ನ್ನು ತೆಗೆಯುವಂತೆ ಕೋರಿ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯವು ಎ.28ರಂದು ಟ್ವಿಟರ್‌ಗೆ ಕಳುಹಿಸಿದ್ದ ನೋಟಿಸ್‌ನಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆ, 2000ರ ಕಲಂ 69 ಎ ಅನ್ನು ಉಲ್ಲೇಖಿಸಿತ್ತು.

ಭಾರತವು ಕೋರಿದ್ದ ಟ್ವೀಟ್‌ಗಳನ್ನು ಟ್ವಿಟರ್ ಭಾರತೀಯ ಬಳಕೆದಾರರಿಗೆ ಅಲಭ್ಯವಾಗಿಸಿದೆಯಾದರೂ ಇತರ ದೇಶಗಳಲ್ಲಿ ಇವುಗಳನ್ನು ವೀಕ್ಷಿಸಬಹುದಾಗಿದೆ.

ಟ್ವಿಟರ್ ತೆಗೆದುಹಾಕಿರುವ ಇಂತಹ ಸುಮಾರು 130 ಟ್ವೀಟ್‌ಗಳನ್ನು ಸುದ್ದಿ ಜಾಲತಾಣ Thewire.in ವಿಶ್ಲೇಷಿಸಿದ್ದು, ಇವುಗಳ ಪೈಕಿ ಶೇ.60ರಷ್ಟು ಇಸ್ಲಾಮಾಫೋಬಿಕ್ ಆಗಿದ್ದರೆ,ಉಳಿದವುಗಳನ್ನು ಇಸ್ಲಾಮಿಸ್ಟ್,ಹಿಂದು ವಿರೋಧಿ, ಬಿಜೆಪಿ/ಆರ್‌ಎಸ್‌ಎಸ್ ವಿರೋಧಿ ಎಂದು ಪರಿಗಣಿಸಬಹುದಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X