Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ದೇವೇಗೌಡರ ಬದುಕಿನ ನಿಗೂಢ ಕತೆಗಳು

ದೇವೇಗೌಡರ ಬದುಕಿನ ನಿಗೂಢ ಕತೆಗಳು

ಆರ್.ಟಿ.ವಿಠ್ಠಲಮೂರ್ತಿಆರ್.ಟಿ.ವಿಠ್ಠಲಮೂರ್ತಿ18 May 2020 10:30 AM IST
share
ದೇವೇಗೌಡರ ಬದುಕಿನ ನಿಗೂಢ ಕತೆಗಳು

ಇದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಬದುಕಿನಲ್ಲಿ ನಡೆದ ವಿಸ್ಮಯಕಾರಿ ಘಟನೆ. ಒಂದು ಸಲ (2004) ತಮಗೆ ಬಂದ ಕರೆಯ ಹಿನ್ನೆಲೆಯಲ್ಲಿ ಬಸವರಾಜ ಬೊಮ್ಮಾಯಿ ಬೆಂಗಳೂರಿನ ಪದ್ಮನಾಭನಗರದಲ್ಲಿರುವ ಆ ಮನೆಗೆ ಹೋಗುತ್ತಾರೆ. ಹೀಗೆ ಹೋದವರು ಅಲ್ಲಿದ್ದವರ ಮಾತಿನಂತೆ ಮನೆಯ ಮೊದಲ ಮಹಡಿಗೆ ಹೋಗುತ್ತಾರೆ. ಈ ರೀತಿ ಹೋದವರಿಗೆ ಅಚ್ಚರಿ ಕಾದಿರುತ್ತದೆ. ಯಾಕೆಂದರೆ ಮನೆಗೆ ಬರುವಂತೆ ಅವರಿಗೆ ಕರೆ ಮಾಡಿದವರು ಮನೆಯ ಗೋಡೆಗೆ ಮುಖ ಮಾಡಿ ಕುಳಿತಿರುತ್ತಾರೆ.

ಸರಿ, ಬಸವರಾಜ ಬೊಮ್ಮಾಯಿಯವರು ಬಂದಿದ್ದನ್ನು ಮನೆಯ ಯಜಮಾನತಿ ಗೋಡೆ ನೋಡುತ್ತಾ ಕುಳಿತಿದ್ದವರಿಗೆ ಹೇಳುತ್ತಾರೆ. ಅಂದ ಹಾಗೆ ಅವತ್ತು ಗೋಡೆಯನ್ನು ತದೇಕಚಿತ್ತದಿಂದ ನೋಡುತ್ತಾ ಕುಳಿತವರ ಹೆಸರೇನು ಗೊತ್ತಾ?

ಎಚ್.ಡಿ.ದೇವೇಗೌಡ.

ಬಸವರಾಜ ಬೊಮ್ಮಾಯಿಯವರು ಬಂದಿದ್ದಾರೆ ಎಂಬ ವಿಷಯ ಕಿವಿಗೆ ಬಿದ್ದರೂ ತಿರುಗಿ ನೋಡದೆ ಕೈ ಸನ್ನೆ ಮಾಡಿ ಕುಳಿತುಕೊಳ್ಳಿ ಬಸವರಾಜ್‌ ಎನ್ನುತ್ತಾರೆ. ಅವರ ಮಾತಿನಂತೆ ಅಲ್ಲೇ ಇದ್ದ ಖುರ್ಚಿಯ ಮೇಲೆ ಕುಳಿತ ಬಸವರಾಜ ಬೊಮ್ಮಾಯಿ. “ಸಾರ್‌ ಬರಲು ಹೇಳಿದ್ದಿರಿ, ಯಾಕೆ ಅಂತ ಕೇಳಬಹುದಾ?” ಅಂತ ಪ್ರಶ್ನಿಸುತ್ತಾರೆ.

ಗೋಡೆಯನ್ನು ನೋಡುತ್ತಾ ಕುಳಿತಿದ್ದ ದೇವೇಗೌಡರು, “ನಿಮ್ಮಿಂದ ಒಂದು ನೆರವಾಗಬೇಕಲ್ಲ ಬಸವರಾಜ್” ಎನ್ನುತ್ತಾರೆ. ಅಚ್ಚರಿಗೊಂಡ ಬಸವರಾಜ ಬೊಮ್ಮಾಯಿ, “ನನ್ನಿಂದ ನೆರವೇ?, ಏನದು ಹೇಳಿ ಸಾರ್‌” ಎನ್ನುತ್ತಾರೆ.

ಆಗ ದೇವೇಗೌಡರು: ಈ ಸಲ ವಿಧಾನಸಭೆ ಚುನಾವಣೆಗೆ ರಾಮನಗರ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ಕುಮಾರಸ್ವಾಮಿಯವರು ಪಟ್ಟು ಹಿಡಿದಿದ್ದಾರೆ. ಅವರ ಜತೆ ಮಾತನಾಡಿ, ಯಾವ ಕಾರಣಕ್ಕೂ ಸ್ಪರ್ಧಿಸದಂತೆ ಅವರ ಮನವೊಲಿಸಿ ಎನ್ನುತ್ತಾರೆ.

ಅರೇ, ಕುಮಾರಸ್ವಾಮಿಯವರು ನಿಮ್ಮ ಮಗ. ಅವರು ನಿಮ್ಮ ಮಾತು ಕೇಳದಿರಲು ಸಾಧ್ಯವೇ?, ನೀವೇ ಒಂದು ಮಾತು ಹೇಳಿಬಿಡಿ ಸಾರ್‌ ಅಂತ ಬಸವರಾಜ ಬೊಮ್ಮಾಯಿ ಹೇಳುತ್ತಾರೆ.

ಅದಕ್ಕೆ ಪ್ರತಿಯಾಗಿ ದೇವೇಗೌಡರು, ಮಕ್ಕಳು ಬಹಳ ಸೂಕ್ಷ್ಮ ನೋಡಿ ಬಸವರಾಜ್. ಸ್ವಲ್ಪ ಹೆಚ್ಚು ಕಡಿಮೆಯಾದರೂ ತಿರುಗಿ ಬೀಳುತ್ತಾರೆ. ಹೀಗಾಗಿ ನಿಮಗೆ ಹೇಳಿದೆ. ಎಷ್ಟಾದರೂ ಅವರು ನಿಮ್ಮ ಸ್ನೇಹಿತರು ಅನ್ನುತ್ತಾರೆ.

ಈಗ ಬಸವರಾಜ ಬೊಮ್ಮಾಯಿ ಸ್ವಲ್ಪ ಮೈಚಳಿ ಬಿಟ್ಟು: ಸಾರ್‌, ಈಗ ಕುಮಾರಸ್ವಾಮಿಯವರು ಚುನಾವಣೆಯಲ್ಲಿ ಸ್ಪರ್ಧಿಸಿದರೆ ಏನು ತಪ್ಪು? ಸ್ಪರ್ಧಿಸಲಿ ಬಿಡಿ ಎಂದಾಗ ದೇವೇಗೌಡರು ಸಣ್ಣನೆಯ ಧ್ವನಿಯಲ್ಲಿ ವಿವರಿಸುತ್ತಾರೆ.

ಕುಮಾರಸ್ವಾಮಿಯವರು ರಾಮನಗರದಿಂದ ಸ್ಪರ್ಧಿಸಿ ಗೆದ್ದರು ಅಂತಿಟ್ಟುಕೊಳ್ಳಿ. ಆಗ ಅವರ ಹೊಳೆನರಸೀಪುರದಿಂದ ಸ್ಪರ್ಧಿಸಿ ಗೆಲ್ಲಲಿರುವ ಅವರಣ್ಣ ರೇವಣ್ಣ ಅವರ ಮಧ್ಯೆ ಒಡಕಾಗುತ್ತದೆ ಎಂಬುದು ದೇವೇಗೌಡರ ವಾದ.

ಆದರೆ ಬಸವರಾಜ ಬೊಮ್ಮಾಯಿ ಅದನ್ನೊಪ್ಪುವುದಿಲ್ಲ. ಹೀಗಾಗಿ: ಅದು ಹೇಗೆ ಸಾರ್? ರೇವಣ್ಣ ಅವರು ಸ್ಪರ್ಧಿಸುವುದು ಹಾಸನ ಜಿಲ್ಲೆಯಿಂದ, ಕುಮಾರಸ್ವಾಮಿಯವರು ಸ್ಪರ್ಧಿಸುವುದು ರಾಮನಗರ ಜಿಲ್ಲೆಯಿಂದ. ಇಬ್ಬರೂ ಬೇರೆ ಬೇರೆ ಜಿಲ್ಲೆಗಳಿಂದ ಸ್ಪರ್ಧಿಸಿದರೆ ಸಮಸ್ಯೆ ಏನು? ಅಂತ ಪ್ರಶ್ನಿಸುತ್ತಾರೆ.

ದೇವೇಗೌಡರು ಯಥಾ ಪ್ರಕಾರ ಸಣ್ಣನೆಯ ಧ್ವನಿಯಲ್ಲಿ, ರಾಮನಗರದಿಂದ ಸ್ಪರ್ಧಿಸಿ ಕುಮಾರಸ್ವಾಮಿಯವರು ಗೆದ್ದರೆ ಈ ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ. ಆಗ ರೇವಣ್ಣ ಅವರಿಗೆ ಉಪಮುಖ್ಯಮಂತ್ರಿಯಾಗುವ ಯೋಗ ತಪ್ಪುತ್ತದೆ ಅಂತ ಹೇಳಿದಾಗ ಬಸವರಾಜ ಬೊಮ್ಮಾಯಿ ಅವರಿಗೆ ಅಚ್ಚರಿ.

ಆದರೂ ಸಾವರಿಸಿಕೊಂಡು ಅವರು: ಇರಲಿ ಬಿಡಿ ಸಾರ್‌, ಉಪಮುಖ್ಯಮಂತ್ರಿ ಹುದ್ದೆಯ ಬದಲಿಗೆ ಮುಖ್ಯಮಂತ್ರಿ ಹುದ್ದೆಯೇ ನಿಮ್ಮ ಮನೆ ಬಾಗಿಲಿಗೆ ಬರುತ್ತದೆ ಎಂದಾದರೆ ಅದೇ ಬೆಟರ್‌ ಅಲ್ಲವಾ ? ಎನ್ನುತ್ತಾರೆ.

ಆದರೆ ದೇವೇಗೌಡರು: ಸಮಸ್ಯೆ ಇರುವುದು ಅಷ್ಟೇ ಅಲ್ಲ ಬಸವರಾಜ್. ಒಂದು ವೇಳೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ರೇವಣ್ಣ ಅವರಿಗೆ ಡಿಸಿಎಂ ಆಗುವ ಅವಕಾಶ ತಪ್ಪಿದರೆ ದಿಲ್ಲಿ ಮಟ್ಟದಲ್ಲಿ ನನಗೆ ಸಿಗಬಹುದಾದ ಉನ್ನತ ಹುದ್ದೆಯೊಂದು ಕೈ ಜಾರಿ ಹೋಗುತ್ತದೆ ಎಂದು ವಿವರಿಸುತ್ತಾರೆ.

ಅದ್ಹೇಗೆ ಸಾರ್‌ ಎಂದು ಬಸವರಾಜ ಬೊಮ್ಮಾಯಿ ಕೇಳಿದರೆ: ಅದು ಹಾಗೇ ಬಸವರಾಜ್. ಜಾತಕಗಳ ಪ್ರಕಾರ ನನ್ನ ಲಕ್ಕು ರೇವಣ್ಣ ಅವರ ಜತೆ ತಳಕು ಹಾಕಿಕೊಂಡಿದೆ. ಕುಮಾರಸ್ವಾಮಿ ಅವರ ಜತೆಗಲ್ಲ. ರೇವಣ್ಣ ಅವರ ಲಕ್ಕು ಕೂಡಾ ಸಹಜವಾಗಿ ನನ್ನ ಜಾತಕಕ್ಕೆ ಅಂಟಿಕೊಂಡಿದೆ ಎನ್ನುತ್ತಾರೆ.

ಬಸವರಾಜ ಬೊಮ್ಮಾಯಿ ಅರೆ ಕ್ಷಣ ಮೌನವಾಗುತ್ತಾರೆ. ನಂತರ: ಈ ಹಂತದಲ್ಲಿ ಚುನಾವಣೆಗೆ ನಿಲ್ಲಬೇಡಿ ಎಂದು ಕುಮಾರಸ್ವಾಮಿಯವರಿಗೆ ಹೇಳುವುದು ಕಷ್ಟ ಸಾರ್‌, ನೀವೇ ಹೇಳಿಬಿಡಿ ಎಂದವರೇ ಅಲ್ಲಿಂದ ಹೊರಟು ಬಿಡುತ್ತಾರೆ.

ಮುಂದಿನದು ಇತಿಹಾಸ. ಕುಮಾರಸ್ವಾಮಿ ಬಿಜೆಪಿ ಜತೆ ಸೇರಿ ಸಮ್ಮಿಶ್ರ ಸರ್ಕಾರ ರಚಿಸುವುದು, ಈ ಬೆಳವಣಿಗೆಯಿಂದ ಕ್ರುದ್ಧರಾದ ಕಮ್ಯೂನಿಸ್ಟರು ದೇಶದ ರಾಷ್ಟ್ರಪತಿ ಹುದ್ದೆಗೆ ದೇವೇಗೌಡರ ಹೆಸರನ್ನು ಪ್ರಪೋಸ್‌ ಮಾಡಲು ಹಿಂಜರಿಯುವುದು. ಹೀಗೆ ಒಂದಕ್ಕಿಂತ ಒಂದು ವಿಸ್ಮಯಕಾರಿ ಘಟನೆಗಳು.

(ಮೇ 18 ದೇವೇಗೌಡರ ಜನ್ಮ ದಿನ.ಅದರ ನೆನಪಿಗಾಗಿ ಈ ಲೇಖನ)

share
ಆರ್.ಟಿ.ವಿಠ್ಠಲಮೂರ್ತಿ
ಆರ್.ಟಿ.ವಿಠ್ಠಲಮೂರ್ತಿ
Next Story
X