Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಪ್ರಧಾನಿಯ 20 ಲ.ಕೋ.ರೂ.ಗಳ ಪ್ಯಾಕೇಜ್:...

ಪ್ರಧಾನಿಯ 20 ಲ.ಕೋ.ರೂ.ಗಳ ಪ್ಯಾಕೇಜ್: 2.5 ಲ.ಕೋ.ರೂ.ಗೂ ಕಡಿಮೆ ಹಣ ವೆಚ್ಚವಾಗುವ ಸಾಧ್ಯತೆ

Thewire.in ವಿಶ್ಲೇಷಣೆ

ವಾರ್ತಾಭಾರತಿವಾರ್ತಾಭಾರತಿ18 May 2020 8:18 PM IST
share
ಪ್ರಧಾನಿಯ 20 ಲ.ಕೋ.ರೂ.ಗಳ ಪ್ಯಾಕೇಜ್: 2.5 ಲ.ಕೋ.ರೂ.ಗೂ ಕಡಿಮೆ ಹಣ ವೆಚ್ಚವಾಗುವ ಸಾಧ್ಯತೆ

ಹೊಸದಿಲ್ಲಿ,ಮೇ 18: ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ರವಿವಾರ ಬೆಳಿಗ್ಗೆ ಅಂತಿಮ ಕಂತಿನ ವಿವರಗಳನ್ನು ಪ್ರಕಟಿಸುವುದರೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರ ಸ್ವಾವಲಂಬಿ ಭಾರತ ಅಭಿಯಾನದ ಆರ್ಥಿಕ ಪ್ಯಾಕೇಜಿನ ಹೂರಣವು ಬಿಚ್ಚಿಕೊಂಡಿದೆ.

ಸರಕಾರದ ಲೆಕ್ಕಾಚಾರದಂತೆ ವಿಶೇಷ ಆರ್ಥಿಕ ಪ್ಯಾಕೇಜಿನ ಮೊತ್ತ 20.97 ಲ.ಕೋ.ರೂ.ಗಳಾಗಿವೆ. ಐದು ಕಂತುಗಳಲ್ಲಿ ಸೀತಾರಾಮನ್ ನೀಡಿರುವ ವಿವರಗಳಂತೆ ಆರ್ಥಿಕ ಪ್ಯಾಕೇಜ್ 20 ಲ.ಕೋ.ರೂ.ಗಳನ್ನು ಮೀರುತ್ತದೆಯಾದರೂ ಈ ವರ್ಷ ಸರಕಾರವು ವೆಚ್ಚ ಮಾಡಲಿರುವ ವಾಸ್ತವಿಕ ಮೊತ್ತ ಮತ್ತು ವಿತ್ತೀಯ ಕೊರತೆಯ ಮೇಲಿನ ಪರಿಣಾಮ ತೀರ ಕಡಿಮೆಯಾಗಲಿದೆ. ಸರಕಾರದ ಹಲವಾರು ಪ್ರಸ್ತಾವಗಳು ಸಾಲ ಕೇಂದ್ರಿತವಾಗಿವೆ ಅಥವಾ ಹಲವಾರು ಬಾಧಿತ ಕ್ಷೇತ್ರಗಳಲ್ಲಿಯ ದ್ರವ್ಯತೆ ಕಳವಳಗಳನ್ನು ನಿವಾರಿಸುವ ಉದ್ದೇಶ ಹೊಂದಿರುವುದು ಇದಕ್ಕೆ ಕಾರಣವಾಗಿದೆ. ಕೆಲವು ಪ್ರಕರಣಗಳಲ್ಲಿ ಆರಂಭದಲ್ಲಿ ತಗಲುವ ಯಾವುದೇ ವೆಚ್ಚವನ್ನು ಬ್ಯಾಂಕುಗಳು ಅಥವಾ ಇತರ ಹಣಕಾಸು ಸಂಸ್ಥೆಗಳ ಮೂಲಕ ಭರಿಸಲಾಗುತ್ತದೆ ಮತ್ತು ಇದರಿಂದಾಗಿ ವಾಸ್ತವದಲ್ಲಿ ಸರಕಾರವು ಕೈಯಿಂದ ಖರ್ಚು ಮಾಡಬೇಕಿಲ್ಲ

ಇತರ ಉಪಕ್ರಮಗಳು,ವಿಶೇಷವಾಗಿ ಮೂರನೇ ಕಂತಿನಲ್ಲಿ ಪ್ರಕಟಿಸಲಾಗಿರುವ ಕ್ರಮಗಳು ತಕ್ಷಣಕ್ಕೆ ಕ್ರಿಯಾಶೀಲಗೊಳ್ಳುವುದಿಲ್ಲ ಮತ್ತು ಗತಿಯನ್ನು ಪಡೆದುಕೊಳ್ಳಲು ಅನಿರ್ದಿಷ್ಟಾವಧಿಯ ಸಮಯ ಬೇಕಾಗಬಹುದು,ಹೀಗಾಗಿ ಇವು ಈ ವರ್ಷದ ವಿತ್ತೀಯ ಕೊರತೆಯ ಲೆಕ್ಕಾಚಾರದಲ್ಲಿ ಸಂಪೂರ್ಣವಾಗಿ ಒಳಗೊಳ್ಳದಿರಬಹುದು.

ಸುದ್ದಿ ಜಾಲತಾಣ ‘Thewire.in’ನ ವಿಶ್ಲೇಷಣೆಯಂತೆ ಸ್ವಾವಲಂಬಿ ಭಾರತ ಅಭಿಯಾನ ಆರ್ಥಿಕ ಪ್ಯಾಕೇಜಿನ ಪರಿಣಾಮವಾಗಿ ಹೆಚ್ಚುವರಿ ಮತ್ತು ನೇರ ವಿತ್ತೀಯ ವೆಚ್ಚವು 2.5 ಲ.ಕೋ.ರೂ.ಗಳಿಗಿಂತ ಕಡಿಮೆಯಾಗಲಿದೆ. ಕೆಲವು ವೆಚ್ಚಗಳು ಸರಕಾರದ ಅನುಷ್ಠಾನದ ವೇಗ ಮತ್ತು ಇತರ ಅಂಶಗಳನ್ನು ಅವಲಂಬಿಸಿರುವುದರಿಂದ ನಿಖರವಾದ ಮೊತ್ತವನ್ನು ಲೆಕ್ಕ ಹಾಕುವುದು ಕಷ್ಟವಾಗುತ್ತದೆ. ಆದಾಗ್ಯೂಈ ವರ್ಷದ ವಿತ್ತೀಯ ವೆಚ್ಚವು ಒಟ್ಟಾರೆ 20 ಲ.ಕೋ.ರೂಗಳ ಪ್ಯಾಕೇಜಿನ ಶೇ.10ಕ್ಕಿಂತ ಸ್ವಲ್ಪ ಹೆಚ್ಚು ಮತ್ತು ಭಾರತದ ಜಿಡಿಪಿಯ ಶೇ.1ಕ್ಕಿಂತ ಸ್ವಲ್ಪ ಹೆಚ್ಚಾಗಲಿರುವ ಸಾಧ್ಯತೆಯಿದೆ.

ಕೇರ್ ರೇಟಿಂಗ್ಸ್, ಎಮ್ಕೆ, ಎಸ್‌ಬಿಐ ರಿಸರ್ಚ್ ಮತ್ತು ಎಚ್‌ಎಸ್‌ಬಿಸಿ ಇಂಡಿಯಾ ಆರ್ಥಿಕ ತಜ್ಞ ಮತ್ತು ಮಾರುಕಟ್ಟೆ ತಜ್ಞ ಸಂಸ್ಥೆಗಳೂ ವಿತ್ತೀಯ ಪ್ಯಾಕೇಜಿನ ಈ ವರ್ಷದ ವೆಚ್ಚ 1.5 ಲ.ಕೋ.ರೂ.ಗಳಿಂದ 2.40 ಲ.ಕೋ.ರೂ.ವರೆಗೆ ಆಗಬಹುದು ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸಿವೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X