Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. 97 ಜನರು ಮೃತಪಟ್ಟ ವಿಮಾನ ದುರಂತ: ಮೂರು...

97 ಜನರು ಮೃತಪಟ್ಟ ವಿಮಾನ ದುರಂತ: ಮೂರು ಎಚ್ಚರಿಕೆಗಳನ್ನು ಕಡೆಗಣಿಸಿದ್ದ ಪೈಲಟ್ ?

ವಾರ್ತಾಭಾರತಿವಾರ್ತಾಭಾರತಿ25 May 2020 2:44 PM IST
share
97 ಜನರು ಮೃತಪಟ್ಟ ವಿಮಾನ ದುರಂತ: ಮೂರು ಎಚ್ಚರಿಕೆಗಳನ್ನು ಕಡೆಗಣಿಸಿದ್ದ ಪೈಲಟ್ ?

ಕರಾಚಿ: ಶುಕ್ರವಾರ  ಪತನಗೊಂಡ ಪಾಕಿಸ್ತಾನ್ ಇಂಟರ್ ನ್ಯಾಷನಲ್ ಏರ್‍ಲೈನ್ಸ್ ನ ಲಾಹೋರ್-ಕರಾಚಿ ನಡುವೆ ಸಂಚರಿಸುತ್ತಿದ್ದ ವಿಮಾನದ ಪೈಲಟ್ ವಿಮಾನದ ಭೂಸ್ಪರ್ಶ ಸಂದರ್ಭ ಅದು  ಹಾರುತ್ತಿದ್ದ ಎತ್ತರ ಹಾಗೂ ವೇಗದ ಕುರಿತಂತೆ  ಏರ್ ಟ್ರಾಫಿಕ್ ಕಂಟ್ರೋಲರ್‍ನಿಂದ ಬಂದಿದ್ದ ಮೂರು ಎಚ್ಚರಿಕೆಗಳನ್ನು ಕಡೆಗಣಿಸಿದ್ದರೆಂದು ತಿಳಿದು ಬಂದಿದೆ.

ತನಗೆ ವಿಮಾನದ ಹಾರಾಟ ವೇಗ ಹಾಗೂ ಅದು ಇದ್ದ ಎತ್ತರ ಸಮಾಧಾನಕರವಾಗಿದೆ ಹಾಗೂ ಪರಿಸ್ಥಿತಿಯನ್ನು ನಿಭಾಯಿಸುವುದಾಗಿ ಆತ ಸಂದೇಶ ನೀಡಿದ್ದರೆಂದು ತಿಳಿದು ಬಂದಿದೆ.

ಕರಾಚಿಯ ಜಿನ್ನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲು ಸ್ವಲ್ಪ ದೂರವಿರುವಾಗ ವಿಮಾನ ಜನವಸತಿ ಪ್ರದೇಶದಲ್ಲಿ ಪತನಗೊಂಡು 97 ಜನರು ಮೃತಪಟ್ಟು, ಇಬ್ಬರು ಪವಾಡಸದೃಶರಾಗಿ ಪಾರಾಗಿದ್ದರು.

ವಿಮಾನ ಭೂಸ್ಪರ್ಶಕ್ಕೆ ಕೆಲವೇ ಕ್ಷಣಗಳಿದ್ದುದರಿಂದ ಆ ಸಂದರ್ಭ ವಿಮಾನ  7,000 ಅಡಿ ಎತ್ತರದಲ್ಲಿ ಹಾರಾಡಬೇಕಿದ್ದರೆ ಈ ವಿಮಾನ 10,000 ಅಡಿ ಎತ್ತರದಲ್ಲಿ ಹಾರುತ್ತಿತ್ತು, ಇದನ್ನು ಗಮನಿಸಿ ಎಟಿಸಿಯಿಂದ  ಮೊದಲ ಎಚ್ಚರಿಕೆ ನೀಡಲಾಗಿತ್ತು. ವಿಮಾನವು ನಿಲ್ದಾಣದಿಂದ 10 ನಾಟಿಕಲ್ ಮೈಲಿ ದೂರವಿರುವಾಗ ಅದು 3,000 ಅಡಿ ಎತ್ತರದಲ್ಲಿ ಹಾರಬೇಕಿದ್ದರೂ 7,000 ಅಡಿ ಎತ್ತರದಲ್ಲಿ ಹಾರಾಡುತ್ತಿದ್ದುದರಿಂದ ಎರಡನೇ ಬಾರಿ ಎಚ್ಚರಿಕೆ ನೀಡಲಾಗಿದ್ದರೂ ಪೈಲಟ್ ಅದನ್ನೂ ಕಡೆಗಣಿಸಿದ್ದರು.

ವಿಮಾನದಲ್ಲಿ ಎರಡು ಗಂಟೆ 34 ನಿಮಿಷಗಳ ಹಾರಾಟಕ್ಕೆ ಇಂಧನವಿತ್ತು ಹಾಗೂ ಅದು ಕೇವಲ ಒಂದು ಗಂಟೆ 33 ನಿಮಿಷ ಹಾರಾಟ ಪೂರ್ಣಗೊಳಿಸಿತ್ತು. ವಿಮಾನ ದುರಂತಕ್ಕೆ ಪೈಲಟ್ ನಿರ್ಲಕ್ಷ್ಯ ಕಾರಣವೇ ಅಥವಾ ತಾಂತ್ರಿಕ ದೋಷಗಳೇನಾದರೂ ಕಾರಣವೇ ಎಂಬ ಕುರಿತು ತನಿಖೆ ನಡೆಯುತ್ತಿದೆ.

ಮೊದಲ ಭೂಸ್ಪರ್ಶದ ವೇಳೆ ಇಂಜಿನ್‌ಗಳಿಗೆ ಹಾನಿ

ವಿಮಾನವನ್ನು ಇಳಿಸಲು ಪೈಲಟ್ ಪ್ರಥಮ ಪ್ರಯತ್ನ ನಡೆಸಿದಾಗ ಅದರ ಇಂಜಿನ್‌ಗಳು ರನ್‌ವೇಯನ್ನು ಮೂರು ಬಾರಿ ಸವರಿತು ಹಾಗೂ ಅದರ ಪರಿಣಾಮವಾಗಿ ಘರ್ಷಣೆ ಸಂಭವಿಸಿ ಕಿಡಿಗಳು ಹೊತ್ತಿಕೊಂಡವು ಎಂದು ಪರಿಣತರು ಹೇಳಿದ್ದಾರೆ ಎಂದು ದೇಶದ ನಾಗರಿಕ ವಾಯುಯಾನ ಪ್ರಾಧಿಕಾರ (ಸಿಎಎ) ಸಿದ್ಧಪಡಿಸಿದ ವರದಿಯೊಂದು ತಿಳಿಸಿದೆ.

ಮೊದಲ ವಿಫಲ ಭೂಸ್ಪರ್ಶದ ವೇಳೆ, ಇಂಜಿನ್‌ಗಳ ತೈಲ ಟ್ಯಾಂಕ್ ಮತ್ತು ಇಂಧನ ಪಂಪ್‌ಗಳಿಗೆ ಹಾನಿಯಾಗಿರಬಹುದು, ಹಾಗಾಗಿ ವಿಮಾನವನ್ನು ಸುರಕ್ಷಿತ ಎತ್ತರಕ್ಕೆ ಏರಿಸಲು ಅಗತ್ಯವಾದ ಬಲ ಮತ್ತು ವೇಗವನ್ನು ಪಡೆಯಲು ಪೈಲಟ್‌ಗೆ ಅಸಾಧ್ಯವಾಯಿತು ಎಂದು ವರದಿ ತಿಳಿಸಿದೆ.

3,000 ಅಡಿ ಎತ್ತರಕ್ಕೆ ಹೋಗಲು ವಿಫಲವಾದ ವಿಮಾನ

 ವಿಮಾನವನ್ನು ಭೂಸ್ಪರ್ಶ ಮಾಡುವ ಮೊದಲ ಪ್ರಯತ್ನ ವಿಫಲವಾದಾಗ, ವಿಮಾನ ನಿಲ್ದಾಣಕ್ಕೆ ಸುತ್ತು ಬರುವ ನಿರ್ಧಾರವನ್ನು ಪೈಲಟ್ ತೆಗೆದುಕೊಂಡರು. ಅದು ಸ್ವತಃ ಪೈಲಟ್ ತೆಗೆದುಕೊಂಡ ನಿರ್ಧಾರವಾಗಿತ್ತು. ವಿಮಾನದ ಲ್ಯಾಂಡಿಂಗ್ ಗೇರ್ ಕೆಲಸ ಮಾಡುತ್ತಿಲ್ಲ ಎಂಬ ವಿಷಯವನ್ನು ವಿಮಾನ ಸುತ್ತು ಬರುತ್ತಿದ್ದಾಗಲಷ್ಟೇ ಎಟಿಸಿಗೆ ತಿಳಿಸಲಾಯಿತು ಎಂದು ಜಿಯೋ ನ್ಯೂಸ್ ತಿಳಿಸಿದೆ.

ಆಗ ವಿಮಾನವನ್ನು 3,000 ಅಡಿ ಎತ್ತರಕ್ಕೆ ಒಯ್ಯುವಂತೆ ಪೈಲಟ್‌ಗೆ ಏರ್ ಟ್ರಾಫಿಕ್ ಕಂಟ್ರೋಲರ್ ಸೂಚಿಸಿದರು. ಆದರೆ, 1,800 ಅಡಿ ಎತ್ತರಕ್ಕೆ ಮಾತ್ರ ಒಯ್ಯಲು ಪೈಲಟ್‌ಗೆ ಸಾಧ್ಯವಾಯಿತು. 3,000 ಅಡಿ ಎತ್ತರಕ್ಕೆ ವಿಮಾನವನ್ನು ಏರಿಸಲು ವಿಮಾನ ಸಿಬ್ಬಂದಿಗೆ ಸೂಚಿಸಿದಾಗ, ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಫಸ್ಟ್ ಆಫಿಸರ್ ಹೇಳಿದರು ಎಂದು ವರದಿ ಹೇಳಿದೆ.

ವಿಮಾನಕ್ಕೆ ಸೂಚಿತ ಎತ್ತರವನ್ನು ಸಾಧಿಸಲು ವಿಫಲವಾಗಿರುವುದಕ್ಕೆ ಅದರ ಇಂಜಿನ್‌ಗಳು ಸರಿಯಾಗಿ ಸ್ಪಂದಿಸದಿರುವುದೇ ಕಾರಣವಾಗಿದೆ ಎಂದು ಪರಿಣತರು ಹೇಳಿದ್ದಾರೆ. ಬಳಿಕ ವಿಮಾನ ಓಲಾಡುತ್ತಾ ನೆಲಕ್ಕೆ ಅಪ್ಪಳಿಸಿದೆ. ಆಗ ನೆಲದ ಮೇಲಿದ್ದ 11 ಮಂದಿ ಗಾಯಗೊಂಡಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X