Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. 2 ತಿಂಗಳಾದರೂ ಮುಗಿಯದ ನವದಂಪತಿಯ ಹನಿಮೂನ್...

2 ತಿಂಗಳಾದರೂ ಮುಗಿಯದ ನವದಂಪತಿಯ ಹನಿಮೂನ್ ಕಥೆ…

ಯುವಜೋಡಿಯ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದ ಕೊರೋನ

ವಾರ್ತಾಭಾರತಿವಾರ್ತಾಭಾರತಿ25 May 2020 9:08 PM IST
share
2 ತಿಂಗಳಾದರೂ ಮುಗಿಯದ ನವದಂಪತಿಯ ಹನಿಮೂನ್ ಕಥೆ…

ದುಬೈ: ಯುವಜೋಡಿಯೊಂದು ದುಬೈನ ತಮ್ಮ ಹೊಸ ಅಪಾರ್ಟ್‍ಮೆಂಟ್‍ ನಲ್ಲಿ ಜೀವನವನ್ನು ನಡೆಸಲು ಎಲ್ಲ ರೀತಿಯಿಂದಲೂ ಸಜ್ಜಾಗಿದ್ದರು. ರಜೆಯವರೆಗೂ ಕಾಯದೇ ಹನಿಮೂನ್ ಮುಗಿಸಿ ಯುನೈಟೆಡ್ ಅರಬ್ ಎಮಿರೇಟ್ಸ್‍ಗೆ ವಾಪಸ್ಸಾಗಿ ದಾಂಪತ್ಯ ಜೀವನ ನಡೆಸಲು ನಿರ್ಧರಿಸಿದ್ದರು.

ಎರಡು ತಿಂಗಳ ಬಳಿಕವೂ ಖಾಲಿದ್ ಮುಖ್ತಾರ್ (36) ಮತ್ತು ಪೆರಿ ಅಬೋಝೀದ್ (35) ಇನ್ನೂ ಆ ದಿನಕ್ಕಾಗಿ ಕಾಯುತ್ತಲೇ ಇದ್ದಾರೆ. ಕಾರಣ ಅವರ ಹನಿಮೂನ್ ಇನ್ನೂ ಮುಗಿದಿಲ್ಲ!

ಈಜಿಪ್ಟ್ ಮೂಲದ ಈ ಇಬ್ಬರು ದುಬೈ ನಗರದ ದೀರ್ಘಾವಧಿ ನಿವಾಸಿಗಳು. ಆದರೆ ಮಾರ್ಚ್ ಮಧ್ಯಭಾಗದಿಂದ ಕೊರೋನ ವೈರಸ್ ತಡೆಯುವ ಕಾರ್ಯತಂತ್ರದ ಅಂಗವಾಗಿ ದುಬೈ ಎಲ್ಲ ವಿಮಾನ ರದ್ದುಪಡಿಸಿ, ವಿದೇಶಿ ಪ್ರವಾಸಕ್ಕೆ ಗಡಿ ಮುಚ್ಚಿರುವುದರಿಂದ ಮಾಲ್ಡೀವ್ಸ್ ರೆಸಾರ್ಟ್‍ ನಲ್ಲೇ ಬಂಧಿಯಾಗಿದ್ದಾರೆ.

ಆರಂಭದಲ್ಲಿ ಎಲ್ಲವೂ ಅಂದುಕೊಂಡಂತೇ ನಡೆಯಿತು. ಮಾರ್ಚ್ 6ರಂದು ಕೈರೋದಲ್ಲಿ ವಿವಾಹವಾದ ಬಳಿಕ ಅವರು ಕುಂಕುನ್, ಮೆಕ್ಸಿಕೋಗೆ ಹನಿಮೂನ್‍ಗಾಗಿ ತೆರಳಿದರು. ಮಾರ್ಚ್ 19ರಂದು ಟರ್ಕಿ ವಿಮಾನ ಏರಿದರು. ದುಬೈಗೆ ಹೋಗಲು ಬಹರೈನ್ ವಿಮಾನ ಹಿಡಿಯಬೇಕಿತ್ತು. ದುಬೈಗೆ ದೇಶೀಯ ಪ್ರಜೆಗಳಲ್ಲದೆ ಬೇರಾರು ಪ್ರವೇಶಿಸಲೂ ಅವಕಾಶ ನಿರಾಕರಿಸಲಾಗಿದೆ ಎಂದು ವಿಮಾನದಲ್ಲಿದ್ದಾಗ ಅಬೋಝೀದ್ ಅವರಿಗೆ ಸ್ನೇಹಿತರಿಂದ ಮಾಹಿತಿ ಬಂತು.

ಟರ್ಕಿಯಲ್ಲಿ ಇಳಿದಾಗ ಮುಂದಿನ ವಿಮಾನ ಏರುವಂತಿಲ್ಲ ಎಂದು ಅಧಿಕಾರಿಗಳು ಸೂಚನೆ ನೀಡಿ ಅವರ ಬೋರ್ಡಿಂಗ್ ಪಾಸ್ ಹಾಗೂ ಲಗೇಜ್ ಪಡೆದರು. ಅಗತ್ಯ ವಸ್ತುಗಳ ಖರೀದಿಗೂ ಅವಕಾಶವಾಗದೇ ಹಠಾತ್ತನೇ ಸಿಕ್ಕಿಹಾಕಿಕೊಂಡರು. ಈಜಿಪ್ಟ್‍ನ ವಿಮಾನ ಹಾಗೂ ಗಡಿ ಕೂಡಾ ಮುಚ್ಚಿತ್ತು. ಯುಎಇ ನಿಲುಕದಾಗಿತ್ತು. ಇಸ್ತಾಂಬುಲ್ ವಿಮಾನ ನಿಲ್ದಾಣದಲ್ಲಿ ನಿದ್ದೆ ಮಾಡುವಂತೆಯೂ ಇರಲಿಲ್ಲ.

ಈಜಿಪ್ಟಿಯನ್ನರಿಗೆ ಮುಕ್ತ ವೀಸಾ ಇದ್ದ ಎಲ್ಲಿಗೆ ವಿಮಾನ ಇದೆ?, ಯುವಜೋಡಿಗೆ ಕಂಡದ್ದು ದ್ವೀಪರಾಷ್ಟ್ರ ಮಾಲ್ಡೀವ್ಸ್. ಅಲ್ಲಿನ ಅಧಿಕಾರಿಗಳಿಂದ ಖಾತ್ರಿ ಪಡೆದುಕೊಂಡ ಬಳಿಕ ವಿಮಾನ ಟಿಕೆಟ್ ಬುಕ್ ಮಾಡಿದರು. ಅಲ್ಲಿಗೆ ಈ ಜೋಡಿ ತಲುಪಿದ ತಕ್ಷಣ ಮಾರ್ಚ್ 27ರಂದು ಮಾಲ್ಡೀವ್ಸ್ ಕೂಡಾ ವಿದೇಶಿ ಪ್ರವಾಸಕ್ಕೆ ನಿಷೇಧ ಹೇರಿತು. ಅವರು ತಂಗಿದ್ದ ರೆಸಾರ್ಟ್ ಕೂಡಾ ಮುಚ್ಚಿತು. ಇದೀಗ ಇತರ 60-70 ಮಂದಿಯಂತೆ ಇವರು ಕೂಡಾ ಸರ್ಕಾರ ವ್ಯವಸ್ಥೆಗೊಳಿಸಿದ್ದ ಐಸೊಲೇಶನ್ ಸೆಂಟರ್‍ನಲ್ಲಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X