Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ವಲಸೆ ಕಾರ್ಮಿಕರ ಸ್ವಯಂಪ್ರೇರಿತ...

ವಲಸೆ ಕಾರ್ಮಿಕರ ಸ್ವಯಂಪ್ರೇರಿತ ವಿಚಾರಣೆಗೆ ಕೆಲವೇ ಗಂಟೆಗಳ ಮೊದಲು ಸುಪ್ರೀಂಗೆ ಬಂದಿತ್ತು ಹಿರಿಯ ವಕೀಲರ ಖಾರದ ಪತ್ರ

ವಾರ್ತಾಭಾರತಿವಾರ್ತಾಭಾರತಿ27 May 2020 7:37 PM IST
share
ವಲಸೆ ಕಾರ್ಮಿಕರ ಸ್ವಯಂಪ್ರೇರಿತ ವಿಚಾರಣೆಗೆ ಕೆಲವೇ ಗಂಟೆಗಳ ಮೊದಲು ಸುಪ್ರೀಂಗೆ ಬಂದಿತ್ತು ಹಿರಿಯ ವಕೀಲರ ಖಾರದ ಪತ್ರ

ಹೊಸದಿಲ್ಲಿ, ಮೇ 27: ಮಂಗಳವಾರ ಸುಪ್ರೀಂ ಕೋರ್ಟ್ ವಲಸಿಗ ಕಾರ್ಮಿಕರ ಕುರಿತ ಸರಕಾರದ ಕ್ರಮಗಳಲ್ಲಿ ಕೆಲವು ಲೋಪದೋಷಗಳ ಬಗ್ಗೆ ಸ್ವಯಂಪ್ರೇರಿತ ವಿಚಾರಣೆ ನಡೆಸಿತ್ತು. ಆದರೆ ಇದಕ್ಕೆ ಕೆಲವೇ ಗಂಟೆಗಳ ಮೊದಲು ಈ ‘ಬೃಹತ್ ಮಾನವೀಯ ದುರಂತ ಪ್ರಕರಣದ’ ವಿಷಯದಲ್ಲಿ ಸರಕಾರದ ಕಾರ್ಯವೈಖರಿಯನ್ನು ಒಪ್ಪಿಕೊಳ್ಳುವ ರೀತಿಯ ಸುಪ್ರೀಂ ಕೋರ್ಟ್ ನ ವಿನೀತ ವರ್ತನೆ, ಈ ಬಗ್ಗೆ ಅದರ ಹಿಂಜರಿಕೆ ಹಾಗು ನಿರ್ಲಕ್ಷ್ಯದ ಕುರಿತು ದಿಲ್ಲಿ ಹಾಗು ಮುಂಬೈಯ ತಲಾ ಹತ್ತು ಹಿರಿಯ ನ್ಯಾಯವಾದಿಗಳು ಟೀಕಾ ಪ್ರಹಾರ ಮಾಡಿರುವ ಪತ್ರ ಸುಪ್ರೀಂ ಕೋರ್ಟ್ ತಲುಪಿತ್ತು. 

ಪಿ ಚಿದಂಬರಂ, ಕಪಿಲ್ ಸಿಬಲ್, ಪ್ರಶಾಂತ್ ಭೂಷಣ್, ಇಂದಿರಾ ಜೈಸಿಂಗ್, ವಿಕಾಸ್ ಸಿಂಗ್, ಇಕ್ಬಾಲ್ ಚಾವ್ಲಾ, ನವರೋಝ್ ಸೀರ್ವಾಯಿ ಮತ್ತಿತರರು ಬರೆದ ಈ ಪತ್ರದಲ್ಲಿ ವಲಸಿಗ ಕಾರ್ಮಿಕರ ಕುರಿತ ವಿಷಯದಲ್ಲಿ ಕೇಂದ್ರ ಸರಕಾರ ನೀಡಿದ ತಪ್ಪು ಹೇಳಿಕೆಗಳು ಹಾಗು ಪ್ರತಿಪಾದನೆಗಳನ್ನು ಸುಲಭವಾಗಿ ನಂಬುವ ಸುಪ್ರೀಂ ಕೋರ್ಟ್ ನ ಧೋರಣೆ ತುರ್ತು ಪರಿಸ್ಥಿತಿ ಸಮಯದಲ್ಲಿ ಅದು ವರ್ತಿಸಿದ ರೀತಿಯನ್ನು ನೆನಪಿಸುತ್ತಿದೆ ಎಂದು ಹೇಳಲಾಗಿದೆ. 

ಆನಂದ್ ಮೋಹನ್, ಮೋಹನ್ ಕಾತರಕಿ, ಸಿದ್ಧಾರ್ಥ್ ಲೂತ್ರ , ಸಂತೋಷ್ ಪೌಲ್, ಮಹಾಲಕ್ಷ್ಮಿ ಪಾವನಿ, ಸಿ ಯು ಸಿಂಗ್, ಅಸ್ಪಿ ಚಿನಾಯ್ , ಮಿಹಿರ್ ದೇಸಾಯಿ, ಜನಕ್ ದ್ವಾರಕದಾಸ್, ರಜನಿ ಅಯ್ಯರ್, ಯೂಸುಫ್ ಮುಚ್ಚಾಲ, ರಾಜೀವ್ ಪಾಟೀಲ್ , ಗಾಯತ್ರಿ ಸಿಂಗ್ ಹಾಗು ಸಂಜಯ್ ಸಿಂಗ್ವಿ ಪತ್ರ ಬರೆದಿರುವ ಇತರರು. 

ಮೂಲಗಳ ಪ್ರಕಾರ ಈ ಟೀಕಾ ಪ್ರಹಾರದ ಪತ್ರ ಸುಪ್ರೀಂ ಕೋರ್ಟ್ ಗೆ ತಲುಪಿದ್ದು ಸೋಮವಾರ. ಅದು ವಲಸಿಗರ ಸಮಸ್ಯೆಗಳ ಬಗ್ಗೆ ಸ್ವಯಂ ಪ್ರೇರಿತ ವಿಚಾರಣೆ ಕೈಗೆತ್ತಿಕೊಂಡಿದ್ದು ಮಂಗಳವಾರ. ವಿಚಾರಣೆಯಲ್ಲಿ ಕೇಂದ್ರದ ಕ್ರಮಗಳಲ್ಲಿ ಲೋಪದೋಷಗಳು , ಅಸಮರ್ಪಕ ಕ್ರಮಗಳು ಇವೆ ಎಂದು ಅದು ಹೇಳಿದೆ. ಕಾರ್ಮಿಕರಿಗೆ ಆಹಾರ, ವಸತಿ ಹಾಗು ಸಾರಿಗೆ ವ್ಯವಸ್ಥೆಯನ್ನು ಉಚಿತವಾಗಿ ಕೊಡಬೇಕು ಎಂದು ಅದು ಹೇಳಿದೆ. ಮುಂದಿನ ವಿಚಾರಣೆ ಗುರುವಾರ ನಡೆಯಲಿದೆ.

ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು "ಯಾವುದೇ ವಲಸಿಗ ಕಾರ್ಮಿಕ ತನ್ನ ಮನೆಗೆ ಅಥವಾ ಗ್ರಾಮಕ್ಕೆ ನಡೆದುಕೊಂಡು ಹೋಗುತ್ತಿಲ್ಲ" ಎಂದು ಹೇಳಿದಾಗ ಮಾರ್ಚ್ 31ಕ್ಕೆ "ತೃಪ್ತಿ" ವ್ಯಕ್ತಪಡಿಸಿದ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ವಲಸಿಗರ ಕಾರ್ಮಿಕರು ದೊಡ್ಡ ಸಂಖ್ಯೆಯಲ್ಲಿ ಹೊರಟಿರುವುದು ಸುಳ್ಳು ಸುದ್ದಿಗಳ ಪರಿಣಾಮ ಎಂದೂ ಸುಪ್ರೀಂ ಕೋರ್ಟ್ ಹೇಳಿತ್ತು.  ಮಾರ್ಚ್ ನಲ್ಲಿ ಲಕ್ಷಾಂತರ ಅಸಹಾಯಕ ಕಾರ್ಮಿಕರ ಹಕ್ಕುಗಳನ್ನು ರಕ್ಷಿಸುವಲ್ಲಿ ಸುಪ್ರೀಂ ಕೋರ್ಟ್ ನ ವೈಫಲ್ಯ ಹಾಗು ಈ ಬಗ್ಗೆ ಕೇಂದ್ರದ ಕಾರ್ಯವೈಖರಿಯನ್ನು ವಸ್ತುನಿಷ್ಠವಾಗಿ ವಿಶ್ಲೇಷಿಸದ ವೈಫಲ್ಯದಿಂದಾಗಿ ಈ ಕಾರ್ಮಿಕರು ಉದ್ಯೋಗವೂ ಇಲ್ಲದೆ, ವೇತನ ಹಾಗು ಆಹಾರವೂ ಇಲ್ಲದೆ ಅನಾರೋಗ್ಯಕರ ಪರಿಸ್ಥಿತಿಗಳಲ್ಲಿ ಗುಂಪು ಸೇರಿಕೊಂಡು ಬದುಕುತ್ತಿದ್ದಾರೆ. ಇದರಿಂದ ಅವರಿಗೆ ಕೊರೋನ ಸೋಂಕು ತಗಲುವ ಸಾಧ್ಯತೆಯೂ ಬಹಳ ಹೆಚ್ಚಾಗಿದೆ ಎಂದು ಪತ್ರದಲ್ಲಿ ಹೇಳಲಾಗಿತ್ತು.

ಮೇ ತಿಂಗಳ ಮಧ್ಯದಲ್ಲಿ ಮತ್ತೆ ಲಕ್ಷಾಂತರ ಕಾರ್ಮಿಕರು ನಡೆದುಕೊಂಡು ತಮ್ಮ ಮನೆಗಳಿಗೆ ಹೋಗಲು ಪ್ರಾರಂಭಿಸಿದಾಗಲೂ ಸುಪ್ರೀಂ ಕೋರ್ಟ್ ಈ ಬಗ್ಗೆ ಮಧ್ಯಪ್ರವೇಶಿಸಿ ನ್ಯಾಯ ಒದಗಿಸಲು ವಿಫಲವಾಯಿತು ಎಂದಿರುವ ಪತ್ರ, ಇದು ನೀತಿ ನಿರೂಪಣೆಯ ವಿಷಯ ಎಂದು ಕೋರ್ಟು ಮುಖ ತಿರುಗಿಸಲು ಸಾಧ್ಯವಿಲ್ಲಎಂದು ಹೇಳಿತ್ತು. "ವಲಸಿಗ ಕಾರ್ಮಿಕರ ವಿಷಯ ನೀತಿ ನಿರೂಪಣೆಯ ವಿಷಯವಲ್ಲ, ಅದು ಸಾಂವಿಧಾನಿಕ ವಿಷಯ. ಕೋರ್ಟ್ ಗೆ  142ನೇ ಪರಿಚ್ಚೇದದಡಿ ನ್ಯಾಯ ಒದಗಿಸಲು ಯಾವುದೇ ಕ್ರಮ ಕೈಗೊಳ್ಳಲು ಅಧಿಕಾರವಿದೆ. ಅಸಹಾಯಕತೆ ತೋರಿಸುವುದು ಕೋರ್ಟ್ ನ ಧ್ಯೇಯಕ್ಕೆ ನ್ಯಾಯ ಒದಗಿಸುವುದಿಲ್ಲ” ಎಂದು ಪತ್ರ ಹೇಳಿದೆ. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X