Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಹುಮ್ಯಾನಿಟಿ ಫೋರಮ್, ಇಂಡಿಯನ್ ಸೋಶಿಯಲ್...

ಹುಮ್ಯಾನಿಟಿ ಫೋರಮ್, ಇಂಡಿಯನ್ ಸೋಶಿಯಲ್ ಫೋರಮ್ ಕಾರ್ಯಾಚರಣೆ: ತವರು ತಲುಪಿದ ತೀವ್ರ ನಿಗಾ ಘಟಕದಲ್ಲಿದ್ದ ಹೃದ್ರೋಗಿ

ವಾರ್ತಾಭಾರತಿವಾರ್ತಾಭಾರತಿ28 May 2020 11:46 AM IST
share
ಹುಮ್ಯಾನಿಟಿ ಫೋರಮ್, ಇಂಡಿಯನ್ ಸೋಶಿಯಲ್ ಫೋರಮ್ ಕಾರ್ಯಾಚರಣೆ: ತವರು ತಲುಪಿದ ತೀವ್ರ ನಿಗಾ ಘಟಕದಲ್ಲಿದ್ದ ಹೃದ್ರೋಗಿ

ದಮಾಮ್: ಹುಮ್ಯಾನಿಟಿ  ಫೋರಮ್ ಜುಬೈಲ್ ಮತ್ತು ಇಂಡಿಯನ್ ಸೋಶಿಯಲ್  ಫೋರಮ್ ಸೌದಿ ಅರೇಬಿಯಾದ ಕ್ಷಿಪ್ರ ಕಾರ್ಯಾಚರಣೆ ಯೊಂದಿಗೆ ತೀವ್ರ ಹೃದ್ರೋಗ ಸಮಸ್ಯೆ ಎದುರಿಸುತ್ತಿದ್ದ ದಕ್ಷಿಣ ಕನ್ನಡ ಮೂಲದ ಅನಿವಾಸಿಯೊಬ್ಬರನ್ನು ತವರಿಗೆ ತಲುಪಿಸಲಾಗಿದೆ.

ಕಡಬ ಮೂಲದ ಝಕರಿಯ್ಯಾ ಎಂಬವರು ಕಳೆದ ಹಲವು ದಿ‌ನಗಳಿಂದ ತೀವ್ರ ಹೃದ್ರೋಗ ಚಿಕಿತ್ಸೆಗಾಗಿ ಮದೀನಾದ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದರು ಮತ್ತು ಅವರ ಪರಿಸ್ಥಿತಿ ಚಿಂತಾಜನಕವಾಗಿತ್ತು. ಅವರನ್ನು ತವರಿಗೆ ಕೊಂಡೊಯ್ಯುವುದಕ್ಕಾಗಿ ಬಂಧುಮಿತ್ರರು ಹಲವು ಪ್ರಯತ್ನ ಮಾಡಿದ್ದು, ನಂತರ ಅವರ ಸಂಬಂಧಿ ಡಿ.ಕೆ.ಎಸ್.ಸಿ ಕಾರ್ಯಕರ್ತ ಸುರತ್ಕಲ್ ಅನ್ಸಾರಿ ಈ ಕುರಿತು ಇಂಡಿಯನ್ ಸೋಶಿಯಲ್  ಫೋರಮ್ ದಮಾಮ್ , ಕರ್ನಾಟಕ ಘಟಕದ ನಾಯಕರಿಗೆ ಮಾಹಿತಿ ನೀಡಿದ್ದರು.

ತಕ್ಷಣ ಕಾರ್ಯಪ್ರವೃತ್ತವಾದ ಇಂಡಿಯನ್ ಸೋಶಿಯಲ್  ಫೋರಮ್, ಈ ಕುರಿತು ಹುಮ್ಯಾನಿಟಿ  ಫೋರಮ್ ಸಂಪರ್ಕಿಸಿತು.‌ ಹುಮ್ಯಾನಿಟಿ  ಫೋರಮ್ ಅಧ್ಯಕ್ಷ ಝಕರಿಯಾ ಮುಝೈನ್ ಮತ್ತು ಆಸಿಫ್ ಅಮ್ಯಾಕೊ ಸಂಸದ ಸದಾನಂದ ಗೌಡ ಅವರೊಂದಿಗೆ ನಡೆಸಿದ ವೀಡಿಯೊ ಕಾನ್ಫರೆನ್ಸ್ ಸಭೆಯಲ್ಲಿ ರೋಗಿಯನ್ನು ತೋರಿಸಿ ವಾಪಸಾತಿಗೆ ಮನವಿ ಮಾಡಿದ್ದು, ಹುಮ್ಯಾನಿಟಿ  ಫೋರಮ್ ನ ಇತರ ಪದಾಧಿಕಾರಿಗಳೂ ಈ ಸಭೆಯಲ್ಲಿ ಭಾಗವಹಿಸಿದ್ದು, ಬೆಂಬಲವನ್ನು ಸೂಚಿಸಿದ್ದರು.

ಝಕರಿಯಾ ಮುಝೈನ್ ಮತ್ತು ಆಸಿಫ್ ಅಮ್ಯಾಕೊ ಅವರ ನಿರಂತರ ಪ್ರಯತ್ನದ ಭಾಗವಾಗಿ ಭಾರತೀಯ ರಾಯಭಾರಿ ಕಚೇರಿಯು ಮೇ 20 ರಂದು 12 ಗಂಟೆಗೆ ನಿಗದಿಯಾಗಿದ್ದ ದಮಾಮ್-ಬೆಂಗಳೂರು ವಿಮಾನದ ಮೂಲಕ ಅವರನ್ನು ತವರಿಗೆ ಕಳುಹಿಸಿಕೊಡಲು ಅವಕಾಶವನ್ನು ಮಾಡಿಕೊಡಲು ಒಪ್ಪಿಕೊಂಡಿತು.

ಕೊನೆಯ ಕ್ಷಣದಲ್ಲಾದ ಬೆಳವಣಿಗೆಯಿಂದ ತೀವ್ರ ನಿಗಾ ಘಟಕದಲ್ಲಿದ್ದ ಝಕರಿಯಾ ಕಡಬ ಅವರನ್ನು ಮದೀನಾದಿಂದ ದಮಾಮ್ ಗೆ ತಲುಪಿಸುವುದು ಕಷ್ಟದ ಕೆಲಸವಾಗಿತ್ತು. ಮದೀನಾದಲ್ಲಿ ಕೋವಿಡ್-19 ಸಮಸ್ಯೆ ಹೆಚ್ಚಿರುವುದರಿಂದ ಯಾವುದೇ ಆಸ್ಪತ್ರೆಗಳು ಆಂಬ್ಯುಲೆನ್ಸ್ ವ್ಯವಸ್ಥೆ ಒದಗಿಸಲು ನಿರಾಕರಿಸಿದವು. ಸಂಜೆ 5 ಗಂಟೆಯ ಬಳಿಕ ಸೌದಿ ಅರೇಬಿಯಾದಾದ್ಯಂತ ಕರ್ಫ಼್ಯೂ ಹೇರಲಾಗುತ್ತದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಖಾಸಗಿ ವಾಹನದ ಮೂಲಕ 1200 ಕಿ.ಮೀ ದೂರದ ದಮಾಮ್ ವಿಮಾನ ನಿಲ್ದಾಣಕ್ಕೆ ತಲುಪಿಸಲು ಸೌದಿ ಅರೇಬಿಯಾದ ಸಂಚಾರಿ ಪೊಲೀಸ್ (ಮುರೂರ್) ನ  ಅನುಮೋದನಾ ಪತ್ರದ ಅಗತ್ಯವಿತ್ತು. ಆದರೆ ಸಂಚಾರಿ ಪೊಲೀಸ್ ಮೇ 19ರಂದು ಸಂಜೆಯವರೆಗೂ  ಕಾಯುವಂತೆ ಮಾಡಿ ಕೊನೆಗೆ ನಿರಾಕರಿಸಿತ್ತು. ಈ ಸಂದರ್ಭದಲ್ಲಿ ಇಂಡಿಯನ್ ಸೋಶಿಯಲ್  ಫೋರಮ್ ರಿಯಾದ್ ಮತ್ತು ಜಿದ್ದಾ ಘಟಕಗಳು ವೇಗವಾಗಿ ಕಾರ್ಯಾಚರಿಸಿ ಆಯಾ ನಗರಗಳಲ್ಲಿರುವ ರಾಯಭಾರಿ ಕಚೇರಿಯ ಅನುಮೋದನಾ ಪತ್ರವನ್ನು ಪಡೆದವು. ರಾತ್ರಿ 8 ಗಂಟೆಯ ಸುಮಾರಿಗೆ ಅನುಮೋದನಾ ಪತ್ರ ದೊರೆತಿತ್ತು.

ಐಎಸ್ಎಫ್ ಮದೀನಾ ಘಟಕವು ತನ್ನ ಸದಸ್ಯರ ಖಾಸಗಿ ವಾಹನದ ಮೂಲಕ ಹೃದ್ರೋಗಿ ಝಕರಿಯ್ಯಾರನ್ನು ಮದೀನಾದಿಂದ ದಮಾಮ್ ಗೆ ತಲುಪಿಸುವ ಏರ್ಪಾಡು ಮಾಡಿತು. ರಾತ್ರಿ 8 ಗಂಟೆಗೆ ಹೊರಟ ವಾಹನವು 1200 ಕಿ.ಮೀ ದೂರ ಕ್ರಮಿಸಿ ಬೆಳಗ್ಗೆ 9.30ಕ್ಕೆ ವಿಮಾನ ನಿಲ್ದಾಣ ತಲುಪಬೇಕಿದ್ದು, ಸಮಯಕ್ಕೆ ಸರಿಯಾಗಿ ತನ್ನ ಗುರಿಯನ್ನು ತಲುಪಿತು. ಸಂಘಟನೆಯ ದಮಾಮ್ ಘಟಕವು ವಿಮಾನ ನಿಲ್ದಾಣದಲ್ಲಿ ಅವರನ್ನು ಸ್ವೀಕರಿಸಿ ಪ್ರಯಾಣಕ್ಕೆ ಬೇಕಾದ ಏರ್ಪಾಡು ಮಾಡಿತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X