ಕೃಷಿಕ ಆತ್ಮಹತ್ಯೆ
ಅಜೆಕಾರು, ಮೇ 31: ಕೃಷಿ ಹಾಗೂ ಕೂಲಿ ಕೆಲಸ ಮಾಡಿಕೊಂಡಿದ್ದ ಅಂಡಾರು ಗ್ರಾಮದ ಶಾನುಭೋಗರಬೆಟ್ಟು ನಿವಾಸಿ ಸುಂದರ ಶೆಟ್ಟಿ(74) ಎಂಬವರು ಸರಿಯಾದ ಕೆಲಸ ಇಲ್ಲದೆ ಹಣಕಾಸಿನ ತೊಂದರೆಯಿಂದ ಜೀವನ ದಲ್ಲಿ ಜಿಗುಪ್ಸೆಗೊಂಡು ಮೇ 30ರಂದು ಸಂಜೆ ವೇಳೆ ಮನೆ ಸಮೀಪದ ತೋಟದ ಗೇರು ಹಾಡಿಯಲ್ಲಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story