Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಸಂಕಷ್ಟದಲ್ಲಿರುವ ನೂರಾರು ವಲಸೆ...

ಸಂಕಷ್ಟದಲ್ಲಿರುವ ನೂರಾರು ವಲಸೆ ಕಾರ್ಮಿಕರಿಗೆ ಫೋನ್ ಮೂಲಕ ಸಹಾಯ ಮಾಡುತ್ತಿರುವ ಆತಿಫುಲ್ ಹುಸೈನ್

ಈ ಯುವ ವಕೀಲನ ‘ಕಾಲ್ ಸೆಂಟರ್’ಗೆ ಭಾರೀ ಮೆಚ್ಚುಗೆ

ವಾರ್ತಾಭಾರತಿವಾರ್ತಾಭಾರತಿ1 Jun 2020 5:49 PM IST
share
ಸಂಕಷ್ಟದಲ್ಲಿರುವ ನೂರಾರು ವಲಸೆ ಕಾರ್ಮಿಕರಿಗೆ ಫೋನ್ ಮೂಲಕ ಸಹಾಯ ಮಾಡುತ್ತಿರುವ ಆತಿಫುಲ್ ಹುಸೈನ್

ಗುವಾಹಟಿ: ಅಸ್ಸಾಂ ರಾಜ್ಯದ 26 ವರ್ಷದ ಯುವಕ ಆತಿಫುಲ್ ಹುಸೈನ್ ಅವರನ್ನು ‘ಏಕ ವ್ಯಕ್ತಿ ಕಾಲ್ ಸೆಂಟರ್’ ಎಂದರೂ ತಪ್ಪಾಗದು. ಲಾಕ್ ಡೌನ್‍ನಿಂದ ಅತಂತ್ರರಾಗಿರುವ ನೂರಾರು ವಲಸಿಗ ಕಾರ್ಮಿಕರಿಗೆ ಅವರು ಕೇವಲ ಫೋನ್ ಮೂಲಕವೇ ಸಹಾಯ ಮಾಡಿದ್ದಾರೆ. ಅಸ್ಸಾಂನ ಬರ್ಪೇಟ ಜಿಲ್ಲೆಯವರಾದ ಆತಿಫುಲ್ ವೃತ್ತಿಯಲ್ಲಿ ವಕೀಲರಾಗಿದ್ದಾರೆ.

ಲಾಕ್ ಡೌನ್ ಜಾರಿಯಾದ ಕೆಲವೇ ದಿನಗಳಲ್ಲಿ ತಮ್ಮ ಗ್ರಾಮದ ಹಲವಾರು ಮಂದಿ ಹರ್ಯಾಣದಲ್ಲಿ ಅತಂತ್ರರಾಗಿದ್ದಾರೆಂದು ಅವರಿಗೆ ತಿಳಿದು ಬಂದಿತ್ತು. ಅವರಿಗೆ ಕರೆ ಮಾಡಿದಾಗ ಅವರು ಆಹಾರವಿಲ್ಲದೆ ಪರಿತಪಿಸುತ್ತಿದ್ದರು ಎಂದು ತಿಳಿದು ಬಂದ ಕೂಡಲೇ ಹರ್ಯಾಣದಲ್ಲಿರುವ ಕೆಲ ಎನ್‍ಜಿಒಗಳನ್ನು ಅವರು ಸಂಪರ್ಕಿಸಿದ ಪರಿಣಾಮ ಆ ಕಾರ್ಮಿಕರಿಗೆ 24 ಗಂಟೆಗಳಲ್ಲಿ ರೇಷನ್ ಸಾಮಗ್ರಿ ಒದಗಿಸಲು ಕ್ರಮ ಕೈಗೊಳ್ಳಲಾಗಿತ್ತು.

ಮರುದಿನ ಹುಸೈನ್ ಅವರ ಮೊಬೈಲ್ ಫೋನ್‍ಗೆ ನೊಯ್ಡಾದಿಂದ ಕಾರ್ಮಿಕರ ಕರೆ ಬಂದಾಗ ಅವರು ತಕ್ಷಣ ಅಲ್ಲಿನ ಪೊಲೀಸ್ ಠಾಣೆಗೆ ಸುದ್ದಿ ಮುಟ್ಟಿಸಿದ್ದರು. ಈ ಕಾರ್ಮಿಕರಿಗೂ ಸಹಾಯ ದೊರಕಿತ್ತು. ಅಂದಿನಿಂದ ಹುಸೈನ್ ಅವರ ಮೊಬೈಲ್ ಫೋನ್‍ಗೆ ದೇಶದ ವಿವಿಧೆಡೆಗಳಿಂದ ಕರೆಗಳು ಬರುತ್ತಿವೆ. ಆರಂಭದಲ್ಲಿ ತಮಗೆ ಬಂದ ಎಲ್ಲಾ ಕರೆಗಳ ವಿವರಗಳನ್ನು ತಮ್ಮ ಡೈರಿಯಲ್ಲಿ ಅವರು ಬರೆದಿಡುತ್ತಿದ್ದರು . ಆದರೆ ಈಗ ಬರೆದೂ ಬರೆದೂ ಡೈರಿಯ ಪುಟಗಳು ಬರಿದಾಗಿವೆ. ಅವರಿಂದ ಸಹಾಯ ಯಾಚಿಸಿ ಅವರಿಗೆಷ್ಟು ಕರೆಗಳು ಬಂದಿರಬಹುದೆಂದು ಅಂದಾಜಿಸಬಹುದು.

ಎರಡು ವರ್ಷಗಳ ಹಿಂದೆ ಕಾನೂನು ಪದವಿ ಪಡೆದ ನಂತರ ಅವರು ಅಸ್ಸಾಂನಲ್ಲಿ ಎನ್‍ಆರ್‍ಸಿಯಿಂದ ಸಮಸ್ಯೆಗೊಳಗಾದವರಿಗೆ ತಮ್ಮ ಎನ್‍ಜಿಒ ‘ಇನ್ಸಾಫ್’ ಮೂಲಕ ಸಹಾಯ ಮಾಡುತ್ತಿದ್ದರು.

ಇದೀಗ ಲಾಕ್ ಡೌನ್‍ನಿಂದಾಗಿ ಸಂತ್ರಸ್ತರಾಗಿರುವ ಕನಿಷ್ಠ 2,000 ಮಂದಿಗೆ ಅವರು ಸಹಾಯ ಮಾಡಲು ಯಶಸ್ವಿಯಾಗಿದ್ದಾರೆ. ಅವರ ಫೋನ್‍ನಲ್ಲಿ ಅವರಿಗೆ ಕರೆ ಮಾಡಿದವರನ್ನು ಕೇರಳ, ನೊಯ್ಡಾ, ಮಹಾರಾಷ್ಟ್ರ ಎಂದೇ ಬರೆದು ಅವರು ನೆನಪಿನಲ್ಲಿಡಲು ಪ್ರಯತ್ನಿಸುತ್ತಾರೆ.

ತಮ್ಮಲ್ಲಿ ಸಹಾಯ ಕೋರಿ ಕರೆ ಮಾಡುವವರನ್ನು ಸರಿಯಾದ ಜನರ ಜತೆ ಸಂಪರ್ಕ ಕಲ್ಪಿಸುವುದಷ್ಟೇ ತನ್ನ ಕೆಲಸ ಎಂದು ಹೇಳುವ ಅವರು ತಮಗೆ ಕರೆ ಮಾಡಿದವರು ಎಲ್ಲಿಯವರು, ಯಾವ ಸ್ಥಳದವರು ಎಂದು ತಿಳಿದ ನಂತರ ಅಲ್ಲಿನ ಪೊಲೀಸ್ ಠಾಣೆಯನ್ನು ಗುರುತಿಸಿ  ಫೋನ್ ಕರೆ ಮಾಡಿ ಸೂಕ್ತ ಏರ್ಪಾಟು ಮಾಡಲು ಮನವಿ ಮಾಡುತ್ತಾರೆ.

ಈಗ ಶ್ರಮಿಕ್ ರೈಲುಗಳು ವಲಸಿಗ ಕಾರ್ಮಿಕರನ್ನು ಊರಿಗೆ ವಾಪಸ್ ಕರೆದುಕೊಂಡು ಹೋಗುತ್ತಿದ್ದರೂ ಹಲವರಿಗೆ ಅವುಗಳ ಬಗ್ಗೆ ಸೂಕ್ತ ಮಾಹಿತಿಯಿಲ್ಲದೇ ಇದ್ದಾಗ ಇವರಿಗೆ ಕರೆ ಮಾಡಿ ಮಾಹಿತಿ ಪಡೆಯುತ್ತಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X