Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಕೊರೋನೋತ್ತರ ದಿನಗಳ ಶಿಕ್ಷಣ ಹೀಗಿರಲಿ

ಕೊರೋನೋತ್ತರ ದಿನಗಳ ಶಿಕ್ಷಣ ಹೀಗಿರಲಿ

ಶಿಕ್ಷಣ ಸಚಿವರಿಗೊಂದು ಬಹಿರಂಗ ಪತ್ರ

ರಾಜಾರಾಂ ತಲ್ಲೂರುರಾಜಾರಾಂ ತಲ್ಲೂರು1 Jun 2020 10:55 PM IST
share
ಕೊರೋನೋತ್ತರ ದಿನಗಳ ಶಿಕ್ಷಣ ಹೀಗಿರಲಿ

ಮಾನ್ಯ ಎಸ್. ಸುರೇಶ್ ಕುಮಾರ್ ಅವರಿಗೆ, ನಮಸ್ಕಾರ.

ಕೊರೋನೋತ್ತರ ದಿನಗಳ ಶಿಕ್ಷಣ ಹೇಗೆಂದು ಜಗತ್ತಿನಾದ್ಯಂತ ದೇಶಗಳು ಚಿಂತನೆಯಲ್ಲಿ ತೊಡಗಿವೆ. ಕರ್ನಾಟಕದಲ್ಲೂ ತಾವು ಮತ್ತು ತಮ್ಮ ಇಲಾಖೆ ಈ ಬಗ್ಗೆ ಯೋಚಿಸುತ್ತಿರುವುದನ್ನು ಗಮನಿಸಿದ್ದೇನೆ. ಈ ಹಿನ್ನೆಲೆಯಲ್ಲಿ ತಮಗೆ ಈ ಪತ್ರ ಬರೆಯುತ್ತಿದ್ದೇನೆ.

ಸಂಕಟವನ್ನು ಅವಕಾಶ ಎಂದು ಪರಿಗಣಿಸಿ ಕರ್ನಾಟಕದ ಶಿಕ್ಷಣ ವ್ಯವಸ್ಥೆಯನ್ನು ಆಮೂಲಾಗ್ರ ಬದಲಾವಣೆ ಮಾಡುವುದಕ್ಕೆ ಮನಸ್ಸು ಮಾಡುವುದಿದ್ದರೆ ಇದು ನಿಮಗೆ ಸುವರ್ಣಾವಕಾಶ. ನಾನು ಮುಂದೆ ಹೇಳಲಿರುವ ಬಹುತೇಕ ಅಂಶಗಳಿಗೆ ಒಂದೋ ಈಗಾಗಲೇ ಇರುವ ಕಾನೂನುಗಳಲ್ಲೇ ‘‘ಇನ್ ಹೆರೆಂಟ್’’ ಅವಕಾಶಗಳಿವೆ. ನೀತಿ ನಿರೂಪಕ ತಂಡದ ಮುಖ್ಯಸ್ಥರಾಗಿ ನಿಮ್ಮಿಂದ ಇರುವ ಏಕೈಕ ನಿರೀಕ್ಷೆ ಎಂದರೆ ಖಾಸಗಿ ಶಿಕ್ಷಣ ಲಾಬಿಯಿಂದ ದೂರ ನಿಂತು ಈ ವಿಚಾರಗಳನ್ನು ನಾಡಿನ ಸಮಷ್ಟಿಯ ಹಾಗೂ ದೂರಗಾಮಿ ಪರಿಣಾಮಗಳ ಹಿನ್ನೆಲೆಯಲ್ಲಿ ಗಮನಿಸಬೇಕೆಂಬುದು.
ಹಾಗೆ ಮಾಡಿದಲ್ಲಿ ಒಂದೇ ಕಲ್ಲಿನಿಂದ ಹತ್ತಾರು ಹಣ್ಣುಗಳನ್ನು ಉದುರಿಸುವ ಅವಕಾಶ ಸಿಗಲಿದೆ ಮತ್ತು ಶಿಕ್ಷಣ ಕ್ಷೇತ್ರ ಎಂದೆಂದಿಗೂ ನಿಮ್ಮನ್ನು ನೆನಪಿಸಿಕೊಳ್ಳಲಿದೆ.
ತಾವು ಮಾಡಬೇಕಾಗಿರುವ ಮೂರು ಕಾನೂನು ಬದಲಾವಣೆಗಳು ಎಂದರೆ:

ಒಂದು- ಪ್ರೌಢ ಶಾಲಾ ಹಂತದ ತನಕ ಯಾವನೇ ವಿದ್ಯಾರ್ಥಿ/ವಿದ್ಯಾರ್ಥಿನಿ ಕಡ್ಡಾಯವಾಗಿ ತಮ್ಮ ನಿವಾಸದ ಸ್ಥಳದಿಂದ ಒಂದು ಕಿಲೊಮೀಟರ್ ಒಳಗಿನ (ಗ್ರಾಮೀಣ ಪ್ರದೇಶಗಳಲ್ಲಿ 2-3ಕಿ.ಮೀ.) ಒಳಗಿನ ಶಾಲೆಗಳಲ್ಲೇ ಓದಬೇಕು.
ಎರಡು- ಪ್ರೌಢಶಾಲಾ ಹಂತದ ತನಕ ಹೆಣ್ಣುಮಕ್ಕಳಿಗೆ ಈಗಾಗಲೇ ಇರುವ ಉಚಿತ ಶಿಕ್ಷಣವನ್ನು ಗಂಡು ಮಕ್ಕಳಿಗೂ ವಿಸ್ತರಿಸುವುದು.
ಮೂರು-‘ಕೌಶಲ ಕಲಿಕೆ’ ಪ್ರಾಥಮಿಕ ಶಿಕ್ಷಣದ ಕಡ್ಡಾಯ ಭಾಗ ಆಗಬೇಕು.
ಹೀಗೆ ಮಾಡಿದಾಗ,
* ಖಾಸಗಿ ಮತ್ತು ಸರಕಾರಿ ಶಾಲೆಗಳ ನಡುವಿನ ‘ಶಿಕ್ಷಣ ಗುಣಮಟ್ಟ’ದ ತಾರತಮ್ಯ ತನ್ನಿಂತಾನೆ ಇಲ್ಲದಾಗಲಿದೆ.
* ಮುಚ್ಚಲು ಸಿದ್ಧವಾಗಿರುವ ಎಲ್ಲ ಸರಕಾರಿ ಶಾಲೆಗಳೂ ಮತ್ತೆ ಜೀವಂತಗೊಳ್ಳಲಿವೆ.
* ಸಾವಿರ-ಲಕ್ಷ ರೂ.ಗಳ ಡೊನೇಷನ್ ವಸೂಲಿ ದಂಧೆ ನಿಯಂತ್ರಣಕ್ಕೆ ಬರಲಿದೆ.
* ಪ್ರಾಥಮಿಕ ಹಂತದಲ್ಲಿ ಕನ್ನಡ ಮಾಧ್ಯಮಕ್ಕೆ ಆದ್ಯತೆ ಕೊಡುವುದರಿಂದ ತಪ್ಪಿಸಿಕೊಳ್ಳಲು ಚಾಪೆಯಡಿ ತೂರಿಕೊಳ್ಳುವ ಪ್ರಯತ್ನಗಳು ತನ್ನಿಂತಾನೆ ವಿಫಲಗೊಳ್ಳಲಿದ್ದು, ಆ ಉದ್ದೇಶಕ್ಕೆ ಬಲ ಸಿಗಲಿದೆ. ಕನ್ನಡಕ್ಕೆ ಆದ್ಯತೆಯುಳ್ಳ, ಇಂಗ್ಲಿಷನ್ನು ಕಡೆಗಣಿಸದ ಶಿಕ್ಷಣ ವ್ಯವಸ್ಥೆಯೊಂದು ತಾನೇ ತಾನಾಗಿ ಮೂಡಿಬರಲಿದೆ.
* ಸರಕಾರಿ ಶಾಲೆಗಳ ಮೂಲಸೌಕರ್ಯ ಮತ್ತು ಖಾಸಗಿ ಶಾಲೆಗಳ ಶಿಕ್ಷಕರ ಶೋಷಣೆ ನಿಲ್ಲಲಿದೆ.
* ದಟ್ಟಣೆ ಇರುವಲ್ಲಿ ಹೊಸ ಸರಕಾರಿ ಶಾಲೆಗಳಿಗೆ ಅವಕಾಶ ಸಿಗಲಿದೆ. ಇದು ಉದ್ಯೋಗಾವಕಾಶಗಳನ್ನೂ ಸೃಷ್ಟಿಸಲಿದೆ.
ಇವಿಷ್ಟು ಸಮಗ್ರ ಸ್ವರೂಪದ ಬದಲಾವಣೆಗಳಾದರೆ, ಕೊರೋನ ಸಂಕಟದ ನಿವಾರಣೆಗೂ ಈ ಕ್ರಮಗಳು ಸಹಾಯ ಮಾಡಲಿವೆ. ಹೇಗೆಂದರೆ:
* ಮಕ್ಕಳ ಮನೆ ಹತ್ತಿರ ಇರುವುದರಿಂದ ವಾಹನ ಪ್ರಯಾಣ ತೀರಾ ಅಗತ್ಯ ಇರುವುದಿಲ್ಲ.
* ಮಧ್ಯಾಹ್ನದ ಊಟಕ್ಕೆ ಮನೆಯನ್ನು ಅವಲಂಬಿಸುವವರು ಮನೆಯನ್ನು ಅವಲಂಬಿಸಿದರೆ, ಉಳಿದವರಿಗೆ ಶಾಲೆಯಲ್ಲಿ ಪೌಷ್ಟಿಕ ಆಹಾರ ನೀಡಲು ಸಾಧ್ಯ ಆಗುತ್ತದೆ.
* ತರಗತಿ ಕೋಣೆಗಳಲ್ಲಿ ಅಂತರ ಕಾಯ್ದುಕೊಳ್ಳಲು, 30 ಮಕ್ಕಳಲ್ಲಿ ಪ್ರತೀ 15ಮಂದಿಗೆ ದಿನಬಿಟ್ಟು ದಿನ ತರಗತಿ ವ್ಯವಸ್ಥೆ ಮಾಡಬಹುದು. ಉಳಿದ 15 ಮಂದಿಗೆ ತರಗತಿಗಳಿಲ್ಲದ ದಿನ ಹೆಚ್ಚುವರಿ ಇ-ಲರ್ನಿಂಗ್ ಜೊತೆಗೆ ಕೃಷಿ, ತೋಟಗಾರಿಕೆ, ಕ್ರೀಡೆ, ಸಮಾಜ ಸೇವೆಯಂತಹ ‘ಕೌಶಲ ವೃದ್ಧಿ’ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಅವಕಾಶ ಮಾಡಿಕೊಡಬಹುದು.
ತಾವು ಈ ನಿಟ್ಟಿನಲ್ಲಿ ಯೋಚಿಸಬೇಕೆಂದು ಕೋರಿಕೆ.

share
ರಾಜಾರಾಂ ತಲ್ಲೂರು
ರಾಜಾರಾಂ ತಲ್ಲೂರು
Next Story
X